Tuesday, June 23, 2020

*ಒಂದಾಗು ಮಲ್ಲಿ *


ಶರವೇಗದಲ್ಲಿ ನಿನ್ನಂದ ಸೆಳೆದಾಗ
ಶುರುವಾಯಿತು ಮೌನಾಲಾಪ ರಾಗ
ಭಾವ ತೀರದಲಿ ಓಲಾಡುತಿದೆ ಕಲ್ಪನೆ
ಭಯ ಮೀರಿ ಪ್ರೀತಿ ಶುರುವಾಗಿದೆ//

ಕನಸಿನ ಕಲ್ಪನೆ ಕಾದು ನೀರಾಗಿ
ನಿನ್ನ ಕಡಲ ತೀರ ಸೇರುವೆ ಸಾಗಿ
ಕವನ ಗೀಚಲು ಪದಗಳಿಗೆ ತಡಕಾಡಿ
ತಲೆ ಸಿಡಿದು ಚೂರಾಗಿ ಸೇರುವೆ ಬಾಗಿ//

ಸಿಂಗಾರದ ಸಿರಿ ಬೇಲೂರು ಬಾಲಕಿ
ಜಕ್ಕಣ್ಣನ ಕೈಚಳಕ ಶಿಲ್ಪಕಲೆ ಮೋಡಿ
ತೆಕ್ಕೆಯಲಿ ಬರಸೆಳೆದು ಬಿಗಿದಪ್ಪುವೆ
ನೀನಿಕ್ಕುವ ಶರತ್ತು ನಾನೊಪ್ಪೀರುವೆ//

ಬರದೆ ಕಾದು ಕೆಳಗಿಳಿಸಿ ಬಿತ್ತಬೇಡ
ಜಾಲಿಮರ ಮುಳ್ಳಗಗಳ ಮೂಟೆ ಅಲ್ಲಿ
ಜಾಜಿಮಲ್ಲಿಗೆ ಕನಕಾಂಬರ ಬೆಳೆವೆನಲ್ಲಿ
ಸೇರಿ ಸುವಾಸನೆ ಸವಿಯಬೇಕು ಮಲ್ಲಿ//

ಸಾಗರ ಮುತ್ತಿಗೆನಿನ್ನ ನತ್ತಿನಲ್ಲಿರುವಾಸೆ
ಕತ್ತಲೆ ಕರೆಯುವುದು ಶಶಿಧರನ ಉಷೆ
ಕಾಣಬಲ್ಲೆಯಾ ಕವಿ ಹೃದಯ ಮೂಸೆ
ಕನಸು ನನಸು ಮಾಡೆನ್ನ ಒತ್ತಾಸೆ//

           ಬಸನಗೌಡ ಗೌಡರ

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...