Saturday, July 31, 2021

ಕಾರ್ಗಿಲ್ ಕಲಿ

* ಕಾರ್ಗಿಲ್ ಕಲಿ *

ದೇಶ ಮುಕುಟ ಹಿಮ ಶಿಖರ ಮೇಲೆ
ಯಶ ಬಾವುಟ ಹಾರಿಸಿ ಕಾರ್ಗಿಲ್ ಕಲಿ/
ಇವನ ಬಿಸಿ ಉಸಿರಿನ ಕಣ ಕಣಗಳಲ್ಲಿ 
ಅರಳಿದೆ ದೇಶಭಕ್ತಿಯ ಪರಿಮಳ//

ವೈರಿ ಶಿರವ ಹರಿದು, ಜರಿಯ ನೀರು 
ತೊರೆಗಳಲ್ಲಿ ರಕುತ ಬಣ್ಣದೋಕುಳಿ/ 
ಜನರ ಹೃದಯದಲ್ಲಿ ಉಳಿದ ಕಣ್ಮಣಿ. 
ಇವನೆಮ್ಮ ಭಾರತೀಯ ಸದ್ಗುಣಿ//

ದವಳ ಹಿಮದ ಗಿರಿಯ ಚರಣದಲ್ಲಿ
ಹವಳದಂತೆ ಮಿನುಗಲಿವನ ಕಿರಣ/
ಭುವಿಯ ಮೇಲೆ ವೈರಿಗಳ ಮಾರಣ
ಇವನೆಮ್ಮ ಭಾರತೀಯ ವಜ್ರಗಣಿ//

ಜಾತಿ ಪಂಥ ಮೀರಿದ ಭಾವದಲ್ಲಿ ಸಂತ
ದೇಶಕ್ಕಾಗಿ ಪ್ರಾಣ ದಾನಗೈವ ಹುತಾತ್ಮ/
ವಿಷವರ್ತುಲ ಸೀಳಿ ಸಿಹಿ ತಂದ ಮಹಾತ್ಮ 
ಹೊಸ ಇತಿಹಾಸ ಬರೆದನು ಶಾಸ್ವತ//

                ಬಸನಗೌಡ ಗೌಡರ

Friday, July 30, 2021

* ನಾಕವರಳಿಸು ಧರಣಿಯಲ್ಲಿ *

ಯಾರಾದರೇನು ಆಳುವ ಅರಸ
ಯಾರಲ್ಲಿ ಭೇಧತಾರದ ಜಗವಿರಲಿ 
ನಾರಿಯೆ ನರನೆ ನಮಗಿಲ್ಲ ಚಿಂತೆ 
ಹರಿ ಬಂದು ಪವಡಿಸಬೇಕು ಅಲ್ಲಿ/

ಅರಳು ಹುರಿದಂತೆ ಸವಿ ಮಾತಾಡಿ
ಕೊರಳು ಕೊಯ್ಯಲು ಕೈ ಹಾಕದಿರಲಿ
ಹರಿತ ಆಯುಧ ಮಾಡಿರಿ ತಪ್ಪಿದಲ್ಲಿ
ಸರಿಯಾದ ಪಾಠವಾಗಲಿ ಕಣದಲ್ಲಿ/
 
ನಾಮ ಹೋಮ ಬಲದಿಂದ ಹತ್ತುವರು
ರಾಮನಾಳಿದ ಸೀಮೆಯ ಅಶ್ವ ಮೇಧ
ಸಮ ಪಾಲಿಗೆ ಕಾದಿರುವರು ಭರತರು
ಗಮನಿಸಿ ನಾಕವರಳಿಸಿ ಧರಣಿಯಲ್ಲಿ/

ರಾಗಿ ಬೆಳೆದವಗೂ ಸಿಗಲಿ ರಾಮರಾಜ್ಯ
ಬಾಗಿ ನಡೆದವರಿಗೂ ಬರಲಿ ಅಭಯ
ಸಾಗಿ ಹರಿದ ನದಿ ಸೇರಿವವು ಸಾಗರಕೆ
ಸಾಗದೆ ಸಂಗ್ರಹದ ಕೊಳೆ ಬೇಡ ಅಲ್ಲಿ /

                ಶ್ರೀ ಬಸನಗೌಡ ಗೌಡರ

Friday, July 23, 2021

ಗುರುವಿಗೊಂದು ನುಡಿನಮನ

ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ 
ವೇದಿಕಬರುವೆ ವನ ರಚನೆ ಸ್ಪರ್ಧೆ ಗಾಗಿ 

ಗುರುವೆ _ನುಡಿiನಮನ

* ಎರಗುವೆ ಗುರುವೆ *

ಎರಗುವೆ ಗುರುವೆ  ನಿನ್ನಯ ಚರಣಕೆ 
ಹರ ಹರಿ ಕಾಣುವೆ ನಿನ್ನಲಿ ಶಿರಬಾಗಿ/
ವರವ ನೀಡು ಗುರುವೆ ಶರಣು ಬರುವೆ 
ಅರಿವಿನ ಅಲೆಗಳು ಬೀಳಲಿ ನಮಗೆ//

ಅಂದಕಾರ ಅಳಿಸು ಚಂದದಿಂದ ಬೆಳೆಸು 
ಸುಂದರ ಬದುಕಿನ ಹಂದರ ಕೆಳಗಿಳಿಸು/
ವಂದಿಸಿ  ಬೇಡುವೆ ಅಜ್ಞಾನವ ಅಳಿಸು 
ಹೊಂದಿಸಿ ಸುಗುಣ ಕಲಿಸು ನಮಗೆ//

ಕಾಯದ ಮೇಲಿನ ಮೋಹ ಕಳಿಚಿಸು
ಗಾಯದ  ಮೇಲಿನ ನೆನಪನು ಅಳಿಸು/
ಧ್ಯೇಯ ಒಂದೆ ದೇವರ ಕಾಣಲು ಕಲಿಸು
ಭಯ ಕರಗಿಸಿ, ಭಕ್ತಿಯ ಕಲಿಸು ನಮಗೆ//

ಅಕ್ಷರ ಜ್ಞಾನದ ಭಿಕ್ಷೆಯ ನೀಡಿ ರಕ್ಷಿಸು
ಸಾಕ್ಷರ ಸಾಲದು ಸಂಸ್ಕಾರ ಕರುಣಿಸು
ಭಕ್ಷಿಸುವ ರಕ್ಕಸರ ಬಲೆಗಳನು ತಿಳಿಸು
ಶಿಕ್ಷಿಸಿ ಸನ್ಮಾರ್ಗ ತೋರಿಸು ನಮಗೆ //

      ಶ್ರೀ  ಬಸನಗೌಡ ಗೌಡರ
                         ಉಪನ್ಯಾಸಕರು 
ಬಾಲಕರ ಸ ಪ ಪೂ ಕಾಲೇಜು ಗುಳೇದಗುಡ್ಡ 

Tuesday, July 20, 2021

*ತನ್ಮಯತೆ * ಚಿತ್ರ ಕವನ

 ಅಕ್ಷರಅಕ್ಷರ ದೀಪ ಸಾಹಿತ್ಯ,  ಸಾಂಸ್ಕೃತಿಕ ಮತ್ತು ಕಲಾ ವೇದಿಕೆಯ ಚಿತ್ರ ಕವನ ಸ್ಪರ್ಧೆ ಗಾಗಿ

*  ತನ್ಮಯತೆ *

ಕರಳು ಬಳ್ಳಿಯ ಹಣೆ ಬರಹಕೆಂದು
ಬೆರಣಿ ಇಲ್ಲದ ಬಿದಿರು ಬೊಂಬೆ ಬರಹ
ಬೆರಳಿನಿಂದರಳಿಸಿದೆ ಚಂದದ ಚಿತ್ರಗಳ
ಸರಳತೆ ಮೆರೆದೆ ನಿನ್ನೊಡಲ ಮಗವಿಗಾಗಿ//

ನೂರು ಕಷ್ಟದ ಬೇರುಗಳನು ಮೀರಿ 
ಸೂರು ಬಯಸದೆ ಶಿರವ ಬಾಗಿಸಿ
ಯಾರ ಗೊಡವೆ ಇಲ್ಲ, ಎಲ್ಲ ಕಲೆಗಾಗಿ 
ಕರ ತಾಳಹಾಕುತಿವೆ ನಿತ್ಯ ಕರ್ಮಕ್ಕಾಗಿ//

ತನ್ಮಯತೆಯು ತವರಿನ ಸಿರಿಯಂತೆ
ಜಾಣ್ಮೆಯೊಂದೆ ಸಂತಸದ ಕಣಜವಲ್ಲ
ಏನಿಲ್ಲದೆ ಎಲ್ಲವೊ ಪಡೆದು ಬಲ್ಲವಳು
ತಲ್ಲೀನಳಾಗಿ ಜಗ ಕೈಲಾಸ ಮಾಡಿದವಳು//
 
ಭಾವನೆ ಬಿತ್ತಿ ವೊರೆ ಕೊರೆ ಕೆತ್ತಿದವಳು 
ಭುವನದ ಮಾದರಿ ಮಾನವನಿಗಿತ್ತಳು
ಜೀವನ ಸಂದೇಶ ಮೌನದಿ ಹಾಡಿದಳು
ಯಾವ ಸಂತನಿಗೆ ಕಡಿಮೆ ಇಲ್ಲದವಳು//


             ಶ್ರೀ ಬಸನಗೌಡ ಗೌಡರ 

ಉಪನ್ಯಾಸಕರು ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು ಗುಳೇದಗುಡ್ಡ 

Tuesday, July 13, 2021

* ಜೀವ ಮಣ್ಣು - ಹೊಣ್ಣು*

ಸುಗ್ಗಿ ಕಾಲ ಇದ್ದಲ್ಲಿ  ಸುಳಿಯದು ಅಣ್ಣ 
ಹಿಗ್ಗಿ ಉಣಲು ಬಗ್ಗಿ ದುಡಿಯಬೇಕಣ್ಣ/
ಬೆವರು ಹನಿ ಬೇರಿಗಿಳಸಲು ಹಸಿರಣ್ಣ 
ಹವನವಲ್ಲ ಬಸವ ಗಂಟೆ ಕೇಳಿಸಲಣ್ಣ//

ಬೋಧಿಸದರೆ ಬರುವುದೇನು ಮೌಲ್ಯ   
ಅದನ್ನು ನಾವು ನಡದೆ ಕಲಿಸಬೇಕಣ್ಣ/ 
ಹೃದಯದಿಂದ ಪ್ರೀತಿ ಬಿತ್ತಬೇಕು ಅಣ್ಣ 
ಮೆದುಳಿನಿಂದ ಅಳತೆ ಮಾಡಬೇಕಣ್ಣ//

ಹದವಾದ ಮಣ್ಣಿನ ಶ್ರೀಗಂಧ ಪರಿಮಳ
ಬೀದಿಯಲ್ಲಿ ಸಿಗುವುದೇನು ಭರಮಣ್ಣ/
ಗದ್ದೆಯಲ್ಲೆ ಮಳೆ ಬಿದ್ದರೆ ಅದೆ ಹೊಣ್ಣು
ಪೆದ್ದ ನೀನು ತಯಾರಿಸು ಜೀವ ಮಣ್ಣು//

ಕೈಲಾಸವೆಂದು ಕರೆಯದು ಹೂ ತಂದು 
ಕೆಲಸದಿಂದ ಇಳಿಯಿವುದು ಇಳೆಗಿಂದು/
ಸಾಲಾಗಿ ನಡೆ ಇರಿವೆಯಂತೆ ಮುಂದೆ 
ಸಲಾಮು ಸಿಗುವುದು ಶ್ರಮದ ಹಿಂದೆ//

                   ಬಸನಗೌಡ ಗೌಡರ

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...