ಗೆದ್ದು ಬೀಗಿದ ಸಿದ್ಧರಾಮನ ಚರಿತೆಯಿದು
ಸದ್ದು ಮಾಡುತಿದೆ ಕರ್ನಾಟಕ ದೇಶದೊಳು॥
ಕುರಿಕಾಯುವ ಕುರುಬರ ಕುಲ ತಿಲಕ
ಸರಿ ಕಂಡಂತೆ ನಡೆದು ಗುರಿ ತಲುಪಿ
ದೊರೆಯಾದನು ಕನ್ನಡದ ದೇಶದೊಳು ॥
ವಿಜ್ಞಾನದ ಬಲದಿಂದ ಸುಜ್ಞಾನದ ಪ್ರಭೆ
ಕುಹಕಳ ಮಧ್ಯ ಪಡೆದ ಕಾನೂನು ಪ್ರಜ್ಞೆ
ವೈಚಾರಿಕತೆ ಮೈಗೂಡಿಸಿಕೊಂಡ ಮನದೊಳ್॥
ಬುದ್ಧ ಬಸವ ಅಂಬೇಡ್ಕರ್ ರ ಗ್ರಹಿಸಿ
ಶುದ್ಧ ಲೋಹಿಯಾ ಸಿದ್ದಾಂತ ಪರಿಪಾಲಿಸಿ
ಇವನೆದ್ದು ಬಂದ ತಳಸಮುದಾಯದೊಳ್॥
ಹಸಿವನ್ನು ಹೊದ್ದು ಮಲಗಿದ ಜನರಿಗೆ
ಹೊಸ ಆಶಾಕಿರಣವಾದ ಅನ್ನರಾಮಯ್ಯ
ಬೆಸೆದ ಮಾನವೀಯತೆ ಜಗದೋಳ್॥
ಕಾಲದ ಗರಡಿಯ ಚೇಲಾಗಳ ಸಿಂಹ ಸ್ವಪ್ನ
ಸೋಲಿನ ಸುಳಿಗೆ ಸವಾಲಿನ ಚಾಣಕ್ಯ ತಂತ್ರ
ಮಂತ್ರವೊಂದೇ ಗೆಲ್ಲುವ ರಣತಂತ್ರ ವ್ಯೂಹದೊಳ್॥
ಕನ್ನಡದ ಕುವರ ವ್ಯಾಕರಣ ಪಂಡಿತ
ತನ್ನ ನಾಡಿನ ಅಂಕಿ ಸಂಖ್ಯೆಗಳ ಗಣಿತಜ್ಞ
ಶಿಕ್ಷಕ ತಾ ತಿದ್ದುವನು ಪ್ರಶ್ನೆಯಾ ಶಾಲೆಯೊಳ್
ಪ್ರೀತಿಸಿದರೆ ಸ್ವಾಭಿಮಾನದ ಪುತ್ರ
ವಿರೋಧಿಸದರೆ ಕೇಸರಿ, ನಡುಗಬೇಕು ಶತೃ
ದೊರೆ ತಾ ಪ್ರೀತಿಸುವ ಬಡವರ ಛತ್ರದೊಳ್
No comments:
Post a Comment