* ಕಾರ್ಗಿಲ್ ಕಲಿ *
ದೇಶ ಮುಕುಟ ಹಿಮ ಶಿಖರ ಮೇಲೆ
ಯಶ ಬಾವುಟ ಹಾರಿಸಿ ಕಾರ್ಗಿಲ್ ಕಲಿ/
ಇವನ ಬಿಸಿ ಉಸಿರಿನ ಕಣ ಕಣಗಳಲ್ಲಿ
ಅರಳಿದೆ ದೇಶಭಕ್ತಿಯ ಪರಿಮಳ//
ವೈರಿ ಶಿರವ ಹರಿದು, ಜರಿಯ ನೀರು
ತೊರೆಗಳಲ್ಲಿ ರಕುತ ಬಣ್ಣದೋಕುಳಿ/
ಜನರ ಹೃದಯದಲ್ಲಿ ಉಳಿದ ಕಣ್ಮಣಿ.
ಇವನೆಮ್ಮ ಭಾರತೀಯ ಸದ್ಗುಣಿ//
ದವಳ ಹಿಮದ ಗಿರಿಯ ಚರಣದಲ್ಲಿ
ಹವಳದಂತೆ ಮಿನುಗಲಿವನ ಕಿರಣ/
ಭುವಿಯ ಮೇಲೆ ವೈರಿಗಳ ಮಾರಣ
ಇವನೆಮ್ಮ ಭಾರತೀಯ ವಜ್ರಗಣಿ//
ಜಾತಿ ಪಂಥ ಮೀರಿದ ಭಾವದಲ್ಲಿ ಸಂತ
ದೇಶಕ್ಕಾಗಿ ಪ್ರಾಣ ದಾನಗೈವ ಹುತಾತ್ಮ/
ವಿಷವರ್ತುಲ ಸೀಳಿ ಸಿಹಿ ತಂದ ಮಹಾತ್ಮ
ಹೊಸ ಇತಿಹಾಸ ಬರೆದನು ಶಾಸ್ವತ//
ಬಸನಗೌಡ ಗೌಡರ