Monday, June 15, 2026

ಹಾನಾಪೂರದಲ್ಲೊಂದು ನಕ್ಷತ್ರ

 
"ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾಡಿದ ಸಾಧನೆಯಿಂದ ರುಜುವಾತಾಗಿದೆ.
ಕರಿಯಪ್ಪ ಮಾದರ ಕಲಿತದ್ದು ಅದೇ ಊರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತಾಯಿಯು ನಿರಕ್ಷರಿ, ಮುಂದಿನ ಶಿಕ್ಷಣ ಕಲಿತದ್ದಾರೂ ಯಾವ ಶಾಲೆಗಳು? ಅವೆಲ್ಲವೂ ಸರ್ಕಾರದ ಶಾಲೆಗಳು ಮಾಧ್ಯಮಿಕ ಶಿಕ್ಷಣ ಹಾನಾಪೂರ ಎಲ್ ಟಿ ಪ್ರೌಢಶಾಲೆಯಲ್ಲಿ ,  ಪದವಿ ಪೂರ್ವ ಶಿಕ್ಷಣ, ಬಾಲಕರ  ಸರ್ಕಾರಿ ಪದವಿ ಪೂರ್ವ ಕಾಲೇಜು ಗುಳೇಗುಡ್ಡ ದಲ್ಲಿ ಇದರಿಂದ ನಮಗೆ ಅರ್ಥವಾಗುವ ಅಂಶ ಏನೆಂದರೆ ಪ್ರತಿಭೆ ಅರಳಲು ಲಕ್ಷ  ಎಣಿಸಬೇಕಾದ ಶಿಕ್ಷಣ ಸಂಸ್ಥೆಗಳೇ ಬೇಕಿಲ್ಲ ಎಂದು. ಯಾವುದೆ ಒಂದು ಕಾಲೇಜಿನಲ್ಲಿ ಒಂದು ವಿದ್ಯಾರ್ಥಿ ಇಂತಹ ಶಾಧನೆ ಮಾಡಿದರೆ ಆವರ ಪೋಟೊ ಹಾಕಿ ಅದನ್ನು ಲಾಭ ಮಾಡಿಕೊಳ್ಳಲು ತವಕಿಸುವ, ಒಂದು  ವರ್ಷ ಮಾಡಿದ ಸಾಧನೆಯನ್ನು ಮತ್ತೆ ಮತ್ತೆ ಹಾಕುವ ಇಂದಿನ ದಿನದಲ್ಲಿ  ಸರ್ಕಾರಿ ಶಿಕ್ಷಣ ಸಂಸ್ಥೆಯಲ್ಲಿ ಓದಿ ಇಂತಹ  ಸಾಧನೆ ಮಾಡಿದ ಕರಿಯಪ್ಪ ನಿಜವಾಗಿಯೂ ಅಭಿನಂದನಾರ್ಹ. ಆಡು ಆಕಳು ಮೇಯಿಸುವ ತಾಯಿಗೆ IIT ಅಂದರೇನು ಎನ್ನುವ  ಪರಿಕಲ್ಪನೆಯೂ ಇಲ್ಲ ಆದರೆ ಅಭಿನಂದನೆಗಳ ಮಹಾಪೂರ ಹರಿದು ಬಂದದ್ದು ನೋಡಿ ಚನ್ನಾಗಿ ಕಲಿತುಕೊಂಡಿದ್ದಾನೆ ಎಂದುಕೊಂಡಿರಬಹುದು. ಗುಡ್ಡದ ಊರಿನಲ್ಲಿ ಜನಿಸಿದ ಕರಿಯಪ್ಪ ಇನ್ನೂ ದೊಡ್ಡವನಾಗಬೇಕು.ಕಾಲೇಜಿನ ಎಲ್ಲ ಉಪನ್ಯಾಸಕರ  ಆಶೀರ್ವಾದವಿದೆ ಮತ್ತು ಊರ ಗ್ರಾಮ ದೇವತೆ ಕರಿಯಮ್ಮನ ಆಶೀರ್ವಾದವಿದೆ. ಸಾಧನೆ ಸಾಧಕನ ಸೊತ್ತು ಎನ್ನುವ ಮಾತನ್ನು  ಪೂರ್ಣ ಗೊಳಿಸಲು ಅವಕಾಶ ದೊರತಿದೆ ಇದು ಅರ್ಧ ದಾರಿ ಮಾತ್ರ, ಪೂರ್ಣ ಗೊಳಿಸಿ ಹಾನಾಪೂರ ಎಸ್ ಪಿ ಹಾಗೂ ಗುಳೇಗುಡ್ಡ ಬಾಲಕರ ಸರ್ಕಾರಿ ಪ.ಪೂರ್ವ ಕಾಲೇಜಿನ ಹೆಸರನ್ನು ಭಾರತದ ಇತಿಹಾಸದಲ್ಲಿ ದಾಖಲಿಸಬೇಕಾಗಿದೆ.
      ಈ ಹುಡುಗ ನನ್ನ ಊರಿನವನು ಎನ್ನುವದು ಎಷ್ಟು ಹೆಮ್ಮೆಯೋ ಅಷ್ಟೆ ಹೆಮ್ಮೆ ನನ್ನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ  ವಿದ್ಯಾರ್ಥಿ ಎನ್ನುವುದು ಇನ್ನೂಂದು ಹೆಮ್ಮೆಯ ವಿಷಯ. ಅವರ ಅಣ್ಣ ನೂ ಬಾಲಕರ ಸರ್ಕಾರ ಪ.ಪೂ.ಕಾಲೇಜಿನ ವಿದ್ಯಾರ್ಥಿ, ಪ್ರತಿಭೆಯಿಂದ ಅರಳಿ ಪೋಲೀಸ್ ಕೆಲಸ ಪಡೆದು ಈಗ ಮಂಗಳೂರಿನಲ್ಲಿ ಪಿ.ಸಿ ಯಾಗಿ ಸೇವೆ ಸಲ್ಲಿಸುತ್ತಿದ್ದಾನೆ.ನಯ ವಿನಯದ ಅವನ ವರ್ತನೆ ,ಕಲಿಯುವ ಹಂಬಲ ಅವನನ್ನು ಸರ್ಕಾರದ ಕೆಲಸ ಮಾಡುವಂತೆ ಮಾಡಿತು.ಈಗ ಆತನ ತಮ್ಮ ಕರಿಯಪ್ಪನೂ ಸತತ ಪ್ರಯತ್ನ ಇನ್ನೂಂದು ಹೆಜ್ಜೆ ಮುಂದೆ ಹೋಗುವಂತೆ ಮಾಡಿದೆ .
    ಸರ್ಕಾರಿ ಪ.ಪೂರ್ವ ಕಾಲೇಜಿಗೆ ಇಂದು ದಿನಾಂಕ 15.06.2026 ಹಬ್ಬದ ದಿನ ಕಾರಣ ಇಷ್ಟೆ ಕರಿಯಪ್ಪ ನನ್ನು ಸನ್ಮಾನ ಮಾಡಲು ಇಲಾಖೆಯ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಪುಂಡಲಿಕ ಕಾಂಬಳೆ ಹಾಗೂ ಬದಾಮಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಭೀಮಸೇನ ಚಿಮ್ಮನಕಟ್ಟಿಯವರು ನಮ್ಮ ಸಂಸ್ಥೆಗೆ ಆಗಮಿಸಿ ವಿದ್ಯಾರ್ಥಿಯನ್ನು ಗೌರವಿಸದರು ಈ ಸಂದರ್ಭ ದಲ್ಲಿ ನಮ್ಮ ಸಂಸ್ಥೆಯ ರಸಾಯನಶಾಸ್ತ್ರ ದ ಉಪನ್ಯಾಸಕಿಯರು  ಹೇಳಿದ ಮಾತು ಇಲ್ಲಿ ಬರೆಯಬೇಕಿನಿಸಿತು.ಅದನೆಂದರೆ "ಶಿಕ್ಷಣ ಕ್ಕೆ ಅದ್ಭುತ ಶಕ್ತಿಯಿದೆ" ಮಾನ್ಯ ಶಾಸಕರು ಹಾಗೂ ಉಪನಿರ್ದೇಶಕರು ಒಂದೇ ಅವಧಿಯಲ್ಲಿ ನಮ್ಮ ಸಂಸ್ಥೆಗೆ ಬಂದ ಉದಾಹರಣೆಯಿರಲಿಲ್ಲ ಈಗ ನಾವು ನೋಡಿದೆವು.ಎನ್ನಬೇಕೆ ? ಪ್ರಾಯಶಹ ಇದು ಸರಳವಾಗಿ ಮಾತನಾಡಿದ ಮಾತಾಗಿರಬಹುದೇನೋ ಸರಿ. ಆದರೆ ಶಿಕ್ಷಣ ಬಲದ ಮಹತ್ವವೇ ಅಂತಹದು ಶ್ರೇಷ್ಠ ವ್ಯಕ್ತಿಗಳೂ ಕಣ್ಣು ತೆರೆದು ನೋಡುವಂತೆ ಮಾಡಬಲ್ಲದು.ಇಂದು ನಮ್ಮ ಕಾಲೇಜಿಗೆ ಆಗಮಿಸಿ ವಿದ್ಯಾರ್ಥಿಯನ್ನು ಸನ್ಮಾನಿಸಿ ಮಾನ್ಶ ಶಾಸಕರು ಮಾತನಾಡಿದ್ದು ಅದು ಭಾಷಣವಾಗಿರಲಿಲ್ಲ ಬದಲಾಗಿ ಅನುಭವಗಳನ್ನು ಉಣಬಡಿಸಿದ ಕೈಗಳಾಗಿದ್ದವು ಹಾಗಾಗಿ ನಮ್ಮ ಸಂಸ್ಥೆಯ 350 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಮಂತ್ರ  ಮುಗ್ಧ ರಾಗಿದ್ದರು ಕಾರಣ ಇಷ್ಟೆ ಐಐಟಿ ಎಂದರೇನು ಎಂದು ಅರಿಯದ ಮುಗ್ಧ ತಾಯಿಯ ಕಾರ್ಯ ವನ್ನು ಶ್ಲಾಘಿಸುತ್ತಾ ಮಕ್ಕಳೊಂದಿಗಿನ ಅವರ ಪ್ರಶ್ನೋತ್ತರ ರೀತಿ ಶಿಕ್ಷಣ ತಜ್ಞ  ಗುರುರಾಜ ಕರ್ಜಗಿಯವರ ಮಾತುಗಳನ್ನು ನೆನಪಿಗೆ ತರುವಂತೆ ಮಾಡಿದವು ಇನ್ನು ಉಪನಿರ್ದೇಶಕರಾದ ಪುಂಡಲಿಕ  ಕಾಂಬಳೆಯವರು  ಇಲಾಖೆಯ ಪರವಾಗಿ ಸನ್ಮಾನ  ಮಾಡಿ ಸರ್ಕಾರದ ಸಂಸ್ಥೆಗಳಲ್ಲಿ ಸಾವಿರ ಕರಿಯಪ್ಪ ಗಳು ಸೃಷ್ಟಿಯಾಗಲಿ ಎಂದದ್ದು ವಿದ್ಯಾರ್ಥಿಗಳ ಮನದಲ್ಲಿ ಛಲದ ಅಲೆಯನ್ನೆ ಸೃಷ್ಟಿಸಿತು. ಹಾನಾಪೂರ ಗ್ರಾಮದ ಯಮನಪ್ಪ ಹೀರೇಗೌಡರ ಊರಿನ ಅಭಿಮಾನದಿಂದ ವಿದ್ಯಾರ್ಥಿಯ ಮುಂದಿನ ವ್ಯಾಸಂಗಕ್ಕೆ 50 ಸಾವಿರ ಪ್ರೋತ್ಸಾಹಧನವನ್ನು ನೀಡಿದ್ದು ಸಣ್ಣ  ವಿಷಯ ವೇನಲ್ಲ  ನಮ್ಮ ಸಂಸ್ಥೆಯ ಪ್ರಾಚಾರ್ಯ ಹಾಗೂ ಉಪನ್ಯಾಸಕರಿಗೆ ಸಡಗರವೊ ಸಡಗರ,ವಿದ್ಯಾರ್ಥಿಗಳಲ್ಲಿ ಸಂಚಲನ,  ನಾನೂ ಸಾಧನೆ ಮಾಡಬೇಕು ಎನ್ನುವ ಅಲೆ ಹುಟ್ಟಿದ್ದಂತು ಸತ್ಯ. 
ಅಭಿನಂದನೆಗಳು ಕರಿಯಪ್ಪ. 

      

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...