ಈಗ ನಾನೊಬ್ಬ ಒಂಟಿ
ಯಾಕೆಂದರೆ ಹೊಡೆಯುತ್ತಿರವೆ ಗಂಟೆ.
ಚೆ.ಚೆ. ಪ್ರಾಯಶಃ ನೀವು ತಿಳಿದಂಗಲ್ಲ ...
ಅದು ಇನ್ನೂ ದೂರವಿದೆ ಸಂತೆ.
ಅಜ್ಜಿ ಕೇಳಿದ್ರು ..ಪಿಂಟು
ಜಗವೆಲ್ಲ ಮಲಿಗಿದೆ ನೀನೇಕೆ ಎದ್ದೆ ?
ಎಷ್ಟಂತ ಮಲಗುವುದು ಅಂಟಿ,
ಎಚ್ಚರಗೊಳ್ಳಲು ಹೊಡದೆ ಗಂಟೆ .
ಮಗ್ಗಲು ಚರ್ಮ ಕೊಳೆಯಿತು
ಹಾಳಾದ ಮೂಳೆ ಸೆಳೆಯಿತು
ಎಷ್ಟೂಂತಾ ಮಲುಗಲಿ ?
ಅಜ್ಜಿ ಹೇಳಿತು ..
ಜಗವೆಲ್ಲ ಮಲಗಿರಲು ಎದ್ದವರೆಲ್ಲ ಗೆದ್ದವರೆ.
ಬುದ್ಧನೂ ಎದ್ದನಲ್ಲವೆ ?
ಹೆಂಡತಿ ಮಗ ,ಅಷ್ಟೇ ಏಕೆ ರಾಜ್ಯವೆ !
ಕಂಥಕವೊಂದೆ ನಿಂತಿತ್ತು.
ಬಹು ದೂರ ನಡೆದ
ಚರ್ಮ ಬೋನಿಗಂಟಿತ್ತು
ಇಲ್ಲ ಜ್ಞಾನ ಪ್ರಾಪ್ತಿ .
ಅರಳಿ ಮರವೆ ಬರಬೇಕಾಯಿತು
ಆಶೆಯೇ ದುಃಖಕ್ಕೆ ಮೂಲವೆಂದರಿಯಲು.
ತಿಳಿಯಲಿನ್ನೂ ಎಚ್ಚರಗೊಂಡಿಲ್ಲಾ....
ಎಚ್ಚರಗೊಳ್ಳಲು ಮಲಗಿರುವರೇನು ?
ಮಲಗಿದಂತೆ ನಟಿಸಿದವರು ಅವರೆಲ್ಲಾ
ಜೊತೆಗೆ ಇರಬೇಕಲ್ಲ... !
ಇಲ್ಲದಿದ್ದರೆ ವಿಷ ನೀಡುವರು
ನಿನ್ನವರೆ ಬೇರಾರಲ್ಲ..!ಒಬ್ಬಂಟಿಯಾಗಿ ನಡೆದ
ಬುದ್ಧನಿಗೇನಾಯಿತು ?
ಬದ್ದ ವೈರಿಗಳೇನಲ್ಲ ಶಿಷ್ಯ ಆನಂದನೆ
ವಿಷವಿಟ್ಟನಲ್ಲಾ.
No comments:
Post a Comment