Thursday, February 23, 2023

ಪ್ರಕೃತಿ ನಿಯಮವೆ ಪರಮ

             ನಾ ಕಂಡ ಇವತ್ತಿನ ಅದ್ಭುತವಾದ ಚಿತ್ರ,! ಇದಕ್ಕೆ ಪ್ರಶಸ್ತಿಯೂ ಬಂದಿದೆಯಂತೆ,ಬರಬೇಕಾಗಿದ್ದೆ ಪ್ರಬಲರ ಮುಂದೆ ದುರ್ಬಲರು ಆಹಾರದಂತೆ ? ಚಿರತೆ ವದನವನ್ನೊಮ್ಮೆ ನೋಡಿ " ನಿಶ್ಚಲ goo

mm ಭಾವ"  ಇಲ್ಲಿ ನ್ಯಾಯ ಅನ್ಯಾಯದ ಪ್ರಶ್ನೆ ಬರುವುದಿಲ್ಲ ಬದುಕು ಒಂದೆ ಮುಖ್ಯ ನ್ಯಾಯ. ಏನು ಅರಿಯದ ಕಂದಮ್ಮ ನ ಸಾವಿನೊಂದಿಗಿನ ಪ್ರೀತಿಯ ಸಹಜೀವನ.ಅರಿಯದ ನಂಬುಗೆಯೇ ಅಪ್ಯಾಯಮಾನ ಸ್ಥಿತಿ.   ದಡತಲುಪಿಸುವ ತಾಯಿಯ ಮೇಲಿನ ದೃಡ ಪ್ರೀತಿಯ ಭಾವ,ಎಂತಹವರನ್ನೂ ಕ್ಷಣ ಕಣ್ಣರಳಿಸಿ ಮತ್ತೆ ಮತ್ತೆ ನೋಡುವಂತೆ ಮಾಡುತ್ತಿದೆ. ಇದು ಬರಿ ಪ್ರಾಣಿಗಳಲ್ಲಾಗಿದ್ದರೆ ಸರಿ ಎನ್ನಬಹುದಿತ್ತೇನೋ ? ಇಂದು ಮನುಷ್ಯ ಕುಲದಲ್ಲಿ ಸಹ ಅರಳಿ ಹೂವಾಗಿ ಕಂಗೊಳಿಸುತ್ತಿರುವುದು ವಿಷಾದನೀಯ.ಅಂದರೆ ಮಾನವ ಇನ್ನೊಂದು ಮಾನವನ ಭೌತಿಕ ದೇಹವನ್ನೆ ತಿನ್ನಬೇಕೆಂದೇನೂ ಇಲ್ಲ .ಒಂದು ಕಡೆ ಪೌಷ್ಟಿಕ ಆಹಾರ ಮತ್ತು ಗುಣಮಟ್ಟದ ಶಿಕ್ಷಣದಿಂದ ವಂಚಿತವಾಗುವ,ಸೂಕ್ತ ವೈದ್ಯಕೀಯ ಸೌಲಭ್ಯ ಸಿಗದೆ ಶಿವನ ಪಾದ ಸೇರವ ವರ್ಗ.ಇನ್ನೊಂದು ಕಡೆ ಪ್ರಭಲರ ಬಾಯಲ್ಲಿ .ಜೀವವಿದ್ದು  ಶವದಂತೆ ಆಹಾರವಾದ ದುರ್ಬಲ ಜೀವಗಳು ದಯನೀಯ ಸ್ಥಿತಿ (ನಮ್ಮನಾಳುವ ಸರಕಾರಗಳು ಸರಿಪಡಿಸಿಲ್ಲ ಎಂದರ್ಥವಲ್ಲ )ಮಾಡಿದ ಕಾರ್ಯ ಬಕಾಸುರನಿಗೆ ಆರು ಕಾಸಿನ ಮಜ್ಜಿಗೆಯಾಗಿದೆ. ಇನ್ನೊಂದು ಕಡೆಗೆ ಬಡಗಿ ಹಿಡಿದು ತಿನಿಸುವ ಮತ್ತು ಬಾಲವಾಡಿ ಶಿಕ್ಷಣಕ್ಕೆ ಆರಂಕಿಯ ಪೀ ಹಣ ಕಟ್ಟಿ ಹೆಮ್ಮೆಯಿಂದ ಬೀಗುವ ವರ್ಗ. ಅವರೆಲ್ಲರ ನಿರೀಕ್ಷೆ ತಮ್ಮ ಮಗ/ಮಗಳು ಮುಂದಿನ ವೈದ್ಯರೊ ಇಲ್ಲ ಇಂಜಿನಿಯರ್ ರೆ ಆಗಬೇಕು.ಅದಕ್ಕಾಗಿ ಯಾವ ಮಾರ್ಗವಾದರೂ ಸರಿ ಅಂದರೆ ಅರಣ್ಯ ನ್ಯಾಯವಾದರು ಸರಿ. ನಾವೆಲ್ಲಾ ಪ್ರಸನ್ನರೆ.ಉಳಿಯುವವರಾರು ? ಇಂದು 32 ಲಕ್ಷ ಎಂಭತ್ತೆರಡು ಸಾವಿರ ಎರಡು ನೂರಾ ಅರವತ್ಮೂರು ಚ.ಕಿ.ಮೀ ಭೂಮಿಯಿದ್ದರೂ ನಶಿಸುವ ಸಂತತಿ ಯಾವುದು ? ಉಳಿಸಲು  ಇನ್ನೊಂದು ಕಡೆಯಿಂದ ಚೇತಾಗಳನ್ನು  ತರಬೇಕಾಗಿದೆಯಲ್ಲವೆ ? ಆಹಾರವಾದ ಪ್ರಾಣಿಗಳ ಸಂತತಿ ಏನಿಗಿದೆ ? ಅರ್ಥವಾಗಿರಬಹುದು ಪ್ರಕೃತಿ ನಿಯಮವೆ ವಿಸ್ಮಯ ಪ್ರಭಲ ಪ್ರಭೇದಗಳನ್ನು ಹಣಿಯಲು ಇನ್ನೊಂದು ಪ್ರೇಭೇದ ಇದ್ದೆ ಇದೆ ಎನ್ನುವ ತರ್ಕ  ಮನುಕುಲಕ್ಕೆ ಬಾರದೆ ಹೋದರೆ ?  ಎದೆಗೊರಗಿದ ನಿಷ್ಕ ಲ್ಮಶ ಪಾಪು ಬದುಕಿದm
mmunರೂ ಬದುಕೀತು ಸವಾರಿ ಪ್ರಭೇಧ ಅಳಿದೀತು ಎನ್ನುವ ಸತ್ಯ ನಮ್ಮಲ್ಲಿ ಜಾಗೃತಿಯಾಗಬೇಕಾಗಿದೆ ಪ್ಪಕೃತಿ ನಿಯಮವೆ ಪರಮ ನಿಯಮ.ಎನ್ನುವ ನನ್ನ ಅರಿವು  ವಾಯುವಿಹಾರದಲ್ಲಿ ಸಿಡಿಯಿತು.ಹಾಗಾಗಿ ಒಂದೆರೆಡು ಸಾಲು ಬರೆಯಲು  ನನ್ನ ಕೈಬೆರಳು ಹೆಣಗಾಡಿದವು.
ತಮ್ಮ ಸಮಯ ಕೊಂದ ಬರವಣಿಗೆಗೆ ಕ್ಷಮೆಯಿರಲಿ.
ನಮಸ್ಕಾರಗಳು.🙏🙏

‘ದಿ ವಲ್ಚರ್ ಆಂಡ್ ದಿ ಲಿಟ್ಟಲ್ ಗರ್ಲ್’ ಹೆಸರಿನ ಈ ಫೋಟೋವನ್ನು 1993ರಲ್ಲಿ ಸುಡಾನಿನಲ್ಲಿ ಭೀಕರ ಬರಗಾಲದ ಸಮಯದಲ್ಲಿ ಸೌತ್ ಆಫ್ರಿಕಾದ ಖ್ಯಾತ ಫೋಟೋ ಜರ್ನಲಿಸ್ಟ್ ಕೆವಿನ್ ಕಾರ್ಟರ್ ಅವರು ಸೆರೆಹಿಡಿದಿದ್ದರು.ಫೋಟೋದಲ್ಲಿ ಕಾಣುವ ಆ ಆಫ್ರಿಕನ್ ಬಾಲಕಿ ಹಸಿವನ್ನು ತಾಳಲಾರದೆ ಸಮೀಪದಲ್ಲೇ ವಿಶ್ವಸಂಸ್ಥೆ ಸ್ಥಾಪಿಸಿದ ಗಂಜಿ ಕೇಂದ್ರಕ್ಕೆ ತೆರಳಲು ಪ್ರಯತ್ನಿಸುತ್ತಿದ್ದಳು. ಆದರೆ ಬಹಳ ದಿನಗಳಿಂದ ಆಹಾರವಿಲ್ಲದೆ ಕಾಲುಗಳಲ್ಲಿಯ ಚಲನೆಯ ಶಕ್ತಿಯೇ ನಶಿಸಿ ಆ ಪುಟ್ಟ ಮಗು ತೆವಳಿಕೊಂಡು ಹೋಗಲು ಪ್ರಯತ್ನಿಸುತ್ತಿತ್ತು. ಆದರೆ ಆ ಮಗು ಅಂದು ಗಂಜಿ ಕೇಂದ್ರವನ್ನು ತಲುಪಿತಾ? ಅಥವಾ ಅಲ್ಲೇ ಸತ್ತು ರಣ ಹದ್ದುವಿಗೆ ಆಹಾರವಾಯಿತಾ? ಎಂಬುದು ಇವತ್ತಿಗೂ ಪ್ರಶ್ನೆಯಾಗಿಯೇ ಉಳಿದಿದೆ.


Wednesday, February 22, 2023

* ಅಳಿದಿಲ್ಲ... ಬೆಳೆವೆ *

ಒಂದೊಮ್ಮೆ ಮುಗಿಲೆತ್ತರಕೆ 
ನಳಿನಳಿಸಿ ನಾ ಮತ್ತಿನ ಬೆಳೆ. 
ಸಿಹಿ ತುಂಬಿದ ರಸಭರಿತ  
ಸಡಗರದ  ವಯ್ಯಾರದ ಬಾಲೆ.
ಮೈತುಂಬಾ ಬಾಲ ...
ಬಾಗಿಲಿಗೆ ಆಗಿದ್ದೆ ದೀಪಾವಳಿಯ ತೋರಣ.
ಮಗದೊಮ್ಮೆ ಸಂತೆ ಮುಗಿಸಿದ 
ಸಂತನ ಯಾತ್ರೆಯ ಅಂತಿಮ ಆಭರಣ .
ಶಕೆಯಾದರೆ ಬೀಸುವ ಚಾಮರ 
ಇಲ್ಲ ಬಡಿವಾರ ! ತವರ ಪ್ರೀತಿಗೇನು ಬರ ?
ಬಂತೊಮ್ಮೆ ಬಹು ದೂರದಾ 
ರಕ್ಕಸನ ಸಂಹಾರ  
ಬೇಕಂತೆ ಅವರಿಗೆ ಕತ್ತರಿಸಿ 
ಸಿಹಿ ಮುಕ್ಕುವ ಅವಸರ. 
ಮುತ್ತಿಟ್ಟ ಆ ದಿನ ಹೆತ್ತವರ ಪ್ರೀತಿ .
ಸುತ್ತ ತಿರುಗಿ ಮತ್ತು ಏರಿತೈ ಮುಗಿಲೆತ್ತರ 
ಎತ್ತಲೋ ಬಂತು ತಂಡ 
ಕತ್ತರಿಸಿ ಎತ್ತಿ ಮೇಲಿಟ್ಟು 
ಸುತ್ತಿ ಕಳಿಸಿದರು ಬಹು ದೂರ 
ಹಿಚುಕಿ ಹಿಂಡಿ,ಹೊಸಕಿದರು....
ನಾನಾದೆ ಸಿಪ್ಪೆಯ ತುಂಡು.
ಅವಡುಗಚ್ಚಿ ಬಿಗಿಹಿಡಿದೆ ತುಸು 
ತವರಿನ ಕಿಸುನಗೆಯ ಪ್ರೀತಿಗೆ ಒಪ್ಪಿ.
ಮರೆಯುವದು ಹೇಗೆ ?  ಮೈದಡವಿದಾ ಪ್ರೀತಿ.
ಕಾಲು ಕಿತ್ತಿಲ್ಲ ನೆಲೆ ಇದೆ,ಮತ್ತೆ ಮೇಲೇಳುವಾಸೆ 
ಮೈದಡುವವರ ಮಮತೆ ಹಿಡಿವಾಸೆ 
ಮೇಲೆದ್ದು ನಲಿವಾಸೆ ತಲೆಬಾಗಿ 
ಅಳಿದುಳಿದ ಕಬ್ಬು ಕುಳೆ ನಾ ಬೆಳೆದು 
ಸಿಹಿಯಾಗುವೆ ಸಹಿಸಿ.

* ದೇವರು ನಡೆದಾಡಿದ *



ನಡೆದಾಡಿದಾ ದೇವರು 
ಸಿದ್ಧೇಶ್ವರ ಶ್ರೀಯಾಗಿ  
ಪಡೆದು ಕಳೆದುಕೊಂಡೆವು
ನಿರಾಶೆಯಾಗಿ,
ನೀ ನಮ್ಮೆಲ್ಲರ ತಂದೆ
ಕಾಯುತಿರುವೆವು ಅನಾಥವಾಗಿ ॥

ನಮ್ಮೆಲ್ಲರ ಹೃದಯ ಪಟಲದಲ್ಲರಳಿ 
ಸುಮ್ಮನೇ ತೆರಳಿದೆ ಹಮ್ಮೀರ,
ಒಮ್ಮೆ ಬಂದು ನೋಡು
ನೀಮ್ನರು ಕಾಯುತಿರುವೆವು ನಿಮಗಾಗಿ ॥

ಆಶೆಯೆಂಬ ಹೇಸಿಗೆಗಂಟಿ 
ಮೋಸ ಹೋದ ಮನಕೆ 
ಹೊಸದಾರಿ ತೋರಿದೆ ಸ್ವೇತ ಮುನಿ 
ಮಾನವತ್ವದ ನೆರಳಲ್ಲಾದೆ ದೈವತ್ವದ ಗಣಿ॥

ಆಧ್ಯಾತ್ಮಿಕ ಅರಮನೆಯ ದೊರೆಯೇ 
ನಿರವ ಕಾಣುತಿದೆ ಗುರುಮುನಿ 
ನೀ ತುಳಿದ ಹಾದಿಯಲ್ಲಿ ಜ್ಞಾನಕ್ಕೇನು ಬರ ಧನಿ॥

ಸ್ವೇತ ಬಟ್ಟೆಯ ಸಂತ, ಜಾತಿ ಎಣಿಸಲಿಲ್ಲ .
ಮರ್ಕಟ ಮನಕೆ ಸೋತು ನಡೆಯಲಿಲ್ಲ .
ಸರ್ವರ ಹಿತವನ್ನೆ ಬಯಸಿದೆ ಇಲ್ಲೆಲ್ಲಾ॥

ಆಧ್ಯಾತ್ಮದ ಪರಮಶಿಖರ, 
ಸುಜ್ಞಾನದ ದಿವ್ಯ ಜ್ಯೋತಿ 
ಭೌತಿಕವಾಗಿ ಆರಿದರೇನು? 
ಬೆಳಗಿದೆ ಜಗವೆಲ್ಲ 
ಸೂತಕ ಹಿಡಿದಿದೆ 
ಅನುದಿನ ನಮಗೆಲ್ಲ॥

ಹಣ ಮಾಡಲು ಹೆಣಗಲಿಲ್ಲ
ಹಾಕಿದ ಅರಿವಿಗೆ ಕಿಸೆ ಮೊದಲೆ ಇಲ್ಲ
ಹಾರ ತುರಾಯಿಗೆ ಹಿಗ್ಗಿದವರಲ್ಲ ।
ಬಗ್ಗಿ ತೇರು ಎಳೆಯುವವರ ಮೇಲೆ ಹತ್ತಲೆ ಇಲ್ಲ  
ಸುತ್ತಲೂ ನಿನ್ನಂತಹವರನ್ನು 
ಹುಡುಕಿದೆ ಇನ್ನೂ ಸಿಕ್ಕೆ ಇಲ್ಲ ॥

ಬಸನಗೌಡ ಗೌಡರ ಉಪನ್ಯಾಸಕರು ಗುಳೇದಗುಡ್ಡ

    cell no 9480385494

Friday, February 17, 2023

ಶಿವನೆಂದರೆ ಜೀವನ ಪಾವನ

ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು

* ಶಿವನೆಂದರೆ ಜೀವನ ಪಾವನ *

ಶಿವ ಧ್ಯಾನ ಮಾಡೋಣ ಅಣ್ಣ  
ಶಿವರಾತ್ರಿ ದಾನ ಮಾಡಿಹನು ಮುಕ್ಕಣ್ಣ 
ಶವವಾಗವ ಮುನ್ನ ಶರಣರಿಗೆ 
ಶರಣಾಗೋಣ ಬಾರೋ ಅಣ್ಣ॥

ಉಪವಾಸವೊಂದು ತಪಮಾಲೆ 
ಜಪಮಾಡಿ ಕಫ ಕರಗಿಸೋಣವಣ್ಣ 
ಎಳೆದಾಕಲು ಇದಲ್ಲ ಜೋಳದ ಬಳ್ಳ
ಬಾಯಿಚಪಲಕ್ಕನ್ನ ತಡಯೋಣ ಅಣ್ಣ॥

ಉದರ ವಿಶ್ರಾಂತಿ ಮೆದುಳಿಗೆ ಶಾಂತಿ
ಕದರಿನಂತೆ ನಡೆಯೋಣ ಅಣ್ಣ 
ಶಿವನೆಂದರೆ ಜೀವನ ಆಗುವುದು ಪಾವನ
ಜೀವ ಇರುವವರೆಗೆ ಮಾಗೊಣ ಅಣ್ಣ॥

ಈಗ ಬಂದವನಲ್ಲ ಹರಪ್ಪಾ ಪಶುಪತಿ 
ಆಗಿಹನು ಇಂದು ಪಾರ್ವತಿ ಪತಿ 
ತಂದಿಹನು ಮಹಾಶಿವರಾತ್ರಿ 
ಬೆಂದು ಹೊಂದೋಣ ಸದ್ಗತಿ॥

ಶಿವನಾಮವೆ ಹೋಮ ಹವನ
ಶಿವನಾಮವೆ ಮಂತ್ರ ತಂತ್ರ
ಶಿವನಾಮವೆ ಸಕಲ ಕೀರ್ತನ
ಶಿವನೊಲಿದರೆ ಪಡಿಪದಾರ್ಥವಣ್ಣ॥

ಮೈ ಕೊಳೆಗೆ ಜಲ ಮಹಾಮರ್ಜನ
ಮನಸ್ಸಿನ ಕಳೆಗಿಹುದು ಮಹಾಮಂತ್ರ 
ಶಿವನಲ್ಲದೆ ಇನ್ನಾರಿಗುಂಟು ಸ್ಥಾನ
ಶಿವನಾಮವೆ ಪಥ್ಯ ಮಾಡು ನೀ ಶಿವ ಧ್ಯಾನ॥

Tuesday, February 14, 2023

ತನಗಗಳು

ತನಗಗಳು.

ಪ್ರೀತಿಯಲ್ಲರಳಿದ
ಜೊತೆ ಸ್ನೇಹ ಹೂಗಳು
ಬೀಳದಿರಲಿ ಅಲ್ಲಿ
ಸಂಶಯದ ನೆರಳು.

ತ್ಯಾಗದಿಂದಲಿ ಭಾವ
ಯೋಗವಾಯಿತು ಪ್ರೀತಿ.
ಭೋಗದಿಂದಲಿ ಜೀವ
ಸಾಗಿದಾಗದು ವಾಂಚೆ.

ಪಡ್ಡೆ ಹುಡುಗರದು
ಬರಿ ದೊಡ್ಮಾತುಗಳು
ಕಡ್ಡಿಮುರಿದಂತಲ್ಲ
ಬರಿ ಚೌಕಾಸಿಗಳು.

Monday, February 6, 2023

* ಕುದಿ ಮೌನ *

ಎತ್ತರಕ್ಕೇರಿದವನಿಗೆ ಗೊತ್ತು
ಹತ್ತು ಹನ್ನೊಂದು ತನ್ನೊಳಗೆ ಸುತ್ತಿ ಸುಳಿವ 
ಕತ್ತು ಹಿಚುಕುವ ಹಳೆಯ ಕೊಳೆತ ಹುಳುಕುಗಳು ಎತ್ತರಕ್ಕೇರಿಸಿದ ಜನ ನೆತ್ತಿಯಲಿಟ್ಟು ತೂಗುತಿರುವರಲ್ಲಾ! 

ಮತ್ತೆ ಇಳಿಯಲು ಮನಸ್ಸಿಲ್ಲ 
ಇಳಿದರೆ ಬರಿ ತೋಳಗಳೆ ಎಲ್ಲಾ
ಉಪ್ಪರಿಗೆಗಂಟಿ ತೆಪ್ಪಗಿರಲುಂಟೆ 
ಕಪ್ಪ ನೀಡಿ  ಬೆಪ್ಪನಂತಿರಬೇಕು !

ಮುಳ್ಳುಗಳಿವೆ ಕುಳಿತ ಜಾಗದ ತುಂಬಾ
ಚುಚ್ಚುವವು ಎಡಬಲ ತಪ್ಪಿದರೆ ನೇಣುಗಂಬಾ
ತುಟಿ ಬಿಚ್ಚಲೊಲ್ಲ ಹುಚ್ಚು ಹಿಡಿದಿದೆ , 
ನೆಚ್ಚಿಸಲು ಬಲವಿಲ್ಲ ತಿರುಗುತಿಹನು !

ಜೋಡಿಸಿದ ಕರ ಅಗಲಿಸಲೊಲ್ಲ 
ಕೃತಕ ನಗೆ ಬೀರಿ ಏರುತಿಹನು ಸುಳ್ಳಿನ ತೇರು 
ಎಳೆಯುವುದೊಂದೆ ಕಳ್ಳ ಮಳ್ಳರಿಗೆ ಚಂದ 
ಮತ್ತೆ  ನಿಲ್ಲಿಸುವರು ನಿಂತ ಜಾಗದಲ್ಲಿ ತಂದು!

ಕರಗುವ ಹಿಮದಂತ ಹಿರಿದಾಸನವದು 
ಉರಿಯುತಿದೆ ನರಮಂಡಲ, 
ಮರೆಯಲಾಗದು ಸುತ್ತಲಾವರಿಸಿದೆ ಕೊಳಕಮಂಡಲ 
ಸಾಯಲು ಬಿಡದೆ ಬದುಕಲು ಬಿಡದೆ!

ಹೊರಗೂ ಇಲ್ಲದೆ ಒಳಗೊ ಇಲ್ಲದೆ  
ಅರಳವ ಕನಸಿನೊಂದಿಗೆ ಸರಸ
ಜೇಡ ಕಟ್ಟಿದ ಮನೆಯಲ್ಲಿಂದು 
ಬಿಡದೆ ಕಾಡುತಿದೆ ಕುದಿ ಮೌನ!

 

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...