Wednesday, October 21, 2020

* ಆಕ್ರಂದನ *

ಉಂಡವನಿಗೆ ತಿಳಿಯದು ಹಸಿದವನ ದಾಹ 

ಬಂಡೆಳವ ಮುನ್ನ ನೀಡುಬೇಕು ಜಾಣ

ಇಂದು ನಿನ್ನದು ನಾಳಿನ್ನಾರದು ನಾಕಾಣೆ

ಉಣಿಸುವ ಕರದಲಿರುವುದಿವರ ಪ್ರಾಣ//

 

ಬೀದಿ ಬದಿಯಲ್ಲಿ ಭಿಕ್ಷೆ ಬೇಡುವರೆ

ಹಿಡಯಷ್ಟು ಪ್ರೀತಿಯ ನೀಡಿದರೆ

ಕೈಲಾದಷ್ಟು ಹೊಟ್ಟೆಗೆ ಹಿಟ್ಟು ಕೊಟ್ಟರೆ

ಕೈಚಾಚಿ ಪಡೆವರೆ  ಬಡತನ ಹಿಂಗಿದರೆ


ಅನ್ನ ನೀಡುವ ಕೈಗಳು ಸದಾ ಮೇಲಿವೆ

ಅರಿಯದೆ ಹರಿದು ತಿನ್ನುವ ಕರಗಳಿವೆ

ಅರೆಗಂಜಿಗಾಗಿ ಇವರೆಲ್ಲರ ಆಕ್ರಂದನ

ಹರನಿಲ್ಲವೆ ನೀಡಿ ಮರೆಯಲು ಮೇಲೆ/ 


ತಿಳಿಯದೆ ತೆವಲಿಗೆ ತಂದರು ಭೂಮಿಗೆ  

ತಂದೆ ತಾಯಿ ಸಮಾನರಿವರು ಹಂದಿಗೆ

ತಿರಿದು ತಿನ್ನುವ ಮಕ್ಕಳದಲ್ಲದು ತಪ್ಪು

ಪೊರೆವಂತೆ ನಟಿಸುವವನಾವ ಬಗೆ //


        ಬಸನಗೌಡಗೌಡರ


No comments:

Post a Comment

*ಅಪ್ಪ ನಮ್ಮೆಲ್ಲರ ಛಪ್ಪರ *

ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು         ಈ ದಿನ ಅಪ್ಪನ ಪ್ರೀತಿಯ ಈ ನೆನಪುಗಳ ಬುತ್ತಿ  ಜಾಮೂನಿನಂತೆ ತೇಲಿ ಬರುತ್ತಿವೆ.ಇವು ಎಲ್ಲರ ಜೀವನದಲ್ಲೂ ಸಹಜವಾಗಿದ್ದರೂ ಅವುಗಳ...