Monday, August 10, 2020

* ಆವಾಸ *

ಭಾವ ಜೀವಿ ನಾನು, ಬಾಳೆ ಗೊಣೆ

ಬಾಗಿದಂತೆ ಬಾಗಿಸುವೆ ಎನ್ನ ಹಣೆ.

ಬಿಗುಮಾನ ಬಿಟ್ಟು ಬಂದಿರುವೆ ಕನೆ 

ಬಯಸಬೇಡ ನನ್ನ ಪ್ರಿತಿಗೆ ಕೊನೆ /


ನಿನ್ನ ಕುಡಿ ನೋಟಕ್ಕೆ ಜಾರಿ, ಕರಳು

ಕತ್ತರಿಸಿ ಸುನಕ ನಾ ಸುತ್ತಿದೆ ಹಗಲಿರುಳು.

ಬಿತ್ತರಿಸಿತು ಜಗವು ಪ್ರೇಮಪಾರಿವಾಳ

ಬೀದಿಗೆ ಬರದಂತೆ ಮಾಡೆನ್ನ ಜೀವಾಳ/


ಹೃದಯ ಮಂದಿರದಿ ಹಾಕಿಸಿದೆ ಹಂದರ

ಇಲಿಹೆಗ್ಗನಗಳ ಆವಾಸವಾಗಿದೆ ಇಂದು

ಬೆಕ್ಕಾಗಿ ಕಚ್ಚಿ ತಿನ್ನಬಾರದೆ ನೀ ಬಂದು

ಹಾಕು ನೀ ರಂಗಿನ ರಂಗೋಲಿ ತಂದು/


ಹುಚ್ಚು ಹಚ್ಚಿದೆ ನಿಚ್ಚಳವಾಗದ ರೋಗ 

ಅಲೆಯಾಗಿ ಅಪ್ಪಳಿಸಿದೆ ಭಾವತರಂಗ

ಕಡಲಿಗೂ ಕೊನೆಯಿದೆ ಭಾನಂಗಳಕೆಲ್ಲಿ

ಬಯಕೆಯ ಮೀರಿಸಿದ ಭುವನವೆಲ್ಲಿ / 

                         ✒ ಬಸನಗೌಡ ಗೌಡರ


No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...