Saturday, October 12, 2024

ಕನ್ನಡದ ಕಂದ

ಕನ್ನಡದ ಮಾಧುರ್ಯ ಕಂದನ 
ಬಾಯಲ್ಲಿ, ಕದಳಿಯ ಎಲೆ 
ಗಾಳಿಗೆ ಸುಳಿದಾಂಗ ।।

ಕನ್ನಡದ ವಾಣಿ, ಕಟ್ಟಿದರೆ 
ಕರಿಮಣಿ, ಇಟ್ಟರೆ ಚೂಡಾಮಣಿ
ಬೆಟ್ಟಕ್ಕೆ ಬೆಳಕಿನ ಕಿರಣದಾಂಗ।।

ಪದಗಳ ಜೊತೆಗೆ ಹದವಾಗಿ
ಓಡುವಳು, ವಾದಗಳಲ್ಲಿಯೂ  
ವೇದನಾದ, ವೇದಾಂತಿಯಾಂಗ॥

ಪರಭಾಷೆಗೆ ನೀಡವ ಗೌರವ
ಅರಿವಿಗೆ, ಕನ್ನಡ ಭಾಷೆಯ ಪರ
ಹೊರೆಯಾಗದ ಹಿರಿತನದಾಂಗ॥

ಮಾಗಿದ ಮಾತುಗಳು,ತೂಗುವಳು
ತತ್ವಜ್ಞಾನ, ನುಡಿ ಉಡಿತುಂಬ 
ಮುತೈದಿಯ ಎಲೆಯಡಕಿಯಾಂಗ॥

ಭಾಷೆಯಲ್ಲಿ ಬೀಸುವಳು ಸಂಸ್ಕಾರದ
ಬೀಜ,ಸಂಸ್ಕೃತಿ ವಾರಸದಾರಳಿವಳು
ಹೊಸತನಕ್ಕೂ ಬೇಕಿವಳು ಕಳಸದಂಗ॥






No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...