Sunday, January 25, 2026

ನಗರೀಕರಣ

ನಾಗರಿಕತೆ ಬಂದದ್ದೆ ನಗರಗಳ 
ಉಗಮದಿಂದ ಇದು ಜೀವನ ಸುಲಬಗೊಳಿಸಲು 
ಮಾನವ ಮಾಡಿದ ಅನ್ವೇಷಣೆಯ ದಾರಿ
ನಗರದ ಪ್ರತಿ ಮೂಲೆಯೂ ಬಡಾವಣೆ ಹಿಗ್ಗುತಿದೆ 
ಕೃಷಿ ಭೂಮಿ ಕುಗ್ಗುತಿದೆ 
ಹೊಸ ಬಡಾವಣೆಯ ಗಾಳಿಯಿಂದ .
ಇಲ್ಲಿ ಇನ್ನು ಮುಂದೆ ಬೆಳೆ ಬೆಳೆಯುವುದಿಲ್ಲ
ಬಿಲ್ಡಿಂಗಗಳು ಬೆಳೆಯುತ್ತವೆ
ಇನ್ನು ಮುಂದೆ ಇಲ್ಲಿ ಬೆಳದಿಂಗಳು ಚೆಲ್ಲುವುದಿಲ್ಲ 
ಬಲ್ಬುಗಳೆ ಬೆಳದಿಂಗಳನ್ನು ನೀಡುತ್ತವೆ
ಇಲ್ಲಿ ಹಸು ಕುರಿ ಮೇಕೆ  ಮೇಯುವುದಿಲ್ಲ
ಮನುಷ್ಯರು ಮೇಯುತ್ತಾರೆ
ಇಲ್ಲಿ ಹಕ್ಕಿ ಪಕ್ಕಿ ಗಳು ದ್ವನಿ ಮಾಡುವುದಿಲ್ಲ
ದ್ವನಿ ವರ್ಧಕಗಳು ಅಬ್ಬರಿಸುತ್ತವೆ.
ಇಲ್ಲಿ ಭೂಮಾತೆ ಗಂಟಲು ಹಿಚುಕುತ್ತಾರೆ
ಹೊಟ್ಟೆಯನ್ನು ಬಗೆದು ನೀರು ಬಸಿಯುತ್ತಾರೆ 
ಇಲ್ಲಿ ಇನ್ನು ಪೈಪುಗಳೆ ನರನಾಡಿಗಳು
ಎಲೆಕ್ಟ್ರಿಕ್ ಕಂಬಗಳೆ ಸ್ವಾಗತ ಕಮಾನುಗಳು
ನಗರಸಭೆಯವರೆ ವೈದ್ಯರು 
ಹಂದಿಗಳೆ ದಾದಿಯರು
ಹೊಂದಿಕೊಂಡವರು ಉಳಿತಾರೆ 
ಹೊಂದದಿದ್ದರೆ ಚಂದಾ ವಸೂಲಿ 
ಮದ್ದು ನೀಡುವವರಿಗೇನು ಕಡಿಮೆ
ಸರಿಯಾದ ಸಮಯಕ್ಕಾದರೆ ಸೀದಾ ನಡಿ
ಸಾವಿರ ಟೆಸ್ಟಮಾಡಿ ಸೋತರೆ ಗಾಡಿ ಬಿಡಿ
 
 



Wednesday, January 7, 2026

ಸಿದ್ಧರಾಮನ ಚರಿತೆ

ಸಿದ್ಧರಾಮನ ಹುಂಡಿಯಿಂದೆದ್ದು ಬಂದು
ಗೆದ್ದು ಬೀಗಿದ ಸಿದ್ಧರಾಮನ ಚರಿತೆಯಿದು
ಸದ್ದು ಮಾಡುತಿದೆ ಕರ್ನಾಟಕ ದೇಶದೊಳು॥

ಕುರಿಕಾಯುವ ಕುರುಬರ ಕುಲ ತಿಲಕ
ಸರಿ ಕಂಡಂತೆ ನಡೆದು ಗುರಿ ತಲುಪಿ
ದೊರೆಯಾದನು ಕನ್ನಡದ ದೇಶದೊಳು ॥

ವಿಜ್ಞಾನದ ಬಲದಿಂದ ಸುಜ್ಞಾನದ ಪ್ರಭೆ 
ಕುಹಕಳ ಮಧ್ಯ ಪಡೆದ ಕಾನೂನು ಪ್ರಜ್ಞೆ
ವೈಚಾರಿಕತೆ ಮೈಗೂಡಿಸಿಕೊಂಡ ಮನದೊಳ್॥

ಬುದ್ಧ ಬಸವ ಅಂಬೇಡ್ಕರ್ ರ ಗ್ರಹಿಸಿ
ಶುದ್ಧ ಲೋಹಿಯಾ ಸಿದ್ದಾಂತ ಪರಿಪಾಲಿಸಿ
ಇವನೆದ್ದು ಬಂದ ತಳಸಮುದಾಯದೊಳ್॥

ಹಸಿವನ್ನು ಹೊದ್ದು ಮಲಗಿದ ಜನರಿಗೆ
ಹೊಸ ಆಶಾಕಿರಣವಾದ ಅನ್ನರಾಮಯ್ಯ 
ಬೆಸೆದ ಮಾನವೀಯತೆ ಜಗದೋಳ್॥  

ಕಾಲದ ಗರಡಿಯ ಚೇಲಾಗಳ ಸಿಂಹ ಸ್ವಪ್ನ 
ಸೋಲಿನ ಸುಳಿಗೆ ಸವಾಲಿನ ಚಾಣಕ್ಯ ತಂತ್ರ
ಮಂತ್ರವೊಂದೇ ಗೆಲ್ಲುವ ರಣತಂತ್ರ ವ್ಯೂಹದೊಳ್॥

ಕನ್ನಡದ ಕುವರ ವ್ಯಾಕರಣ ಪಂಡಿತ 
ತನ್ನ ನಾಡಿನ ಅಂಕಿ ಸಂಖ್ಯೆಗಳ ಗಣಿತಜ್ಞ
ಶಿಕ್ಷಕ ತಾ ತಿದ್ದುವನು ಪ್ರಶ್ನೆಯಾ ಶಾಲೆಯೊಳ್

ಪ್ರೀತಿಸಿದರೆ ಸ್ವಾಭಿಮಾನದ ಪುತ್ರ 
ವಿರೋಧಿಸದರೆ ಕೇಸರಿ, ನಡುಗಬೇಕು ಶತೃ 
ದೊರೆ ತಾ ಪ್ರೀತಿಸುವ ಬಡವರ ಛತ್ರದೊಳ್
 



 







*ಅಪ್ಪ ನಮ್ಮೆಲ್ಲರ ಛಪ್ಪರ *

ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು         ಈ ದಿನ ಅಪ್ಪನ ಪ್ರೀತಿಯ ಈ ನೆನಪುಗಳ ಬುತ್ತಿ  ಜಾಮೂನಿನಂತೆ ತೇಲಿ ಬರುತ್ತಿವೆ.ಇವು ಎಲ್ಲರ ಜೀವನದಲ್ಲೂ ಸಹಜವಾಗಿದ್ದರೂ ಅವುಗಳ...