Thursday, July 3, 2025

ನೋಟ ಬುಕ್ ವಿತರಣೆ




ಹಣ ಬಂದಾಗ ಗುಣ ಕಳದುಕೊಂಡು 
ಹಾದಿ ತಪ್ಪಿದವರು ಬಾಳ ಜನ
ಗಳಿಸಿದಾಗ ಬಳಸಲು ಶಾಲೆಗೆ 
ಬಂದವರು ಬಹಳ ಕಡಿಮೆ ಜನ

ಬಡವರ ಮಕ್ಕಳಿಗೆ ಬಾಗ್ಯ ನೀಡಲು
ಗುಳೇಗುಡ್ಡದಾಗ ಏನು ಕಡಿಮೆ ಜನ
ಕಳಸಾ ಹಿಡಕೊಂಡು ಕರಕೊಂಡ 
ಬಂದಾರ ಪುರಂದರ ವಿಠ್ಠಲ, ಈ ದಿನ 

ಓದುವ ಮಕ್ಕಳಿಗೆ ಪುಸ್ತಕ ತಂದಾರ
ಸವದತ್ತಿ ಯಲ್ಲಮ್ಮನ ಮಗ ಪರಸುರಾಮಣ್ಣ
ಓದುವುದೊಂದೆ ಬಾಕಿ ಐತಿ ಮಕ್ಕಳ, 
ಜಾದೂ ಮಾಡಿದಂತಲ್ಲ ಸಾಧನ 

ನಾವೆಲ್ಲ ತೆಗೆದುಕೊಳ್ಳೋಣ ಪ್ರತಿಜ್ಞೆ  
ಮೊಬೈಲ್ ರೀಲ್ಸ್ ನೋಡೋದು ಬಿಡೋಣ
ಅದೆ ದಾನಿಗಳಗೆ ತುಂಬು ಹೃದಯದ ನಮನ 
ತುಂಬು ಹೃದಯದ ನಮನ 




  

No comments:

Post a Comment

ನಗರೀಕರಣ

ನಾಗರಿಕತೆ ಬಂದದ್ದೆ ನಗರಗಳ  ಉಗಮದಿಂದ ಇದು ಜೀವನ ಸುಲಬಗೊಳಿಸಲು  ಮಾನವ ಮಾಡಿದ ಅನ್ವೇಷಣೆಯ ದಾರಿ ನಗರದ ಪ್ರತಿ ಮೂಲೆಯೂ ಬಡಾವಣೆ ಹಿಗ್ಗುತಿದೆ  ಕೃಷಿ ಭೂಮಿ ಕುಗ್ಗುತಿದೆ  ಹ...