Saturday, April 22, 2023

* ಬಂತು ಫಲಿತಾಂಶ *



ಬೀಗಬೇಡ ಬಾಗಲೂಬೇಡ 
ಅಂಕ ಒಂದೇ ಅಂತಿಮವಲ್ಲ
ಅಂಕ ಮುಗಿದ ಮೇಲೆ 
ಚಿಂತೆ ಮಾಡಿ ಫಲವಿಲ್ಲ॥।

ಅನುದಿನವೂ ಓದಬೇಕು 
ಮನದಿ ಮನನ ಮಾಡಬೇಕು 
ಕೊನೆದಿನದ.ಫಲಕೆ ಇವಾಗ
ಶ್ಯಾನೆ ಚಿಂತೆ ಯಾಕೆ ಬೇಕು ।।

ದುಡಿದುದರ ಫಲವಿದು
ಬಂದಿದೆ ಪೂರ್ವ ದಿನದ ಲೆಕ್ಕ
ಮಾಡಿಹರು ಈಗ ಚೊಕ್ಕ,
ಕುಳಿತು ಚಿಂತೆ ಯಾಕೆ ಬೇಕು ।।

ಮುಂದಿದೆ ಮೂರು ಸಾವಿರ ಮೈಲು 
ಬಂದಿರುವೆ ಬರಿ ಆರು ಮೈಲು 
ಬೆಂದು ಸಾಗಿದರೆ ಬಹು ದೂರ 
ನೊಂದುಕೊಳ್ಳುವುದೇಕೆ ಬೇಕು॥

ಗೆದ್ದವರು ನಿದ್ದೆಗೆ ಜಾರಬೇಡಿ
ಎದ್ದು ನಿಂತು ಮರೆಯಬೇಡಿ 
ಸದ್ದು ಮಾಡಿ ಕೆರಳಿಸಬೇಡಿ
ಬಿದ್ದರೆ ಕಲ್ಲು ಬೀಸಲಿದ್ದಾರೆ ಜೋಕೆ॥


1 comment:

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...