Sunday, March 5, 2023

* ದುಂಡು ಮಲ್ಲಿಗೆ *

ಮುಗಿಲಿಗೆ ಮುತ್ತಿಕ್ಕಿ ಮಾಳಿಗೆಯ ಸುತ್ತಿ 
ಕತ್ತು ಎತ್ತಿದೆ ನೀ ಹತ್ತೂರ ರಾಣಿ ! 
ಎತ್ತ ತಿರುಗಿಸಿದರೆ ಏನು ? 
ಸುತ್ತಲೂ ಸೂಸುತಿರುವೆ ಸುವಾಸನೆ .।
ನೀ ಸದಾ ಸೆಳೆಯುತಿರುವೆ 
ಸೌಂದರ್ಯ ಆಸ್ವಾದಿಸುವ ವದನ।
ಸೋತು ಸೆರೆಯಾದೆ ಸ್ವೇತವರ್ಣಿ।
ಪಕಳೆಗಳ ಪೇರಿಸಿ ನಾಸಿಕಕೆ ವೈಯಾರಿ 
ಕರೆಯುವರು ಹೆಸರು ದುಂಡು ಮಲ್ಲಿಗೆ.॥
ಮುರಿದು ಮುಡಿಗಿಟ್ಟು ಮೆರೆಯಲು 
ನಾನಲ್ಲ ಬಾಲೆ, ಆದರೂ ಬರುವೆ ನೀನಿದ್ದಲ್ಲಿಗೆ !
ಹೆರಳಿದ್ದರೆ ತಾನೆ ಹರದೀತು ಬೆರಳು ?
ಕೊರಳಿಗಾದರೂ ಆಗಲಿ ಹೆರಳಿಗಾದರೂ ಆಗಲಿ,
ನಾಸಿಕಕೆ ನಶೆಯೇರಿಸಿ ಮಾಡಿದೆ ಮರಳು  
ಎನ್ನಂಗಳದ ಗೋಮಾತೆಯ ಬಹಿರ್ದೆಶೆಯ ಬಂಗಾರವನುಂಡು ಮೇಲೆ ಹೆಣೆದೆ ಚಪ್ಪರದ ದಂಡು. ।
ಪುರಸಭೆಯ ನೀರು ಅರ್ಧಾಂಗಿಯ ಕಾರುಬಾರು.        
ಬೆಳೆದು ನಿಂತಿರುವೆ ನೀ ನೀರೆಯರ ನೆಚ್ಚಿನ ಬೀರು  ।
ನೋಡಿ ಅಮಲೇರಿತು ಇಂದು ರವಿವಾರ !
ಎತ್ತಿ ಎಣಿಸಿ ಸುತ್ತಿ ಇಟ್ಟವರಾರು 
ಹತ್ತಿಯ ತೊಳೆ ನೀನು ।
ನಾನಲ್ಲ ನಾರಿಯರೆ ಬೇಕಂತಿವಳಿಗೆ ನಗೆ ಬೀರಲು 
ಏಕೆಂದರೆ ನನಗಿಲ್ಲ ಹುಲ್ಲುಗಾವುಲಿನಂತ 
ತಲೆಗೂದಲು,। ನಯನವೆ ಸಾಕೆನಗೆ 
ನಿನ್ನಂದ ನೋಡಿ ಸ್ವರ್ಗದಲ್ಲಿ ತೇಲಾಡಲು ।
ಮಾಳಿಗೆಯ ತುಂಬಾ ಓಲಾಡಲು.॥

2 comments:

  1. ಗೌಡ್ರೇ ತುಂಬಾ ಚೆನ್ನಾಗಿದೆ ಆದರೆ ಮೊದಲು ಮಾಳಿಗೆ ಸುತ್ತಿ ನಂತರ ಆಕಾಶಕೇರಲಿ ಓದಿ ಕುಣಿದಾಡಿದೆ

    ReplyDelete
  2. ಧನ್ಯವಾದಗಳು ಸರ್ ತಮ್ಮ ಪೊತ್ಸಹದಾಯಕ ನುಡಿಗಳಿಗೆ 🙏🙏

    ReplyDelete

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...