ಮಹಾಂತರ ಮಾತು ಮನುಕುಲಕ್ಕೆ ದಾರಿ
ಬಸವತತ್ವದ ಕಾಯಕ ಜೀವಿ
ಸತ್ಕರ್ಮವ ಬಿತ್ತಿದರು, ಧರ್ಮವ ಹಿಡಿಸಿದರು
ವ್ಯಸನವ ಬಿಡಿಸಿ, ಹೊಸ ದಾರಿಗೆ ನಡೆಸಿದರು॥
ಜೋಳಿಗೆ ಕಟ್ಟಿದರು ವ್ಯಸನವ ಕಸಿದು
ಹೊಸ ದಾರಿಗೆ ಹಚ್ಚಿದರು।
ಮಹಾಂತರ ಅಪ್ಪಣೆ ನಮಗೆಲ್ಲಾ ದಾರಿ ॥
ಬಿಟ್ಟರಾಗುವುದು ಜೀವನ ದುಬಾರಿ॥
ನಡೆಯಬೇಡ ನೀ ಮೀರಿ
ನಡೆದರೆ ಬೀಳುವೆ ನರಕಕ್ಕೆ ಜಾರಿ॥
ವ್ಯಸನಮಕ್ತ ಸಮಾಜ ನಮಗೆ ರಹದಾರಿ
ತಿಳಿದರೆ ಅದುವೆ ಸ್ವರ್ಗಕ್ಕೆ ದಾರಿ॥i
ಶರಣರ ತತ್ವದ ಸೇವೆ ನಮಗೆಲ್ಲಾ ಸಿರಿ।
ಸರಕಾಯಿತು ಸುಜನರ ಮುಕುಟಕ್ಕೆ ಗರಿ।
ಸದ್ಗುಣ ಬಿತ್ತಲು ಮಹಾಂತ ಶ್ರೀಗಳು
ಸದಾ ಸುತ್ತಿದರು ಈ ಧರಣಿ॥
ಮೂಢ ನಂಬಿಕೆ ಜಾಡು ಹಿಡಿದು
ತೊಲಗಲು ದುಡಿದರು ಕಡೆಯತನಕ।
ಆದರೂ ಉಳಿದಿದೆ ಇನ್ನೂ ತನಕ
ಪ್ರತಿಜ್ಞಾ ಮಾಡೋಣ ವ್ಯಸನ ಬಿಡುವತನಕ॥
No comments:
Post a Comment