Wednesday, March 29, 2023

ಪ್ರವಾಸ ಕಥನ

 "ನಾಡ ಹುಲಿಯ ಕರ್ಮ ಭೂಮಿಯ ಕಡೆ ನಮ್ಮ ನಡಿಗೆ "

             

ಪವಿತ್ರ ಭೂಮಿ ನಂದಘಡ ನೋಡುವ ಆಸೆ ಆದರೆ ಕೈಗೂಡಿರಲಿಲ್ಲ, ಯಾಕೆಂದರೆ ಕಾಲ ಕೂಡಿ ಬಂದಿರಲಿಲ್ಲ, ಸಮಯಕ್ಕಾಗಿ ಕಾಯಬೇಕಷ್ಟೆ ಭಗವಂತ ಯಾವದೋ ರೂಪದಲ್ಲಿ ನಮಗಾಗಿ ಅದೃಷ್ಟ ಕಳಿಹಿಸಿಕೊಡುತ್ತಾnuನೆ.ಈ ಮೊದಲು ನಮಗೆ ಪರಿಚಯವೂ ಇಲ್ಲ, ಅವರಿಗಾಗಿ ನಾನು ಏನು ಸಹಾಯ ಮಾಡಿದ್ದು ಇಲ್ಲ, ಇದರೆ ಪರೀಕ್ಷಾ ಕಾರ್ಯದಲ್ಲಿ ಉಪಮುಖ್ಯಅಧೀಕ್ಷಕರಾಗಿ ಸೇರಿದ್ದೊಂದೆ, ಪರೀಚಯ ಗಾಢ ಸ್ನೇಹವಾಗಿ ಪರಿವರ್ತನೆಯಾಯಿತು .ಗೋಲ್ಡ ಮೆಡಲ್ ಪಡೆದು ಆಯ್ಕೆ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದು ಮುಖ್ಯಮಂತ್ರಿಗಳಿಂದ ಆದೇಶ ಪಡೆಯುವುದು ಅಂದರೆ ಅದು ಸಾಮಾನ್ಯವಾ ? ಅದನ್ನು ಸಾಧಸಿದ ಸಾಧಕ, ಅವರ ಮುಂದೆ ಈ ವಿಷಯ ಪ್ರಸ್ತಾಪ ಮಾಡಿದೆ ಅಷ್ಟೇ " ಸರ್  ಗಪ್ಪರಿಲಾ (ಹಾರುಗೆರೆ ಭಾಷೆಯಲ್ಲಿ) ಈ ಟ್ರಿಪ್  ನಮ್ಮಕುಟುಂಬದ ಜೊತೆ ಮಾಡಿ ಬಿಡೋಣ ಅನ್ನಬೇಕೆ ಆವರು ಬೇರು ಯಾರು ಅಲ್ಲ ವಿಠ್ಠಲ ಜೋಡಟ್ಟಿಯವರು. ಪ್ರವಾಸ ಹಾರುಗೆರೆಯಿಂದ ಮೂಡಲಗಿ ಮಾರ್ಗವಾಗಿ ಹಂಡಿಬಡಗನಾಥ ಮಠದವರೆಗೆ... ಆಹಾ ಆದು ಪ್ರವಾಸವಲ್ಲ ಬದಲಿಗೆ ಸಾಧಕರ ಸಿದ್ಧಿಯ ಪವಿತ್ರ ನೆಲದ ಸ್ಪರ್ಶಕ್ಕಾಗಿ ನೆಡೆದ ಯಾತ್ರೆ. ಮುಂಜಾನೆ ಮೂಡಲಗಿ ಮೂಲಕ ಸಾಗಿದ ನಮ್ಮ ಕಾರು ಗೋಕಾಕ್ ಮಾರ್ಗಹಿಡಿದು ಪುಣ್ಯಭೂಮಿಯ ಕಡೆ ನಡೆಯಿತು. ಘಟಪ್ರಭೆಯು ಶೃಷ್ಠಿಸಿದ ಸ್ವರ್ಗದ ತುನುಕೊಂದು ಧರೆಗಿಳಿದು ಸಸ್ಯಶಾಮಲೆಯಾಗಿ ಹರಡಿದಂತೆ, ಎಡಬಲಕೆ ಕಬ್ಬು ಉಬ್ಬಿ ಹಿಮ್ಮುಖವಾಗಿ ಓಡುವ ತರುಣಿಯಂತೆ  ಭಾಸವಾಗುತ್ತಿತ್ತು. ಇನ್ನೊಂದು ಕಡೆ ಬಸವ ಚಿಂತನದ ವಚನಗಾಯನ. ...ಹಾಡಿದ್ದು ಚಿಲಿಪಿಲಿ ವೇದಶ್ರೀ, ಶೃಷ್ಠಿ,,ಶ್ರಾವಣಿ, ವಿಶ್ವಾತ್ಮನ ರಾಗಲಹರಿ ,ಕಾಲ್ಯಾಣದ ಕಳೆಗಟ್ಟಿತ್ತು. ಇತ್ತಕಡೆ ಕ್ರಮಿಸಬೇಕಾದ ದಾರಿ ಕಾರಿನ ಗಾಲಿಗೆ ಬಹುಬೇಗನೆ ಆಹುತಿಯಾಗಿತ್ತು ಬಂದಿಳಿದದ್ದು ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ರಾಯಣ್ಣನ ಜನ್ಮಭೂಮಿಗೆ. ಗೆಳೆಯ  ವಿಠ್ಠಲ  ಹೇಳಿದ್ದು ರಾಕ್ ಗಾರ್ಡನ್,  ಬಯಸಿದ್ದು ಅದೆ ,ಆದರೆ ನಾವು ಹೋಗಿದ್ದು ಕಲ್ಯಾಣ ಮಂಟಪ. ಸ್ಥಳಿಯರಿಂದ ಮಾಹಿತಿ ಪಡೆದು ರಾಕ್ ಗಾರ್ಡನ್ ಬಾಗಿಲು ಬಳಿ ನಿಂತರೆ ಕೆಲಸ ಚಾಲ್ತಿಯಲ್ಲಿದ್ದ ಕಾರಣ ಕಾವುಲುಗಾರ ಒಳ  ಬಿಡಲು ನಿರಾಕರಣೆ ಮಾಡಿದ. ನಿರಾಶೆಯಾದರೂ ತೋರದೆ ಬಂದ ಕಾರ್ಯ ನೆರವೇರಿಸಲು ಆತನ ಮುಂದೆ ಮಾಡಿದ ಹಲವು ಸಬೂಬಗಳು ಗುಡ್ಡಕ್ಕೆ ಕಲ್ಲು ಹೊತ್ತಂತಾಗಿತ್ತು ಆದರೆ ಆತನ  ಕರ್ತವ್ಯ ಪ್ರಜ್ಞೆಗೆ ಮನದಲ್ಲಿ ನೂರು ಸಲಾಮ್ ಹೇಳಿ ಕಿತ್ತೂರು ಕಡೆ ಮುಖ ಮಾಡಿದೆವು ಈ ನಾಡಿನ ನೆಲದ ಗುಣಧರ್ಮವೆ ಹೀಗೆ ಇರಬೇಕು ,ಎಷ್ಟೆ ಆದರೂ ಅದು ರಾಯಣ್ಣ ಜನಿಸಿದ ಪವಿತ್ರ ಭೂಮಿಯಲ್ಲವೆ !  ಚಾಲಕ ಶಿವಣ್ಣನ ಗಾಡಿ ಗಾಳಿಯನ್ನು ಸೀಳಿ ಮುನ್ನುಗ್ಗುತ್ತಿದ್ದರೆ ರಾಯಣ್ಣನ ನಿಷ್ಠೆ , ದೇಶಭಕ್ತಿಯ ಗುಣಗಳು ನನ್ನ ಮನಪಟಲದಲ್ಲಿ ಇತಿಹಾಸದ ವೀರರ ಸಾಹಸದ ಕಿಚ್ಚನ್ನು ಬಡಿದೆಬ್ಬಿಸುತ್ತಿದ್ದವು ಅದಕ್ಕೆ ಅಲ್ಲವೆ ನಾವು ಇತಿಹಾಸ ಓದುವುದು.ಇತಿಹಾಸಕಾರ ಕಾರ್ಲೈಲ ಒಂದು ಮಾತು ಹೀಗೆ ಹೇಳುತ್ತಾನೆ "ಶ್ರೇಷ್ಠ ವ್ಯಕ್ತಿತ್ವನ್ನು ಅಭ್ಯಾಸ ಮಾಡುವುದೆ ಇತಿಹಾಸವೆಂದು".ಬಹುಶಃ ಸಂಗೊಳ್ಳಿ ರಾಯಣ್ಣನ ವ್ಯಕ್ತಿತ್ವ ನೋಡಿದರೆ ಅದು ಅಪ್ಪಟ ಸತ್ಯ ಎಂದೆಣಿಸದಿರದು. ಮೈಸೂರಿನಲ್ಲಿ ಟಿಪ್ಪು ಸಾ. ಶ.1799 ರಲ್ಲಿ ಮರಣ ಹೊಂದಿದ ನಂತರ ದೊಂಡಿಯಾ ವಾಘ,ಹಲಗಲಿ ಬೇಡರು, ಕೊಡಗಿನಲ್ಲಿ ಸ್ವಾತಂತ್ರ್ಯದ ಕಹಳೆ ಮೊಳಗುತಿತ್ತು ಕನ್ನಡಿಗರ ಗುಣವೆ ಅದು, ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857 ರಲ್ಲಿ ಪ್ರಾರಂಭವಾಯಿತು ಎಂದು ನಾವು ಓದುತ್ತಿದ್ದರೂ ಅದು ಕನ್ನಡಿಗರ ರಕ್ತದಲ್ಲಿ ಅದಕ್ಕೂ ಮೊದಲೇ ಮೊಳಕೆಯೊಡದಿತ್ತು  ಕೊಂಕಣ ತೀರ ಮತ್ತು ಮಲಬಾರ್ ತೀರದಲ್ಲಿ ಆಗಲೆ ಹಿಡಿತ ಸಾಧಿಸಿ ಮೈಸೂರನ ಮೇಲೆ ವಿಕ್ರಮ ಸಾಧಿಸಿದ ಬ್ರಿಟಿಷರಿಗೆ ಬಯಲು ನಾಡಿನ ಕಡೆಗೆ ಆಕ್ರಮಣದ ದಾರಿ ಸುಗಮ ಮಾಡಿಕೊಳ್ಳಲು ಕಿತ್ತೂರಿನ ಮೇಲೆ ವಕ್ರ ದೃಷ್ಠಿ ಹರಿಸಿದರು. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಹೇರಿದರು, ವಾಸ್ತವವಾಗಿ ಲಾರ್ಡ್ ಡಾಲಹೌಸಿ ದತ್ತು ಮಕ್ಕಳಿಗೆ ಹಕ್ಕಿಲ್ಲ (Doctrine  of lapse) ನೀತಿಯನ್ನು ಜಾರಿಗೆ ತಂದದ್ದು 1848 ರ ನಂತರ .ಅದರೆ ಅದು ಕನ್ನಡ ನೆಲ ಕಿತ್ತೂರಿಗೆ ಘಾಸಿಗೂಳಿಸಿದ್ದು 1824 ರ ಸುಮಾರಿಗೆ, ಅದಕ್ಕೆ ಕೆಚ್ಚೆದೆಯ ಕನ್ನಡದ ಪುತ್ರಿ ರಾಣಿ ಚೆನ್ನಮ್ಮಮತ್ತು ಅವಳ ಬಲಗೈಬಂಟ ಸಂಗೊಳ್ಳಿ ರಾಯಣ್ಣರಿಂದ  ಪ್ರಬಲ ಪ್ರತಿರೋದವಾಯಿತು. ಆರಂಭದಲ್ಲಿ ರಾಣಿ ಚೆನ್ನಮ್ಮ , ರಾಯಣ್ಣ ,ಅಮಟೂರ ಬಾಳಪ್ಪ ಬ್ರಿಟಿಷರನ್ನು ಹೆಡೆಮುರಿ ಕಟ್ಟಿದರು. ಆದರೆ ಮೋಸದ ದಾರಿ ಹಿಡಿದು ಕಿತ್ತೂರು ವಶಪಡಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾದರು ಈ ಹೋರಾಟ ಮುಂದುವರಿಸಿದವರೆ ಸಂಗೊಳ್ಳಿರಾಯಣ್ಣ. 17 ನೇ ಶತಮಾನದಲ್ಲಿ ಶಿವಾಜಿ ಮೊಗಲರಿಗೆ ಹಾಗೂ ಆದಿಲ್ ಷಾಹಿಗಳಿಗೆ ಗೆರಿಲ್ಲಾ ಯುದ್ಧ ತಂತ್ರದ ಮೂಲಕ ಚಳ್ಳೆ ಹಣ್ಣು ತಿನ್ನಿಸಿದರೆ 19 ನೇ ಶತಮಾನದಲ್ಲಿ ಬ್ರಿಟಿಷರಿಗೆ ಸಂಗೊಳ್ಳಿ ರಾಯಣ್ಣ ಚೆಳ್ಳೆ ಹಣ್ಣು ತಿನ್ನಿಸಿದ್ದು ಈಗ ಇತಿಹಾಸ.
         ಕಾರು ಕಿತ್ತೂರು ತಲುಪಿದಾಗ ಹಿಂದೊಮ್ಮೆ ಗತವೈಭವದಿಂದ ಮೆರೆದ ಅರಮನೆ ಈಗ ಕಾಲನ ಹೊಡೆತಕ್ಕೆ ಸಿಕ್ಕಿ ಮಾಂಸವಳಿದ
ಅಸ್ತಿಪಂಜರದಂತೆ ಬಿದ್ದು ತನ್ನ ಅಸಾಹಯಕ ಕಥೆ ಹೇಳುತ್ತ್ತಿತ್ತು.ಇದೆ ಏನು ಅಂದೊಮ್ಮೆ ಬ್ರಿಟಿಷರ ದಾಸ್ಯಕ್ಕೆ ಸಿಡಿದೆದ್ದು ಇತಿಹಾಸವಾದ ತಾಯಿ ಚೆನ್ನಮ್ಮಾಜಿ ಮತ್ತು ಬ್ರಿಟಿಷರಿಗೆ ಸಿಂಹಸ್ವಪ್ನವಾದ ಸಂಗೊಳ್ಳಿ ರಾಯಣ್ಣನ ಕರ್ಮ ಭೂಮಿ ಎಂದು ಮನಸ್ಸಿನಲ್ಲಿ ಗೌರವ ಅರ್ಪಿಸಿ ಸ್ಮಾರಕಗಳ ಮುಂದೆ ಕ್ಯಾಮರಾಕ್ಕೆ ಮುಖ ಅರ್ಪಿಸಿ ಸಾಹಸ ಸಾರುವ  ಕಥೆಗಾರನಾದೆ .ವಿಠ್ಠಲ ಜೋಡಟ್ಟಿಯವರ ಚಿಲಿಪಿಲಿ ಬಳಗ ಜೇನು ಹುಳದಂತೆ ಹಾಳು ಬಿದ್ದ ಅರಮನೆಯಲ್ಲಿಯೂ  ದೃವ ನಕ್ಷತ್ರ ವೀಕ್ಷಣಾ ಗೋಪುರ, ಸ್ನಾನಗೃಹ,ಅಡುಗೆಯ ಮನೆ,ಸಭಾಭವನ,ವಸ್ತುಸಂಗ್ರಹಾಲಯ ತುಂಬಾ ಓಡಾಡಿ ಐತಿಹಾಸಿಕ ಮಕರಂದ ಹೀರಿತು.ನಂತರ ಬಿಸ್ಕತ್ ಚಾಕಲೇಟ್ ಆಶ್ರಯ ಪಡೆಯಿತು .ನಮಗಾಗಿ ಕಾದಿದ್ದ ಚಾಲಕ ಶಿವಣ್ಣನ ಕಾರುಕುದುರೆ ನಂದಘಡ ದಾರಿಗೆ ಪೇರಿ ಹೊರಟಿತು. ಉದರ ರಾಯ ಕೇಳಬೇಕಲ್ಲ ! ಬೀಡ ದ ಬಸವೇಶ್ವರ ಕಾನಾವಳಿಯ ಬಿಸಿ ಬಿಸಿ ಜೋಳದ ರೊಟ್ಟಿ ಸವಿದು ನಂದಘಡ ತಲುಪಿದೆವು.ಸಹ್ಯಾದ್ರಿ ತಪ್ಪಲಿನ ಹಸಿರು ಮರಗಳು ತಮ್ಮ ಕಳೆ ಕಳದುಕೊಂಡರೂ ವೀರ ಸಾಹಸಿಯ ರಕ್ತತರ್ಪಣದ ಕಥೆ ಹೇಳಲು ತವಕಿಸುತ್ತಿದ್ದವು. ಸಾಮ್ರಾಜ್ಯಷಾಹಿಯ ಘೋರಪಾತಕವು ಆಲದಮರದ ಕಾಂಡದಲ್ಲಿ ಲೀನವಾಗಿತ್ತು ಇದೆ ಏನು "ಸತ್ಯವನ್ನು ಹೂತುಹಾಕಿದ ಸೂರ್ಯ ಮುಳುಗದ ಸಾಮ್ರಾಜ್ಯದ ಅಧಿಪತಿಗಳ ಕಾರಸ್ತಾನದ ಗೂಡು ಎಂದು ಕ್ಷಣ ಭಾವುಕನಾದೆ "ಭೌತಿಕವಾದ ದೇಹವನ್ನು ಆಲದಮರಕ್ಕೆಕಟ್ಟಿಹಾಕಬಹುದು ಆದರೆ ಕನ್ನಡಿಗರ ಶೌರ್ಯ ಸಾಹಸಗಳನ್ನಲ್ಲ ಎಂಬುದನ್ನು ತೋರಿಸಲು ಮತ್ತೆ ತಲೆಎತ್ತಿದೆ "ಸಂಗೊಳ್ಳಿರಾಯಣ್ಣ ಅಭಿವೃದ್ಧಿ ಪ್ರಾಧಿಕಾರದ ಹೆಸರನ ನಿಗಮ"  ರಾಯಣ್ಣನ ರಾಷ್ಟ್ರಭಕ್ತಿಯ ಗೌರವದ ಕುರುಹುಗಳಾಗಿ ಸರಕಾರಿ ಅಭಿವೃದ್ಧಿ ಕೆಲಸಗಳು, ಕುಶಲಕರ್ಮಿಗಳು, ಶಿಲ್ಪಿಗಳು, ದೈತ್ಯ ಯಂತ್ರಗಳ ರೂಪದಲ್ಲಿ ಗಿಜಗುಡುತ್ತಿವೆ . ಹಾತೊರೆದು ಬಂದ ನಾವು ಪವಿತ್ರ ಭೂಮಿಯ ಆಲದ ಮರ ಮುಟ್ಟಿ ಪಾವನರಾಗಬೇಕೆಂದರೆ ಮತ್ತೆ ಕಾವುಲುಗಾರರ ನಿರಾಕರಣೆ. ಕಾರಣ ಈಗ ಅಲ್ಲಿ ಹುಲ್ಲು ಹಾಸುಗಳಿಗಾಗಿ ಸಮತಟ್ಟು ಕೆಲಸ ನಡೆದಿದೆ, ಗಾರ್ಡನ್ ಗಳು  ನಿರ್ಮಾಣವಾಗುತ್ತಿವೆ. ಅಭಿವೃದ್ಧಿ ಕೆಲಸಗಳು ಸಮರೋಪಾದಿಯಲ್ಲಿ ನಡೆದ ಕಾರಣ ದೂರದಿಂದಲೆ ರಾಯಣ್ಣನನ್ನು ಗಲ್ಲಿಗೇರಿಸಿದ ಸಾಕ್ಷಿಯಾಗಿರುವ ಆಲದ ಮರ ಕಂಡು ಪುಣಿತರಾದೆವು. ದೇಶಕ್ಕಾಗಿ ಬಲಿದಾನವಾದ ದೇಹವನ್ನು  ನಂದಘಡಕ್ಕೆ ತಂದು ಸಮಾಧಿ ಮಾಡಿರುವ ಸ್ಥಳಕ್ಕೆ ಭಾರವಾದ ಮನಸ್ಸಿನಿಂದಲೆ  ಬಂದೆವು ಇನ್ನೊಂದು ರೋಚಕ ಸಂಗತಿ ಬಿಚ್ಚುಗತ್ತಿ ಚೆನ್ನಬಸವಣ್ಣ ಆತನ ಸಮಾಧಿಯ ಮೇಲೆ ನೆಟ್ಟ ಆಲದ ಮರ ಇಂದು ಗತಸಾಹಸ ಸಾರುವ ಪವಿತ್ರ ಸಾಕ್ಷಿಯಾಗಿದೆ. ವೀರ ಪುಣ್ಯ ಭೂಮಿ ಅದು ಬರಿ ಆಲದ ಮರವಲ್ಲ ಬದಲಾಗಿ ನಮ್ಮ ಕನ್ನಡಿಗರ ಅಸ್ಮಿತೆ, ಈ ದೇಶದ ರಾಷ್ಟ್ರೀಯತೆ. ಆತ ಹುಟ್ಟಿದ್ದು ಆಗಸ್ಟ್ 15, ವೀರ ಮರಣ ಜನವರಿ 26 ಗಣರಾಜ್ಯೋತ್ಸವ, ಆಹಾ ..ಸೃಷ್ಟಿಯ ಎಂಥಹ ಚಮತ್ಕಾರ

ಭಾರತಮಾತೆಯ ಮಡಿಲ ಮಗನಿಗಾಗಿ ನಾವು ಏನು ಮಾಡಿದರೂ ಕಡಿಮೆಯೇ .
       ರಾಯಣ್ಣನ ಕರ್ಮ ಭೂಮಿಯ ಕೇಂದ್ರ ಸಹ್ಯಾದ್ರಿ ತಪ್ಪಲಿನ ಹಂಡಿಬಡಗನಾತ ಮಠಕ್ಕೆ ಹೋಗವಾಗ ದಾರಿಯಲ್ಲಿ ಹಲಸಿ ಇರುವುದು ಕೇಳಿ ಮಹದಾನಂದ, ಯಾಕೆ ಹೇಳಿ ? ಇತಿಹಾಸದ ಉಪನ್ಯಾಸಕನಿಗೆ ಸ್ಮಾರಕಗಳೆ ಬಂಗಾರ,ತಾಳೆಗರಿಗಳೆ ಕಿವಿ ಓಲೆಗಳು, ಶಾಸನಗಳೆ ಆಸ್ತಿಯ ಖರೀದಿಯ ಪತ್ರಗಳು ಹಾಗಾಗಿ ಸ್ನೇಹಿತ ವಿಠ್ಠಲ  ಜೋಡಟ್ಟಿಯವರ ಮಾತು ಪಾಯಸ ಉಂಡಂತಾಯಿತು ಅವರೂ ಕನ್ನಡ ಭಾಷೆಯ ಉಪನ್ಯಾಸಕರಾಗಿರುವದರಿಂದ ಇಂತಹ ಸಮೀಪದ ಹಲಸಿ ಬಿಟ್ಟು ಹೋಗಲಾದೀತೆ? ಚಾಲಕ ಶಿವಣ್ಣನ ಕಾಲು ಓಡುತ್ತಿರುವ ಕಾರಿಗೆ ಬ್ರೇಕ್ ಅದುಮಿ ಕಾರ ನಿಲ್ಲಿಸಿ ನರಸಿಂಹ ದೇವಾಲಯ ಒಳಹೋಗುವಂತೆ ಮಾಡಿತು.ಈಗ ನಾವು 4, 5,ನೇ ಶತಮಾನದ ಕಾಲಗರ್ಭಕ್ಕೆ ಬಂದು ಬಿದ್ದೆವು. ಕನ್ನಡದ ಮೊದಲ ರಾಜಮನೆತನದ ಕದಂಬರ ರಾಜಧಾನಿ (ಬನವಾಸಿ) ವೈಜಯಂತಿಪುರದ ಪ್ರಾಂತೀಯ ರಾಜಧಾನಿಯಾಗಿದ್ದರಬಹುದಾದ ಹಲಸಿ ಒಂದು ಕಾಲಕ್ಕೆ ಹೆಸರುವಾಸಿಯಾದ ಪಟ್ಟಣ .ಒಂದು ಕಡೆ ಬನವಾಸಿ ಇನ್ನೊಂದು ಕಡೆ ಗೋವಾ ಕದಂಬರ ಅವಧಿಯ ಘಟಿಕ ಸ್ಥಾನ (ವಿದ್ಯಾ ಕೇಂದ್ರ) ಇಲ್ಲಿಯ ನರಸಿಂಹ ದೇವಸ್ಥಾನದ ಸೌಂದರ್ಯ ವರ್ಣಿಸಲು ಪದಗಳಿಲ್ಲ ಗರ್ಭಗುಡಿ ,ನವರಂಗ, ಪಾರ್ಶ್ವ ಬದಿಗಳಲ್ಲಿ ದ್ವಾರ ಬಾಗಿಲು,ನವರಂಗದಲ್ಲಿ ಕೂರ್ಮದ ಉಬ್ಬು ಶಿಲ್ಪ ಕಲ್ಲಿನಲ್ಲಿ ಕಲೆ ಅರಳಿ ಕಾವ್ಯವಾಗಿದೆ.ಅದು ನಮ್ಮ ಜೊತೆಗೆ ಬಂದ ವಿಠ್ಠಲರ ಕುಟುಂಬದ  ಇಬ್ಬರು ಪದವಿ ವಿದ್ಯಾರ್ಥಿಗಳ ಚರ್ಚೆಯ ವಿಷಯ ವಸ್ತುವಾದವು ಅವರಲ್ಲಿ ಒಬ್ಬ ಕ್ರಿಮನಾಲಜಿ ವಿದ್ಯಾರ್ಥಿ ಎಂದರೆ ಕೇಳಬೇಕೆ ಚಿಕಿತ್ಸಕ ಬುದ್ಧಿ ,ಕನ್ನಡ,ಇತಿಹಾಸ ವಿಷಯ ಉಪನ್ಯಾಸಕರ ಜೊತೆಗೆ ಸಂವಾದ ನಡೆದಿತ್ತು.ಸೂರ್ಯ ಪಶ್ಚಿಮದಿಕ್ಕಿನಲ್ಲಿ ವೇಗದ ದಾಪುಗಾಲು ಇಡುತ್ತಿದ್ದರೂ ನರಸಿಂಹ ದೇವಸ್ಥಾನದ ಹಾಸುಗಲ್ಲುಗಳು ಪಾದಕ್ಕೆ ಬರೆ ಎಳೆಯುತ್ತಿದ್ದವು ಲಗುಬಗೆಯಿಂದ ಶಿವಣ್ಣನ ಕುದುರೆ ರೆಡಿ ಈಗ ಇನ್ನೊಂದು ಪ್ರಮುಖ ರಾಯಣ್ಣನ ಗೆರಿಲ್ಲಾ ಯುದ್ಧ ತಂತ್ರದ ಕೇಂದ್ರ ಸ್ಥಾನ ಹಂಡಿ ಬಡಗನಾತ ಮಠ ಸೇರಬೇಕಾಗಿತ್ತು .ಆದರೆ ಓಡುವುದು ಅಷ್ಟು ಸುಲಭದ ಮಾತಲ್ಲ ದಟ್ಟ ಅರಣ್ಯ ರಸ್ತೆಯ ತಗ್ಗುಗಳು ಆತನ ಕುದುರಿಗೆ ಕಚಗುಳಿ ಇಡುತ್ತಿದ್ದವು ಒಂದು ತಪ್ಪಿಸಿದರೆ ಇನ್ನೊಂದು .ನರ್ತನ ಮಾಡುವುದು ಎಲ್ಲರ ಸರದಿ ಮುಗಿಲನ್ನೆ ಚುಂಬಿಸುವ ಸಹ್ಯಾದ್ರಿಯ ಸಹಜ ನಗುವು ಮರಗಳ ಸರದಿ. ಅವುಗಳದು ಯಾವಾಗಲು ನಗುವುದೆ ಧರ್ಮ ಅಳಲು ಹಚ್ಚುವುದು ನರರ ಕೆಲಸ, ಕೊನೆಗೆ ಅಳಲು ಹಚ್ಚಿದವರೆ  ಅಳುವುದು ಎಂಬದು ಅಷ್ಟೇ ಸತ್ಯ.ಹಲಸಿ, ಹಲಗಾ ,ನಾಗರಳಿ ದಾಟಿ ಕುಂಬಾರ್ಡಿ ತಲುಪಿದೆವು.ಇನ್ನೇನಿದ್ದರೂ ಪರ್ವತಾರೋಹಣ ಚಾಲಕನ ಗುಂಡಿಗೆ ಗಟ್ಟಿಯಾಗಿರಬೇಕು ಹಾವಿನಂತೆ ಸಾಗುವ ತೆಗ್ಗು ದಿನ್ನೆಗಳ ರಸ್ತೆ. ಕ್ಷಣ ವಿಚಲಿತನಾದರೂ ಪ್ರಪಾತ, ಜೀವ ಕೈಯಲ್ಲಿ ಹಿಡಿದೆ ಕುಳಿತಿರಬೇಕು,ಹಿಂದಿನ ಕಾಲದಲ್ಲಿ ಪ್ರವಾಸದಿಂದ ಮರಳಿ ಬಂದವರಿಗ ಹೊಸ ಬಟ್ಟೆ ಹೊಲಸಿ ಸಂಭ್ರಮ ಪಡುತ್ತಿದ್ದರಂತೆ .ಯಾಕೆ ಎನ್ನವುದು ಈಗ ಅರ್ಥ ಆಗಿ ಹೋಗಿತ್ತು ಹಂಡಿ ಬಡಗನಾತ ಮಠದ ತುತ್ತುತುದಿಗೆ ಬಂದಾಗ ಇಡಿ ಭೂಮಂಡಲವೆ ನಮ್ಮ ಪದತಲದಲ್ಲಿ ಬಂದಿದೆ ಎಂದು ಬಾಸವಾಗುತ್ತಿತ್ತು ಸುತ್ತ ಐವತ್ತು ಕಿ.ಮೀ.ಅರಣ್ಯವೆ ಅರಣ್ಯ ಪ್ರಾಯಶ: ಸಂಗೊಳ್ಳಿ ರಾಯಣ್ಣ ತನ್ನ ಗುಪ್ತ ಕಾರ್ಯಚರಣೆ ಕ್ಷೇತ್ರವನ್ನು ಯಾಕೆ ಇಲ್ಲಿ ಮಾಡಿದ್ದ ಎನ್ನುವದು ಅರ್ಥವಾಗಿತ್ತು.ಶಿಖರದಲ್ಲೊಂದು ಗುಪ್ತ ಗುಹೆ ಇದೆ ಇಲ್ಲಿ ಒಳಹೋಗಲು ದಾರಿ ಯುಂಟು ವಿಠ್ಠಲರವರೆ ಮೊದಲು ಮುಂದೆ ಹೋಗಿ ಮುಂದೆ ದಾರಿಯಿಲ್ಲ ಎಂದು ಮರಳಿ ಬಂದರು ನಂತರ ಅವರ ಸಂಬಂಧಿ ವಿದ್ಯಾರ್ಥಿಗಳು ಹೋಗಿ ಇನ್ನೂ ಮುಂದೆ ಹೋಗಲು ದಾರಿಯುಂಟು ಗುಯ್ಯ ಎನ್ನುವ ಶಬ್ದ ಬರುತ್ತದೆ ಎನ್ನಬೇಕೆ ! ಸೂಕ್ಷ್ಮವಾಗಿ ನೋಡಿದರೆ ಮಾತ್ರ ಆ ದಾರಿ ಪಾರ್ಶ್ವಬದಿಗಳಲ್ಲಿ ಹಾದು ಪಾರಾಗಲು ಅವಕಾಶವಿದೆ ಎನ್ನುವುದು ಗೊತ್ತಾಗುತ್ತದೆ.ಆ ಗುಯ್ಯ ಎನ್ನುವ ಶಬ್ದ ಅಂದೆನಲ್ವೆ ! ಅವು ಜೇನು ಹುಳಗಳಾಗಿದ್ದವು.ಈಗ ಅಲ್ಲಿರುವುದು ನಾಲ್ಕನೆ ಸ್ವಾಮಿಜಿ.ಆದರೆ ಒಂದನೆಯ ಸ್ವಾಮೀಜಿಯವರ ವೇಶದಲ್ಲಿ ರಾಯಣ್ಣ ಚೆನ್ನಮ್ಮನನ್ನು ಭೇಟಿಯಾಗುಲು ಹೋಗಿದ್ದರು ಎನ್ನುವ ಮಾತು ಕೇಳಿದಾಗ ಮೈ ರೋಮಾಂಚನವಾಯಿತು
        ಸೂರ್ಯ ದಿಗಂತದಲ್ಲಿ ಲೀನವಾಗುತ್ತಿರುವುದನ್ನು ಗಮನಿಸಿದ ವಿಠ್ಠಲ ಜೋಡಟ್ಟಿಯವರ ಮಾವನವರು ಹಾಗು ನಿವೃತ್ತ ಮುಖ್ಯಗುರುಗಳ ಸಲೆಹೆ "ಕತ್ತಲೆ ನಮ್ಮನ್ನಾಕ್ರಮಿಸುವ ಮೊದಲು ಈ ದಟ್ಟ ಅರಣ್ಯ ದಾಟೋಣ" ಎಂದು. ಸಲೆಹೆ ಸ್ವೀಕರಸಿದ ನಾವೆಲ್ಲಾ ನಿಸರ್ಗದ ಸವಿಯನ್ನು ಪೂರ್ತಿಯಾಗಿ ಸವಿಯದೆ ಭಾರವಾದ ಮನಸ್ಸಿನಲ್ಲಿಯೇ ಪರ್ವತದ ಅವರೋಹಣ ಪ್ರಾರಂಭಿಸಬೇಕಾಯಿತು.ಮತ್ತದೆ ಚಾಲಕ ಶಿವಣ್ಣನ ಸವಾರಿ ನಿರಂತರ ಕ್ರಮಿಸಿ ಮನೆ ತಲುಪಲು ಮಧ್ಯರಾತ್ರಿ ನಮ್ಮನ್ನೆಲ್ಲ ಸ್ವಾಗತಿಸುವಂತಾಯಿತು.


Friday, March 24, 2023

* ವೃತ್ತಿ ಗೌರವ ಎತ್ತರಿಸಿದವರು.*

* ವೃತ್ತಿ ಗೌರವ ಎತ್ತರಿಸಿದವರು.*

 "Some minds are like natural theropy to the pressure  minds who give them treatment without pay they lives in heaven and they make healthy atmosphere to live.

"ನಕ್ಕು ನಗಿಸಿ ನರಕ ಕತ್ತರಿಸಿ 
ನಾಕ ಮಾಡುವ ನರರುಂಟು ನಮ್ಮನಡುವೆ 
ಯಾಕೆ ಮಾಡುವೆ ಚಿಂತೆ,ನಕ್ಕು ಬಿಡು 
ಸಿಗುವರು ಅಲ್ಲಿ ಇಲ್ಲಿ. ವಜ್ರದಂತೆ
ಅವರೆ ನಮ್ಮ ನಾಡ ಕಟ್ಟುವ ಗಾರುಡಿಗರು"   ಸಾವಿರಕ್ಕೊ, ಲಕ್ಷಕ್ಕೋ ಒಬ್ಬರು, ಇಬ್ಬರು ಇಂಥವರು ಸಿಗುತ್ತಾರೆ. ಹಿಂದೆ ಪ್ರತಿ ಹಳ್ಳಿಗಳಲ್ಲಿ ಇಂತಹ ಜನ ಸಿಗುತ್ತಿದ್ದರು. ಈಗ ಅಂತವರ ಸಂಖ್ಯೆ ಆಧುನಿಕ ನಾಗಲೋಟಕ್ಕೆ ಸಿಕ್ಕು ಬದುಕೆಂದರೆ ಬರಿ. ವ್ಯವಹಾರವೆಂದು ನಂಬಿ ಕಡಿಮೆಯಾಗುತ್ತಿದ್ದಾರೆ .ಆ ಮಾತು ಹಾಗಿರಲಿ.ನಾನು ಒಂದು ಸತ್ಯ ಸಂಗತಿಯನ್ನು ತಮ್ಮಮುಂದೆ ತರಲು ಪ್ರಯತ್ನ ಮಾಡುತ್ತಿದ್ದೇನೆ. ಅದುವೆ ಎಲ್ಲದಕ್ಕೂ ಎಸ್.. ಎಸ್.. ಎನ್ನುವ ಪಾಂಡು. (S S ಪಾಂಡು) .ಹುದ್ದೆ ಪ್ಯೂನ ಆದರೂ  ಜೀವನವನ್ನು ಗೆದ್ದ ಪ್ರಧಾನಿ , ಅವರು ಬದುಕನ್ನು ಪ್ರೀತಿಸಿ ಬದುಕುಲು ಕಲಿಸುವ ಮಾರ್ಗದರ್ಶಿ. ಆತ ಹುದ್ದೆಯ ಗೌರವ ಎತ್ತಿ ಹಿಡಿದ ನಿಗರ್ವಿ . ಸಾಮಾನ್ಯ ಮನುಷ್ಯ ಉನ್ನತ ಹುದ್ದೆ ಹಿಡಿದು ಗೌರವ ಎತ್ತರಿಸಿಕೊಳ್ಳಲು ಪ್ರಯತ್ನಿದರೆ ಪಾಂಡು ಮಾತ್ರ ಹುದ್ದೆ ಯ ಗೌರವ ಎತ್ತರಿಸಿದ ಮಾಂತ್ರಿಕ  ಈ ಪಾಂಡು ಇರುವುದು ಬೇರೆ ಎಲ್ಲಿಯೂ ಅಲ್ಲ, ಆತ ಇರುವುದು ಎಸ್ ಎಸ್ ಆರ್ ಪದವಿ ಪೂರ್ವ ಕಾಲೇಜು ಮೂಡಲಗಿಯಲ್ಲಿ ಮಾತನಾಡಿಸಿದರೆ  ಜಾನಪದ  ಒಗಟುಗಳನ್ನು ಪಟ ಪಟನೆ ಹಾರಿಸಿ ನಗೆ ಬುಗ್ಗೆ ಎಬ್ಬಿಸುವ ಗಾರುಡಿಗ ಅಲ್ಲಿ ಬದುಕಿನ ಸಾರವಿದೆ ಅನುಭವದ ಅಮೃತವಿದೆ. ಅದೆಷ್ಟೋ ಪದವಿ ಪೂರ್ವ ಕಾಲೇಜು ಉಪನ್ಯಾಸಕರು ಹಾಗೂ ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕರು ಈತನ ಮಾತಿಗೆ ತಲೆದೂಗಿದ್ದಾರೆ, ಸೈ ಎಂದು ನಕ್ಕು ಮುಂದೆ ಸಾಗಿದ್ದಾರೆ  ಸುಮಾರು 34 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಈತ ಕೇವಲ ಕಾಲೇಜಿಗೆ ಮಾತ್ರ ಸೀಮಿತವಲ್ಲ ಅದು ಸುಖದ ಕಾರ್ಯಕ್ರಮವಾಗಿರಬಹುದು ಇಲ್ಲವೆ ದುಃಖದ ಕಾರ್ಯಕ್ರಮ ಇರಬಹುದು ಅಲ್ಲಿ ಪಾಂಡು ಹಾಜರ.ಜಾನಪದ ಗೀತೆಗಳನ್ನು,ಭಜನಾ ಪದಗಳನ್ನು ಸುಂದರವಾಗಿ ಹಾಡುವದರಲ್ಲಿ  ಎತ್ತಿದ ಕೈ .ಆದರೆ ಯಾರಿಂದಲೂ ಒಂದು  ಪೈಸೆ ನಿರೀಕ್ಷೆ ಮಾಡಿದವನಲ್ಲ 
ಪ್ರೀಯಾಗಿ ಹಾಡಿ ಬರುವದು ಈತನ ರೂಢಿ. ಕೆಲಸದ ವಿಷಯದಲ್ಲಿ ಪಾದರಸ, ಪ್ರತಿಯೊಂದನ್ನು ಅಚ್ಚು ಕಟ್ಟಾಗಿ ಮಾಡುವುದು ಆತನಿಗೆ ಸಿದ್ದಿಸಿದೆ. ನಾನು ದ್ವಿತೀಯ ಪಿಯುಸಿ ಪರೀಕ್ಷಾ ಕಾರ್ಯಕ್ಕೆ ಜಾಗೃತ ದಳದ ಸದಸ್ಯನಾಗಿ ಎಸ್ ಎಸ್ ಆರ್ ಪ.ಪೂ ಕಾಲೇಜು ಮೂಡಲಗಿಗೆ ಹೋದಾಗ ಕಂಡ ವ್ಯಕ್ತಿ . ಪ್ಯಾಕಿಂಗ ಕಾರ್ಯ ನೆಡೆದಾಗ ಎಡಗೈಯಲ್ಲಿ ಬಂಡಲ್ ಹೊಲಿಯಲು ನಿಂತರೆ ಆತನ ಮಾತು ಮತ್ತು ಸೂಜಿದಾರಗಳು ಸ್ಪರ್ಧೆಗೆ ಇಳಿದಿರುತ್ತವೆ ಒಗಟು,ನುಡಿಗಟ್ಟು ಗಳು ಬುಗ್ಗೆಯಂತೆ ಜಿಗಿತಯುತ್ತಿರುತ್ತವೆ, ಉಳಿದವರು ನಗೆಗಡಲಲ್ಲಿ ತೇಲುತ್ತಿರುತ್ತಾರೆ. ಇದ್ದ ಹುದ್ದೆಯಲ್ಲಿ ಸಂತೃಪ್ತಿ ಪಡೆಯದೆ ಸದಾ ಹೆಚ್ಚಿನ ಹುದ್ದೆಗೆ ಹಪಹಪಿಸುವವರಿಗೆ ಇವನೊಂದು ಪಾಠಶಾಲೆ .ಅಂದರೆ ಹೆಚ್ಚಿನ  ಹುದ್ದೆಯನ್ನು ಬಯಸಬಾರದು ಅಂತಾ ಅರ್ಥವಲ್ಲ. ಹಿಡಿದ ಹುದ್ದೆಯ ಗೌರವ ಹೆಚ್ಚಿಸುವ ಕಾರ್ಯ ಮಾಡಬೇಕೆನ್ನುವುದು ಆತನ ಸಿದ್ದಾಂತ. ಶರಣ ಸಂಸ್ಕೃತಿ ಮೈಗೂಡಿಸಿಕೊಂಡಿರುವ ಇವನು ಯಾವಾಗಲೂ  ಸೈಕಲ್ ನ್ನು ಸ್ನೇಹಿತನಂತೆ ಪ್ರೀತಿಸುವ ಪ್ರಿಯಕರ.ಒಂದು ಸ್ಥಳದಲ್ಲಿ ನಿಲ್ಲದೆ ನಿತ್ಯವೂ ಜಂಗಮ .ಬಹು ದೊಡ್ಡದಾದ ಸಂಸ್ಥೆಯಲ್ಲಿ ಎಲ್ಲಾ ವಿಭಾಗಗಳ ಬೇಡಿಕೆಯ ಅಜ್ಜ .ಕಬ್ಬಿಣ, ಕಟ್ಟಿಗೆ ,ಸಿಮೆಂಟ ಲೆಕ್ಕಾಚಾರವೂ ಇವನಿಂದ ಚಕಾ ಚಕ್.

 ಯಾರಿಂದ ಏನೂ ನಿರೀಕ್ಷಿಸದ ಎಲ್ಲರ ನಿರೀಕ್ಷೆ ಈಡೇರಿಸುವ ಆಪ್ತ ಮಿತ್ರ.ಕೆಲಸವೆ ಈತನಿಗೆ ದೇವರು. ಹೀಗೆ ಕೆಲಸ ಮಾಡುತ್ತ ಕೆಲವೊಮ್ಮೆ ಎಲ್ಲಿಯೋ ನಿದ್ದೆ ಹೋದ ಒಂದು ಸ್ವಾರಸ್ಯಕರ ಸಂಗತಿ  ಸುದ್ದಿ ನಮಗೆ ಹೇಳಿ ನನ್ನನ್ನು ನಗೆಗಡಲಲ್ಲಿ ತೇಲಿಸಿದ. ಅದೇನೆಂದರೆ
ಒಂದು ಅಂಗಡಿಯ ಮಂದೆ ಮಾತಾಡುತ್ತಾ
ಕುಳಿತು ನಿದ್ದೆ ಹೋದರಂತೆ ಅವರಿಗೆ ಪ್ರೀತಿ ಪಾತ್ರರಾದ ಯಾವನೊ ಒಬ್ಬ ಮಲಗಿದಾಗ ಕೊರಳಿಗೆ ಹೂವಿನ ಹಾರ ಹಾಕಿ ಪೋಟೋ ತೆಗೆದು ಫೇಸ್ ಬುಕ್ ಗೆ ಅಪ್ ಲೋಡ್ ಮಾಡಿದ್ದರಂತೆ... ಅದು ಪಾಂಡು  ಹೋದ ಎಂದು ! .ಹೀಗೆ ವೈರಲ್ ಮಾಡಿದ್ದನ್ನು ಕೇಳಿ ನಕ್ಕಿದ್ದೆ ನಕ್ಕಿದ್ದು ..ಆತ  ಮಂಜಾನೆ 5.30 ಗಂಟೆಗೆ ಎದ್ದು ಕಾಲೇಜಿನಲ್ಲಿ ಬಂದರೆ ಮನೆಗೆ ಹೋಗುವದು ಯಾವೊಗೋ ಏನೋ ! ಊಟದಲ್ಲಿಯೂ ಅಷ್ಟೆ ಅದರಲ್ಲಿಯ ಅವನ ಸಿದ್ದಾಂತ ಕೇಳಿ ನಾ ತಲೆದೂಗಿದೆ . ಸರ್ ನೀವು ಐದು ಗಂಟೆಗೆ ಊಟ ನೀಡಿದರೂ ಗಡದ್ದಾಗಿ ಹೊಡೆಯುತ್ತೇನೆ. ಈಗೀನವರಿಗೆ ಅದು ಸಾಧ್ಯವಿಲ್ಲ! ಏಕೆ ಹೇಳಿ ?ಉಂಡದ್ದು ಸರಿಯಾಗಿ ಜೀರ್ಣವಾದರೆ ತಾನೆ  ?ನಸುಕಿನಲ್ಲಿಯ ಊಟ.! ನಿದ್ದೆಯೂ ಹಾಗೆಯೇ ಎಲ್ಲಿ ಕುಳಿತರೂ ನಿದ್ದೆ ಹಾಯಾಗಿ ಬರುತ್ತದೆ ಇದಕ್ಕಿಂತ ಸ್ವರ್ಗ ಇದೆಯೇ ಎಂಬ ಪಾಂಡುವಿನ ಪ್ರಶ್ನೆಗೆ ತತ್ವಜ್ಞಾನಿಯೋ, ವೈದ್ಯರೊ ತಲೆಬಾಗಲೆಬೇಕು. 
ಅಂತಯೆ ಕುಟುಂಬದ ಸದಸ್ಯರನ್ನು ಬೆರಗುಗೊಳಿಸಿದ ಉತ್ತರ  ಹೇಳಿ ನಮ್ಮ ಮುಂದೆ ಸಮಾಜ ಸೇವಕ , ತತ್ವಜ್ಞಾನಿಯಾಗಿದ್ದ. ಮನೆಯೊಡತಿ ಪ್ರಶ್ನೆ  "ತಾವು ಯಾವಾಗಲೂ ಶಾಲೆ, ಕಾಲೇಜು ಎಂದರೆ ಮನೆಯ ಬಗ್ಗೆ ಏನು ಕಾಳಜಿ ಇಲ್ಲವೆ ? ಅಂದದ್ದಕ್ಕೆ ಈತ ಮಾರ್ಮಿಕವಾಗಿ  ಹೇಳಿದನಂತೆ " ನಾನು ನಾಳೆ ಮನೆ ಮನೆಯಂತ ಸತ್ತರೆ ನೀವು ಮೂರೇ ಮಂದಿ ಅಳತ್ತೀರಿ ನಾನು ಹೀಗೆ ಸತ್ತರೆ ಇಡಿ ಮೂಡಲಗಿ ಮಂದಿ ಅಳುತ್ತಾರೆ " ಎಂದರಂತೆ .ಎಂತಾ ಮಾರ್ಮಿಕವಾದ ಮಾತಲ್ಲವೆ .ಇವರಿಗೆ ಎರಡು ಹೆಣ್ಣು ಮಕ್ಕಳು ಅವರೀರ್ವರೂ ಜಾಣ ವಿದ್ಯಾರ್ಥಿಗಳು. ಹಿರಿಮಗಳು ಬಿ ಎಸ್ಸಿ ,ಸಣ್ಣ ಮಗಳು ಹೈಸ್ಕೂಲ್ ಓದುತ್ತಿದ್ದಾಳೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ ಅಂದರೆ ಅವರ ಅಪ್ಪನ ಆದರ್ಶ ಅವರಿಗೆ ಸ್ಪೂರ್ತಿಯಾಗಿದೆ, ಅಲ್ಲವೆ ? ಅಂದರೆ ಕಲಿಸಬೇಕಾಗಿಲ್ಲ ಕಲಿಯುವಂತೆ ಬದುಕಬೇಕಷ್ಟೆ.
ನನ್ನ ಸುದೀರ್ಘ ವೃತ್ತಿ ಜೀವನದಲ್ಲಿ ನಾನು ಕಂಡ ನನ್ನ ಕೆಲವೆ ಕೆಲವರಲ್ಲಿ ನಮ್ಮ ಕಾಲೇಜಿನ ಪ್ರೌಢಶಾಲಾ ವಿಭಾಗದ ಪ್ಯೂನ ನಾಗಮ್ಮ ಮತ್ತು ಈ ಪಾಂಡು ವೃತ್ತಿ ಮೌಲ್ಯ  ಹೆಚ್ಚಿಸಿದ ಅಪರೂಪದ,ಸಮಾಜ ನೆಚ್ಚುವ ಅಭಿನಂದನಾರ್ಹ ವ್ಯಕ್ತಿಗಳು . ಸಮಾಜ ಅಂತವರನ್ನು ಗೌರವಿಸುವ ಮೂಲಕ ಸ್ವಸ್ಥ ಸಮಾಜ ಕಟ್ಟಬೇಕಾಗಿದೆ. ಕನ್ಪ್ಯೂಶಿಯಸ್ ಒಂದು ಮಾತು ಹೀಗೆ ಹೇಳುತ್ತಾರೆ "ಸಮಾಜ ಜಾಣರನ್ನು ಗೌರವಿಬೇಕು" ಎಂದು. ನಾನು ಮುಂದುವರೆದು ಹೇಳಲು ಬಯಸುವುದು " ವೃತ್ತಿಯನ್ನು ಗೌರವಿಸುವವರನ್ನು ಗೌರವಿಸಿ ಎಂದು.ಒಪ್ಪುತ್ತೀರಲ್ವೆ ?.
ನಮಸ್ಕಾರಗಳು.

Monday, March 20, 2023

ಪ್ರವಾಸ ಕಥನ

ಮೂಡಲಗಿಯಿಂದ ಮುಗಳಖೋಡ !
            ಇದು ಏನ್ರೀ ಪ್ರಾಸಬದ್ದ ಪ್ರಲಾಪನೆ ಎನ್ನಬಹುದುಲ್ಲವೆ ! ಹೌದು ಇದು ಪ್ರಲಾಪನೆಯೇ.  ನಾನು ಮೂಡಲಗಿಯಲ್ಲಿ ಪರೀಕ್ಷಾ ಕಾರ್ಯದಲ್ಲಿ ತೊಡಗಿದಾಗ ಕೈಕೊಂಡ ಒಂದು ಪ್ರವಾಸದ ಕಥನ ಮೂಡಲಗಿಯಿಂದ ಮುಗಳಖೋಡ 18 ರಿಂದ 20 ಕೀ ಮೀ. ದಲ್ಲಿ ಇರುವ ಒಂದು ಪವಿತ್ರ ಕ್ಷೇತ್ರ .ಈ ಕ್ಷೇತ್ರಕ್ಕೆ ಸುಮಾರು 28 ವರ್ಷಗಳ ಹಿಂದೆ ಬೇಟಿ ನೀಡಿದ ನೆನಪು ಆದು ಅಸ್ಪಷ್ಟ ವಾಗಿತ್ತು ಆದರೆ ಅದು ಮತ್ತೊಮ್ಮೆ ಸ್ಪಷ್ಟವಾಗಲು ಕಾಲ ಕೂಡಿ ಬಂದಿತ್ತು . ಅಂದು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಹೊಳೆಚ್ಚಿ ಎನ್ನುವವರು ತಮ್ಮ ಮಾವನವರಾದ ಸೋಮನಗೌಡರ ಎಂಬುವರ ಜೋತೆ ಈ ಕ್ಷೇತ್ರಕ್ಕೆ ಹೊರಟು ನಿಂತಾಗ ಅದೆ ತಾನೆ ಪ್ರೌಢ ಶಾಲಾ ಶಿಕ್ಷಕನಾಗಿ ಸೇವೆಗೆ ಸೇರಿದ ನನ್ನನ್ನೂ ಕರೆದುಕೊಂಡು ಹೋಗಲು ತಯಾರಿಯಾದರು ಕಾರಣ ಇಷ್ಟೇ ಅವರ ನನ್ನ ಸ್ವಭಾವ ತುಂಬಾ ಹತ್ತಿರ ಇದ್ದದ್ದು, ಅಂದರೆ ಗರೀಬ (ಆವಾಗ ನಾನು ಹೈಪಾಯ ಇರಲಿಲ್ಲ) ಅಂತಾರಲ್ಲ 
ಆ ತರಹ. ಇನ್ನೂ ಅಷ್ಟೊಂದು ಮುಂದುವರೆಯದ ಅಂದರೆ ಪವಾಡ ಮತ್ತು ಪಾವಿತ್ರ್ಯಕ್ಕೆ ಹೆಸರಾಗಿದ್ದ ಕಾಲಘಟ್ಟದಲ್ಲಿ ಈ ಕ್ಷೇತ್ರಕ್ಕೆ ಬಂದು ಹೋಗದ್ದೆವು ಈಗ ಅದು ಅಭಿವೃದ್ಧಿ ಹೊಂದಿದ ಮಠ. ಹೀಗಾಗಿ ಅಂದಿನ ಚಿತ್ರ ನನಗೆ ಸರಿಯಾಗಿ ನೆನಪಿರಲಿಲ್ಲ.ಇವತ್ತು ಆಧನಿಕ ಸ್ಪರ್ಶ ಪಡೆದ ಮುಗಳಖೋಡ ಮಠ ನೋಡುವ ಭಾಗ್ಯ ಬಂದದ್ದು ನಮ್ಮದೆ ಪರೀಕ್ಷಾ ಕೇಂದ್ರದಲ್ಲಿ ಸಹ ಮುಖ್ಯ ಅಧೀಕ್ಷಕರಾಗಿ ಕರ್ತವ್ಯವ್ಯಕ್ಕಾಗಿ ಆಗಮಿಸಿದ ವಿಠ್ಠಲ ಜೋಡಟ್ಟಿಯವರಿಂದ ಆತ ವಯಸ್ಸಿನಲ್ಲಿ ಚಕ್ಕವನಾದರೂ  ಸಾಧನೆಯಲ್ಲಿ ಶಿಖರವನ್ನು ತಲುಪಿದಾತ ಅಂದರೆ ಕನ್ನಡ ವಿಷಯದಲ್ಲಿ ಗೋಲ್ಡ್ ಮೆಡಲ್ ಪಡೆದು ಪದವಿ ಪೂರ್ವಶಿಕ್ಷಣ ಇಲಾಖೆಯಲ್ಲಿ ನೆಡೆದ ನೆಮಕಾತಿಯಲ್ಲಿ ಪ್ರಥಮ ಸ್ಥಾನ ಪಡೆದವರು ಅದಕ್ಕಾಗಿ ಅಂದಿನ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪರವರಿಂದ  ನೇಮಕಾತಿ ಆದೇಶ ಪಡೆದವರು,ಬರಿ ಬಂಗಾರದ ಪದಕ ಪಡೆದವರು ಮಾತ್ರ ಅಲ್ಲ ನಿಜವಾಗಿಯೂ ಅವರು ಬಂಗಾರನೆ. ಪರೀಕ್ಷಾ ಕಾರ್ಯ ಮುಗಿದ ಮೇಲೆ  ಮುಖ್ಯ ಅಧೀಕ್ಷಕರ ಮುಂದೆ  ಗೌಡರ ಸರ್ ರನ್ನು  ನಾನು ಮುಗಳಖೋಡಕ್ಕೆ  ಕರಕೊಂಡು ಹೋಗ್ತೀನಿ ಎಂದರು. ನನಗೂ ಹೊಸ ಪ್ರದೇಶ, ಐತಿಹಾಸಿಕ ಸ್ಥಳಗಳನ್ನು ನೋಡುವುದೆಂದರೆ ಎಲ್ಲೆಲ್ಲಿದ ಖುಷಿ .ಮನೆ ಕಟ್ಟುವ ಸಂದರ್ಭದಲ್ಲಿಯೇ ಒಂದು ವಾರ ಮಹಾರಾಷ್ಟ್ರ ದ ತುಂಬಾ ಪ್ರವಾಸ ಮಾಡಿದವನು ನಾನು  ಬಿಡುವಿನ ವೇಳೆಯಲ್ಲಿ ಪವಿತ್ರ ಸ್ಥಳ ನೋಡುವದೆಂದರೆ ಬಿಡುವುದೇ. ಲಗುಬಗೆಯಿಂದ ತಯಾರಿಯಾದೆ ಅಭಿವೃದ್ಧಿಗೊಂಡ ಮುಗಳಖೋಡ ಮಠದ ಕಡೆ ವಿಠ್ಠಲ ಜೋಡಟ್ಟಿಯವರ ಬೈಕು ಓಡಲಾರಂಭಿಸಿತು. ಹಸಿರನ್ನೆ ಹೊದ್ದು ನಿಂತ ಭೂತಾಯಿ ಎಡಬಲಗಳಲ್ಲಿ ಹಡದಿ ಹಾಸಿ ಸ್ವಾಗತಸಿದಂತೆ ಭಾಸವಾಗುತ್ತಿತ್ತು . ಬರದನಾಡಿನಲ್ಲಿ ಬೆಳೆದು ಹಸಿರು ಕಾಣದೆ ಬೆಂಗಾಡನಲ್ಲಿ ಬೆಳೆದ ಕಳ್ಳಿ ಕುರುಚಲುಗಳೆ ಸರ್ವಸ್ವವೆಂದ ಹತಭಾಗ್ಯನಿಗೆ ಓಯಾಸಿಸ್ ಬದಿಯಲ್ಲಿ ಬಂದು  ಬಿಟ್ಟಂತಾಗಿತ್ತು. ಕಬ್ಬು ಗೋವಿನ ಜೋಳದ ಬೆಳೆ ನೋಡಿ ಕ್ಷಣ ಉಬ್ಬಿ ಹೋದೆ ಘಟಪ್ರಭೆಯ ಎಡದಂಡೆ ಕಾಲುವೆ ಘಟಸರ್ಪ ಬುಸುಗುಟ್ಟಿ ಸಾಗುವ ರೀತಿಯಲ್ಲಿ ಲೀಲಾಜಾಲವಾಗಿ ಹರಿಯುತ್ತಿತ್ತು . ನನ್ನೂರಿನಲ್ಲಿಯೂ ಇಂಥಹ ಒಂದು ಕಾಲುವೆ ಹರಿದಿದ್ದರೆ ?  ಖಂಡಿತವಾಗಿಯೂ ಹರಿಯುತ್ತಿತ್ತೇನೋ ನಾಲ್ಕನೇ ಪಂಚವಾರ್ಷಿಕ ಯೋಜನೆಯ ಕನಸು ನನಸಾಗಿದ್ದರೆ ಬದಾಮಿಯ ತಾಲೂಕು ನಂದನವನವಾಗಿ ಬದಲಾಗಬೇಕಾಗಿತ್ತು ಆದರೆ ಆದದ್ದೆ ಬೇರೆ .ಅದು ಕುಂಟುತ್ತಾ ಸಾಗಿ ಕಾರ್ಯಗತಗೊಳ್ಳಲು ಇನ್ನೂ ಎಷ್ಟು ಪಂಚವಾರ್ಷಿಕ ಯೋಜನೆ ಬೇಕೇನೊ ? ಇರಲಿ ಕ್ಷಣ ಯೋಚಿಸುತ್ತಿರುವಾಗಲೆ ವಿಠ್ಠಲಜೋಡಟ್ಟಿಯವರ ಬೈಕು ಮುಗಳಖೋಡ ಎಲ್ಲಾಲಿಂಗನ ಅಂಗಳಕ್ಕೆ ಬಂದು ನಿಂತಿತ್ತು.ಕ್ಷಣ ವಿಚಲಿತನಾದರೂ ಸವಾರಿಸಿಕಂಡು ಮಠದ ದ್ವಾರಬಾಗಿಲ ಕಡೆ ಕಣ್ಣು ಹಾಯಿಸಿದರೆ  ಆಹಾ !.. ಇಲ್ಲಿಯವರೆಗೆ ನಾನು ನೋಡಿದ ಮಠಗಳಲ್ಲಿ ಕಾಣದ ವೈಭವ ನನ್ನನ್ನು ಮೂಖ ವಿಸ್ಮತನನ್ನಾಗಿ ಮಾಡಿತು. ಏಕೆಂದರೆ ಇದು ಮಠದ ದ್ವಾರ ಬಾಗಿಲೊ ಅಥವಾ ಅರಮನೆಯ ದ್ವಾರ ಬಾಗಲೋ ಕ್ಷಣ ಗೊಂದಲಕ್ಕೊಳಗಾಗಿ ಕೇಳಿದೆ  "ಏನಿದು ಮಠದ ವೈಭವ ಅರಮನೆಯ ದ್ವಾರ ಬಾಗಿಲು ನಾಚಿಸುತ್ತದೆಯಲ್ಲಾ ಎಂದೆ " ನಗುತ್ತಾ ಹೇಳಿದರು ಸರ್ ಈ ಭಾಗದ ಅತ್ಯಂತ ಶ್ರೀಮಂತ ಮಠ. ಅಲ್ಲದೇ ಆ ಮಠದಲ್ಲಿ ನಡೆದ ಕಾರ್ಯ ಕ್ರಮಗಳ ಪಟ್ಟಿಯನ್ನೇ ನೀಡಿದರು ನನ್ನ ಕಿವಿಗಳನ್ನು ನನಗೆ ನಂಬಲಾಗಲಿಲ್ಲ ಏಕೆಂದರೆ ಅದು ಕಬ್ಬು ಬೆಳೆಯುವ ಶ್ರೀಮಂತರ ನಾಡಲ್ಲವೆ ! ಸಾವಿರ ರೂ ಪಟ್ಟಿ ನೀಡಲು  ಹತ್ತು ಬಾರಿ ವಿಚಾರ ಮಾಡುವ ಬರದ ನಾಡಿನ ನಮಗೆ ಆ ಕಾಲುವೆ ನಾಡಿನ ವೈಭವ ಹುಬ್ಬೇರುವಂತೆ ಮಾಡುವದರಲ್ಲಿ ಆಶ್ಚರ್ಯವಲ್ಲ ಬಿಡಿ .ಆಧುನಿಕ ಕಾಲದಲ್ಲಿ ಕಲ್ಲುಗಳಲ್ಲಿ ಕಲೆ ಅರಳಿಸಿದ ಸ್ಥಳ ಇದಕ್ಕಿಂತ ಬೇರೆ ಎಲ್ಲಿಯಾದರು ಇದೆಯೊ ಇಲ್ವೊ ನನಗೆ ಗೊತ್ತಿಲ್ಲ. ಸಂಪೂರ್ಣವಾಗಿ ಸಿಮೆಂಟ ದಾಸರಾಗಿರುವ ನಮಗೆ ಅದರ ಹಂಗಿಲ್ಲದೆ ಉತ್ತಮ ವೈಭವದ ಕಟ್ಟಡ ಕಟ್ಟಬಹುದು ಎಂದು ತೋರಿಸಿ ಕೊಟ್ಟಿದ್ದೆ ಮುಗಳಖೋಡ ಮಠ ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.ಮಠ ಪ್ರವೇಶದ ನಂತರ ಬಳಲಿದ ಮನಕ್ಕೆ ಭಕ್ತಿಯ ಪರಾಕಾಷ್ಠೆ ತುಂಬಿತು. ಜೋಡಟ್ಟಿಯವರ ಮಠದ ಬಗ್ಗೆ ತಿಳಿಸುತ್ತಾ ನಡೆಯುವ ಕ್ರಮಕ್ಕೆ ನಾನು ಮಗುವಾಗಿದ್ದೆ ಏಕೆಂದರೆ ಅವರು ಕನ್ನಡ ಉಪನ್ಯಾಸಕರಲ್ಲವೆ ? ನೂರಾರು ಕಲ್ಲು ಕಂಬ. ಮೇಲ್ಛಾವಣಿಯೂ ಕಲ್ಲು ಚಪ್ಪಡಿಯೇ ! ಇಲ್ಲಿ ಆರ್ ಸಿ ಸಿ ಗೆ ಜಾಗವಿಲ್ಲ  ಅದರ ಭವ್ಯತೆ ವರ್ಣಿಸಲು ಪದಗಳಿಲ್ಲ. ಇನ್ನೂ ನಾವು ಧ್ಯಾನ ಮಂದಿರ ನೋಡಬೇಕಾಗಿತ್ತು ವೇಳೆ ಮುಗಿದ ಕಾರಣ ಕಾವುಲುಗಾರನ ಅಪ್ಪನೆ ಬಾರವಾದ ಮನಸ್ಸಿನಿಂದ ಆ ಮಂಟಪದಿಂದ ಹೊರಬರಬೇಕಾಯಿತು ಅದು ಉಳಿದದ್ದು ಒಳ್ಳೆಯದೆ ಆಯಿತು ಮತ್ತೊಂದು ಸಾರೆ ಬರುವಂತೆ ಮಾಡು ಯಲ್ಲಾ ಲಿಂಗ ಎಂದು ಮನದಲ್ಲಿ ಗೊಣಗಿದೆ, ಗಂಟೆ 6.30 ತೋರಿಸುತ್ತಿತ್ತು   ವಿಠ್ಠಲ ಜೋಡಟ್ಟಿಯವರ ಕೊಡಸಿದ ಬಿಸಿ ಬಿಸಿ ಭಜಿ ಸವಿದು ಮೂಡಲಗಿ ದಾರಿ ಹಿಡಿದೆ.

Wednesday, March 8, 2023

ವಿದ್ಯಾರ್ಥಿಗಳಿಗೆ ಕಿವಿ ಮಾತುಗಳು

ಆತ್ಮೀಯ ವಿದ್ಯಾರ್ಥಿಗಳೆ, ದ್ವಿತೀಯ ಪಿಯುಸಿ ಪರೀಕ್ಷೆ 2023, ಇದು ಈ ವರ್ಷದ ಒಂದು ಸಹಜ ಚಟುವಟಿಕೆ ಈಗಾಗಲೆ ಎರಡು ಕಿರು ಪರೀಕ್ಷೆ, ಅರ್ಧ ವಾರ್ಷಿಕ ಹಾಗೂ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಎದುರಿಸಿದಂತೆ ಇದೂ ಒಂದು ಪರೀಕ್ಷೆ ಅಷ್ಟೇ. ಅತಿಯಾದ ನಿರೀಕ್ಷೆ ಏನು ಅವಶ್ಯಕತೆ ಇಲ್ಲ ನಿಮ್ಮ ಷ್ಟಕ್ಕೆ ನಿವು ಬರೆದರೆ ಅದು ತನ್ನಷ್ಟಕ್ಕೆ  ತಾನು ಫಲಿತಾಂಶ ನೆರಳಿನಂತೆ ಹಿಂಬಾಲಿಸುತ್ತದೆ ಅದರ ಬಗ್ಗೆ ನಿಮಗೆ ಚಿಂತೆ ಬೇಡ. ಇದು ಜೀವನದ ಅಂತಿಮವೂ ಅಲ್ಲ.ಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸುವದೊಂದೆ ನಿಮ್ಮ ಕರ್ತವ್ಯ ಅಲ್ಲಿರುವ ಅಧಿಕಾರಿಗಳು ಶಿಕ್ಷಕರು ತಮ್ಮ ತಮ್ಮ ಕೆಲಸ ತಾವು ನಿರ್ವಹಿಸುತ್ತಿರುತ್ತಾರೆ ನೀವು ನಿಮ್ಮ ಕೆಲಸ ನಿರ್ವಹಿಸುತ್ತಿರುತ್ತೀರಿ ಅಷ್ಟೇ ಮನೆಯಿಂದ ಬೇಗ ಬಿಡಿ ಹತ್ತು ನಿಮಿಷ ಬೇಗನೆ ಹೋಗಿ ಕುಳತರೆ ನಿಮ್ಮದೇನು ನಷ್ಟವಾಗದು ಆವಾಗ ಒಂದು ಕಡೆ ಕುಳಿತು ಆ ದಿನದ ವಿಷಯದ ಕುರಿತು ಮೆಲಕು ಹಾಕಬಹುದು. ಓದುವ ಅವಶ್ಯಕತೆ ಇಲ್ಲ ಇಗಾಗಲೆ ಸಾಕಷ್ಟು ಓದಿದ್ದೀರಿ ಗಡಿಬಿಡಿಯಲ್ಲಿ ಓದಿದ್ದು ತಲೆಯಲ್ಲಿ ಉಳಿಯಲಾರದು ನಿರಮ್ಮಳವಾಗಿ, ಆದರೆ ಲೇಟಾಗಿ ಮನೆ ಬಿಟ್ಟು ಪರೀಕ್ಷೆ ಅವಧಿ ಸಮೀಪಿಸಿತು ಎಂದು ಉದ್ವೇಗಕ್ಕೆ ಒಳಗಾದರೆ ಖಂಡಿತವಾಗಿಯೂ ಆ ಹಿಂಸೆ ನಮ್ಮ ವೈರಿಗೂ ಬೇಡ ,ನೀವು ಮೌಲ್ಯಮಾಪಕರು ನೆಚ್ಚುವಂತೆ ಬರೆಯಲು ಆಗದೆ ಇರಬಹುದು ಸ್ನೇಹಿತರೆ, ಸಮಾನ ಮನಸ್ಕ ಸ್ನೇಹಿತರು ಇದ್ದರೆ ಬೇಕಾದರೆ ಪ್ರಮಖ ಪರಕಲ್ಪನೆಗಳನ್ನು ಚರ್ಚಿಸಬಹುದು ಆದರೆ ಅದು ಅತಿಯಾಗಿ ಬೇಡ ಸಾಧ್ಯವಾದರೆ ಮನಸ್ಸು ಪ್ರಶಸ್ತವಾಗಿರಲಿ. ಆರೋಗ್ಯದ ಕಡೆ ಗಮನವಿರಲಿ ಅತಿಯಾದ ಊಟವೂ ಬೇಡ ಉಪವಾಸವೂ ಬೇಡ ಉದರಕ್ಕೆ ತೊಂದರೆಯಾದರೆ ಅದು ಮದುಳಿನ ಮೇಲೆ ಸವಾರಿ ಮಾಡಬಹುದು ನೀವು ನಿಂತಿರುವುದು ಅದೆ ಮೆದುಳಿನ ಮೇಲೆ ಅಲ್ಲವೆ ? ಹಾಗಾಗಿ ಆರೋಗ್ಯದ ಕಡೆ ಗಮನವಿರಲಿ ಸಾಧ್ಯವಾದರೆ ನೀವು ನಂಬಿರುವ ದೇವರನ್ನು ಕ್ಷಣ ನೆನೆದು, ತಂದೆ ತಾಯಿಯ ಆಶೀರ್ವಾದ ಪಡೆದು ಸಾಗಿ ಸಾಧನೆ ನಿಮ್ಮ ಹಿಂದೆ ಬರದೆ ಹೋದರೆ ಹೇಳಿ. ಖಂಡಿತವಾಗಿಯೂ ಎಲ್ಲರಿಗೂ ಯಶಸ್ಸು ಸಿಗುತ್ತದೆ.
ದ್ವಿತೀಯ ಪಿಯುಸಿ ಬರೆಯಲು ಸಜ್ಜಾಗಿರುವ ನನ್ನಲ್ಲೆ ವಿದ್ಯಾರ್ಥಿಗಳಿಗೆ ಶುಭವಾಗಲಿ.👍🏻👍🏻🙏🙏

Tuesday, March 7, 2023

* ಮಹಿಳೆಯೇ ಸ್ವರ್ಗ, ಮೂಲದಲ್ಲಿ *

ನಾಳೆ ಮಾರ್ಚ 8 "ಮಹಿಳಾ ದಿನಾಚರಣೆ"
ವಿಶ್ವದ ಎಲ್ಲಾ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

* ಮಹಿಳೆಯೇ ಸ್ವರ್ಗ, ಮೂಲದಲ್ಲಿ *

ನೀನೆನ್ನ ಪಥದ ರಥದ ಗಾಲಿ। 
ಜೊತೆಯಾಗಿ ನಡೆದು  
ಕಥೆಯಾದೆ ನೀ ಜಗಕೆಲ್ಲ|। 

ನೀನೆನ್ನ ಕಳಸ, ದೇವರ ಮನಸು।
ಭಾವದಲ್ಲಿ ಬೆರೆತ ಬೆಳಕು
ಬೆಳಗಿದೆ ನೀ ಜಗವೆಲ್ಲ ।।

ನಿನ್ನಂತರಂಗ ಭಾವತರಂಗ।
ಹಿತವಾಗಿ ಬಾಳಲ್ಲಿ ಸುಳಿದು
ತಂಪೆರೆದೆ ನೀ ಮನಕೆಲ್ಲ।।

ನೀನೆನ್ನ ತಾಯಿ ,ತಂಗಿ, ಮಗಳು।
ಮತ್ತೆ ಮಡದಿಯಾಗಿ 
ಕಳೆದೆ ಕತ್ತಲೆ ನೀ ಬದುಕಿನಲ್ಲಿ।।

ನಿನ್ನಿಷ್ಟವ ತುಳಿದು, ಕಷ್ಟದಲ್ಲಿ ಕರಗಿ।
ಉರಿವ ಕಾಷ್ಠವಾದೆ   
ಅಹಾರ ನೀ ,ಅಡುಗೆಯಲ್ಲಿ॥

ನಿನ್ನ ಬಣ್ಣಿಸಲೆನಗೆ ಪದಗಳಿಲ್ಲ ।
ಹೊಣ್ಣು, ಮಣ್ಣು, ಮನುಕುಲದ ಕಣ್ಣು, 
ಮಹಿಳೆಯೇ ಸ್ವರ್ಗ, ಮೂಲದಲ್ಲಿ ॥

Sunday, March 5, 2023

* ದುಂಡು ಮಲ್ಲಿಗೆ *

ಮುಗಿಲಿಗೆ ಮುತ್ತಿಕ್ಕಿ ಮಾಳಿಗೆಯ ಸುತ್ತಿ 
ಕತ್ತು ಎತ್ತಿದೆ ನೀ ಹತ್ತೂರ ರಾಣಿ ! 
ಎತ್ತ ತಿರುಗಿಸಿದರೆ ಏನು ? 
ಸುತ್ತಲೂ ಸೂಸುತಿರುವೆ ಸುವಾಸನೆ .।
ನೀ ಸದಾ ಸೆಳೆಯುತಿರುವೆ 
ಸೌಂದರ್ಯ ಆಸ್ವಾದಿಸುವ ವದನ।
ಸೋತು ಸೆರೆಯಾದೆ ಸ್ವೇತವರ್ಣಿ।
ಪಕಳೆಗಳ ಪೇರಿಸಿ ನಾಸಿಕಕೆ ವೈಯಾರಿ 
ಕರೆಯುವರು ಹೆಸರು ದುಂಡು ಮಲ್ಲಿಗೆ.॥
ಮುರಿದು ಮುಡಿಗಿಟ್ಟು ಮೆರೆಯಲು 
ನಾನಲ್ಲ ಬಾಲೆ, ಆದರೂ ಬರುವೆ ನೀನಿದ್ದಲ್ಲಿಗೆ !
ಹೆರಳಿದ್ದರೆ ತಾನೆ ಹರದೀತು ಬೆರಳು ?
ಕೊರಳಿಗಾದರೂ ಆಗಲಿ ಹೆರಳಿಗಾದರೂ ಆಗಲಿ,
ನಾಸಿಕಕೆ ನಶೆಯೇರಿಸಿ ಮಾಡಿದೆ ಮರಳು  
ಎನ್ನಂಗಳದ ಗೋಮಾತೆಯ ಬಹಿರ್ದೆಶೆಯ ಬಂಗಾರವನುಂಡು ಮೇಲೆ ಹೆಣೆದೆ ಚಪ್ಪರದ ದಂಡು. ।
ಪುರಸಭೆಯ ನೀರು ಅರ್ಧಾಂಗಿಯ ಕಾರುಬಾರು.        
ಬೆಳೆದು ನಿಂತಿರುವೆ ನೀ ನೀರೆಯರ ನೆಚ್ಚಿನ ಬೀರು  ।
ನೋಡಿ ಅಮಲೇರಿತು ಇಂದು ರವಿವಾರ !
ಎತ್ತಿ ಎಣಿಸಿ ಸುತ್ತಿ ಇಟ್ಟವರಾರು 
ಹತ್ತಿಯ ತೊಳೆ ನೀನು ।
ನಾನಲ್ಲ ನಾರಿಯರೆ ಬೇಕಂತಿವಳಿಗೆ ನಗೆ ಬೀರಲು 
ಏಕೆಂದರೆ ನನಗಿಲ್ಲ ಹುಲ್ಲುಗಾವುಲಿನಂತ 
ತಲೆಗೂದಲು,। ನಯನವೆ ಸಾಕೆನಗೆ 
ನಿನ್ನಂದ ನೋಡಿ ಸ್ವರ್ಗದಲ್ಲಿ ತೇಲಾಡಲು ।
ಮಾಳಿಗೆಯ ತುಂಬಾ ಓಲಾಡಲು.॥

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...