Saturday, May 23, 2020

* ಹೆಸರು *

ಎಷ್ಟು ಹೆಸರು ಹತ್ತಿವೆ ಹಿಂದೆ
ನಮ್ಮ ಅಪ್ಪ ಅಮ್ಮ ಇಟ್ಟರೊಂದು/
ಗೆಳೆಯರಿಟ್ಟರು ಇನ್ನೊಂದು
ಏಣಿ ಆಟದಲ್ಲಿ ಏರಿದಾಗೊಂದು
ಇಳಿದಾಗ,ಒಂದು
ಏಣಿ ಮುರಿದಾಗ ಮತ್ತೊಂದು //

ಆಶ್ರಯದಲ್ಲಿ ಒಂದು, ಶ್ರಮದ್ದೊಂದು
ಅವಸ್ಥೆ ತಂದಿತು ಇನ್ನೊಂದು /
ಪಾಠ ಮಾಡಿ ಬೋಧಕನಾದೆ
ಮಡದಿಗೆ ಪತಿಯಾದೆ
ಒಪ್ಪಿ ನಡೆದರೆ ಆದರ್ಶ ದಂ.........ಪತಿಯಾದೆ //

ನೂಸಲಿನಲ್ಲಿ ಹೆಸರು ಬರೆವನೆ ಬ್ರಹ್ಮ!
ಗಾಸಿಗೊಂಡ ಗಾಬರಿಯಲಿ/
ಹಸಿಮಣ್ಣೆ ಮಾಡಿಟ್ಟ ಭರದಲ್ಲಿ
ನಿನಗಿಷ್ವ ವಾದ ನಾಮ ಹರಳಿನಲಿ
ಒತ್ತು ಹರವಾದ ಹಣೆಯಲ್ಲಿ
ನಿನಗೊಪ್ಪುವ ತರದಲ್ಲಿ //

        ಬಸನಗೌಡ ಗೌಡರ 

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...