Thursday, April 1, 2021

* ಮೌನದಲ್ಲಿ ಮರೆತಾಗ *

ಎಡ ಬಲದ ನಡುವೆ ಬೇಡ ಗೋಡೆ 
ಎರಡರಲ್ಲೂ ಉಂಟು ಕೊಳಚೆ ರಾಡಿ
ಹರಿದು ಹೋಗಲಿ ನಿತ್ಯ ಅದು ಕೋಡಿ
ಸೇತುವೆ ಕಟ್ಟೋಣವಲ್ಲಿ ಜೊತೆಗೂಡಿ//

ನಿತ್ಯ ಹಾಕಿದರೆ ಕೊಳಚೆ ಆಚೆ ಈಚೆ 
ಸಿಡಿಯದಿರುವುದೆ ಮುಖಕ್ಕೆ ಪಾಚಿ 
ಸತ್ಯ ತಿರುಚಲಾಗದು, ಗೋಡೆ ಹಾಕಿ
ಸಿಡಿಸಬೇಕು ಗೆಳೆಯ ಬಾಂಬ್ ಹಾಕಿ//

ನಡೆವಾಗ ಎಡುವುದು ಸಹಜ ಕೋಡಿ  
ಸ್ವಾರ್ಥದಿಂದ ಮಾಡಿದರಿವರು ಗಡಿಬಿಡಿ
ಸವಕಳಿ ಸಿದ್ದಾಂತ ಕೇಳಿ ಆಗಿದೆ ಕಿವುಡು
ಸಾಗು ನೀ ತೊಳೆಯಲು ಹಿಡಿದು ಜಾಡು//

ಬರಹದ ಬಣವೆಯಲ್ಲಿ ಸಾವಿರ ಸಾಕ್ಷಿ
ಸಾರಿಸಿ ನೀ ಕಲಕಬೇಡ ಕರುಣೆ ಮಿಕ್ಕಿ 
ಸಾಹಸವು ಉಬ್ಬಿ ನಡೆಯಲಲ್ಲ ಸೊಕ್ಕಿ
ವಿರಹವನ್ನೆ ಮೀರಿ ತೆಗೆಯಬೇಕು ಅಕ್ಷಿ//

ಮೌನದಲ್ಲಿ ಮರೆತಾಗ ಏರಿದೆ ಗೋಡೆ
ಮನ ಬಿಚ್ಚಿ ಮಾತನಾಡಲೇನು ದಾಡಿ
ನಡುವೆ ಸಿಕ್ಕವರ ಬಾಳು ನಾಯಿಪಾಡು  
ಮಾತಾಗಲಿ ಮಾನವೀಯತೆ ಹಾಡು//
         
          ಬಸನಗೌಡ ಗೌಡರ

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...