Monday, April 27, 2020

ನ್ಯಾನೋ ಕಥೆ

ಅದೊಂದು ಸ್ಪರ್ಧೆ, 'ನಾ ಹೆಚ್ಚು ನೀ ಹೆಚ್ಚು' ಹಾಲು ಹೇಳಿತು ನಾನೇ  ಹೆಚ್ಚು, ಹೇಗಪ್ಪ ಹೇಳು ,ಕೇಳದರು ಆಯೋಜಕರು ..ನಾನಿಲ್ಲದೆ ಮುಂಜಾವು ನೆನೆಸಿಕೊ ಚಹಾ ಇಲ್ಲ ,ಅನ್ನಕ್ಕೆ ಹಾಲು ಇಲ್ಲ ಮಕ್ಕಳಿಗೂ ಕುಡಿಲಿಕ್ಕಿಲ್ಲ, ಊಟ ಮಾಡುವುದು ಹೇಗೆ ? ಉಹೂ..ನೆನೆಸಿಕೊಳ್ಳುವದಕ್ಕೂ ಆಗುವದಿಲ್ಲ ಆ ಕಾರಣಕ್ಕೆ ನಾನೆ ಹೆಚ್ಚು.ಎಂದಿತು.
ಆಲ್ಕೋಹಾಲ್ ಬಂದಿತು ನಾನೆ ಹೆಚ್ಚು,ಅದು ಹೇಗೆ? ಕೇಳಿದ್ರು ಆಯೋಜಕರು . ಹಾಲಿನ ಸ್ನೇಹ ಮಾಡಿದವರ ಪರಿಸ್ಥಿತಿ ನೊಡಿದ್ದಿಯಾ? ಮನೆ ಮನೆ ತಿರುಗಬೇಕು. ಚೌಕಾಸಿಗಿಳಿತಾರ ...ಕಿರಿ ಕಿರಿ.
ನಾನಾದರೋ ಜಗಮಗಿಸುವ ಬೆಳಕಿನಲ್ಲಿ ವಾಸಿಸುವೆ ,ನಾನಿರುವ ಜಾಗದ ಕಡೆ  ಜನರೆ ಓಡಿ ಬರುತ್ತಾರೆ  ಚೌಕಾಸಿ ಮಾಡಿದ್ದು ಉಂಟಾ ! ಹಾಗಾಗಿ ನಾನೆ ಮೇಲು ಆಯೋಜಕರು ಸುಸ್ತೋ ಸುಸ್ತು.

        🖋️ ಬಸನಗೌಡ ಗೌಡರ

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...