Thursday, May 14, 2020

"ಬಾಳ ಪಯಣ *

ಬಾಳೊಂದು ಭಾವ ಮಂದಿರ
ಪ್ರೀತಿಯೆ ಭುವನದ ಹಂದರ
ಪ್ರತಿಕ್ಷಣ ಅರಳಿಸು ನಿರಂತರ // ಪ//

ಸಾಗರ ಡೋಣಿಗೆ ಸಹಜ ತೆರೆ
ಉಬ್ಬರ ವಿಳಿತ ಮೀರಿ ನೀ ನಡೆ
ಬದುಕದು ಸುಂದರ ಸಾಕಾರ ಪಡೆ //

ಬದುಕೊಂದು ಬಂಡಿಯ ಪಯಣ
ಕಲ್ಲು ಮುಳ್ಳುಗಳೆ ಅಡೆ ತಡೆ ಕಣೋ
ಸಾಧಿಸಿ ಸವೆಸಿ ದಾರಿನಡೆ ಜಾಣ

ಭುವಿಯೊಂದೆ ಜೀವರಾಶಿಗಳ ತಾಣ
ಭೂಕಂಪನ ಜ್ವಾಲಾಮುಖಿ ಸಹಜ
ಸಹಜೀವನ ಕಲಿ ನೀ ಮನುಜ//

ನಾನೊಂದು ಬರಿ ಕಾಗದ ಹಾಳೆ
ಗೀಚದಿರು ಅಲ್ಲಿ ರಾಕ್ಷಸ ಬಾಳು
ಬರೆ ಅಲ್ಲಿ ಸುಂದರ ಕಾವ್ಯ ಕಹಳೆ//

        ಬಸನಗೌಡ ಗೌಡರ

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...