Saturday, December 3, 2022

ತನಗಗಳು

ರವಿವಾರದ ತನಗಗಳು

ಮಂದಹಾಸವ ಬೀರಿ 
ಹಂದರದಲ್ಲಿ ಕಟ್ಟಿದೆ
ತಾಳಿಕೊಳ್ಳಲು ತಾಳಿ
ಇವಳು ಬಿರುಗಾಳಿ.

ಸಂಸಾರ ಅದ್ಹೇಗೆ 
ಆಗುತ್ತದೆ ಸಸಾರ 
ಬಾಗಿದವನ ಮೇಲೆ
ಸದಾ ಇರುತ್ತೆ ಬಾರ.

ಹುಡುಗಿಯಾ ಅಲ್ಲಲ್ಲ
ಇವಳು ತುಡುಗಿಯೇ
ಕದ್ದಳು ಕಾಪಿಟ್ಟಿದ್ದ
ಮುತ್ತಿನಂತ ಹೃದಯ.

ಮಂಚದ ಮೇಲೆ ಲಂಚ
ಎಚ್ಚರ ಬೇಕು ಕೊಂಚ 
ಅದಲ್ಲ ನಿನಗೆ ಲಂಚ್ 
ನಿನ್ನ ಮುಗಿಸೊ ಸಂಚು.

ಬಸನಗೌಡ ಗೌಡರ

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...