Wednesday, December 8, 2021

* ಬಾಗಬೇಕು ಇಲ್ಲಿ *

ಬಂದು ಹೋಗುವುದು 
ಬೆಂದು ನೊಂದು 
ಹೋಗಲು ಅಲ್ಲ// 

ಬೇಲ್ಲದಂತೆ ಸಹಕಾರ 
ಹರಡುವೆ 
ಬೆಳದಿಂಗಳಾಗಿ ಎಲ್ಲೆಲ್ಲೂ //

ನಾನೊಂದು ಚಂಡು 
ಯಾರ ಕಾಲಿಗೆ ತಾಗಿದರೇನು 
ಪುಟಿಯುವ ಕಾಲ್ಚಂಡು 
ಗೋಲಿಗಾಗಿ 
ಮಣಿಯ ಬೇಕು ಇಲ್ಲಿ//

ನಾನೊಂದು
ಹುಡುಗರಾಡುವ 
ಚಿನ್ನಿದಾಂಡು
ಯಾರು ಬಡಿದರೇನು
ಹಾರುವ ತುಂಡು 
ದೂರ ಅಳೆಯಬೇಕು 
ಸಾಗಿದಷ್ಟು ಇಲ್ಲಿ//

ನಾನೊಂದು 
ಶ್ರೀಗಂಧದ ಕೊರಡು
ಯಾರು ತೆಯಿದರೇನು 
ಚಂದನದ ತುಂಡು
ಸುವಾಸನೆಗೆ 
ಬಾಗಬೇಕು ಇಲ್ಲಿ//

ಸಾಲಾಗಿ ಸಾಗುವ 
ಇರುವೆಗೇನು ಗೊತ್ತು !
ನಾವೆಲ್ಲ ಗುರುಗಳೆಂದು 
ಕಿರಿಯರಾದರೇನು 
ಕಲಿಯವೆ 
ಮಗುವಾಗಿ ಇಲ್ಲಿ//

 ಬಸನಗೌಡ ಗೌಡರ

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...