Friday, April 8, 2022

* ಧರಣಿಯೊಂದುರಿವ ಕೆಂಡ *



ಎನ್ನ ಮನೆಯಂಗಳವಿಂದು 
ಆಗಿದೆ ಮಂಗಳ, ಮುಕ್ಕೋಟಿ 
ದೇವತೆಗಳ ಮಡಿಲಲ್ಲಿ ಕಾಪಿಟ್ಟು 
ಮಲಗಿದ ಗೋಮಾತೆಗಳ
ಆಶ್ರಮವಿಂದು.

* ಧರಣಿಯೊಂದುರಿವ ಕೆಂಡ *

ಧರಣಿಯೊಂದುರಿವ ಕೆಂಡ 
ಹರಿವ ನೀರಿಗೆಲ್ಲಿದೆ ಹೊಂಡ 
ನೆರಳನರಿಸಿ ಬಂದಿವೆ ಹಿಂಡ
ಯಾವ ನೀರೆಯದಿದು ತಂಡ.
 
ಓಡುವ ಕುದುರೆಯೇರಿದ 
ರವಿ, ಅದಕಿಲ್ಲ ತಡಿ,ಧರೆಯ 
ತುಂಬೆಲ್ಲಾ ಬೆಂಕಿಯ ಕಿಡಿ.
ನಂಬಿ ನೆರಳರಸಿದೆ ಹಿಂಡು.

ನೇಸರನ ಬಿಸಿಯುಸುರಿಗೆ 
ಆಸರೆಯ ಹುಡುಕುತಲಿ 
ಕಾಶಿಯ ಯಾತ್ರೆಗೆ ಬಂದಂತೆ 
ಹಸುಗಳ ರಾಶಿಯ ದಂಡು.

ಹೊಂಗೆ ತೆಂಗು ಜೊತೆಯಾಗಿ 
ಅಂಗಳದಿ ಮಂಟಪ ಮಾಡಿ 
ಭಂಗ ಬರದಂತೆ ಭೃಂಗಗಳ 
ಗಂಧರ್ವ ಲೋಕಧರೆಗಿಂದು.

ಮಾತು ಮಾತಿಗೆ ಸೋಲದ
ಜೋತು ಬೀಳುವ ನಾಕ ನರಕದ 
ಚಿಂತನ, ಯಾತರ ಗೊಡವೆಗಳಿಲ್ಲ
ಸೋತು ಗೆದ್ದ ಗೋವುಗಳ ತಂಡ.

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...