Thursday, August 24, 2023

* ವಿಜ್ಞಾನಿಗಳಗಿದು ನಮನ *

ಭುವನದ ಗಿರಿಗಳಲರಳುವ 
ಹಿರಿಮೆಯ ಭಾರತ ದ್ವಜ ಸುಮವು। 
ಸೋಮನ ಮುಡಿಗೇರಿಸಿ 
ವಿಕ್ರಮ ಸಾಧಿbhgbಸಿದರು ಈ ದಿನ
ವಿಜ್ಞಾನಿಗಳೆ ನಿಮಗಿದು ನಮನ॥

ಜಗವೆ ಪಠಿಸಿದೆ ಭಾರತ ಕುವರರ
ಹಠ ಸಾಧನೆಯ ಶಶಿಯೊಡನಾಟ।
ಋಷಿಮುನಿಗಳ ತ್ಯಾಗದ ಫಲಕೆ
ಹೃದಯ ತುಂಬಿದ ಈ ನಮನ
ವಿಜ್ಞಾನಿಗಳೆ ನಿಮಗಿದು ನಮನ॥
ಬಂಪಂಅಂಇಅಂನ
ಒಂದೇ ಎರಡೆ ಹಗಲಿರುಳೆನ್ನದೆ 
ಹಾಕಿದಿರಿ ಶ್ರಮ ನೂರಾರು ದಿನ।
ತಿಂಗಳ ಬೆಳದಿಂಗಳನೇರಿಗೆ
ಅರಳಿತು ಪ್ರತಿ ಭಾರತೀಯನ ವದನ
ವಿಜ್ಞಾನಿಗಳೆ ನಿಮಗಿದು ನಮನ॥ 

ಜಗದಗಲ ಹಾರೈಕೆಯ ಮನ
ಸಾಗಿತು ಬಾನಂತರ ಮನ್ವಂತರ।
ಭಾವ ಅರುಳಿ ಆನಂದ ಬಾಷ್ಪ
ಭಾರತಾಂಭೆ ಮೊಗ ಉದ್ಯಾನವನ
ವಿಜ್ಞಾನಿಗಳೆ ನಿಮಗಿದು ನಮನ॥

ಭಾರತ ಭವಿಷ್ಯ ಬಾನೆತ್ತರಕ್ಕೇರಿಸಿದ 
ಇಸ್ರೋ ಋಷಿಮುನಿಗಳೆ ನಿಮಗಿದು।
ಕನ್ನಡ ನಾಡಿನ ಸವಿ ನುಡಿ ನಮನ
ಹೃದಯ ತುಂಬಿದ ಕವಿ ನುಡಿನಮನ
ವಿಜ್ಞಾನಿಗಳೆ ನಿಮಗಿದು ನಮನ॥
 

Wednesday, August 23, 2023

* ಚಂದ್ರ ನಂಗಳಕೆ *



ಚಂದಿರನ ಚುಂಬಿಸಲು 
ನಂಬಿ ಬಂದವರು ನೂರಾರು ।
ನಮ್ಮವರೂ ಬಂದಿಹರು 
ವಿಕ್ರಮ್ ನ ಕಳುಹಿಸಿಹರು
ಸಕ್ರಮಕೆ ಕಾದು ನಿಂತಿಹರು॥

ಅಂಬರದಿ ಅಲೆಯುವ 
ಕಂದಮ್ಮಗಳು ನೂರು ಜನ।
ಹೆಡೆ ಎತ್ತಿ ಓಡಾಡುವರು
ನಡೆಯುತ್ತಾ ಉರುಳುವರು
ತೊಡೆ ತಟ್ಪಿ ನಿಲ್ಲುವರು ಕೆಲವರು॥

ಹಿಡಿಮಣ್ಣು ಪಡೆದು 
ಹಿಗ್ಗಲು ಬಂದವರು ನನ್ನ ಜನ ।
ಕಡೆಯದೆಂಬುದಿಲ್ಲ ಈ ದಿನ
ಪಡೆದು ಬೀಗ ಬೇಕಾಗಿದೆ 
ಮೊದಲು ನಾವಿಂದು ॥

ಸಂಬಂಧ ಬೆಳೆಸಲು 
ಅಂಬೆಗಾಲಿನ ನಡೆ ನಮ್ಮದು।
ಆಲಿಂಗನಕೆ ತಡಮಾಡದಿರು  
ಅಂಗುಲಿಮಾಲನ ಅವತಾರವೆಂದು  
ನುಂಗದಿರು ನನ್ನವರನು.॥

ಕಳುಹಿಸಿದ ಕಂದಮ್ಮಗಳ 
ಆಯು ಒಂದು ದಿನ ।
ಅದು ನಿನಗೆ ಹದಿನಾಲ್ಕು ದಿನ 
ತಡೆದರದು ತಂಪಿನ ಕತ್ತಲೆಯ ದಿನ
ಕಾಯ್ದು ಕಳೆಸೆಮ್ಮ ನಮ್ಮಯ ಜನ॥

Saturday, August 19, 2023

ಸಂಘಟನೆಯಲ್ಲಿ ಸಂತೋಷ

        ಬಯಸದೆ ಬಂದ ಭಾಗ್ಯ, ಬೇಡಿದೆನೇನು? ಹಾಗೆ ತಿಳಿದರೂ ತಪ್ಪೇನೂ ಅಲ್ಲ ಬಿಡಿ,ಪಡೆದದ್ದಂತು ಸತ್ಯವೆ ! ಗುಳೇದಗುಡ್ಡ ತಾಲೂಕು ನೌಕರರ ಸಂಘದ ಅಧ್ಯಕ್ಷರ ಪದಗ್ರಹಣ ಹಾಗೂ ವಯೋ ನಿವೃತ್ತಿ ಹೊಂದಿದ ಅಧ್ಯಕ್ಷರಿಗೆ ಶುಭಕೋರುವ ಸಮಾರಂಭ. ಆ ಸಮಾರಂಭದಲ್ಲಿ ನನಗೂ ಸನ್ಮಾನ, ಇದೇನಿದು ಗೋಕುಲಾಷ್ಟಮಿಗೂ ಇಮಾಮ ಸಾಬಿಗೂ ಏನು ಸಂಬಂಧ  ಅಂತಿರಾ, ಇಂದು ದಿನಾಂಕ 19.08.2023 ರಂದು ಪರೀಕ್ಷೆಯ ಕಾರ್ಯದ ಮುಕ್ತಾಯದ ನಂತರ ನಮ್ಮ ಸಂಸ್ಥೆಯ ಪ್ರಭಾರ ಪ್ರಾಚಾರ್ಯ ಹಾಗೂ ಸ್ನೇಹಿತರಾದ ವಿಠ್ಠಲ ಕಳಸಾ ನನ್ನ ಹತ್ತಿರ ಬಂದು ಗುಳೇದಗುಡ್ಡ ತಾಲೂಕು ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ಹೋಗೋಣ ಎಂದರು. ಅವರಾದರೂ ಸರಿ, ನೌಕರರ ಸಂಘದ ಸದಸ್ಯರು ನಾವು ಹೋಗದೆ ಇದ್ದರೆ ನಡೆದೀತು ಎಂದುಕೊಂಡೆ ನಂತರ ಕಾಲೇಜಿನ ಪ್ರತಿನಿಧಿಗಳಾಗಿ ಹೋಗಬಹುದೆಂದು ತಿಳಿದು ಅದಕ್ಕೆ ನಾನು ಹೇಳಿದೆ, ಸರ್  ಅವರು ಅಧ್ಯಕ್ಷರಾದ ಪ್ರಯುಕ್ತ ಪೇಡೆ ನೀಡಿ ನಮ್ಮ ಬಾಯಿ ಸಿಹಿ ಮಾಡಿದ್ದಾರೆ ಅವರಿಗೆ ಹೂವು ನೀಡಿ ಸಂತೋಷ ನಡೆಸಬಹುದುಲ್ಲವೆ, ಎಂದೆ .ಸಲೆಹೆ ಸರಿಯಾಗಿರಬಹುದೇನೊ ತಕ್ಷಣವೆ ಕಾರ್ಯ ಪ್ರವೃತ್ತರಾಗಿಯೆ ಬಿಟ್ಟರು ನಾನು ಮಾತ್ರ ನಿಧಾನವಾಗಿ ಕಾರ್ಯಕ್ರಮದ ಸ್ಥಳವಾದ ಶಿಕ್ಷಕರ ಸೊಸೈಟಿಯ ಕಡೆಗೆ ಹೆಜ್ಜೆ ಹಾಕಿದೆ ಆದರೆ ಆಗಲೆ  ಸಮಯವಾಗಿದ್ದರಿಂದ ಉದ್ಘಾಟಕರಾಗಿ ಆಗಮಿಸಬೇಕಾದ ಮಾನ್ಯ ಕೇತ್ರ ಶಿಕ್ಷಣಾಧಿಕಾರಗಳ ಅನುಮತಿಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿಯೆ ಬಿಟ್ಟಿತು ವೇದಿಕೆಯ
ಮೇಲೆ ಪ್ರಾಥಮಿಕ, ಪ್ರೌಢ ಶಾಲೆಯ ಶಿಕ್ಷಕರ ಸಂಘಟನೆಯ ಅಧ್ಯಕ್ಷರುಗಳು, ಜ್ಯೋತಿಬಾ ಪುಲೆ ಶಿಕ್ಷಕಿಯರ ಸಂಘದ ಆಧಕ್ಷರು ಆಸೀನರಾದರು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಉದ್ಘಾಟನೆಯ ನಂತರ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವ ಅಭಯ ಹಾಗೂ ಜಿಲ್ಲಾ ಅಧ್ಯಕ್ಷರ ಸಂಘಟನೆಯ ದಾರಿ ಮತ್ತು ಗುರಿ ತಲುಪಲು ಅನುಸರಿಸಬೇಕಾದ ಕಾರ್ಯತಂತ್ರದ ಹಿತವಚನ ನೀಡಿದರು, ಹಾಗೆಯೆ ವಯೋನಿವೃತ್ತಿಯಿಂದ ನಿರ್ಗಮಿಸುತ್ತಿರುವ ಮಾಚಾ ಸರ್ ರವರ ನೀಡಿದ ಸಂಘಟನೆಯ ಹಿನ್ನೋಟವು ಹಾಲಿ ಅಧ್ಯಕ್ಷರಾದ ಜಾಧವರವರಿಗೆ ಸ್ಫೂರ್ತಿಯ ಸೆಲೆಯಾಯಿತು.ಅಧ್ಯಕ್ಷರಾದ ಜಾದವ ಸರ್ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ನೌಕರರ  ಹಿತಕಾಯಲು ಹಿರಿಯ, ಕಿರಿಯ ನೌಕರರ ಸಲಹೆ ಪಡೆದು ಸಮಸ್ಯೆಯಲ್ಲಿರುವ ನೌಕರರಿಗೆ ಸ್ಪಂದಿಸಿವ, ಸೇವಕನಾಗುವ ವಚನವಿತ್ತರು ಇದೆ ಸಂದರ್ಭದಲ್ಲಿ ವಿವಿಧ ಸಂಘಟನೆಯ ಅಧ್ಯಕ್ಷರಿಗೆ ಸನ್ಮಾನಿಸುವ ಮೂಲಕ ಸಮ ಸಮಾಜದ,ಸಮೃದ್ಧಿಯ ಬಾಳಿನ ಸೇವೆಗೆ ಸಹಕಾರ ನೀಡಲು ಕೋರಿದರು ಈ ಸಂದರ್ಭದಲ್ಲಿ ನಾನು ನನ್ನ ಪಕ್ಕದಲ್ಲಿ ಕುಳಿತಿದ್ದ ಶಿಕ್ಷಕ ಸಹೋದರರಿಗೆ ನಾನು ಕೂಡಾ ತಾಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷನಾಗಿರುವೆ ಇಲ್ಲಯವರೆಗೆ ಪದವಿ ಪೂರ್ವ ಕಾಲೇಜು ಕಾಲೇಜುಗಳ ಉಪನ್ಯಾಸಕರನ್ನು ಶಿಕ್ಷಕರು ಎಂದು ಭಾವಿಲ್ಲ ಹಾಗಾಗಿ ಇಂತಹ ಶಿಕ್ಷಕರ ಸಂಘಟನೆಯ ಕಾರ್ಯಕ್ರಮದಲ್ಲಿ ನಮ್ಮ ಭಾಗವಹಿಸಿಕೆ ಇಲ್ಲ ಎಂದು ಔಪಚಾರಿಕವಾಗಿ ಹೇಳಿದೆ. ಹಾ... ನಮಗೆ ಗೊತ್ತೆ ಇಲ್ಲ ಸರ್ ತಾವು ಕೂಡಾ ಶಿಕ್ಷಕರ ಸಂಘಟನೆಯಲ್ಲಿ ಕೆಲಸ ಮಾಡುತ್ತಿರುವದರಿಂದ ಸನ್ಮಾನಕ್ಕೆ ನೀವೂ ಅರ್ಹರು ಎಂದು ಒತ್ತಾಯದಿಂದ ಸನ್ಮಾನಿಸಿದರು, ಇದಕ್ಕೆ ಏನು ಹೇಳುವುದು?ಕೇಳಿ ಪಡೆದದ್ದಾ ಅಥವಾ ಸಂಘಟನೆಯಲ್ಲಿ ತೊಡಗಿ ಉಪನ್ಯಾಸಕರ ಸಮಸ್ಯೆಯ ಕುರಿತ ಧ್ವನಿಗಾ ! ಅಂತೂ ಜವಾಬ್ದಾರಿ ಹೆಚ್ಚಿಸಿದ ಸನ್ಮಾನಕ್ಕೆ ಅನಿರೀಕ್ಷಿತವಲ್ಲದೆ ಇನ್ನೇನು ಹೇಳುವುದು ? ಎಲ್ಲವೂ ಭಗವಂತನ ಕೃಪೆ ," ತುಳಿದು ಬದುಕುವುದು ಬದುಕಲ್ಲ, ತಿಳಿದು ಬದುಕುವುದು ನಿಜವಾದ ಶ್ರೇಷ್ಠ ಬದುಕು" ಎಂಬ ತತ್ವದಲ್ಲಿ ನಂಬಿಕೆ ಇಟ್ಟ ನನಗೆ ಇವತ್ತಿನ ಅನಿರೀಕ್ಷಿತ ಘಟನೆ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದ್ದಂತು ಅಷ್ಟೇ ಸತ್ಯ. ಸಂಘಟನೆಯ ಸರ್ವವರಿಗೂ ನನ್ನ ಹೃದಯಪೂರ್ವಕ ಅಭಿನಂದನೆಗಳು.🙏🙏

Friday, August 18, 2023

ಬೀಳ್ಕೊಡುಗೆ

ಮರೆತೆವೆಂದರೆ ಮರೆಯುವುದು 
ಹ್ಯಾಂಗ್, 
ಕೂಡಿ ದಯ ಮಾಡಿಸಿದ ಆನಂದ,
ಅದು ಕಾಲೇಜಿನ ದಯೆ.
ಕೂಡಿ ಬಂದಿತ್ತು ಮಹಾದಾನಂದ
(ದಯಾನಂದ)
ದೂರಾದರೇನು ಮರೆಯಲಾಕ
ಹಳೆಬಟ್ಟೆಯಲ್ಲ  
ಬೀಸಿ ಎಸೆಯುವಾಂಗ.
ಹಸಿಗೋಡೆಯೊಳಗಿನ 
ಹರಳು ಕಣೋ ಬೆಸದಾವು 
ಮಣ್ಣಿನೊಳಗ ಕೀಳದಂಗ,  
ಆರತವೇನು ಶೆಟ್ಟರೆ 
ಗಟ್ಟಿಯಾಗಿಯೇ 
ಉಳಿಸಿ ಬಿಟ್ಟು ಹೋದಿರಪಾ 
ಎಲ್ಲರೂ ಇಲ್ಲದಾಗ  
ತಟ್ಟತಾವೂ ಎದೆಯೊಳಗ  
ಒಂದಾ ಎರಡಾ ವಿಡಿಯೋ 
ಕಟ್ಟಿ ಬಿಡತಿದ್ದಿರಲ್ಲ ನೂರಾ ಒಂದಾ.  
ಅವು ರೀಲ್ ಅಲ್ಲ 
ರಿಯಲ್ ಮೆಮೋರಿ, 
ಕಚಗುಳಿ ಇಡತಾವ್. 
ಹಂಚಗೊಂಡು ತಿನ್ನುವಾಂಗ 
ಒಂಚೂರು ಬ್ಯಾಸರಿಲ್ಲ 
ದಿನಾ ತಿಂತಿವಿ 
ಚೋಡಾ ಚಪ್ಪರಿಸಿದಂಗ. 




.

Friday, August 11, 2023

77 ನೇ ಸ್ವಾತಂತ್ರ್ಯ ದಿನಾಚರಣೆಯ ಸುಭಾಶಯಗಳು, ವೇದಿಕೆ ಮೇಲೆ ಆಶೀನರಾಗಿರುವ ಎಲ್ಲಾ  ಗಣ್ಯ ಮಾನ್ಯರೆ ಹಾಗೂ ಗುಳೇದಗುಡ್ಡ ತಾಲೂಕಿನ ಸಮಸ್ತ ಬಂಧುಗಳೆ ಮತ್ತು ಮುದ್ದು ವಿದ್ಯಾರ್ಥಿಗಳೆ. ಇವತ್ತು ನಮಗೆಲ್ಲ ಸಂತೋಷ ದಿನ ನಾವೆಲ್ಲಾ ಸಡಗರ ಸಂಭ್ರಮದಿಂದ ಈ ಹಬ್ಬವನ್ನು ಆಚರಿಸುತ್ತಿದ್ದೇವೆ. ಈ ಹಬ್ಬ ಉಳಿದೆಲ್ಲ ಹಬ್ಬಗಳಿಗಿಂತ ಶ್ರೇಷ್ಠವಾದದ್ದು ಏಕೆಂದರೆ ಇದು ನಮಗೆಲ್ಲ ಸ್ವಾತಂತ್ರ್ಯ ಸಮಾನತೆ ಗೌರವದ ಬದುಕನ್ನು ನೀಡಿದ ಸುದಿನದ ಹಬ್ಬ . ಈ ಒಂದು ದಿನಕ್ಕಾಗಿ ಭಾರತದ ಅದೆಷ್ಟು ಮಹಾನ್ ವ್ಯಕ್ತಿಗಳು ತಮ್ಮ ಬದುಕಿನ ಸಂತೋಷ ಕ್ಷಣಗಳನ್ನು ತೊರೆದು ತಮ್ಮ ಬಲಿದಾನ ಮಾಡಿದ್ದಾರೆ ತಮ್ಮನ್ನು ರಾಷ್ಟ್ರಕ್ಕಾಗಿ ಅರ್ಪಿಸಿಕೊಂಡಿದ್ದಾರೆ ಅವರೆಲ್ಲರನ್ನೂ ಸ್ಮರಣೆ ಮಾಡುವುದು ನಮ್ಮೆಲ್ಲರ ಆದ್ಯಕರ್ತವ್ಯ ಮತ್ತು ಹೆಮ್ಮೆಯ ವಿಷಯ.ಬ್ರಿಟಿಷರ ಗುಲಾಮಗಿರಿ ಮೆಟ್ಟಿ ನಿಲ್ಲಲು ಅವರು ಪಟ್ಟ ಶ್ರಮ, ದಿಟ್ಟ ಹೋರಾಟ ಇಂದಿನ ಪ್ರತಿಯೊಬ್ಬರಿಗೂ ಅನುಕರಣೀಯ .ದೇಶದ ಪ್ರತಿ ಪ್ರಜೆಗಳು ನಮಗೆ ರಾಷ್ಟ್ರವೇನು ನೀಡಿದೆ ಎಂದು ಕೇಳಿದೆ ರಾಷ್ಟ್ರದ ಅಭ್ಯುಧಯಕ್ಕೆ ನನ್ನ ಕೊಡುಗೆ ಏನು ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ ಅಂದಾಗ ರಾಷ್ಟ್ರ ಜಗತ್ತಿನ ಮುಂದುವರಿದ ದೇಶಗಳ ಸಾಲಿನಲ್ಲಿ ನಿಲ್ಲಲಿದೆ ರಾಷ್ಟ್ರಕ್ಕಾಗಿ ನಾವು ಕೊಡುಗೆ ನೀಡಲು ಗಡಿಗೆ ಹೋಗಬೇಕಿಲ್ಲ. ಕೋವಿಯನ್ನೆ ಹಿಡಿಯಬೇಕಿಲ್ಲಿ ಬದಲಾಗಿ ನಾವು ಹಿಡಿದ  ಅಧ್ಯಯನ, ಉದ್ಯೋಗದಲ್ಲಿ ತೋರುವ ಬದ್ದತೆ, ನಿಷ್ಠೆ, ಸಮರ್ಪನಾ ಮನೋಭಾವ ನಾವು ದೇಶಕ್ಕೆ ನೀಡುವ ಅಮೂಲ್ಯ ಕೊಡುಗೆ.
   ಆತ್ಮೀಯರೆ ಸ್ವಾತಂತ್ರ್ಯ ಬಂದಾಗ ನಮಗೆ ಕಾಡಿದ ಸವಾಲುಗಳು ಸಾವಿರದಷ್ಟಿದ್ದವು ಆಹಾರಕ್ಕಾಗಿ ಪಶ್ಚಿಮದ ಕಡೆ ನೋಡಬೇಕಾಗಿತ್ತು ಇಂದು ಹಸಿರು ಕ್ರಾಂತಿ ಮಾಡಿ ಸ್ವಾವಲಂಬನೆ ಸಾಧಿಸಿ ಇನ್ನೊಂದು ದೇಶಕ್ಕೆ ಕಳುಹಿಸಿಕೊಡುವ ಸಾಮರ್ಥ ಗಳಿಸಿದ್ದೇವೆ. ವೈದ್ಯಕೀಯ ಸಾಧನೆಗೆ ಜಗತ್ತು  ತಲೆಭಾಗಿದೆ .ಚಂದ್ರನ ಮೇಲೆ ಉಪಗ್ರಹ ಇಳಿಸಲು ಸಾಮರ್ಥ್ಯ ಹೊಂದಿರುವ ಬೆರಳೆಣಿಕೆಯ ದೇಶಗಳಲ್ಲಿ ನಮ್ಮ ದೇಶವು ಒಂದು ಎಂದು ಹೇಳಲು ನಮಗೆ  ಹೆಮ್ಮೆಯ ವಿಷಯ. ಇಷ್ಟು ಸಾಧನ ಮಾಡಿದಾಗ್ಯೂ ಇನ್ನೂ ಒಂದಿಷ್ಟು ಕೋಮುವಾದ  ಭ್ರಷ್ಟಾಚಾರದಂತ ಸಮಸ್ಯೆಗಳು ಕೂಡಾ ನಮ್ಮಲ್ಲಿ ಅಲ್ಲಲ್ಲಿ ಆಗಾಗ ವರದಿಯಾಗುತ್ತಿರುತ್ತವೆ ಅವಗಳೆಲ್ಲವನ್ನು ಮೀರಿ ಸಾಗೋಣ ಜೈ ಹಿಂದ್ ಜೈ ಕರ್ನಾಟಕ.

Tuesday, August 1, 2023

*ವ್ಯಸನ ಬಿಡುವ ತನಕ*

ಮಹಾಂತರ ಮಾತು ಮನುಕುಲಕ್ಕೆ ದಾರಿ
ಬಸವತತ್ವದ ಕಾಯಕ ಜೀವಿ
ಸತ್ಕರ್ಮವ ಬಿತ್ತಿದರು, ಧರ್ಮವ ಹಿಡಿಸಿದರು 
ವ್ಯಸನವ ಬಿಡಿಸಿ, ಹೊಸ ದಾರಿಗೆ ನಡೆಸಿದರು॥

ಜೋಳಿಗೆ ಕಟ್ಟಿದರು ವ್ಯಸನವ ಕಸಿದು 
ಹೊಸ ದಾರಿಗೆ ಹಚ್ಚಿದರು।
ಮಹಾಂತರ ಅಪ್ಪಣೆ ನಮಗೆಲ್ಲಾ ದಾರಿ ॥
ಬಿಟ್ಟರಾಗುವುದು ಜೀವನ ದುಬಾರಿ॥

ನಡೆಯಬೇಡ ನೀ ಮೀರಿ
ನಡೆದರೆ ಬೀಳುವೆ ನರಕಕ್ಕೆ ಜಾರಿ॥
ವ್ಯಸನಮಕ್ತ ಸಮಾಜ ನಮಗೆ ರಹದಾರಿ 
ತಿಳಿದರೆ ಅದುವೆ ಸ್ವರ್ಗಕ್ಕೆ ದಾರಿ॥i

ಶರಣರ ತತ್ವದ ಸೇವೆ ನಮಗೆಲ್ಲಾ ಸಿರಿ।
ಸರಕಾಯಿತು ಸುಜನರ ಮುಕುಟಕ್ಕೆ ಗರಿ।
ಸದ್ಗುಣ ಬಿತ್ತಲು ಮಹಾಂತ ಶ್ರೀಗಳು
ಸದಾ ಸುತ್ತಿದರು ಈ ಧರಣಿ॥

ಮೂಢ ನಂಬಿಕೆ  ಜಾಡು ಹಿಡಿದು 
ತೊಲಗಲು ದುಡಿದರು ಕಡೆಯತನಕ।
ಆದರೂ ಉಳಿದಿದೆ ಇನ್ನೂ ತನಕ 
ಪ್ರತಿಜ್ಞಾ ಮಾಡೋಣ ವ್ಯಸನ ಬಿಡುವತನಕ॥

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...