ವಿಷಯದ ನಶೆ ಏರಿ ವಿಷವಾಗುತಿದೆ
ಬೀಸಿ ರಕ್ತದ ಯುವಕರ ರೀಲಗಳ ಮನ
ತುಸು ವಿರಮಿಸದೆ ಹೊಸೆಯುತಿಹರು
ಕಿಸೆ ತುಂಬಿದ ನಿತ್ಯ ಮೊಬೈಲ್ ವೀರರು
ಕಸ ಕಡ್ಡಿ ಸುರವಿ ತುಸು ನೀರು ಚೆಲ್ಲಿ
ಹೊಸ ಗೊಬ್ಬರ ಪಡೆಯಬಹುದೇನು ಇಲ್ಲಿ
ಅಲ್ಲವಿದು ರೈತನ ತಿಪ್ಪೆಯಗುಂಡಿಯ ತಾನ
ಬೆಸೆಯಬೇಕು ಮನ ಪ್ರೀತಿಯ ಭಾವ
ಹಾದಿ ಬೀದಿಗಳಲ್ಲಿ ಸಂಗತಿಯ ಶೋಧ
ಬೇಕಿವರಿಗೆ ಓದದೆ ಉದ್ಯೋಗ,ಬರೆಯದೆ ಅಂಕ
ಹೊರೆಯಾಗುತ್ತಿದೆ ಗುರುವೆಂದವನ ಬಾರ
ಹಾತೊರೆಯುತಿದೆ ಅರಿತವನ ಮನ
ಅಂಕೆಯೊಳಗಿಡದೆ ಬಿಂಕದಿ ನಡೆದರೆ
ಸಂಕಟ ಪಡುವರು ಯಾರು ಅನುದಿನ
ತಪ್ಪು ನಡೆಯುವಾಗ ಒಪ್ಪಿ ನಡೆಯುವುದೇನು
ತಪ್ಪಿದರೆ ಬೆಪ್ಪ... ನಾ ಗುರುವಿಗೆಲ್ಲಿದೆ ಮಾನ