"ನಾಡ ಹುಲಿಯ ಕರ್ಮ ಭೂಮಿಯ ಕಡೆ ನಮ್ಮ ನಡಿಗೆ "
ಪವಿತ್ರ ಭೂಮಿ ನಂದಘಡ ನೋಡುವ ಆಸೆ ಆದರೆ ಕೈಗೂಡಿರಲಿಲ್ಲ, ಯಾಕೆಂದರೆ ಕಾಲ ಕೂಡಿ ಬಂದಿರಲಿಲ್ಲ, ಸಮಯಕ್ಕಾಗಿ ಕಾಯಬೇಕಷ್ಟೆ ಭಗವಂತ ಯಾವದೋ ರೂಪದಲ್ಲಿ ನಮಗಾಗಿ ಅದೃಷ್ಟ ಕಳಿಹಿಸಿಕೊಡುತ್ತಾnuನೆ.ಈ ಮೊದಲು ನಮಗೆ ಪರಿಚಯವೂ ಇಲ್ಲ, ಅವರಿಗಾಗಿ ನಾನು ಏನು ಸಹಾಯ ಮಾಡಿದ್ದು ಇಲ್ಲ, ಇದರೆ ಪರೀಕ್ಷಾ ಕಾರ್ಯದಲ್ಲಿ ಉಪಮುಖ್ಯಅಧೀಕ್ಷಕರಾಗಿ ಸೇರಿದ್ದೊಂದೆ, ಪರೀಚಯ ಗಾಢ ಸ್ನೇಹವಾಗಿ ಪರಿವರ್ತನೆಯಾಯಿತು .ಗೋಲ್ಡ ಮೆಡಲ್ ಪಡೆದು ಆಯ್ಕೆ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದು ಮುಖ್ಯಮಂತ್ರಿಗಳಿಂದ ಆದೇಶ ಪಡೆಯುವುದು ಅಂದರೆ ಅದು ಸಾಮಾನ್ಯವಾ ? ಅದನ್ನು ಸಾಧಸಿದ ಸಾಧಕ, ಅವರ ಮುಂದೆ ಈ ವಿಷಯ ಪ್ರಸ್ತಾಪ ಮಾಡಿದೆ ಅಷ್ಟೇ " ಸರ್ ಗಪ್ಪರಿಲಾ (ಹಾರುಗೆರೆ ಭಾಷೆಯಲ್ಲಿ) ಈ ಟ್ರಿಪ್ ನಮ್ಮಕುಟುಂಬದ ಜೊತೆ ಮಾಡಿ ಬಿಡೋಣ ಅನ್ನಬೇಕೆ ಆವರು ಬೇರು ಯಾರು ಅಲ್ಲ ವಿಠ್ಠಲ ಜೋಡಟ್ಟಿಯವರು. ಪ್ರವಾಸ ಹಾರುಗೆರೆಯಿಂದ ಮೂಡಲಗಿ ಮಾರ್ಗವಾಗಿ ಹಂಡಿಬಡಗನಾಥ ಮಠದವರೆಗೆ... ಆಹಾ ಆದು ಪ್ರವಾಸವಲ್ಲ ಬದಲಿಗೆ ಸಾಧಕರ ಸಿದ್ಧಿಯ ಪವಿತ್ರ ನೆಲದ ಸ್ಪರ್ಶಕ್ಕಾಗಿ ನೆಡೆದ ಯಾತ್ರೆ. ಮುಂಜಾನೆ ಮೂಡಲಗಿ ಮೂಲಕ ಸಾಗಿದ ನಮ್ಮ ಕಾರು ಗೋಕಾಕ್ ಮಾರ್ಗಹಿಡಿದು ಪುಣ್ಯಭೂಮಿಯ ಕಡೆ ನಡೆಯಿತು. ಘಟಪ್ರಭೆಯು ಶೃಷ್ಠಿಸಿದ ಸ್ವರ್ಗದ ತುನುಕೊಂದು ಧರೆಗಿಳಿದು ಸಸ್ಯಶಾಮಲೆಯಾಗಿ ಹರಡಿದಂತೆ, ಎಡಬಲಕೆ ಕಬ್ಬು ಉಬ್ಬಿ ಹಿಮ್ಮುಖವಾಗಿ ಓಡುವ ತರುಣಿಯಂತೆ ಭಾಸವಾಗುತ್ತಿತ್ತು. ಇನ್ನೊಂದು ಕಡೆ ಬಸವ ಚಿಂತನದ ವಚನಗಾಯನ. ...ಹಾಡಿದ್ದು ಚಿಲಿಪಿಲಿ ವೇದಶ್ರೀ, ಶೃಷ್ಠಿ,,ಶ್ರಾವಣಿ, ವಿಶ್ವಾತ್ಮನ ರಾಗಲಹರಿ ,ಕಾಲ್ಯಾಣದ ಕಳೆಗಟ್ಟಿತ್ತು. ಇತ್ತಕಡೆ ಕ್ರಮಿಸಬೇಕಾದ ದಾರಿ ಕಾರಿನ ಗಾಲಿಗೆ ಬಹುಬೇಗನೆ ಆಹುತಿಯಾಗಿತ್ತು ಬಂದಿಳಿದದ್ದು ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ರಾಯಣ್ಣನ ಜನ್ಮಭೂಮಿಗೆ. ಗೆಳೆಯ ವಿಠ್ಠಲ ಹೇಳಿದ್ದು ರಾಕ್ ಗಾರ್ಡನ್, ಬಯಸಿದ್ದು ಅದೆ ,ಆದರೆ ನಾವು ಹೋಗಿದ್ದು ಕಲ್ಯಾಣ ಮಂಟಪ. ಸ್ಥಳಿಯರಿಂದ ಮಾಹಿತಿ ಪಡೆದು ರಾಕ್ ಗಾರ್ಡನ್ ಬಾಗಿಲು ಬಳಿ ನಿಂತರೆ ಕೆಲಸ ಚಾಲ್ತಿಯಲ್ಲಿದ್ದ ಕಾರಣ ಕಾವುಲುಗಾರ ಒಳ ಬಿಡಲು ನಿರಾಕರಣೆ ಮಾಡಿದ. ನಿರಾಶೆಯಾದರೂ ತೋರದೆ ಬಂದ ಕಾರ್ಯ ನೆರವೇರಿಸಲು ಆತನ ಮುಂದೆ ಮಾಡಿದ ಹಲವು ಸಬೂಬಗಳು ಗುಡ್ಡಕ್ಕೆ ಕಲ್ಲು ಹೊತ್ತಂತಾಗಿತ್ತು ಆದರೆ ಆತನ ಕರ್ತವ್ಯ ಪ್ರಜ್ಞೆಗೆ ಮನದಲ್ಲಿ ನೂರು ಸಲಾಮ್ ಹೇಳಿ ಕಿತ್ತೂರು ಕಡೆ ಮುಖ ಮಾಡಿದೆವು ಈ ನಾಡಿನ ನೆಲದ ಗುಣಧರ್ಮವೆ ಹೀಗೆ ಇರಬೇಕು ,ಎಷ್ಟೆ ಆದರೂ ಅದು ರಾಯಣ್ಣ ಜನಿಸಿದ ಪವಿತ್ರ ಭೂಮಿಯಲ್ಲವೆ ! ಚಾಲಕ ಶಿವಣ್ಣನ ಗಾಡಿ ಗಾಳಿಯನ್ನು ಸೀಳಿ ಮುನ್ನುಗ್ಗುತ್ತಿದ್ದರೆ ರಾಯಣ್ಣನ ನಿಷ್ಠೆ , ದೇಶಭಕ್ತಿಯ ಗುಣಗಳು ನನ್ನ ಮನಪಟಲದಲ್ಲಿ ಇತಿಹಾಸದ ವೀರರ ಸಾಹಸದ ಕಿಚ್ಚನ್ನು ಬಡಿದೆಬ್ಬಿಸುತ್ತಿದ್ದವು ಅದಕ್ಕೆ ಅಲ್ಲವೆ ನಾವು ಇತಿಹಾಸ ಓದುವುದು.ಇತಿಹಾಸಕಾರ ಕಾರ್ಲೈಲ ಒಂದು ಮಾತು ಹೀಗೆ ಹೇಳುತ್ತಾನೆ "ಶ್ರೇಷ್ಠ ವ್ಯಕ್ತಿತ್ವನ್ನು ಅಭ್ಯಾಸ ಮಾಡುವುದೆ ಇತಿಹಾಸವೆಂದು".ಬಹುಶಃ ಸಂಗೊಳ್ಳಿ ರಾಯಣ್ಣನ ವ್ಯಕ್ತಿತ್ವ ನೋಡಿದರೆ ಅದು ಅಪ್ಪಟ ಸತ್ಯ ಎಂದೆಣಿಸದಿರದು. ಮೈಸೂರಿನಲ್ಲಿ ಟಿಪ್ಪು ಸಾ. ಶ.1799 ರಲ್ಲಿ ಮರಣ ಹೊಂದಿದ ನಂತರ ದೊಂಡಿಯಾ ವಾಘ,ಹಲಗಲಿ ಬೇಡರು, ಕೊಡಗಿನಲ್ಲಿ ಸ್ವಾತಂತ್ರ್ಯದ ಕಹಳೆ ಮೊಳಗುತಿತ್ತು ಕನ್ನಡಿಗರ ಗುಣವೆ ಅದು, ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857 ರಲ್ಲಿ ಪ್ರಾರಂಭವಾಯಿತು ಎಂದು ನಾವು ಓದುತ್ತಿದ್ದರೂ ಅದು ಕನ್ನಡಿಗರ ರಕ್ತದಲ್ಲಿ ಅದಕ್ಕೂ ಮೊದಲೇ ಮೊಳಕೆಯೊಡದಿತ್ತು ಕೊಂಕಣ ತೀರ ಮತ್ತು ಮಲಬಾರ್ ತೀರದಲ್ಲಿ ಆಗಲೆ ಹಿಡಿತ ಸಾಧಿಸಿ ಮೈಸೂರನ ಮೇಲೆ ವಿಕ್ರಮ ಸಾಧಿಸಿದ ಬ್ರಿಟಿಷರಿಗೆ ಬಯಲು ನಾಡಿನ ಕಡೆಗೆ ಆಕ್ರಮಣದ ದಾರಿ ಸುಗಮ ಮಾಡಿಕೊಳ್ಳಲು ಕಿತ್ತೂರಿನ ಮೇಲೆ ವಕ್ರ ದೃಷ್ಠಿ ಹರಿಸಿದರು. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಹೇರಿದರು, ವಾಸ್ತವವಾಗಿ ಲಾರ್ಡ್ ಡಾಲಹೌಸಿ ದತ್ತು ಮಕ್ಕಳಿಗೆ ಹಕ್ಕಿಲ್ಲ (Doctrine of lapse) ನೀತಿಯನ್ನು ಜಾರಿಗೆ ತಂದದ್ದು 1848 ರ ನಂತರ .ಅದರೆ ಅದು ಕನ್ನಡ ನೆಲ ಕಿತ್ತೂರಿಗೆ ಘಾಸಿಗೂಳಿಸಿದ್ದು 1824 ರ ಸುಮಾರಿಗೆ, ಅದಕ್ಕೆ ಕೆಚ್ಚೆದೆಯ ಕನ್ನಡದ ಪುತ್ರಿ ರಾಣಿ ಚೆನ್ನಮ್ಮಮತ್ತು ಅವಳ ಬಲಗೈಬಂಟ ಸಂಗೊಳ್ಳಿ ರಾಯಣ್ಣರಿಂದ ಪ್ರಬಲ ಪ್ರತಿರೋದವಾಯಿತು. ಆರಂಭದಲ್ಲಿ ರಾಣಿ ಚೆನ್ನಮ್ಮ , ರಾಯಣ್ಣ ,ಅಮಟೂರ ಬಾಳಪ್ಪ ಬ್ರಿಟಿಷರನ್ನು ಹೆಡೆಮುರಿ ಕಟ್ಟಿದರು. ಆದರೆ ಮೋಸದ ದಾರಿ ಹಿಡಿದು ಕಿತ್ತೂರು ವಶಪಡಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾದರು ಈ ಹೋರಾಟ ಮುಂದುವರಿಸಿದವರೆ ಸಂಗೊಳ್ಳಿರಾಯಣ್ಣ. 17 ನೇ ಶತಮಾನದಲ್ಲಿ ಶಿವಾಜಿ ಮೊಗಲರಿಗೆ ಹಾಗೂ ಆದಿಲ್ ಷಾಹಿಗಳಿಗೆ ಗೆರಿಲ್ಲಾ ಯುದ್ಧ ತಂತ್ರದ ಮೂಲಕ ಚಳ್ಳೆ ಹಣ್ಣು ತಿನ್ನಿಸಿದರೆ 19 ನೇ ಶತಮಾನದಲ್ಲಿ ಬ್ರಿಟಿಷರಿಗೆ ಸಂಗೊಳ್ಳಿ ರಾಯಣ್ಣ ಚೆಳ್ಳೆ ಹಣ್ಣು ತಿನ್ನಿಸಿದ್ದು ಈಗ ಇತಿಹಾಸ.
ಕಾರು ಕಿತ್ತೂರು ತಲುಪಿದಾಗ ಹಿಂದೊಮ್ಮೆ ಗತವೈಭವದಿಂದ ಮೆರೆದ ಅರಮನೆ ಈಗ ಕಾಲನ ಹೊಡೆತಕ್ಕೆ ಸಿಕ್ಕಿ ಮಾಂಸವಳಿದ
ಅಸ್ತಿಪಂಜರದಂತೆ ಬಿದ್ದು ತನ್ನ ಅಸಾಹಯಕ ಕಥೆ ಹೇಳುತ್ತ್ತಿತ್ತು.ಇದೆ ಏನು ಅಂದೊಮ್ಮೆ ಬ್ರಿಟಿಷರ ದಾಸ್ಯಕ್ಕೆ ಸಿಡಿದೆದ್ದು ಇತಿಹಾಸವಾದ ತಾಯಿ ಚೆನ್ನಮ್ಮಾಜಿ ಮತ್ತು ಬ್ರಿಟಿಷರಿಗೆ ಸಿಂಹಸ್ವಪ್ನವಾದ ಸಂಗೊಳ್ಳಿ ರಾಯಣ್ಣನ ಕರ್ಮ ಭೂಮಿ ಎಂದು ಮನಸ್ಸಿನಲ್ಲಿ ಗೌರವ ಅರ್ಪಿಸಿ ಸ್ಮಾರಕಗಳ ಮುಂದೆ ಕ್ಯಾಮರಾಕ್ಕೆ ಮುಖ ಅರ್ಪಿಸಿ ಸಾಹಸ ಸಾರುವ ಕಥೆಗಾರನಾದೆ .ವಿಠ್ಠಲ ಜೋಡಟ್ಟಿಯವರ ಚಿಲಿಪಿಲಿ ಬಳಗ ಜೇನು ಹುಳದಂತೆ ಹಾಳು ಬಿದ್ದ ಅರಮನೆಯಲ್ಲಿಯೂ ದೃವ ನಕ್ಷತ್ರ ವೀಕ್ಷಣಾ ಗೋಪುರ, ಸ್ನಾನಗೃಹ,ಅಡುಗೆಯ ಮನೆ,ಸಭಾಭವನ,ವಸ್ತುಸಂಗ್ರಹಾಲಯ ತುಂಬಾ ಓಡಾಡಿ ಐತಿಹಾಸಿಕ ಮಕರಂದ ಹೀರಿತು.ನಂತರ ಬಿಸ್ಕತ್ ಚಾಕಲೇಟ್ ಆಶ್ರಯ ಪಡೆಯಿತು .ನಮಗಾಗಿ ಕಾದಿದ್ದ ಚಾಲಕ ಶಿವಣ್ಣನ ಕಾರುಕುದುರೆ ನಂದಘಡ ದಾರಿಗೆ ಪೇರಿ ಹೊರಟಿತು. ಉದರ ರಾಯ ಕೇಳಬೇಕಲ್ಲ ! ಬೀಡ ದ ಬಸವೇಶ್ವರ ಕಾನಾವಳಿಯ ಬಿಸಿ ಬಿಸಿ ಜೋಳದ ರೊಟ್ಟಿ ಸವಿದು ನಂದಘಡ ತಲುಪಿದೆವು.ಸಹ್ಯಾದ್ರಿ ತಪ್ಪಲಿನ ಹಸಿರು ಮರಗಳು ತಮ್ಮ ಕಳೆ ಕಳದುಕೊಂಡರೂ ವೀರ ಸಾಹಸಿಯ ರಕ್ತತರ್ಪಣದ ಕಥೆ ಹೇಳಲು ತವಕಿಸುತ್ತಿದ್ದವು. ಸಾಮ್ರಾಜ್ಯಷಾಹಿಯ ಘೋರಪಾತಕವು ಆಲದಮರದ ಕಾಂಡದಲ್ಲಿ ಲೀನವಾಗಿತ್ತು ಇದೆ ಏನು "ಸತ್ಯವನ್ನು ಹೂತುಹಾಕಿದ ಸೂರ್ಯ ಮುಳುಗದ ಸಾಮ್ರಾಜ್ಯದ ಅಧಿಪತಿಗಳ ಕಾರಸ್ತಾನದ ಗೂಡು ಎಂದು ಕ್ಷಣ ಭಾವುಕನಾದೆ "ಭೌತಿಕವಾದ ದೇಹವನ್ನು ಆಲದಮರಕ್ಕೆಕಟ್ಟಿಹಾಕಬಹುದು ಆದರೆ ಕನ್ನಡಿಗರ ಶೌರ್ಯ ಸಾಹಸಗಳನ್ನಲ್ಲ ಎಂಬುದನ್ನು ತೋರಿಸಲು ಮತ್ತೆ ತಲೆಎತ್ತಿದೆ "ಸಂಗೊಳ್ಳಿರಾಯಣ್ಣ ಅಭಿವೃದ್ಧಿ ಪ್ರಾಧಿಕಾರದ ಹೆಸರನ ನಿಗಮ" ರಾಯಣ್ಣನ ರಾಷ್ಟ್ರಭಕ್ತಿಯ ಗೌರವದ ಕುರುಹುಗಳಾಗಿ ಸರಕಾರಿ ಅಭಿವೃದ್ಧಿ ಕೆಲಸಗಳು, ಕುಶಲಕರ್ಮಿಗಳು, ಶಿಲ್ಪಿಗಳು, ದೈತ್ಯ ಯಂತ್ರಗಳ ರೂಪದಲ್ಲಿ ಗಿಜಗುಡುತ್ತಿವೆ . ಹಾತೊರೆದು ಬಂದ ನಾವು ಪವಿತ್ರ ಭೂಮಿಯ ಆಲದ ಮರ ಮುಟ್ಟಿ ಪಾವನರಾಗಬೇಕೆಂದರೆ ಮತ್ತೆ ಕಾವುಲುಗಾರರ ನಿರಾಕರಣೆ. ಕಾರಣ ಈಗ ಅಲ್ಲಿ ಹುಲ್ಲು ಹಾಸುಗಳಿಗಾಗಿ ಸಮತಟ್ಟು ಕೆಲಸ ನಡೆದಿದೆ, ಗಾರ್ಡನ್ ಗಳು ನಿರ್ಮಾಣವಾಗುತ್ತಿವೆ. ಅಭಿವೃದ್ಧಿ ಕೆಲಸಗಳು ಸಮರೋಪಾದಿಯಲ್ಲಿ ನಡೆದ ಕಾರಣ ದೂರದಿಂದಲೆ ರಾಯಣ್ಣನನ್ನು ಗಲ್ಲಿಗೇರಿಸಿದ ಸಾಕ್ಷಿಯಾಗಿರುವ ಆಲದ ಮರ ಕಂಡು ಪುಣಿತರಾದೆವು. ದೇಶಕ್ಕಾಗಿ ಬಲಿದಾನವಾದ ದೇಹವನ್ನು ನಂದಘಡಕ್ಕೆ ತಂದು ಸಮಾಧಿ ಮಾಡಿರುವ ಸ್ಥಳಕ್ಕೆ ಭಾರವಾದ ಮನಸ್ಸಿನಿಂದಲೆ ಬಂದೆವು ಇನ್ನೊಂದು ರೋಚಕ ಸಂಗತಿ ಬಿಚ್ಚುಗತ್ತಿ ಚೆನ್ನಬಸವಣ್ಣ ಆತನ ಸಮಾಧಿಯ ಮೇಲೆ ನೆಟ್ಟ ಆಲದ ಮರ ಇಂದು ಗತಸಾಹಸ ಸಾರುವ ಪವಿತ್ರ ಸಾಕ್ಷಿಯಾಗಿದೆ. ವೀರ ಪುಣ್ಯ ಭೂಮಿ ಅದು ಬರಿ ಆಲದ ಮರವಲ್ಲ ಬದಲಾಗಿ ನಮ್ಮ ಕನ್ನಡಿಗರ ಅಸ್ಮಿತೆ, ಈ ದೇಶದ ರಾಷ್ಟ್ರೀಯತೆ. ಆತ ಹುಟ್ಟಿದ್ದು ಆಗಸ್ಟ್ 15, ವೀರ ಮರಣ ಜನವರಿ 26 ಗಣರಾಜ್ಯೋತ್ಸವ, ಆಹಾ ..ಸೃಷ್ಟಿಯ ಎಂಥಹ ಚಮತ್ಕಾರಭಾರತಮಾತೆಯ ಮಡಿಲ ಮಗನಿಗಾಗಿ ನಾವು ಏನು ಮಾಡಿದರೂ ಕಡಿಮೆಯೇ .
ರಾಯಣ್ಣನ ಕರ್ಮ ಭೂಮಿಯ ಕೇಂದ್ರ ಸಹ್ಯಾದ್ರಿ ತಪ್ಪಲಿನ ಹಂಡಿಬಡಗನಾತ ಮಠಕ್ಕೆ ಹೋಗವಾಗ ದಾರಿಯಲ್ಲಿ ಹಲಸಿ ಇರುವುದು ಕೇಳಿ ಮಹದಾನಂದ, ಯಾಕೆ ಹೇಳಿ ? ಇತಿಹಾಸದ ಉಪನ್ಯಾಸಕನಿಗೆ ಸ್ಮಾರಕಗಳೆ ಬಂಗಾರ,ತಾಳೆಗರಿಗಳೆ ಕಿವಿ ಓಲೆಗಳು, ಶಾಸನಗಳೆ ಆಸ್ತಿಯ ಖರೀದಿಯ ಪತ್ರಗಳು ಹಾಗಾಗಿ ಸ್ನೇಹಿತ ವಿಠ್ಠಲ ಜೋಡಟ್ಟಿಯವರ ಮಾತು ಪಾಯಸ ಉಂಡಂತಾಯಿತು ಅವರೂ ಕನ್ನಡ ಭಾಷೆಯ ಉಪನ್ಯಾಸಕರಾಗಿರುವದರಿಂದ ಇಂತಹ ಸಮೀಪದ ಹಲಸಿ ಬಿಟ್ಟು ಹೋಗಲಾದೀತೆ? ಚಾಲಕ ಶಿವಣ್ಣನ ಕಾಲು ಓಡುತ್ತಿರುವ ಕಾರಿಗೆ ಬ್ರೇಕ್ ಅದುಮಿ ಕಾರ ನಿಲ್ಲಿಸಿ ನರಸಿಂಹ ದೇವಾಲಯ ಒಳಹೋಗುವಂತೆ ಮಾಡಿತು.ಈಗ ನಾವು 4, 5,ನೇ ಶತಮಾನದ ಕಾಲಗರ್ಭಕ್ಕೆ ಬಂದು ಬಿದ್ದೆವು. ಕನ್ನಡದ ಮೊದಲ ರಾಜಮನೆತನದ ಕದಂಬರ ರಾಜಧಾನಿ (ಬನವಾಸಿ) ವೈಜಯಂತಿಪುರದ ಪ್ರಾಂತೀಯ ರಾಜಧಾನಿಯಾಗಿದ್ದರಬಹುದಾದ ಹಲಸಿ ಒಂದು ಕಾಲಕ್ಕೆ ಹೆಸರುವಾಸಿಯಾದ ಪಟ್ಟಣ .ಒಂದು ಕಡೆ ಬನವಾಸಿ ಇನ್ನೊಂದು ಕಡೆ ಗೋವಾ ಕದಂಬರ ಅವಧಿಯ ಘಟಿಕ ಸ್ಥಾನ (ವಿದ್ಯಾ ಕೇಂದ್ರ) ಇಲ್ಲಿಯ ನರಸಿಂಹ ದೇವಸ್ಥಾನದ ಸೌಂದರ್ಯ ವರ್ಣಿಸಲು ಪದಗಳಿಲ್ಲ ಗರ್ಭಗುಡಿ ,ನವರಂಗ, ಪಾರ್ಶ್ವ ಬದಿಗಳಲ್ಲಿ ದ್ವಾರ ಬಾಗಿಲು,ನವರಂಗದಲ್ಲಿ ಕೂರ್ಮದ ಉಬ್ಬು ಶಿಲ್ಪ ಕಲ್ಲಿನಲ್ಲಿ ಕಲೆ ಅರಳಿ ಕಾವ್ಯವಾಗಿದೆ.ಅದು ನಮ್ಮ ಜೊತೆಗೆ ಬಂದ ವಿಠ್ಠಲರ ಕುಟುಂಬದ ಇಬ್ಬರು ಪದವಿ ವಿದ್ಯಾರ್ಥಿಗಳ ಚರ್ಚೆಯ ವಿಷಯ ವಸ್ತುವಾದವು ಅವರಲ್ಲಿ ಒಬ್ಬ ಕ್ರಿಮನಾಲಜಿ ವಿದ್ಯಾರ್ಥಿ ಎಂದರೆ ಕೇಳಬೇಕೆ ಚಿಕಿತ್ಸಕ ಬುದ್ಧಿ ,ಕನ್ನಡ,ಇತಿಹಾಸ ವಿಷಯ ಉಪನ್ಯಾಸಕರ ಜೊತೆಗೆ ಸಂವಾದ ನಡೆದಿತ್ತು.ಸೂರ್ಯ ಪಶ್ಚಿಮದಿಕ್ಕಿನಲ್ಲಿ ವೇಗದ ದಾಪುಗಾಲು ಇಡುತ್ತಿದ್ದರೂ ನರಸಿಂಹ ದೇವಸ್ಥಾನದ ಹಾಸುಗಲ್ಲುಗಳು ಪಾದಕ್ಕೆ ಬರೆ ಎಳೆಯುತ್ತಿದ್ದವು ಲಗುಬಗೆಯಿಂದ ಶಿವಣ್ಣನ ಕುದುರೆ ರೆಡಿ ಈಗ ಇನ್ನೊಂದು ಪ್ರಮುಖ ರಾಯಣ್ಣನ ಗೆರಿಲ್ಲಾ ಯುದ್ಧ ತಂತ್ರದ ಕೇಂದ್ರ ಸ್ಥಾನ ಹಂಡಿ ಬಡಗನಾತ ಮಠ ಸೇರಬೇಕಾಗಿತ್ತು .ಆದರೆ ಓಡುವುದು ಅಷ್ಟು ಸುಲಭದ ಮಾತಲ್ಲ ದಟ್ಟ ಅರಣ್ಯ ರಸ್ತೆಯ ತಗ್ಗುಗಳು ಆತನ ಕುದುರಿಗೆ ಕಚಗುಳಿ ಇಡುತ್ತಿದ್ದವು ಒಂದು ತಪ್ಪಿಸಿದರೆ ಇನ್ನೊಂದು .ನರ್ತನ ಮಾಡುವುದು ಎಲ್ಲರ ಸರದಿ ಮುಗಿಲನ್ನೆ ಚುಂಬಿಸುವ ಸಹ್ಯಾದ್ರಿಯ ಸಹಜ ನಗುವು ಮರಗಳ ಸರದಿ. ಅವುಗಳದು ಯಾವಾಗಲು ನಗುವುದೆ ಧರ್ಮ ಅಳಲು ಹಚ್ಚುವುದು ನರರ ಕೆಲಸ, ಕೊನೆಗೆ ಅಳಲು ಹಚ್ಚಿದವರೆ ಅಳುವುದು ಎಂಬದು ಅಷ್ಟೇ ಸತ್ಯ.ಹಲಸಿ, ಹಲಗಾ ,ನಾಗರಳಿ ದಾಟಿ ಕುಂಬಾರ್ಡಿ ತಲುಪಿದೆವು.ಇನ್ನೇನಿದ್ದರೂ ಪರ್ವತಾರೋಹಣ ಚಾಲಕನ ಗುಂಡಿಗೆ ಗಟ್ಟಿಯಾಗಿರಬೇಕು ಹಾವಿನಂತೆ ಸಾಗುವ ತೆಗ್ಗು ದಿನ್ನೆಗಳ ರಸ್ತೆ. ಕ್ಷಣ ವಿಚಲಿತನಾದರೂ ಪ್ರಪಾತ, ಜೀವ ಕೈಯಲ್ಲಿ ಹಿಡಿದೆ ಕುಳಿತಿರಬೇಕು,ಹಿಂದಿನ ಕಾಲದಲ್ಲಿ ಪ್ರವಾಸದಿಂದ ಮರಳಿ ಬಂದವರಿಗ ಹೊಸ ಬಟ್ಟೆ ಹೊಲಸಿ ಸಂಭ್ರಮ ಪಡುತ್ತಿದ್ದರಂತೆ .ಯಾಕೆ ಎನ್ನವುದು ಈಗ ಅರ್ಥ ಆಗಿ ಹೋಗಿತ್ತು ಹಂಡಿ ಬಡಗನಾತ ಮಠದ ತುತ್ತುತುದಿಗೆ ಬಂದಾಗ ಇಡಿ ಭೂಮಂಡಲವೆ ನಮ್ಮ ಪದತಲದಲ್ಲಿ ಬಂದಿದೆ ಎಂದು ಬಾಸವಾಗುತ್ತಿತ್ತು ಸುತ್ತ ಐವತ್ತು ಕಿ.ಮೀ.ಅರಣ್ಯವೆ ಅರಣ್ಯ ಪ್ರಾಯಶ: ಸಂಗೊಳ್ಳಿ ರಾಯಣ್ಣ ತನ್ನ ಗುಪ್ತ ಕಾರ್ಯಚರಣೆ ಕ್ಷೇತ್ರವನ್ನು ಯಾಕೆ ಇಲ್ಲಿ ಮಾಡಿದ್ದ ಎನ್ನುವದು ಅರ್ಥವಾಗಿತ್ತು.ಶಿಖರದಲ್ಲೊಂದು ಗುಪ್ತ ಗುಹೆ ಇದೆ ಇಲ್ಲಿ ಒಳಹೋಗಲು ದಾರಿ ಯುಂಟು ವಿಠ್ಠಲರವರೆ ಮೊದಲು ಮುಂದೆ ಹೋಗಿ ಮುಂದೆ ದಾರಿಯಿಲ್ಲ ಎಂದು ಮರಳಿ ಬಂದರು ನಂತರ ಅವರ ಸಂಬಂಧಿ ವಿದ್ಯಾರ್ಥಿಗಳು ಹೋಗಿ ಇನ್ನೂ ಮುಂದೆ ಹೋಗಲು ದಾರಿಯುಂಟು ಗುಯ್ಯ ಎನ್ನುವ ಶಬ್ದ ಬರುತ್ತದೆ ಎನ್ನಬೇಕೆ ! ಸೂಕ್ಷ್ಮವಾಗಿ ನೋಡಿದರೆ ಮಾತ್ರ ಆ ದಾರಿ ಪಾರ್ಶ್ವಬದಿಗಳಲ್ಲಿ ಹಾದು ಪಾರಾಗಲು ಅವಕಾಶವಿದೆ ಎನ್ನುವುದು ಗೊತ್ತಾಗುತ್ತದೆ.ಆ ಗುಯ್ಯ ಎನ್ನುವ ಶಬ್ದ ಅಂದೆನಲ್ವೆ ! ಅವು ಜೇನು ಹುಳಗಳಾಗಿದ್ದವು.ಈಗ ಅಲ್ಲಿರುವುದು ನಾಲ್ಕನೆ ಸ್ವಾಮಿಜಿ.ಆದರೆ ಒಂದನೆಯ ಸ್ವಾಮೀಜಿಯವರ ವೇಶದಲ್ಲಿ ರಾಯಣ್ಣ ಚೆನ್ನಮ್ಮನನ್ನು ಭೇಟಿಯಾಗುಲು ಹೋಗಿದ್ದರು ಎನ್ನುವ ಮಾತು ಕೇಳಿದಾಗ ಮೈ ರೋಮಾಂಚನವಾಯಿತು
ಸೂರ್ಯ ದಿಗಂತದಲ್ಲಿ ಲೀನವಾಗುತ್ತಿರುವುದನ್ನು ಗಮನಿಸಿದ ವಿಠ್ಠಲ ಜೋಡಟ್ಟಿಯವರ ಮಾವನವರು ಹಾಗು ನಿವೃತ್ತ ಮುಖ್ಯಗುರುಗಳ ಸಲೆಹೆ "ಕತ್ತಲೆ ನಮ್ಮನ್ನಾಕ್ರಮಿಸುವ ಮೊದಲು ಈ ದಟ್ಟ ಅರಣ್ಯ ದಾಟೋಣ" ಎಂದು. ಸಲೆಹೆ ಸ್ವೀಕರಸಿದ ನಾವೆಲ್ಲಾ ನಿಸರ್ಗದ ಸವಿಯನ್ನು ಪೂರ್ತಿಯಾಗಿ ಸವಿಯದೆ ಭಾರವಾದ ಮನಸ್ಸಿನಲ್ಲಿಯೇ ಪರ್ವತದ ಅವರೋಹಣ ಪ್ರಾರಂಭಿಸಬೇಕಾಯಿತು.ಮತ್ತದೆ ಚಾಲಕ ಶಿವಣ್ಣನ ಸವಾರಿ ನಿರಂತರ ಕ್ರಮಿಸಿ ಮನೆ ತಲುಪಲು ಮಧ್ಯರಾತ್ರಿ ನಮ್ಮನ್ನೆಲ್ಲ ಸ್ವಾಗತಿಸುವಂತಾಯಿತು.