ಭಾರತೀಯತೆ ಒಂದು ದೇಹ,
ಬಿಡಿಯಾಗಿ ನೋಡ ಬಾರದಣ್ಣ
ಇಡಿಯಾಗಿ ನೋಡಿದರೆ
ಉಳಿಗಾಲ ಇಲ್ಲ ಅಳಿಗಾಲ !
ರೋಗ ಸಾಮಾನ್ಯ
ಔಷಧಿಯೂ ಯುಂಟು
ವಾಸಿಯಾಗದ್ದೇನಲ್ಲ
ಜಾತೀಯತೆ ,ಕೋಮುವಾದ
ಪ್ರಾದೇಶಿಕತೆ ಪಟ್ಟಿ ಏನೆ ಇರಲಿ
ಸುಟ್ಟು ಹಾಕಬಹುದು
ಪ್ರೀತಿ ಸಹನೆ ಎಂಬ ಔಷದದಿಂದ.
ಮೂಗಿಗೆ ನೆಗಡಿ ಬಂದರೆ
ಮೂಗು ಕೊಯ್ದವರುಂಟೆ?
ಶುಂಟಿ ಪುಡಿಯಿಂದ
ವಾಸಿಮಾಡಿದವರುಂಟು.
ವೈದ್ಯರೂ ಉಂಟು...
ಆಯ್ಕೆ ಅವರವರಿಗೆ...
ವಾಸಿಮಾಡದ್ದೇನಲ್ಲ !
ತಲೆಯುಂಟು ಅದರ
ನೋವು ಉಂಟು !
ತಲೆ ತಗೆದವರುಂಟೆ ?
ತಲೆಯಿಂದ ದ್ವೇಷ ಅಸೂಯೆ
ತೆಗೆದರೆ ಮನಶ್ಶಾಂತಿ
ಇಲ್ಲದಿದ್ದರೆ ಬರಿ ವಾಂತಿ.
ಕೃಶವಾದ ಮರಕೆ ಪೆಟ್ಟು
ನೀಡುವವರ ಪಟ್ಟಿಯೂ ಇದೆ
ಇದು ಹೊಸದೇನು ಅಲ್ಲ .
ನಿಂತವರ ಚಿಂತೆ ಬಿಡಿ.....
ನಿಲ್ಲದೆ ಸದಾ ನಡೆಯುತ್ತಾ ಇರೋಣ
ನಡೆದವನಿಗೆ ರೋಗ ಕಡಿಮೆ
ನಿಂತವನು ರೋಗದ ಸಂತೆ.
ಭಾರತವೆಂಬುದು ಬರಿ
ಬಡಿವಾರದ ಮಾತಲ್ಲ
ಸಾವಿರ ವರುಷದ ಸತ್ವಪೂರ್ಣ
ಇತಿಹಾಸ ಹೊಂದಿದ ಅಸ್ಮಿತೆಯ ಭಾವ,
ನರನಾಡಿಗಳು ಪುಟಿದೇಳುವ
ಅನನ್ಯ ಭಾವ .
ಇಲ್ಲಿ ಸಲ್ಲುವವರು
ಎಲ್ಲಾ ಕಡೆ ಸಲ್ಲುವರು.
ಇಲ್ಲಿಂದಲೆ ಜ್ಞಾನ ಕಲಿತು,
ಕಲಿಸಿದಂತೆ ನಟನೆ ಮಾಡಿದರು.
ಚರಿತ್ರೆಯ ಪುಟವೊಮ್ಮೆ ನೋಡಿ
ಇಲ್ಲದಿದ್ದರೆ ಮತ್ತೆ ಕಲಿಸಲು
ಅವರೆ ಬರಬೇಕಾದೀತು.
It's nice superb ☺️
ReplyDelete