Saturday, April 10, 2021

* ಮತ್ತೆ ಚಿಗುರಿತು ಬನ *

ಹೊಸ ವರುಷ ಬಂತು 
ಹರುಷದ ಉಲ್ಲಾಸ ತಂತು
ಹೊಸ ಗಾನ ಹಾಡೋಣ ಬಾ //ಪ//

ಹಳತು ಹೊಸತರಲ್ಲಿ ಸೇರಿಸಿ
ಕೊಳೆತ ಶವಗಳನು ಸರಸಿ
ಹೊಸ ಏಣಿ ಏರೋಣ ಬಾ.. //

ಬೇವು ಬೆಲ್ಲದಲ್ಲಿ ಬೆರೆಸಿ 
ನೊವು ನಲುವಿನಲಿ ಮರೆಸಿ 
ಬನ ಚಿಗುರು ಸವಿಯೋಣ ಬಾ..//

ಹೊಂಗೆ ಹೂವಿನ ತಂಗಾಳಿ ಸೂಸಿ 
ಬೃಂಗದ ಝೇಂಕಾರ ಮನವರಳಿಸಿ
ಸಂಗೀತ ಕಲಿಯೋಣ ಬಾ..//

ಆದಿಯಲಿ ಅರಿವಿನ ಬೀಜವಿರಿಸಿ
ಅವನಿಯ ಅರಿ ಸೌದಿಯ ತೆಗೆಸಿ, 
ಧರಣಿಯ ಮಗನಾಗೋಣ ಬಾ..//

ಮಾಮರದ ಮುಗುಳು ಹೀರಿ 
ಮರಿ ಕೋಗಿಲೆಗಳ ಮಧರ ಗಾನ  
ನವಿಲೇರಿ ಕುಣಿಯೋಣು ಬಾ....//

ಬಸನಗೌಡ ಗೌಡರ

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...