ಕತ್ತು ಎತ್ತಿದೆ ನೀ ಹತ್ತೂರ ರಾಣಿ !
ಎತ್ತ ತಿರುಗಿಸಿದರೆ ಏನು ?
ಸುತ್ತಲೂ ಸೂಸುತಿರುವೆ ಸುವಾಸನೆ .।
ನೀ ಸದಾ ಸೆಳೆಯುತಿರುವೆ
ಸೌಂದರ್ಯ ಆಸ್ವಾದಿಸುವ ವದನ।
ಸೋತು ಸೆರೆಯಾದೆ ಸ್ವೇತವರ್ಣಿ।
ಪಕಳೆಗಳ ಪೇರಿಸಿ ನಾಸಿಕಕೆ ವೈಯಾರಿ
ಕರೆಯುವರು ಹೆಸರು ದುಂಡು ಮಲ್ಲಿಗೆ.॥
ಮುರಿದು ಮುಡಿಗಿಟ್ಟು ಮೆರೆಯಲು
ನಾನಲ್ಲ ಬಾಲೆ, ಆದರೂ ಬರುವೆ ನೀನಿದ್ದಲ್ಲಿಗೆ !
ಹೆರಳಿದ್ದರೆ ತಾನೆ ಹರದೀತು ಬೆರಳು ?
ಕೊರಳಿಗಾದರೂ ಆಗಲಿ ಹೆರಳಿಗಾದರೂ ಆಗಲಿ,
ನಾಸಿಕಕೆ ನಶೆಯೇರಿಸಿ ಮಾಡಿದೆ ಮರಳು
ಎನ್ನಂಗಳದ ಗೋಮಾತೆಯ ಬಹಿರ್ದೆಶೆಯ ಬಂಗಾರವನುಂಡು ಮೇಲೆ ಹೆಣೆದೆ ಚಪ್ಪರದ ದಂಡು. ।
ಪುರಸಭೆಯ ನೀರು ಅರ್ಧಾಂಗಿಯ ಕಾರುಬಾರು.
ಬೆಳೆದು ನಿಂತಿರುವೆ ನೀ ನೀರೆಯರ ನೆಚ್ಚಿನ ಬೀರು ।
ನೋಡಿ ಅಮಲೇರಿತು ಇಂದು ರವಿವಾರ !
ಎತ್ತಿ ಎಣಿಸಿ ಸುತ್ತಿ ಇಟ್ಟವರಾರು
ಹತ್ತಿಯ ತೊಳೆ ನೀನು ।
ನಾನಲ್ಲ ನಾರಿಯರೆ ಬೇಕಂತಿವಳಿಗೆ ನಗೆ ಬೀರಲು
ಏಕೆಂದರೆ ನನಗಿಲ್ಲ ಹುಲ್ಲುಗಾವುಲಿನಂತ
ತಲೆಗೂದಲು,। ನಯನವೆ ಸಾಕೆನಗೆ
ನಿನ್ನಂದ ನೋಡಿ ಸ್ವರ್ಗದಲ್ಲಿ ತೇಲಾಡಲು ।
ಮಾಳಿಗೆಯ ತುಂಬಾ ಓಲಾಡಲು.॥
ಗೌಡ್ರೇ ತುಂಬಾ ಚೆನ್ನಾಗಿದೆ ಆದರೆ ಮೊದಲು ಮಾಳಿಗೆ ಸುತ್ತಿ ನಂತರ ಆಕಾಶಕೇರಲಿ ಓದಿ ಕುಣಿದಾಡಿದೆ
ReplyDeleteಧನ್ಯವಾದಗಳು ಸರ್ ತಮ್ಮ ಪೊತ್ಸಹದಾಯಕ ನುಡಿಗಳಿಗೆ 🙏🙏
ReplyDelete