ಶಿಕ್ಷಕನ ಜೀವನದ ಸಾರ್ಥಕ ಕ್ಷಣ
ಅಂದು ಮೂರು ಅವಧಿಗಳನ್ನು ಮುಗಿಸಿ ಮಕ್ಕಳ ಮೊಗದಲ್ಲಿ ಮಂದಹಾಸ ಮೊಳಗಿಸಿ ಎರಡೂವರೆ ಗಂಟೆಗೆ ಮನೆ ದಾರಿ ಹಿಡಿದೆ,ಹೊಟ್ಟೆ ತಾಳ ಹಾಕುತಿತ್ತು ಏಳುವರೆ ಗಂಟೆಗೆ ಗಡಿಬಿಡಿಯಲ್ಲಿ ತಿಂದ ಅವಲಕ್ಕಿ ಹೊಟ್ಟೆಯಿಂದ ಕಾಲ್ಕಿತ್ತೆತ್ತೇನೋ ?ಮನೆಗೆ ತಲುಪಿದ್ದೆ ತಡ, ಮನೆಯ ಮಡದಿ ಮನೆಗೆ ಬಂದ ಸುದ್ದಿ ವರದಿ ಒಪ್ಪಸಿಲು ರೆಡಿ ! ಆದರೆ ಕೇಳುವ ವ್ಯವಧಾನ ನನಗಿರಲಿಲ್ಲ " ನಿಮ್ಮ ವಿದ್ಯಾರ್ಥಿ ಬಂದಿದ್ದ ಮದುವೆ ಆಮಂತ್ರಣ ನೀಡಿದ್ದಾನೆ ಎಂದಳು". ಆಮೇಲೆ ಕೇಳುತ್ತೇನ ಮೊದಲು ಊಟೋಬಾ ನಂತರ ವಿಠೋಬಾ ಎಂದು ನಗೆ ಚಟಾಕಿ ಹಾರಿಸಿ ಕೈಕಾಲು ಮುಖ ತೊಳೆದು ಅಡ್ಡುಣಗೆ ಮೇಲೆ ತಾಟಿಟ್ಟು ಕೈಗೆ ಬಾಯಿಗೆ ಸುರು ಹಚ್ಚಕೊಂಡೆ. ಬಿಸಿ ಬಿಸಿ ರೊಟ್ಟಿ ಬದನಿಕಾಯಿ ಪಲ್ಲೆ ಮೊಸರು ಚಟ್ನಿ ತಿನ್ನುವ ರೊಟ್ಟಿಯ ಲೆಕ್ಕ ತಪ್ಪುವಂತೆ ಮಾಡಿತು. ಸಿದಾ ರೊಮಿಗೆ ತೆರಳಿದೆ ನಂತರ ಪೇಪರು ತಿರುವುತ್ತಾ ಕುಳಿತೆ ಮುಖಪುಟದ ಮುಖ್ಯ ವಿಷಯದಿಂದ ಹಿಡಿದು ಹೃದಯ ಭಾಗವಾಗಿರುವ ಸಂಪಾದಕೀಯ ಮುಗಿಸಿ ಕೊನೆಯ ಪುಟದ ಕೊನೆಯ ಸಾಲಿನವರೆಗೆ ತಿರುಗಿಸಿ ಹಾಕುವುದು ರೂಢಿ, ಏಕೆಂದರೆ ಮಧ್ಯಾಹ್ನ ನಿದ್ದೆ ಮಾಡುವುದು ನನಗೆ ಅಪರೂಪದ ಕೆಲಸ. ಅಷ್ಟರಲ್ಲಿ ಪೋನ್ ರಿಂಗುಣಿಸಿತು.. ಯಾರದು ? ಆಕಡೆಯಿಂದ ಸರ್ ನಿಮ್ಮ ಶಿಷ್ಯ ಮೂಲಿಮನಿ ತೋಗುಣಸಿಯಿಂದ ಸರ್ ಎಂದ .ಸರಿ, ಆರಾಮ ಇದ್ದಿ ಏನಪಾ ಎಂದೆ .ಸರ್ ತಮ್ಮ ಆಶೀರ್ವಾದ ಮತ್ತು ಪ್ರೇರಣೆ ಹಾಗೂ ಮಾರ್ಗದರ್ಶನ ಬದುಕು ಕಟ್ಟಿಕೊಳ್ಳಲು ದಾರಿದೀಪವಾಗಿ ಪೊಲೀಸ್ ಕೆಲಸ ಸಿಕ್ಕಿದೆ ಎಂದು ಕೃತಜ್ಞತೆಗಳ ಮಹಾಪೂರವೇ ಹರಿಸಿದ .ಅದು ಅವರ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವೆ ಆಗಿದ್ದರೂ ನನ್ನ ಮೇಲಿನ ಅಭಿಮಾನ ಮತ್ತು ಪ್ರೀತಿಗೆ ಹಾಗೆ ಹೇಳಿರಲು ಸಾಕು. ಎಂದು ಭಾವಿಸಿದೆ ನಾನು ಅವರಿಗೆ ಮಹದುಪಕಾರಿ ಮಾಡಿದ್ದೇನೆ ಎಂದೆನಿಸಲಿಲ್ಲ ಅದು ನಾನು ಮಾಡಿದ ನನ್ನ ಕರ್ತವ್ಯವೆ ವಿನಹ ಬೇರೇನಲ್ಲ .ಅವನು ನನ್ನ ಮೇಲಿಟ್ಟ ಪ್ರೀತಿಗೆ ಧನ್ಯತಾ ಭಾವಕ್ಕೆ ನಾನು ನೂರು ಶೆಲೂಟ ಹೇಳಲೆ ಬೇಕು.ತುಂಬಾ ಸಂತೋಷದ ಸಂಗತಿ ಅಭಿನಂದನೆಗಳು ಅಂದೆ .ಸರ್ ದಿನಾಂಕ 18.12.2022 ರಂದು ಮದುವೆಗೆ ಬರುಬೇಕು ಸರ್ ಅಂದ .ಖಂಡಿತವಾಗಿಯೂ ಬರುತ್ತೇನೆ ರವಿವಾರವಲ್ಲವೆ. ಪರವಾಯಿಲ್ಲ ಎಂದೆ. ಗುಳೇದಗುಡ್ಡದಿಂದ ದೂರವೇನಲ್ಲ 5 ಕೀ ಮಿ. ಅಷ್ಟೇ ಪ್ರೀತಿಯಿಂದ ಕರೆದರೆ ಬಿಡಲಾದಿತೆ ? ದಾರಿ ಮಧ್ಯೆ ಆಮಂತ್ರಣ ನೀಡಿದ ಎಷ್ಟೊಂದು ಜನರ ಮದುವೆಗೆ ಹರಸಿ ಬಂದ ಉದಾಹರಣೆಗಳು ಇರುವಾಗ ನನ್ನ ವಿದ್ಯಾರ್ಥಿ ಅದೂ ಪ್ರೀತಿಯಿಂದ ಮನೆಯವರೆಗೆ ಬಂದು ಮತ್ತೆ ಮತ್ತೆ ಕರೆದರು ಹೋಗದಿರಲಾಯಿತೆ ?. ಒಂದೆರೆಡು ದಿನ ಕಳೆದಿರಲಿಲ್ಲ ಮತ್ತೆ ಶನಿವಾರ ಪೋನ್ ರಿಂಗುಣಿಸಿತು... ಮತ್ತದೆ ಪ್ರೀತಿಯ ಆದರದ ಆಹ್ವಾನದ ಧ್ವನಿ. ಸರ್ ನಾಳೆ ಖಂಡಿತಾ ತಪ್ಪಿಸಬೇಡಿ ಸರ್ ಎಂದ.ಇಲ್ಲ ಖಂಡಿತವಾಗಿಯೂ ಬರುತ್ತೇನೆ ಎಂದೆ .ಸರ್ ತಮಗೆ ನನ್ನ ಮದುವೆಯ ದಿನ ಸನ್ಮಾನ ಇಟ್ಟುಕೊಂಡಿದ್ದೇನೆ ಎನ್ನಬೇಕೆ ! ಕ್ಷಣ ವಿಚಲಿತನಾದರೂ ಸವಾರಿಸಿಕೊಂಡು ಅದು ಮದುವೆಯ ದಿನ ಈ ಕಾರ್ಯಕ್ಕೆ ಕೈ ಹಾಕಿದ್ದಿಯಲ್ಲ ಎಂದೆ.ಇಲ್ಲ ತಾವು ಬರಬೇಕು ಸರ್, ಅದೆ ಖಚಿತ ನಿಲುವು. ನಾನು ಸಾಗರದಾಳದಲ್ಲಿ ಮದುವೆ ಯಾದವರನ್ನು ಕೇಳಿದ್ದೆ, ಆಕಾಶದಲ್ಲಿ ಮದುವೆಯಾದವರನ್ನು ಕೇಳಿದ್ದೆ ,ತಮ್ಮ ಮದುವೆಯಲ್ಲಿ ನೂರು ಮದುವೆ ಮಾಡಿದವರನ್ನು ನೋಡಿದ್ದೆ, ನೂರು ಅಸಾಹಯಕರಿಗೆ ಸಹಾಯ ಮಾಡಿದ್ದು ನೋಡಿದ್ದೆ.ಪುಸ್ತಕ ಬಿಡುಗಡೆ ಮಾಡಿ ಕವಿಗಳ ಸಮ್ಮೇಳನ ಮಾಡಿದ್ದು ಕೇಳಿದ್ದೆ .ಆದರೆ ತಮ್ಮ ಅತ್ಯಮೂಲ್ಯವಾದ ಮದುವೆಯ ಸಮಯದಲ್ಲಿ ಸಾವಿರಾರು ಸಂಖ್ಯೆಯಲ್ಲಿಯ ಬಂಧುಗಳ ಆನಂದದ, ಸಂತೋಷದ ಸಮಯದಲ್ಲಿ ಗುರುವಿಗೆ ಸನ್ಮಾನದ ಕಿರಿಟ, ಅದೂ ನನಗೆ ! ಅಂತಹ ಸೌಭಾಗ್ಯದ ಸಡಗರದ ಸಮಯ "ಶಿಕ್ಷಕನ ಜೀವನದ ಅಮೂಲ್ಯ ಸನ್ಮಾನದ ಕ್ಷಣ " ಅದಕ್ಕೆ ಬಾಜನನಾಗಿದ್ದು ಬೇರಾರಲ್ಲ ನಾನು ! ನನ್ನ ಶಿಕ್ಷಕ ವೃತ್ತಿಗೊಂದು ಮುಕುಟಪ್ರಾಯದ ಕಳಸ, ಇದಕ್ಕಿಂತ ಹೆಚ್ಚಾದ ಪ್ರೀತಿಯ ಪದಕ ಎಲ್ಲಿದೆ ಹೇಳಿ ? ನನ್ನ ಪ್ರೀತಿಯ ಉಪನ್ಯಾಸಕ ವೃತ್ತಿಯ ಘನತೆ ಹೆಚ್ಚಿಸಿದ ಮೂಲಿಮನಿ ಬಂಧುಗಳಿಗೆ ನನ್ನ ನೂರು ನಮನಗಳು.ತಮ್ಮ ದಾಂಪತ್ಯ ಸಾವಿರ ಕಾಲ ಸುಖವಾಗಿರಲಿ.ಮತ್ತೊಮ್ಮೆ ನಾನು ಬರುವಂತಾಗಲಿ ತಾವು ಪೋಲೀಸ್ ವರಿಷ್ಠಾಧಿಕಾರಿಯಾದಾಗ.
No comments:
Post a Comment