Sunday, November 21, 2021

* ಕಟ್ಟುವೆವು ನಾವು *


ಕಟ್ಟುವೆವು ಕನಕ ಕಟ್ಟಿದ 
ಕನಸಿನ ನಾಡೊಂದನು /
ಮನುಕುಲದ ಬೀಡೊಂದನು
ವರ್ಗವಿಲ್ಲದ ವರ್ಣವಿಲ್ಲದ  
ಸ್ವರ್ಗದ ನಾಡೊಂದನು//

ಬಸವಕಲ್ಯಾಣ, ಬಾಡದ 
ಶರಣ ದಾಸರ ಸಂತತಿಯ
ಮಾನವತೆ ನಾಡೊಂದನು/ 
ಹೊಸೆದು ತೀಡಿ ಕಟ್ಟುವೆವು
ಬಸವ ನಾಡೊಂದನು//

ಬುದ್ಧ ಬಸವ ದಾಸ ಶ್ರೇಷ್ಠ 
ಶುದ್ಧ ಭಾವದ ನಾಡೊಂದನು/
ರವಿ ಕಾಣದ ಜಗವ ಸೇರಿ
ಜಿಡ್ಡು ತೊಳೆದು ಕಟ್ಟುವೆವು 
ರಾಗಿಯ ನಾಡೊಂದನು //

ವಿಜಯನಗರ ವೈಭವ ಮತ್ತೆ 
ಮರಳಿ ಅರಳುವ ನಾಡೊಂದನು/
ಹರಿ ಕೃಷ್ಣ ನಾಮ ಸ್ಮರಣೆಯ 
ದಾಸ ಸಾಹಿತ್ಯ ಸಂಭ್ರಮದ 
ಸಂಗೀತ ನಾಡೊಂದನು//

ಕದವಿಲ್ಲದ ಕದನವಿಲ್ಲದ
ಶಾಂತಿ ಸಮೃದ್ಧಿಯ ನಾಡೊಂದನು/
ಭ್ರಾಂತಿ ಮೀರಿದ, ಆಧ್ಯಾತ್ಮದ 
ಅನುಭೂತಿಯ ಅಮರತ್ವದ 
ಸಾಮರಸ್ಯದ ನಾಡೊಂದನು//

ಬಸನಗೌಡ ಗೌಡರ
ಉಪನ್ಯಾಸಕರು ಗುಳೇದಗುಡ್ಡ

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...