Tuesday, April 30, 2024

ಇಮ್ಮಡಿ ಪುಲಕೇಶಿ

* ಇಮ್ಮಡಿ ಪುಲಕೇಶಿ *

ವಾತಾಪಿ ಪುರದ ಅಧಿಪತಿಗೆ 
ಕಾಕಾ ಮಂಗಳೇಶನೆ ಕಂಟಕ। 
ನೆರೆಹೊರೆರಾಜರಾದರಿವನಿಗೆ ನೆಂಟರು । 
ನಡೆಯಿತು ಏಳುಪಟ್ಟುಸಿಂಬಿಗೆ ಕದನ 
ಹತನಾದ ಮಂಗಳೇಶ,ಪುಲಿಕೇಶಿ ಏರಿದ ಪಟ್ಟ॥

ಅಂತಃಕಲಹದ ಲಾಭ ಪಡೆದರು 
ರಾಷ್ಟ್ರಕೂಟ ಅಪ್ಪಾಯಿಕಾ ಗೋವಿಂದ ,
ಅಲುಗಾಡಿತು ವಾತಾಪಿ ನೆಲ।
ಪುಲಿಕೇಶಿಯ ಘರ್ಜನೆಗೆ ಅಪ್ಪಾಯಿಕ ಪರಾರಿ                  ಗೋವಿಂದ ಶರಣಾಗತಿ ಭೀಮಾ ತೀರ ನೀಡಿತು.            ಪುಲಿಕೇಶಿಗೆ ಜಯಭೇರಿ ॥

ಕದಂಬ, ಕೊಂಕಣ ಮಲೆನಾಡು, 
ಅಲುಪರ ಕಡಲು,ಗಂಗರ ತಲಕಾಡು
ವಶವಾಯಿತು ಕುಂತಲ ನಾಡು।
ವಿಂಧ್ಯಯ ಕಡೆ ಇಮ್ಮಡಿ ಪುಲಕೇಶಿಯ ನಡೆ
ಲಾಟ,ಮಾಳ್ವ, ಗೂರ್ಜರ ಭರ್ಜರಿ ಬೇಟಿ  
ನರ್ಮದೆ ನಾಡೀಗ, ಕರ್ನಾಟಕಬಲದ ಬೀಡು॥

ಕನೌಜನ ಆರ್ಯಾವರ್ತದ ದೊರೆ 
ಅರಿಯಲಿಲ್ಲ ಪುಲಿಕೇಶಿಯ ಬಲ ।
ಬಯಸಿದ ಸಂಪೂರ್ಣ ಜಂಭೂ ದ್ವೀಪ
ಕದನ ಸಾರಲು ತುಳಿದ ದಕ್ಷಿಣಾ ಪಥ ॥

ಸುಲಬವಲ್ಲವದು ಇಮ್ಮಡಿ ಪುಲಕೇಶಿಯ 
ಚಾಲುಕ್ಯರ ಈ ಮಲಪ್ರಭೆಯ ಬನದ ನೆಲ
ತೋರಿಸ ಬಯಸಿದ ಹರ್ಷವರ್ಧನ ಪ್ರತಾಪ।
ಹರ್ಷ ಎಂಬ ಅರಸನ ಹರ್ಷ, ಉಡುಗಿತು.
ನೋಡಿ ಉರಳಿ ಬಿದ್ದ ಅಶ್ವಗಳ ಪ್ರಲಾಪ॥

ಮಲಪ್ರಭೆಯ ಅಲೆ ಭರತಖಂಡ ಮೀರಿ 
ಪರ್ಷಿಯಾದ ಖುಸ್ರುನ ಆಸ್ಥಾನ ಸೇರಿ
ದ್ರಾವಿಡ ಗೆಳತನಕಾಯಿತು ನಾಂದಿ।
ಅಜಂತಾ ಗುಹೆಯ ಕಲೆಗಿದು ಮೆಹಂದಿ॥
  
ಚಾಲುಕ್ಯ ಕಲಿ ಈತ  ಕುಶಾಗ್ರಮತಿ   
ಪಲ್ಲವ ಮಹೇಂದ್ರನಿಗಾದ ಕದನ ಮೂರುತಿ
ಗೆದ್ದು ನೀಡಿದ ಗುಡಿ ಗುಂಡಾರಕೆ ದತ್ತಿ।
ಆರಲಿಲ್ಲ ದ್ವೇಷ, ಪಲ್ಲವರ ಮಗ ನರಸಿಂಹ.              ಇಳಿವಯಸ್ಸಿಗೆ ತೋರಿದ ಬಾರವಾದ ಬುತ್ತಿ ॥

Thursday, April 18, 2024

ಮಹಾಕೂಟ ಪ್ರಯಾಣ


          ರಜೆ ಇರುವುದೆ ಮಜಾ ಮಾಡಲು ಎನ್ನುವ ಕಾಲಘಟ್ಟದಿಂದ, ರಜಾ ಇರುವುದು ಜ್ಞಾನವೃದ್ಧಿಗೆ, ಆರೋಗ್ಯ bufವೃದ್ಧಿಗೆ, ಕುಟುಂಬದ ಸಂಬಂಧದ ವೃದ್ದಿಗೆc ಎನ್ನುವ ಕಾಲಘಟ್ಟಕ್ಕೆ ಬಂದು ನಿಂತಿದ್ದೇವೆ.ಆದರೆ ಇನ್ನೂ vcvvyki
by iuವ ಕಾಲಘಟ್ಟದ ಆಜುಬಾಜುನಲ್ಲಿರಬಹುದೇನೋ ಅದು ಅವರವರ ವೈಯಕ್ತಿಕ ವಿಚಾರಕ್ಕೆ ಬಿಟ್ಟ ವಿಚಾರ ಬಿಡಿ. ಈ ಪೀಠಿಕೆ ಹಾಕಿದ ಉದ್ದೇಶವೇನು ಅಂದರೆ ಇವತ್ತು ನನಗೆ ನನ್ನ ಬೇಸಿಗೆ  ರಜೆಯನ್ನು  ಸದುಪಯೋಗ ಪಡಿಸಿಚೊಳ್ಳುವ ಅವಕಾಶ ಸಿಕ್ಕಿತು. ಅದನ್ನು ಈ ಸಮೂಹ ಮಾಧ್ಯಮದ ಮೂಲಕ ಆತ್ಮೀಯರಲ್ಲಿ ಹಂಚಿಕೊಳ್ಳಬಯಸುತ್ತೇನೆ.ನಮಗೆ ನೆಮ್ಮದಿ ಸಿಗಲು ಇಬ್ಬರು ಜೊತೆ ನಾವು ಕೆಲವೊಂದಿಷ್ಟು ಅವಧಿಯನ್ನು ಕಳೆಯಬೇಕಂತೆ yt

m ವರ್ಷದ ಒಳಗಿನ ಮಕ್ಕಳು ಮತ್ತು ಅರವತ್ತು ವರ್ಷದ ನಂತರದ ವೃದ್ದರ ಜೊತೆ ಬೆರೆಯಬೇಕಂತೆ ಇಂದು ಎರಡನೆಯವರ ಜೊತೆ ಬೆರೆಯಲು ಅವಕಾಶ ಸಿಕ್ಕಿತು ಅದು ಹೇಗೆಂದರೆ ನನ್ನ ಆತ್ಮೀಯ ಪ್ರಾಚಾರ್ಯರು ನಂತರ ಅವರು ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ್ತ  ಉಪನರ್ದೇಶಕರಾದ ಶ್ರೀ ರಮೇಶ ದಡ್ಡಿಯವರ ಮಕ್ಕಳ ಮದುವೆಯ ಕಾರ್ಡ್ ನೀಡಲು ನನಗಿಂತ ಹತ್ತು ವರ್ಷಗಳಷ್ಟು ಹಿರಿಯರಾದ ಈ ಶ್ರೀ ಮಹಾದೇವ ಜಗತಾಪರ ಸರ್ ಮನೆಗೆ ಹೋಗುವಂತಾಯಿತು. ಅವರ ನಮ್ಮ ಬಾಂಧವ್ಯ ಇಂದು ನಿನ್ನೆಯದಲ್ಲ ನನ್ನ ವಿದ್ಯಾರ್ಥಿ ದೆಶೆಯಿಂದನೂ ಅವರು ನನಗೆ ಆಪ್ತರು ಈ ಪೂರ್ವದಲ್ಲಿ ಅದರೊಂದಿಗೆ ಗಂಜಿಕೆರೆಯಲ್ಲಿ ನೀರಿದ್ದಾಗ ಈಜಾಡಿ ಮಜಾದೊಂದಿಗೆ ಆರೋಗ್ಯದ ವೃದ್ಧಿಯನ್ನು ಮಾಡಿಕೊಂಡಿದ್ದು ಉಂಟು .ಅವರು ಚಿತ್ರಕಲಾ ಶಿಕ್ಷಕರಲ್ಲದೆ ಯೋಗಪಟುಗಳು ಮತ್ತು ನಿಸರ್ಗದ ಆರಾಧಕರು ಹೌದು ಹೀಗಾಗಿ ವಯಸ್ಸಿನಲ್ಲಿ ಹಿರಿಯರಾದರೂ ಗೆಳೆತನದ ಬಾಂಧವ್ಯ ಹಾಗೆ ಮುಂದುವರಿದಿದೆ ನಿನ್ನೆ ದಿವಸ ಅವರ ಮನೆಗೆ ಹೋದಾಗ.ಮತ್ತೆ ಹಳೆ ದಿನಗಳ ಮೆಲಕು ಹಾಕಿದೆವು. ಒಂದು ಕಾಲದಲ್ಲಿ ಮಿನಿ ಸಮುದ್ರದಂತೆ ಕಾಣುತ್ತಿದ್ದ ಗಂಜಿಕೆರೆ ಇಂದು ಹುಡುಗರು ಆಡುವ ಕ್ರಿಕೆಟ್ ಮೈದಾನವಾಗಿದೆ.  ಏಕೆಂದರೆ ಮಳೆಗಳು ಮನುಷ್ಯರೊಂದಿಗೆ ಮುನಿಸಿಕೊಂಡಿರುವಂತೆ ಕಾಣುತ್ತಿದೆ. ಹೀಗಾಗಿ ಸಂತೃಪ್ತಿಯಿಂದ ಸುರಿಯುತ್ತಿಲ್ಲ ,ಬರಗಾಲಗಳು ಬೀಗರಾಗಿದ್ದಾರೆ ಆವಾಗ ಆವಾಗ ಬಂದು ನಮ್ಮನ್ನು ಹಿಂಡಿ ಹಿಪ್ಪಿಮಾಡಿ ಹೋಗುತ್ತಿವೆ. ಇರಲಿ ಮಾಡುವುದಿನ್ನೇನು ನೀರಿನಲ್ಲಿ ಈಜಾಡಬೇಕಲ್ಲ ಅದಕ್ಕಾಗಿ ಅಂದು ನಾವು ಹುಡುಕಿದ ದಾರಿಯೇ ಮಹಾಕೂಟ ಪಯಣ. ಮಹಾಕೂಟವೆಂದರೆ ಅದು ಬರಿ ಈಜು ಕೊಳವಲ್ಲ  ಅದು ನಮ್ಮ ಸಂಸ್ಕೃತಿಯ ಶಿಕರಪ್ರಾಯದ ಹೆಗ್ಗುರುತು. ಅಲ್ಲಿ ನಮಗೆ ಐತಿಹಾಸಿಕ ಕುರುಹು ಉಂಟು, ಜ್ಞಾನದ ಆಳವುಂಟು ,ನಿಸರ್ಗದ ಮಡಿಲಲ್ಲಿ ನಮ್ಮ ಹಿರಿಯರು ನೆಲೆನಿಂತು ಹೋದ ಆದರ್ಶ ಉಂಟು. ಆರು ಮತ್ತು ಏಳನೇ ಶತಮಾನದಲ್ಲಿ ಇಡಿ ಭಾರತ ದೇಶದ ಕೇಂದ್ರವಾಗಿ ಬೆಳೆದ ಚಾಲುಕ್ಯರ ನಾಡಿನ ಸುಂದರವಾದ ಪ್ರಕೃತಿಯ ಮಡಿಲು gbgbommhm
ಈ ಮmಹಾಕೂಟ. ಇಲ್ಲಿನ ಇತಿಹಾಸವನ್ನು ಒಮ್ಮೆ ಕೆದಕಿದರೆ ಕನ್ನಡಿಗರ ಹೆಮ್ಮೆ ಇಮ್ಮಡಿಯಾಗುತ್ತದೆ ಕ್ರಿ ಶ 602ರಲ್ಲಿ ಚಾಳುಕ್ಯರ ಮಂಗಳೇಶನು ತನ್ನ ಯುದ್ಧ-ವಿಜಯಗಳ ನೆನಪಿಗಾಗಿ ಇಲ್ಲಿ ಅನೇಕ ಶಿವಲಿಂಗಗಳ ದೇವಾಲಯಗಳನ್ನು ಕಟ್ಟಿಸಿದ್ದಾನೆ ಎನ್ನುವ ಮಾಹಿತಿ ಸಿಗುತ್ತದೆ. ಮಹಾಕೂಟೇಶ್ವರ ದೇವಾಲಯದ ಮುಂದೆ ಚಾಳುಕ್ಯರಾಜ ಮಂಗಲೇಶನ ಶಾಸನ ಶಿಲಾಸ್ತಂಭವಿತ್ತು. ಇದು ಈಗ ಬಿಜಾಪುರದಲ್ಲಿರುವ ಪುರಾತತ್ವ ವಸ್ತು ಸಂಗ್ರಹಾಲಯದಲ್ಲಿದೆ ಎಂದು ಹೇಳಲಾಗಿದೆ.  ಈ ಶಾಸನವಲ್ಲದೆ ಮಹಾಕೂಟೇಶ್ವರನಿಗೆ ದೇವಾಲಯದ ಕಂಬದ ಮೇಲೆ ವಿಜಯಾದಿತ್ಯನ ಪ್ರಾಣವಲ್ಲಭೆಯಾಗಿದ್ದ ವಿನಾಪೋಟಿಯ ಶಾಸನವೂ ಇದೆ.  ಇಲ್ಲಿರುವ ಹಲವು ಶೈವದೇವಾಲಯಗಳಿಂದ ಇದೊಂದು ಪ್ರಸಿದ್ಧ ಶೈವ ಧರ್ಮದ ಕೇಂದ್ರವಾಗಿದ್ದಿರಬೇಕೆಂದು ಊಹಿಸಿದಲಾಗಿದೆ.ಮಹಾಕೂಟೇಶ್ವರ ಹಾಗೂ ಮಲ್ಲಿಕಾರ್ಜುನ ದೇವರ ದೇವಾಲಯಗಳನ್ನು ಒಂದೇ ಮಾದರಿಯಲ್ಲಿ ನಿರ್ಮಿಸಲಾಗಿದೆ. ಬೆಟ್ಟಗಳ ಸಾಲಿನ ನಡುವೆ, ಹಸಿರುವನ ರಾಶಿಯ ನಡುವೆ ಕಂಗೊಳಿಸುವ ಈ ದೇಗುಲಗಳ ರಮಣೀಯವಾಗಿ ಕಾಣುತ್ತವೆ. ದೇವಾಲಯದ ಸುತ್ತ ಅಗಸ್ತ್ತ್ಯೆಶ್ವರ, ವೀರಭದ್ರೇಶ್ವರ ಮೊದಲಾದ ಹಲವಾರು ಚಿಕ್ಕ ಗುಡಿಗಳಿವೆ. ಪ್ರಮುಖ ದೇಗುಲದ ಹೊರಬಿತ್ತಿಯ ಮೇಲೆ ವಿಷ್ಣು, ಸ್ಥಾನಕ ಬ್ರಹ್ಮ, ಅರ್ಧ ನಾರೀಶ್ವರ, ಪರಶುಧರ ಶಿವ, ತ್ರಿಶೂಲಧಾರಿ ಶಿವ ಮೊದಲಾದ ಕೆತ್ತನೆ ಇದೆ. ಕೆಳ ಪಟ್ಟಿಕೆಗಳಲ್ಲಿ ಸುಂದರ ಶಿಲ್ಪಕಲಾ ಕೆತ್ತನೆ ಇದೆ. ಇಲ್ಲಿ ಸೂಕ್ಷ್ಮ ಕೆತ್ತನೆ ಇಲ್ಲದಿದ್ದರೂ ಮನೋಹರವಾದ ಶಿಲ್ಪಕಲಾ ಸೌಂದರ್ಯವಿದೆ.ಬಾದಾಮಿ ಚಾಲುಕ್ಯರ ನಾಡಿನಲ್ಲಿ ಶಿಲೆಗಳೂ ಸಂಗೀತವನ್ನು ಹಾಡುತ್ತವೆ. ವಿಶೇಷ ವಾಸ್ತು ಶೈಲಿಯ ಸುಂದರ ದೇವಾಲಯಗಳು ಆಸ್ತಿಕರಿಗೆ ಭಕ್ತಿಭಾವ ಮೂಡಿಸಿದರೆ, ನಾಸ್ತಿಕರನ್ನು ತಮ್ಮ ಕಲಾಶ್ರೀಮಂತಿಕೆಯಿಂದ ಕೈಬೀಸಿ ಕರೆಯುತ್ತವೆ. ಮಹಾಕೂಟೇಶ್ವರ ಮತ್ತು ಮಲ್ಲಿಕಾರ್ಜುನ ದೇವಾಲಯಗಳ ಮಧ್ಯೆ. ಒಂದು ಪುಷ್ಕರಣಿ ಮತ್ತು ಅದರ ಸುತ್ತಲೂ ಸಣ್ಣ ಸಣ್ಣ ದೇವಾಲಯಗಳಿವೆ ಹೀಗಾಗಿ ಈ ಪುಣ್ಯಸ್ಥಳಕ್ಕೆ  ಮಹಾಕೂಟ ಎಂದು ಹೆಸರು ಬಂದಿರಬಹುದು. ಶಿವಭಕ್ತರಿಗೆ ಇಂದಿಗೂ ಇದೊಂದು ಪುಣ್ಯಸ್ಥಳವಾಗಿದ್ದು 'ದಕ್ಷಿಣಕಾಶಿ' ಎಂದೇ ಪ್ರಸಿದ್ಧವಾಗಿದೆ. ಇಂತಹ ಇತಿಹಾಸ ಪ್ರಸಿದ್ಧ ದೇವಾಲಯಗಳ ಸಂಗಮದಲ್ಲಿರುವ ಪುಷ್ಕರಿಣಿಯಲ್ಲಿ ಈಜುವುದು ಎಂದರೆ ಅದು ಸ್ವರ್ಗದ ಬಾಗಿಲಿಗೆ ಹೋಗಿಬಂದಂತೆ .ಅಂದು ನಾವು ಮಹಾಕೂಟ ತಲುಪಿದಾಗ ಸು. 7.30 ಗಂಟೆಯಾಗಿರಬಹುದೇನೊ, ಮುಕ್ಕಾಲು ಗಂಟೆ ನೀರನಲ್ಲಿ ಮನಸ್ಸು ತೃಪ್ತಿಯಾಗುವವರೆಗೆ ಈಜಾಡಿದೆವು ಏಕೆಂದರೆ ಜನಜಂಗುಳಿ ಇನ್ನೂ ಸೇರಿರಲಿಲ್ಲ.ಫಲಶ್ರುತಿಯಾಗಿ ನೀರು ಎಷ್ಟು ಶುಬ್ರವಾಗಿತ್ತೆಂದೆರ ತಳದ ಸಣ್ಣಪುಟ್ಟ ಕಣಗಳು ಕಾಣುತ್ತಿದ್ದವು ಆ ಕಾರಣಕ್ಕಾಗಿ ಹಿಂದಿನ ದಿನ ಒಬ್ಬರು ಉಂಗುರವನ್ನು ಕಳೆದುಕೊಂಡಿದ್ದನ್ನು ಹುಡುಕಲು ನಮಗಿಂತ ಮೊದಲು ಬಂದು ಹಾಜರಾಗಿದ್ದರು. ಅವರು ಹುಡುಕುತ್ತಿದ್ದರೆ ನಾನು ಮಹದೇವ್ ಜಗತಾಪ ಸರ್ ಕಲಿಸಿದ ಲಗಿಮಾ ಯೋಗದಲ್ಲಿ ಮಗ್ನನಾಗಿದ್ದೆ .ಎಂತಹ ಆನಂದ ,ನಮ್ಮದೆ ಪಕ್ಕದಲ್ಲಿರುವ ಸ್ವರ್ಗ ಬಿಟ್ಟು ಬಹುದೂರ ಯೋಚಿnynnhಸುmmj.
muimkmjhnm says njವವರೊಮ್ಮೆ ಪುಷ್ಕರಿಣಿಯಲ್ಲಿ ಯಾಕೆ ಪಾವನವಾಗಬಾರದು ಎನ್ನುವುದು ನನ್ನ ಪ್ರಶ್ನೆ. ಸರಿ gmhyntಮುಕ್ಕಾಲು ಗಂಟೆ ಈಜಾಡಿದ ನಮಗೆ ಹೊಟ್ಟೆ ತಾಳಹಾಕಹhhjk.ತ್ತಿತು ನಾವು ಸೇವು ಕಾರ ಉಂಡಿ ಬಾಳಿ ಹಣ್ಣು ತಯಾರಿಯಲ್ಲೇನೋ ಹೋಗಿದ್ದೆವು ಆದರೆ ತಾಳಕ್ಕೆ ಅವು ಬೆಸೂರ ಆಗಬಹುದೆಂದು ಬಿಸಿ ಬಿಸಿ ಉಪ್ಪಿಟ್ಟು ಹೊಟ್ಟೆಗಿಳಿಸಿ ಗಟ್ಟಿಯಾಗಿ ಮನೆ ಸೇರಿದೆವು.
ಮಾಹಿತಿ ಕೃಪೆ ಗೂಗಲ್

Wednesday, April 10, 2024

* ಯುಗದ ಆದಿ ಈ ದಿನ *



ಯುಗಾದಿ,ಯುಗದ ಸಾಲಿನಾದಿ   
ಬಂತು ವಸಂತ ಮಾಸ , 
ತಂತು ಸಂಭ್ರಮದ ಸಂತಸದ 
ಚೈತನ್ಯದ ಚೈತ್ರದ ವನ.॥

ಬಿಸಿಲೇರಿದ ಹೊಂಗೆಯ ಹಸಿರೆಲೆಯೊಳ್ 
ಹೊಸ ಮಾಮರದ ಹೊವು ಬನದೊಳ್ 
ಕೋಗಿಲೆಗಳ ಗಾನ.॥
ದುಂಬಿಗಳ ಜೇಂಕಾರಕೆ 
ಅಂಬರದಾ ಗೊಂಬೆಗಳ 
ಚಿತ್ರಗಾನ।
ಒಮ್ಮೆ ಸೈನಿಕರು ಇನ್ನೂಮ್ಮೆ ದಿಕ್ಪಾಲಕರು 
ಕರಗಿದರೆ ಕಾಣುವನು 
ಕರಿಮುಖದ ವದನ॥

ಬಿರು ಬಿಸಿಲು, ಬೇವಿನ ಮರಕೆ ಬಾಗಿ 
ಬನವೆಲ್ಲ ತಂಪಾಗಿ ।
ಉರಿವ ದಿನಗಳು ಸರಿದು
ವರುಣನಾಗಮನ ಸಾರುವದು 
ಈ ದಿನ।
ಹೊಸ ವರುಷದ ಹರುಷ 
ಮನೆ ಮನೆಗಳು ತುಂಬುವುದು
ಈ ದಿನ॥

ಧರಣಿಯ ಮೇಲ್ ಹರಣಿಯಂತೆ  
ಮರವೆಲ್ಲ ಚಿಗುರುವುದು ।
ರಂಗಭೂಮಿ ನಸುನಾಚುವಂತೆ 
ಅರಳುವುದು ಜಗವೆಲ್ಲ 
ಈ ದಿನ ॥

ಸಿಹಿ ಕಹಿಯ ಸಮರಸದ 
ಸಂಭ್ರಮದ ಸಿಂಗಾರದ 
ಈ ದಿನ ।
ಬೇವು ಸಹಜ ಬೆಲ್ಲ ಬಿತ್ತುವುದು 
ಅತಿ ಸಹಜ ।
ಪ್ರೀತಿಯಿಂದ ಬಿರಕು ತುಂಬಿ,   
ಬಿಸಿಲು ಮೀರಿ  ಹಸಿರಿನೆಡೆಗೆ
ಹೊಸ ಬಾಳು ಕಟ್ಟಲು
ಬೆರೆಯುವರು ಜನ ಈ ದಿನ॥

Friday, April 5, 2024

* ಉಗಾದಿ (ಯುಗಾದಿ)ಉರಿಬಿಸಿಲು. *



* ಉಗಾದಿ (ಯುಗಾದಿ)ಉರಿಬಿಸಿಲು. *

ಬಿಸಿಲಿಗೂ ಬೇಡಿಕೆಯ ಮುಖವುಂಟು
ಬೇಸರಿಸದಿರು ಕಾಲನುಸಿರಿದು ಸೊಸೆಯೆ ।
ಹಸಿರು ಹಾಸಿಗೆಯ ಪಲ್ಲಂಗ 
ಮೇಲೆ ಮಲ್ಲಿ
ಗೆ ಪರಿಮಳ, ಮುಂದೆ
ವರುಣನ ಕೃಪೆಗೆ ಪಾತ್ರಳಾಗುವಳೆ
ಈ ಉರಿಬೀಸಿಲು ॥

ಬೀಸಣಿಕೆಗೂ ಬೇಡಿಕೆಯುಂಟು
ವಾಸನೆಗೆ ಮಾಮರ ಚಿಗುರೀತು ಸೊಸೆಯೆ।
ಕೋಗಿಲೆಗೆ ಮಧುರಕಂಠದ ದೇಣಿಗೆ
ನೇಗಿಲ ಯೋಗಿಗೆ ಸುಗ್ಗಿಯು ಮುಂದೆ
ಬ್ಯಾಸರಾದರೆ ರಜೆ ನೀಡುವವಳೆ 
ಈ ಉರಿಬಿಸಿಲು॥

ದೂರದ ಪತಿರಾಯ ದುಡಿದು ದನಿದರೂ ದೂರವಾಣಿಯೆ ಸಂಗಾತಿ ಸೊಸೆಯೆ।
ಬರವು, ಬಳಿ ಬಂದು ಸೇರಲು.
ಭವಸೇರಲಭಯ ನೀಡುವವಳೆ
ಈ ಉರಿ ಬಿಸಿಲು॥

ಬೇವುಗಳ ಹೂವುಗಳನರಳಿಸುವ 
ಜೀವನದ ಮೊದಲ ಮಾಸವಿದು ಸೊಸೆಯೆ। 
ಕಹಿಯೂಳಗೂ ಸಿಹಿ ಜೇಣಿನ ಸುವಾಸನೆ 
ಭ್ರಮರಗಳಿಗೂ ಚಾಮರ ನೀಡುವವಳೆ
ಈ ಉರಿಬಿಸಿಲು ॥

" ಅಂಕದ ಪರದೆ ಜಾರುವ ಮುನ್ನ"

" ಅಂಕದ ಪರದೆ ಜಾರುವ ಮುನ್ನ"


ಅಂಕದ ಪರದೆ ಜಾರುವ ಮುನ್ನ
ಮನಸ್ಸು ಅರಳಿದ ಭಾವ, ।
ದೇಹ ಬಾಡಿದ ಜೀವ.ಸಂಬಂಧಗಳು 
ಮಾತ್ರ ಸಂಶಯದ ಗೂಡಿನಲ್ಲಿ ॥

ಕಟ್ಟುವದು ಹೇಗೆ ? ಉಸುಗಿನ ನೆಲದಲ್ಲಿ
ಪ್ರೀತಿ ತುಂಬಿದ ಸುಂದರ ಮಹಲು ।
ಆಗಾಗ ಏಳುವ ಭೂಕಂಪ ಸುನಾಮಿ
ನಡುಗಿಸುವುದು ನಾಟಕದಂಕದ ಪರದೆ .॥

ನೀಡಿದ ಪಾತ್ರಕೆ ಜೀವ ತುಂಬುವ ತವಕ
ನಾಂದಿ ಹಾಡುವ ಮುನ್ನ ನಂಬಿಕೆಗೆ ಗ್ರಹಣ।
ಗಿರಗಿರನೆ ತಿರುಗುವ ಕಾಲಚಕ್ರದ ಗಾಲಿ 
ಒಮ್ಮೆ ಏರಿಯ ಮೇಲೆ ಇನ್ನೂಮ್ಮೆ ಕಮರಿಯ ಮೇಲೆ॥

ಮತ್ತೆ ಕಾತರಿಸುವವು ಹಳೆಯ ಹಳ್ಳಿಯ 
ಬದುಕಿನ ನಿಷ್ಕಲ್ಮಷ ಹಸನಾದ ಕಥೆಗಳು।
ಅವು ನಮ್ಮ  ಕನಸುಗಳು,ನನಸುಗಳು
ಬೆಳ್ಳಿಯ ಪರದೆಯ ಬಣ್ಣ ಬಣ್ಣದ ಚಿತ್ರಗಳು
ಹಣ ನೀಡದೆ ನೋಡುವ ಸಿನಿಮಾಗಳು॥

ಗೆಳೆಯರ ಗುಂಪಿತ್ತು ವಿಶ್ವಾಸದ ತಂಪಿತ್ತು 
ಬಣ್ಣ,ಜಾತಿಗಳಂತಸ್ತು  ಮೂಲೆಗೆ ಸೇರಿತ್ತು। .
ಸಮಾನತೆಯು ಎಲ್ಲೆಲ್ಲೂ ಮನೆ ಮಾಡಿತ್ತು.
ಈಗ ಎಲ್ಲರ ಚಿತ್ತ ಮಾಡಬೇಕು ಸಂಪತ್ತು॥

ಹಣವಿರಲಿಲ್ಲ ಹೆಣಗಾಟವಿತ್ತು,ಮನ 
ಕದಲಿದರೆ,ಮಾರುದ್ದದ ಪ್ರೀತಿ ಸಿಗುತ್ತಿತ್ತು । 
ಹೊಣೆ ಹೊರಲು ಕಾಯ್ದಿತ್ತು ಜಗತ್ತು 
ಎಲ್ಲಿದೆ ಋಣ ಜಾರುವುದೆ ಅಸಲಿಯತ್ತು ॥

ಅಂದು ಹಸಿವಿತ್ತು, ಕಿಸೆಯಲ್ಲಿ ಕಾಸಿಲ್ಲ
ಇಂದು ಇದೆ, ಎಲ್ಲಾ. ಕರಗಿಸಲು ಕಸುವಿಲ್ಲ।
ಮಾತಿನಲ್ಲೆ ಕೈಲಾಸ ,ಬೀಸುವುದು ಬರಿಕಲ್ಲು
ಹಿಟ್ಟಿಗೆ ಬರ ಹೊಟ್ಟೆಗೆಲ್ಲಿದೆ ಬಿಸಿ ರೊಟ್ಟಿ॥
 
ಹಿತವಾಗಿ ಬದುಕಲು ಜೊತೆಯಾಗಿ
ನಡೆಯಬೇಕು, ಕಥೆ ಹೇಳಲಿಲ್ಲ ಪುರಸೊತ್ತು ,
ಚೌಕಸಿ ಮಾಡಿದರೆ ಕಾದಿದೆ ಆಪತ್ತು .
ತಡಮಾಡದೆ ಹಾಡಬೇಕು ನಾಂದಿ ಇವತ್ತು.॥


"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...