Showing posts with label ಕವನ. Show all posts
Showing posts with label ಕವನ. Show all posts

Saturday, September 25, 2021

*ಮುತ್ತಿನ ಮಂಪರು *

ಸೌಂದರ್ಯ ಸೂಸಲು 
ನಿನ್ನ ವದನಕೆ ಚಂದನ 
ಬಳಿಯಬೇಕಿಲ್ಲ ಗೆಳತಿ/ 
ಚಂದದ ಮುಗುಳ್ನಗೆ ಸಾಕು 
ನಾ ನಿನ್ನ ಹಿಂದೆ 
ಭ್ರಮರದಂತೆ ಬರಲು//

ಒಂದೇ ಎರಡೇ ಕುಂಟು 
ನೆವಗಳು ಸಾಕು ನನ್ನಿಂದ ಸಾಗಲು/
ಕಣ್ ಸನ್ನೆ ಸಾಕು ಗೆಳತಿ,
ಸಮ್ಮತಿ ಸೂಚಿಸು ನಾ 
ಸ್ವರ್ಗದಲಿ ತೇಲಿ ಬರಲು//

ನೀನುಟ್ಟ ಸೀರಿಯ ಸೆರಗು 
ಹೊಂಬಣ್ಣದ ಬಿಸಿಲಿಗೆ ತಾಗಿ /
ಹಸಿರೆಲೆಯ ಮೇಲೆ 
ಹೊಸ ಕಾಮನ ಬಿಲ್ಲು 
ತುಂತುರು ಮಳೆ ಯಾಗಿ 
ನಾನು ತೂರಿ ಬರಲು//

ಭಾವಗಳ ಕಾರಂಜಿ 
ಜೀವನದ ಸೆಲೆಯಾಗಿ/
ನಾವು ಕೆತ್ತಿದ ಮೂರ್ತಿ 
ನಾಳೆಗಳ ಬುತ್ತಿಯಾಗಿ 
ಹೃದಯ ತಟ್ಟಿದೆ ಪ್ರೀತಿ
ಮರ ಸುತ್ತುವದು  ನಾ 
ಮೋಡವಾಗಿ ಬರಲು//
  
ಕಾನನದ ಬಯಲಲ್ಲಿ 
ಕನಸುಗಳ ಬೇರಲ್ಲಿ /
ಕವನಗಳು ಹೊರಚೆಲ್ಲಿ 
ಕತ್ತಲಾವರಿಸಿ ಮೌನ ಮೆತ್ತಿತು 
ಮುತ್ತಿನ ಮಂಪರು ಬರಲು//


ಬಸನಗೌಡ ಗೌಡರ

ಕಾರು ಕಾರಬಾರು

ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ ಬಿಟ್ಟಿರಲಾಗದು ಸೋಕ...