Sunday, June 6, 2021

* ಭಾವನೆಗಳರಳಿ ಜನಮಂದಿರವಾಗಿ *

ಏಳು ಬೀಳಿನ ನಡುವೆ ನಡೆದಿದೆ 
ತಾಳ ಮದ್ದಲೆ, ಬೀಳನು ತುಳಿದು 
ಏಳುವುದು ಸಹಜವಾಗಲಿ ಗೆಳೆಯ 
ತುಳಿದ ಕಾಲು ಸುತ್ತಿ ಏಳು ಬಳ್ಳಿಯಾಗಿ/

ಕಾಳಸಂತೆಯಲಿ ಖರೀದಿಸಿ ಖೂಳರಿಗೆ 
ಬಾಳು ನೀಡುವ ಕರ್ಮವ ತೊರೆದು
ಬಳಿ ಬಂದ ವ್ಯಾಪಾರಿಗಾಗು ಗೆಳೆಯ 
ಕೊಳತೆ ರಾಡಿ ಬಳಸು ಗೊಬ್ಬರವಾಗಿ/

ಬೇವಿನ ಬೀಜಕ್ಕೆ ಬೆಲ್ಲದ ಬೆರಣಿ ಮೆತ್ತಿ
ಸಾವಿರುವ ದೇಹ ವ್ಯಾಮೋಹ ಕಳೆದು 
ಭವಕೆ ಬಗ್ಗುವ ಬದುಕಾಗಲಿ ಗೆಳೆಯ 
ಭಾವನೆಗಳರಲಿ ಜನ ಮಂದಿರವಾಗಿ/

ಉಚ್ಚರೆನ್ನುವ ಹುಚ್ಚರ ಹೆಚ್ಚುಗಾರಿಕೆ
ಹೆಚ್ಚು ದಿನ ನಡೆಯದಂತೆ ಹರಿದು
ನೀಚರೂ ಸಚ್ಚಾರಿತ್ರ್ಯರಾಗಲಿ ಗೆಳೆಯ 
ಇಚ್ಛಿಯಂತೆ ನಡೆ ನೆಚ್ಚಿನ ಬಂಧುವಾಗಿ/

ತನ್ನದೆ ಸರಿ ಎನ್ನುವ ತತ್ವ ಭಿನ್ನರ ಕಣ್ಣು 
ಹೊನ್ನಿಗೆ ಬಣ್ಣ ಬದಲಿಸಿದರೆ ಸರಿದು
ತನ್ನತನ ಉಳಿಸಿಕೊಳ್ಳುಬೇಕು ಗೆಳೆಯ 
ತನ್ನಂತೆ ಪರರ ಬಗೆ ಹರ ಗುರುವಾಗಿ /

                        ಬಸನಗೌಡ ಗೌಡರ

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...