Saturday, August 27, 2022

ಕಣ್ಣು ತೆರೆಯಿಸಿದೊಂದು ಸಣ್ಣ ಚಿತ್ರ

ಕಣ್ಣು ತೆರೆಯಿಸಿತೊಂದು
ಸಣ್ಣ ಚಿತ್ರ ,ಸಣ್ಣವರಾದರೆ ಏನು ?
ಇನ್ನೂ ಕಲಿಯಬೇಕಿದೆ ನಾನು, 
ನನ್ನವರು.ಬೆನ್ನು ಮೇಲೆ 
ಪದವಿಯ ಮೂಟೆ ಹೊತ್ತವರು.
ಹೊನ್ನು ಹೊದ್ದವರು, ಎದ್ದವರು, ಗೆದ್ದವರು
ಕಣ್ಣು ಕಂಡರೂ ಹೃದಯಕ್ಕೆ ಬಗ್ಗದವರು.
ಕಲಿಯಬೇಕಾಗಿದೆ ಇನ್ನೂ !
ಆದರೂ ನಿಮಗೆ ಕಲಿಸುವ 
ಹಿರಿಯರು, ಗುರುಗಳು ನಾವು
ನೀವು ಕಲಿಯುವುದಕ್ಕಿಂತ 
ನಾವು ಕಲಿಯುವುದೆ ಇನ್ನೂ ಇದೆ !
ಹೊಟ್ಟೆ ಹೊರೆಯಲು ಪಡುವ 
ಕಷ್ಟ ಜೀವಿಗಳೆ ನಿಜ ದೇವರು 
ಪಕ್ಕದಲ್ಲಿ ಪವಡಿಸಿದರು ದಿಟ್ಟಿಸಿ 
ನೋಡಿ ಸರಸರನೆ ಏರುವ
ಕಾಣದೆ ಇರುವ ಕಲ್ಲು ದೇವರಿಗೆ ಬರುವ 
ನನ್ನವರು ಕಲಿಯಬೇಕಾಗಿದೆ 
ಆ ಕಂದಮ್ಮಗಳ ಶಾಲೆಯಲ್ಲಿ 
ಈ ನಿರಮ್ಮಳ ಭಾವದಲ್ಲಿ !

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...