Thursday, September 5, 2024

ಗುರು

ಅರಿವಿನ ದಾರಿ ತೋರಿ,ಕರೆಯುವ 
ಗುರುವೆ ನಿಮಗೆ ನನ್ನ ಶರಣು।
ಅರಿಷಡ್ವರ್ಗ ತೊರೆಯುವಂತೆ ತೀಡಿ
ಗುರಿಯೆಡೆಗೆ ನಡೆಸುವ ನಿಮಗೆ ಶರಣು॥

ಪುಸ್ತಕದ ಜ್ಞಾನ ಮೀರಿ ಹೊತ್ತಿಸಿದೆ
ಮಸ್ತಕವನ್ನರಳಿಸುವ ಸತ್ಯದ ಬೋಧನೆ ।
ಗಸ್ತು ತಿರುಗಿದೆ ನೀ.. ನಾ ದಾರಿ ಬಿಡದಂತೆ
ಶಿಸ್ತಿನ ಜೀವನ ಕಲಿಸಿದ ಗುರುವೆ ಶರಣು॥

ಭೌತಿಕ ಸುಖದ ಬಲೆಯ ಹರಿದು
ನೀತಿಯ ಮಾರ್ಗ ಹಿಡಿದ ನೀ ಶರಣ।
ಜಾತಿ ಮೀರಿ ಮಾನವತ್ವದಲ್ಲಿ ಕುಳಿತು
ಮತಿ ನೀಡಿದ ಗುರುವೆ ನಿಮಗೆ ಶರಣು॥

ಮನಸ್ಸು ಅರಳಿಸಿ ಕನಸು ಕಟ್ಟಿಸಿ
ಧನುಸ್ಸು ಹಿಡಿಸಿ ತಮಸ್ಸಿನೊಡನೆ ಕದನ।
ಬಾಣ ಬಿರುಸು ಬೆಳಕಿನೊಡನೆ ಪಯಣ 
ಅನುದಿನ ಅನುರಣನ ನೀಡಿದಿರಿ ಜ್ಞಾನ ॥

 







No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...