ಭಾರತ ದೇಶ ಹಬ್ಬಗಳ ನಾಡು (ದೇಶ )ಈ ದೇಶದಲ್ಲಿ ಹುಟ್ಟಿದ ನಾವುಗಳು ಧನ್ಯರು. ಹಬ್ಬ ಹರಿದಿನಗಳು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ಅದು ಮಾನವನ ಪ್ರಗತಿ ಮತ್ತು ವಿಕಾಸದ ಸಂಕೇತವು ಹೌದು .ಇಲ್ಲಿ ಅನೇಕ ಧರ್ಮ,ಪಂಥಗಳು ಮೈದೆಳೆದು ಜಗತ್ತಿನ ವಿವಿಧ ಭಾಗಗಳಿಗೆ ಪಸರಿಸಿದ್ದನ್ನು ನಾವು ಕಾಣುತ್ತವೆ.ಈಗ ನಾನು ಪೀಠಿಕೆ ಹಾಕಿದ ಉದ್ದೇಶ ಏನೆಂದರೆ ದಸರಾ ನಮ್ಮ ಪರಂಪರೆ ಅದರ ಕುರಿತು ಏನಾದರು ಬರೆಯಬೇಕೆಂಬುದು ಮನಸ್ಸಿನಲ್ಲಿ ಹೊಳೆದ ತಕ್ಷಣವೇ ನನ್ನ ಮೊಬೈಲ್ ನಲ್ಲಿ ಬೆರಳುಗಳು ಓಡ ತೊಡಗಿದವು ಈ ವರ್ಷ ಏಳನೇ ತಾರೀಖು ಪ್ರಾರಂಭವಾಗಿ 15 ನವೆಂಬರ್ ತಾರೀಖು ವರೆಗೆ ಮುಂದುವರೆಯುತ್ತದೆ. ಹಾಗಾದರೆ ಇದರ ಹಿನ್ನೆಲೆ ಏನು ಹೇಗೆ ಬೆಳೆದು ಬಂತು ಅನ್ನುವುದನ್ನು ಒಂದಷ್ಟು ಅವಲೋಕನ ಮಾಡಲು ಮಾಡಿದ ಸಣ್ಣ ಪ್ರಯತ್ನವೆ ಈ ಒಂದು ಲೇಖನ. ಭಾರತದ ಸಂಸ್ಕೃತಿ ಬೇರುಗಳ ಪ್ರಾರಂಭವನ್ನು ನಾವು ತಾಮ್ರಯುಗದಲ್ಲಿಯೇ ಕಾಣುತ್ತವೆ . ಅದು ಉತ್ತರ ಭಾರತದಲ್ಲಿ ತಾಮ್ರಯುಗದಲ್ಲಿ ಕಂಡರೆ, ದಕ್ಷಿಣ ಭಾರತದಲ್ಲಿ ಕಬ್ಬಿಣದ ಯುಗದಲ್ಲಿ ಕಂಡು ಬರುತ್ತದೆ.ಸಿಂಧೂ ಸಂಸ್ಕೃತಿಯಲ್ಲಿ ನಮ್ಮ ಹಿಂದೂ ಧರ್ಮದ ಬೆರಳುಗಳನ್ನು ಕಾಣಬಹುದು ನಂತರ ಸು.ಸಾ ಶ ಪೂ2000 ರಲ್ಲಿ ಆರ್ಯರ ಆಗಮನದಿಂದ ವೈದಿಕ ಸಂಸ್ಕೃತಿ ವಿಕಸನಗೊಂಡು ಹಿಂದೂ ಧರ್ಮದ ಬೇರುಗಳು ಇನ್ನಷ್ಟು ಭದ್ರಗೊಂಡು ಅದು ಹೆಮ್ಮರವಾಗಿ ಬೆಳೆಯಿತು.ವೈದಿಕ ಸಂಸ್ಕೃತಿಯನ್ನು ನಾವು ಎರಡು ಹಂತದಲ್ಲಿ ನೋಡುತ್ತೇವೆ, ಪೂರ್ವ ವೇದಕಾಲ ಮತ್ತು ಉತ್ತರ ವೇದಕಾಲವೆಂದು
ಪೂರ್ವ ವೇದ ಕಾಲವನ್ನು ಋಗ್ವೇದ ಕಾಲವೆಂದು ಕರೆಯುತ್ತಾರೆ. ಈ ಅವಧಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳು ಸರಳವಾಗಿದ್ದವು ದೇವರುಗಳ ಸಂಖ್ಯೆಯು ಕಡಿಮೆ ಇತ್ತು. ಅವರುಗಳೆಂದರೆ ಇಂದ್ರ,ಪೃಥ್ವಿ ವಾಯು ವರುಣ,ಅಗ್ನಿ ಸೂರ್ಯ, ಸೋಮ. ಆದರೆ ಉತ್ತರ ವೇದಕಾಲದಲ್ಲಿ ದೇವರುಗಳ ಸಂಖ್ಯೆಯು ಹೆಚ್ಚಾಯಿತು ಮತ್ತು ಆಚರಣೆಗಳು ಜಟಿಲವಾದವು ಆ ಮಾತು ಬೇರೆ. ಈ ಅವಧಿಯಲ್ಲಿ ಸೃಷ್ಟಿಯಾದ ದೇವರುಗಳು ಸಂಖ್ಯೆ ಹೆಚ್ಚು ಅದರಲ್ಲಿ ಪ್ರಧಾನ ದೇವರುಗಳು, ಬ್ರಹ್ಮ ವಿಷ್ಣು ಮಹೇಶ್ವರ, ಇವರುಗಳನ್ನು ಸೃಷ್ಟಿ, ಸ್ಥಿತಿ,ಲಯ ಕರ್ತೃ ಗಳೆಂದು ನಾವು ನಂಬುತ್ತೇವೆ. ಇವರುಗಳ ಜೊತೆಯಲ್ಲಿ ಗಣೇಶ, ಕಾರ್ತಿಕೇಯ, ಪಾರ್ವತಿ, ಲಕ್ಷ್ಮಿ,ಕಾಳಿ, ದುರ್ಗಾ ಮುಂತಾದ ದೇವರಗಳು ಅಸ್ತಿತ್ವಕ್ಕೆ ಬಂದರು. ಕೊನೆಗೆ ನಾನು ಹೇಳಿದೆನಲ್ಲವಾ ದುರ್ಗಾ ಮಾತೆ ಈ ದೇವರ ಆರಾಧನೆಯ ಅಂಗವಾಗಿ ನಡೆಯುವ ಹಬ್ಬವೆ ನವರಾತ್ರಿ
ಇದರ ಒಂದು ದಂತಕಥೆಯ ಪ್ರಕಾರ ಮಹಿಷಾಸುರ ಬ್ರಹ್ಮದೇವನಿಂದ ಅಮರತ್ವ ಪಡೆಯುತ್ತಾನೆ ಅದರೆ ಅವನಿಗೆ ಮಹಿಳೆಯಿಂದ ಮಾತ್ರ ಮರಣ ಇರುತ್ತದೆ ಪರಿಣಾಮವಾಗಿ ಮಹಿಷಾಸುರ ತ್ರೀಲೋಕ ಅಂದರೆ ಭೂಲೋಕ,ಸ್ವರ್ಗ ಮತ್ತು ಪಾತಾಳ ಲೋಕ ಸಂಹಾರ ಮಾಡಲು ಪ್ರರಂಭಿಸಿದಾಗ ದೇವತೆಗಳೆಲ್ಲ ಭಯಭೀತರಾಗಿ ಬ್ರಹ್ಮ ದೇವನಲ್ಲಿ ಬೇಡಿಕೊಳ್ಳುತ್ತಾರೆ
ಬ್ರಹ್ಮದೇವ ಮತ್ತು ಶಿವನ ಶಕ್ತಿ ಯಿಂದ ದುರ್ಗಾ ಮಾತೆಯು ಪಾರ್ವತಿ ದೇವಿಯಾಗಿ ಪುನರ್ ಜನ್ಮ ತಾಳುತ್ತಾಳೆ.ಈ ಮೂರು ದೇವರುಗಳ ಆಶೀರ್ವಾದದಿಂದ ದುರ್ಗಾ ದುಷ್ಟ ಮಹಿಷಾಸುರನ ಸಂಹಾರ ಮಾಡಲು ಒಂಬತ್ತು ಅವತಾರ ತಾಳುತ್ತಾಳೆ ಆ ಒಂಬತ್ತು ಅವತಾರಗಳೆ
ಶೈಲಪುತ್ರಿ,ಬ್ರಹ್ಮಚಾರಣಿ ಚಂದ್ರಘಂಟಾ,
ಕುಶ್ಮಾಂದಾ ,ಸ್ಕಂದಮಾತಾ,ಕಾತ್ಯಾಯಿನಿ, ಕಾಲ್ರಾತ್ರಿ,ಮಹಾಗೌರಿ,ಸಿದ್ಧಿದಾತ್ರ. ಪ್ರತಿ ದಿನ ಒಂದೊಂದು ಅವತಾರವೆತ್ತಿ ಅಂತಿಮ ದಿನ ದುಷ್ಟ ಸಂಹಾರ ಮಾಡಿ ವಿಜಯಾ ಚರಣೆಯೇ ಕುರುಹಾಗಿ ವಿಜಯದಶಮಿ, ದುಷ್ಟ ನಿವಾರಣೆ ಸಂಕೇತವಾಗಿ ಈ ಹಬ್ಬವನ್ನು ಆಚರಿಸುತ್ತೇವೆ. ಇದು ನಮ್ಮ ನಾಡ ಹಬ್ಬವು ಹೌದು, ಹಾಗಾಗಿ ಮೈಸೂರು ಅರಸರ ಕಾಲದಿಂದಲೂ ನಮ್ಮ ಈ ಹಬ್ಬವನ್ನು ನಾಡ ಹಬ್ಬವಾಗಿ ಆಚರಿಸುವ ಪರಂಪರೆ ನಡೆದು ಕೊಂಡು ಬರುತ್ತಿದೆ.ಆದರೆ ಈ ಹಬ್ಬವನ್ನು ವಿಜಯನಗರದ ಅರಸರು ಮೊದಲು ವೈಭಯುತವಾಗಿ ಆಚರಿಸುತ್ತಿದ್ದರು. ಅವರ ಮಾಂಡಲಿಕರಾದ ಮೈಸೂರು ಅರಸರು ತಾವು ಸ್ವತಂತ್ರವಾಗಿ ಆಡಳಿತ ಮಾಡುವ ಸಂದರ್ಭದಲ್ಲಿ ಬಹು ವಿಜೃಂಭನೆಯಿಂದ ಆಚರಿಸಿದರು ಈ ದಸರಾ ಹಬ್ಬವನ್ನು ಮೈಸೂರಲ್ಲಿ ಸ.ಶ.1610 ರಲ್ಲಿ ಪ್ರಾರಂಭಿಸಿದ ಶ್ರೇಯಸ್ಸು ರಾಜ ಒಡೆಯರ್ ಗೆ ಸಲ್ಲುತ್ತದೆ . ಇಂದು ಸರಕಾರವೆ ಮುಂದೆ ನಿಂತು ದಸರಾ ಹಬ್ಬವನ್ನು ಬಹು ವೈಭವದಿಂದ ಆಚರಿಸುವ ಪರಂಪರೆ ಇದೆ. ದೇಶ ವಿದೇಶಗಳಿಂದ ಅಸಂಖ್ಯ ಪ್ರವಾಸಿಗುರು ಬಂದು ದಸರಾ ಸಡಗರವನ್ನು ಕಣ್ಣು ತುಂಬಿಕೊಂಡು ಹೋಗುತ್ತಾರೆ.ನಾವು ಕೂಡಾ ದುಷ್ಟ ಸಂಹಾರದ ಸಂಕೇತದ ದಸರಾವನ್ನು ಸಂತೋಷ ಮತ್ತು ಸಡಗರದಿಂದಲೇ ಆಚರಿಸೋಣ.ಶುಭರಾತ್ರಿ 🙏🙏
ಬಸನಗೌಡ ಗೌಡರ
No comments:
Post a Comment