Friday, May 20, 2022

* ಮುಂಗಾರು ಮಳೆ *

ಮುಂಗಾರು ಮಳೆ 
ಏನು ನಿನ್ನ ಮಹಿಮೆ ! 
ಜೇನು ಮಧುವಿನಂತೆ 
ನಿನ್ನ ಸೃಷ್ಟಿಯ ಗುಣ.! 
ಸಿಗದು ನುಡಿ, ಬರೆದು ಬೀಗಲು
ಬರವು ಎನಗೆ ಕಡವ ತರಲೆ ?
ಅರಳಿ ನಿಂತ ಮರಳು ಕಣ 
ಸೂಸಿ ಬಂತು ಶ್ರೀಗಂಧ ಪವನ
ಮೇ ಮಾಸದುರಿವ ಕೆನ್ನಾಲಿಗೆ 
ಸೀಳಿ ಹರಿಸಿದೆ ತಂಪಿನ ದಳ !
ಗುಡುಗು ಸಿಡಿಲು ಪಡೆದ 
ಭುವಿ ಒಡಲ ಕಾವು ಗರ್ಭಧರಿಸಿ 
ಉಸಿರೆ ಹಸಿರು ಕಾನನ !
ಹೊಸ ಶಕೆಯು ಸುತ್ತಿ ಬರುವೆ
ಬೆಸೆವ ನೀನೆ ಸಾರ್ವಭೌಮ.!  
ಅಶ್ವಿನಿ, ಭರಣಿ, ಕೃತಿಕ ಬಲ
ಓಡಿ ಬರುತಿದೆ ರೋಹಿಣಿ.
ನಾಮ ಹಲವು ನಿಯಮ 
ಒಂದೆ ವರುಣ !
ಬಿರಿದ ನೆಲ, ಬರಿದು ಕೆರೆ 
ಹರಿಸಿದೆ ಮೇಲೆ ನಿನ್ನ ವರ
ದುಮ್ಮಿಕ್ಕುವ ಬಲ ಒಂದೇ ಎರಡೇ 
ಕಣ್ಣು ಸಾಲವು ಜಗದ ತುಂಬಾ 
ಜೀವ ಜಲ ಜಿಗಿಯಿತು 
ಕಾರಂಜಿ ತನನ !

Wednesday, May 18, 2022

" ಏನೇ ಬರಲಿ ನಗುತ್ತಾ ಸ್ವೀಕರಸಿ "

"  ಏನೇ ಬರಲಿ ನಗುತ್ತಾ ಸ್ವೀಕರಸಿ "

        ಇಂದು ಎಸ್ ಎಸ್ ಎಲ್ ಸಿ ಫಲಿತಾಂಶದ ದಿನ.ಇಲಾಖೆಯ ಸದಾಶಯದಿಂದ ಅದು ನಮ್ಮ  ಮನೆಯ ಬಾಗಿಲುವರೆಗೆ ಬರುತ್ತಿದೆ, ನಮಗೆಲ್ಲ ಸಂತೋಷದ ವಿಚಾರ. ಇದಕ್ಕೆ ಅನ್ನುವುದು ಕಾಲ ಎಲ್ಲಾ ಅವಧಿಯಲ್ಲಿ ಒಂದೆ ತೆರನಾಗಿ ಇರುವುದಿಲ್ಲ ಅಂತಾ.ಅಂದು ಫಲಿತಾಂಶ ನೋಡಲು ಹೋಗುವುದೆ ಒಂದು ವಿಶಿಷ್ಟವಾದ ಅನುಭವವಾಗಿತ್ತಲ್ಲವೆ !.ಇದು ಮಾಹಿತಿಯುಗ ಮಾಹಿತಿ ಬಹುಬೇಗ ಎಲ್ಲರಿಗೂ ತಲುಪಲು ತುದಿಗಾjrrಲಲ್ಲಿ ನಿಂತಿರುತ್ತದೆ. ಹೀಗಾಗಿ ನಮಗಿಂತmmtjkyjmymmmk ನಮ್ಮ ಮಕ್ಕಳು ಸಾಕಷ್ಟು ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ, ಮಾಡಿದ್ದಾರೆಯೂ ಕೂಡಾ, ಸಂತೋಷ. ಮಾಹಿತಿಗngmmgಳೆಲ್ಲವೂ ಶಿmmm.mmmಕ್ಷಣ ಅಲ್ಲ ಮಾಹಿತಿಗೆ ನಾವು ಹೇಗೆ ಪ್ರತಿಕ್ರಿಯೆ ನೀಡಬೇಕು ಎನ್ನುವು?gym?m?thhnmjದು ಕೂಡಾ ಒಂದು ಶಿಕ್ಷಣ ! ಆತ್ಮೀಯ ಪಾಲಕ,ವಿದ್ಯಾರ್ಥಿಗಳೆ ಫಲಿತಾಂಶಕ್ಕೆ ತಾವೆಲ್ಲ ತುಂಬಾ ತವಕದಿಂದ ಇರುವುದು ಸ್ವಾಭಾವಿಕವು ಕೂಡಾ ತಪ್ಪೇನೂ ಅಲ್ಲ ಬಿಡಿ ಆದರೆ ಫjmlmಲಿತಾಂಶ ಏನೇ ಬರಲಿ ಸಂತೋಷದಿಂದ ಸ್ವೀಕರಸೋಣ. ಈಗ ಯಾರು ಯಾರನ್ನು ದೂರುವ, ಇಲ್ಲವೆ ನಮ್ಮನ್ನು ನಾವು ದೂರುವ ಸಮಯವಲ್ಲ ಬದಲಾಗಿ ಈ ಮಾಹಿತಿ ಯುಗದಲ್ಲಿ ನಮ್ಮ ಮಗು ಹಿಡಿಯಬೇಕಾದ ಮಾರ್ಗ ಗುರುತಿಸಿ ನಿರ್ಧಾರ ತೆಗೆದು ಕೊಳ್ಳುವ ಕಾಲ ಈ ಸಂದರ್ಭದಲ್ಲಿ ಯಾರು ಸರಿಯಾದ ನಿರ್ಧಾರ ತೆಗೆದು ಕೊಳ್ಳುವರೊ ಅವರು ಮುಂದಿನ ದಿನಮಾನದಲ್ಲಿ ನಿಜವಾದ ಜೀವನದ ಫಲಿತಾಂಶ ಪಡೆಯಬಲ್ಲರು. ಇಂದು ಬರುವ ಫಲಿತಾಂಶದ ಗುಣಗಳು ಅಂತಿಮವೂ ಅಲ್ಲ, ನಿರ್ಧಾರ ತೆಗೆದುಕೊಳ್ಳಲು ಇರುವ ಕೇವಲ  ಕೆಲವು ಆಧಾರ ಸ್ಥಂಭಗಳು ಮಾತ್ರ .ನಿನ್ನೆ ದಿನ ನನಗೆ ಮೂವತ್ತು ವರ್ಷಗಳ ನಂತರ ಬಿಇಡಿ  ಕ್ಲಾಸ್ ಮೇಟ್ ಒಬ್ಬರು ನನ್ನದೆ ಸ್ನೇಹಿತರು ರಚಿಸಿದ ವಾಟ್ಸ್ಆಪ್ ಗ್ರೂಪ್  ನಲ್ಲಿ ಮೂವತ್ತು ವರ್ಷಗಳ ನಂತರ ಗಮನಕ್ಕೆ ಬಂದರು ಮತ್ತು ಹೀಗೆ ಬರೆದಿದ್ದರು " ನಾನು ಬಿಇಡಿ ಯಲ್ಲಿ ಹಿಂದಿನ ಬೆಂಚಿನಲ್ಲಿ ಕುಳಿತಿದ್ದ ವಿದ್ಯಾರ್ಥಿ ಬಹಳಷ್ಟು ವಿದ್ಯಾರ್ಥಿಗಳಿಗೆ ಗೊತ್ತಿರಿಲಿಕ್ಕಿಲ್ಲ. ಗ್ರೂಪ್ ರಚಿಸಿದ್ದು ತುಂಬಾ ಸಂತೋಷ ನನ್ನ ಹೆಸರು ಸೋಮಲಿಂಗ ಗೆನ್ನೂರ ಅಂತಾ ನಾನು ADC ಆಲಮಟ್ಟಿ ಬಾಗಲಕೋಟೆ" ಎಂದು ಬರೆದಿದ್ದರು ನಮಗೆಲ್ಲಾ ಎಷ್ಟು ಸಂತೋಷ ಆಗಿರಲಿಕ್ಕಿಲ್ಲ ಹೇಳಿ Back bencher become a back bone of the society  ಆಗಬಲ್ಲರು ಎನ್ನುವುದು ಮಾಡಿ  ತೋರಿಸಿದ್ದರು. ಅದಕ್ಕೆ ನಾನು ತಕ್ಷಣವೇ ಹೇಳಿದೆ ತಮ್ಮಂತಹ ಸಾಧಕರು ನಮ್ಮ ವಿದ್ಯಾರ್ಥಿಗಳಿಗೆ ನಾನು ಪಾಠ ಬೋಧನೆ ಮಾಡುವಾಗ ಗುಡ್ ಎಗ್ಜಾಂಪಲ್ ಆಗುತ್ತಿರಿ ಸರ್ ಅಂದಿದ್ದೆ. ಆದರೆ ಫಲಿತಾಂಶದ ಬಗ್ಗೆ ಬರೆಯುವಾಗ ಅವರ ಮಾತು ನೆನಪಿಗೆ ಬಂತು ಅವರ ಬಗ್ಗೆ ಬರೆಯಲು ಇನ್ನೂ ಸಂತೋಷ ಎನಿಸುತ್ತಿದೆ.ಫಲಿತಾಂಶಗಳಗೆ ಪುಲ್ ಸ್ಟಾಪ್ ಇರಲ್ಲ , ಇರಬಾರದು ಕೂಡಾ. ಮತ್ತೆ ಮತ್ತೆ ಒಳ್ಳೆಯ ಫಲಿತಾಂಶ ಬರುವಂತಹ ನಿರ್ಧಾರ ತೆಗೆದುಕೊಳ್ಳವ ಮನಸ್ಥಿತಿಯೆ ನಿಜವಾದ ಶಿಕ್ಷಣ.ಎಲ್ಲಾ ವಿದ್ಯಾರ್ಥಿಗಳು ಮತ್ತು ಪಾಲಕರು ಇವತ್ತಿನ ಫಲಿತಾಂಶವನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸೋಣ ಮತ್ತೆ ಜ್ಞಾನ ಗೆಲ್ಲುವ ಆಟ ಆಡೋಣ . ಫಲಿತಾಂಶ ನಿರೀಕ್ಷೆಯಲ್ಲಿರುವ ಎಲ್ಲರಿಗೂ ಶುಭಾಶಯಗಳು 🌷🌷🙏🙏

Monday, May 16, 2022

*ಮಾತು ಹಣ್ಣಾಗಿವೆ ಮನ ಮಲೀನವಾಗಿದೆ *

ಬುದ್ಧ ಪೂರ್ಣಿಮೆಯ ಶುಭಾಶಯಗಳು 

*ಮಾತು ಹಣ್ಣಾಗಿವೆ 
ಮನ ಮಲೀನವಾಗಿದೆ  *

ಬುದ್ಧ ! ನಿನ್ನ ದಾರಿಯಲ್ಲಿದ್ದರೆ 
ಏನು? ರದ್ದಿ ಕಾಗದ ಈ ಜನರೆಲ್ಲಾ
ನೋಡಲು ಕಣ್ಣುಗಳಿಲ್ಲ 
ಕೇಳಿಸಿಕೊಳ್ಳಲು ಕಿವಿಗಳಿಲ್ಲ 
ಹೇಳಲು ಬಾರದ ಮೂಗರು ಇವರೆಲ್ಲಾ !
ಮಾತು ಹಣ್ಣಾಗಿಸಿ ಮನ ಮಲೀನ 
ಮಾಡಿದವರೆ ಗೆಲ್ಲುತಿರುವರು ಜಗದಲ್ಲೆಲ್ಲಾ!
ನೀನಾದರೂ ಸುದೈವಿ 
ನಿನ್ನ ಮಾತು ಕೇಳಿಸಿಕೊಂಡವರೆ 
ಬೆಳಗಿದರು ಜಗದ ತುಂಬೆಲ್ಲಾ 
ಪಟ್ಟಿಯೂ ದೊಡ್ಡದೆ ಇದೆ
ಅಶೋಕ, ಕಾನಿಷ್ಕ, ಹರ್ಷವರ್ಧನ 
ಒಬ್ಬರಾ ಇಬ್ಬರಾ...! ಕಿರಿಟ ಕೆಳಗಿಟ್ಟು 
ನಮಿಸುವವರಿದ್ದರು ಮಕ್ಕಳನ್ನೆ ದೇಶ 
ವಿದೇಶಗಳಿಗೆ ಕಳುಹಿಸಿ 
ನಿನ್ನ ಮಾತಿಗೆ ಧ್ವನಿಯಾಗಿಸಿದ್ದರು.  
ಎಂಟು ದಿಕ್ಕಿಗೂ ಗಂಟೆ ಬಾರಿಸಲು 
ಸಂಘ ಕಟ್ಟಿದವರಿದ್ದರು 
ನಿನಗೆ ,ನಿನ್ನ ಧರ್ಮಕ್ಕೆ, ನಿನ್ನ ಸಂಘಕ್ಕೆ ,
ಶರಣಾದವರಿದ್ದರು ಹಾಗಾಗಿ 
ನೀನೂ ಒಬ್ಬ ಸುದೈವಿ
ಸಾವು ಕಾಣದ ಮನೆಯ  
ಸಾಸುವೆ ತಾರವ್ವ ಎಂದಾಗ 
ಬದಲಾದವರಿದ್ದರು ! 
ಕೈಗಳನ್ನು ಕಡಿದು 
ಬೆರಳುಗಳನ್ನು ಕೊರಳಿಗೆ ಹಾರ 
ಮಾಡಿಯೂ ಬದಲಾಗಿದ್ದರು ! 
ಹಾಗಾಗಿ ನೀನೂ ಒಬ್ಬ ಸದೈವಿ .
ಬುದ್ಧನೆಂದರೆ ಬೆಳಕೆನ್ನುವ ಭಾವ 
ಬೆಳದು ಬಂದಿದೆ ಸಾವಿರ ಸಾವಿರ 
ವರ್ಷಗಳು, ಇನ್ನೂ ಬದಲಾಗಿಲ್ಲ! 
ತಲೆ ಕಡಿದು ತಲೆ ಹಿಡಿದು 
ತಲೆತಲಾಂತರ ಕರಗದ ಆಸ್ತಿ ಮಾಡಿ 
ತುಲಾಬಾರ ಮಾಡಿಸಿಕೊಂಡವರ ಮಧ್ಯೆ 
ಬುದ್ಧನಿದ್ದರೂ ಏನು ತಾನೆ 
ನಿರೀಕ್ಷೆ ಮಾಡಲು ಸಾಧ್ಯ !
ಬುದ್ಧ ಜಯಂತಿಯ ಸಿದ್ಧ ಶುಭಾಶಯ 
ಓದಿ ನಿದ್ದೆ ಮಾಡಬೇಕಿತ್ತೋನೋ ಇಲ್ಲಿ ?

Wednesday, May 11, 2022

* ಗ್ರಾಮ ದೇವತೆ *

* ಗ್ರಾಮ ದೇವತೆ *

ಏರಿಯ ಗುಡ್ಡದ ಮೇಲೆ 
ಕೇರಿಯ ಗೆರೆಯದಾಟಿ  
ಕೆರೆಯ ದಂಡೆಯ ಮೇಲೆ 
ನೆಲೆಯೂರಿದ ಕರಿಯಮ್ಮ ಲೀಲೆ !!

ಹರದಾರಿ ತುಳಿದ ಜನರು 
ದೂರದಿಂದಲೇ ಬಂತು ಭಕ್ತಿಯಿಂದ  
ಹರಕೆಯೊಂದೆ ಶಕ್ತಿ ಗಣ
ವನ ದೇವತೆ ತೋರು ಲೀಲೆ  !!

ಹೊನ್ನು ತುಂಬಿದ ಹಾನಾಪೂರ  
ಧನ್ಯವಾಯಿತಿಂದು  ಬರಪೂರ 
ಗಣ್ಯರು ಬಂದರು, ಮಾನ್ಯರು ಬಂದರು
ಬಿನ್ನಹ ಕೇಳು ಬಾರೊ ತಾಯೇ !! 

ಬನ್ನಿಯ ಎಲೆಯೊಳಗೆ
ಬಂಗಾರದನ್ನವ ನೀಡಿರುವೆ
ಭರವಸೆಯ ಬದುಕಿಗೆ ಹೊಸ 
ಬೆಳಕು ನೀಡಿರುವೆ ತಾಯೇ !!

ಮೂರು ವರ್ಷಕೊಮ್ಮೆ ಜಾತ್ರೆ 
ನೂರು ವರುಷವಾದರೂ ಹರಕೆ
ಯಾರು ಮಾಡಿದರೇನು, ಬಿಟ್ಟರೆ ಏನು ?
ಅಕ್ಷಯ ಪಾತ್ರೆ ಇಟ್ಟಿರುವೆ ತಾಯಿ!! 

ಕಲ್ಲು,ಗರಸಿನ ಭೂಮಿ  
ಎಲ್ಲೆ ಬಿತ್ತಿದರೂ ಬಂಪರ್ ಬೆಳೆ
ತಾನಿರುವ ಊರು, ಕೇರಿ 
ತಾವರೆಯಂತೆ ಅರಳಿಸಿದೆ ತಾಯಿ !!

Sunday, May 8, 2022

* ಅವ್ವ *

ವಿಶ್ವ ಅಮ್ಮಂದಿರ ದಿನದ ಶುಭಾಶಯಗಳು 

* ಅವ್ವ *

ಭವದೊಳಗೆ ಮಿಗಿಲುಂಟೆ 
ಮರೆತು ಸಾಗುವುದುಂಟೆ 
ಜಗದೊಳಗೆ ಅವ್ವನ ಪದಕೆ 
ಸರಿಸಾಟಿ ಯುಂಟೆ ? !!

ಸಾಕಿ ಸಲುಹಿ ಪೊರೆದವಳು 
ತನ್ನಿಷ್ಟಗಳ ಮರೆತವಳು 
ಕಷ್ಟಗಳ ಮಳೆ ಸುರಿಯೆ 
ಸಂಸಾರ ಜೀಕಿದವಳು ಈ ಅವ್ವ!!

ಇಕ್ಕಳದಲ್ಲಿ ಕುಳಿತವಳು
ನಕ್ಕಂತೆ ನಟಿಸಿದವಳು
ತನ್ನ ರಕ್ತದ ಬೆಳೆಗೆ ಕಣ್ಣಾಗಿ
ಹಣ್ಣು ನೀಡಿದವಳು ಈ ಅವ್ವ!!

ಕಕ್ಕಸವ ಸರಸಿದವಳು
ಕಕ್ಕಿದ್ದು ಒರೆಸಿದವಳು 
ಬಿಕ್ಕಳಿಸಿದರೆ ರಮಿಸಿದಳು
ಮಿಕ್ಕಿದ್ದು ಸೇವಿಸಿ ನಕ್ಕವಳು ಈ ಅವ್ವ !!

ಅಪ್ಪನಿಗೆ ಹೆಗಲಾಗಿ 
ಮಕ್ಕಳಿಗೆ ನೊಗವಾಗಿ
ಚಕ್ಕಡಿಯ ಎಳೆದವಳು 
ಸೊಕ್ಕಿದವರಿಗೂ ಬಾಗಿದಳು ಈ ಅವ್ವ !!

ಸುಕ್ಕುಗಟ್ಟಿದ ದೇಹ
ಮಿಕ್ಕಿದರೂ ದುಡಿಯುತಿಹಳು
ಚಿಕ್ಕ ಪ್ರೀತಿಗೂ ಹಿಗ್ಗುವಳು
ಪಕ್ಕದ ದೇವರಿಗಿಂತ ಮಿಗಿಲು ಈ ಅವ್ವ!!

Tuesday, May 3, 2022

ಜಗಜ್ಯೋತಿ ಬಸವೇಶ್ವರ

          ಕಾಯಕವೇ ಕೈಲಾಸ ವೆಂದು ಕಾಯಕಕ್ಕೆ ನಾಕ ಪಟ್ಟ ನೀಡಿದ ಮಹಾನ್ ಮಾನವತಾವಾದಿ ಬಸವೇಶ್ವರರ ಜಯಂತಿ ಇಂದು, ಮೇ ಒಂದು . ಕಾರ್ಮಿಕ ದಿನಾಚರಣೆ  ಮಾಡಿದೆವು, ಕರ್ಮಕ್ಕೆ ಜಯಕಾರ, ಕಾರ್ಮಿಕರಿಗೆ ಜಯಕಾರ. ಎರಡು ದಿನದ ನಂತರ "ಕಾಯಕವೇ ಕೈಲಾಸವೆಂದ ಮಹಾನ್ ಮಾನವತಾವಾದಿಯ ದಿನಾಚರಣೆ" ನಿಜವಾಗಿಯೂ ಬಸವನ ನಾಡಿನಲ್ಲಿ ಜನಿಸಿದ ನಾವು ಧನ್ಯರು ,ಏಕೆ ಹೇಳಿ ? ಮಾತು ಮಾತಿಗೆ ನಾವು ಯೂರೋಪಿಯನ್ನರು ನಾವು ಹೆಚ್ಚು ನಾಗರಿಕ ಸಮಾಜದವರು ಎಂದರಲ್ಲವೆ ! ಸುಸಂಸ್ಕೃತ ಎನ್ನುವ ಜನರ ಧಾರ್ಮಿಕ ಸುಧಾರಣೆ ಪ್ರಾರಂಭ ವಾಗಿದ್ದು ಯಾವಾಗ  ಹೇಳಿ ? " 16 ನೇ ಶತಮಾನದಲ್ಲಿ" ನಮ್ಮ ಕರ್ನಾಟಕದಲ್ಲಿ ಆದದ್ದು ಯಾವಾಗ 12 ನೇ ಶತಮಾನದಲ್ಲಿ ಅಂದರೆ ಸರಿ ಸುಮಾರು ನಾಲ್ಕು ಶತಮಾನಗಳಷ್ಟು ಕಾಲ ಬಸವೇಶ್ವರರು ಯೂರೋಪಿಯನ್ನರಿಗಿಂತ ಮೊದಲು ಸಾಮಾಜಿಕ ಮತ್ತು  ಧಾರ್ಮಿಕ ಚಳುವಳಿಯನ್ನು ಮಾಡಿದರು ಎಂದಾಯಿತು  ಆದಗ್ಯೂ ಕೂಡಾ ನಾವು ಹೇಳುತ್ತಿರುವುದೇನು ? ಬಸವೇಶ್ವರರನ್ನು ಕರ್ನಾಟಕದ ಮಾರ್ಟಿನ್ ಲೂಥರ್ ಎಂದು, ನಾನೆಲ್ಲೋ ಓದಿದ ನೆನಪು ! ಕಾರಣವೇನು ? ಮಾರ್ಟಿನ್ ಲೂಥರ್ ಗೆ ಸಿಕ್ಕ  ಪ್ರಚಾರ ನಮ್ಮ ಬಸವೇಶ್ವರರಿಗೆ ಸಿಗಲಿಲ್ಲವೆಂದರ್ಥವಲ್ಲವೆ.? ಮೇಲ್ವರ್ಗದಲ್ಲಿ ಜನಿಸಿದ ಬಸವೇಶ್ವರರು ಸಾಂಪ್ರದಾಯಿಕವಾಗಿ ಬಂದ ಸಾಮಾಜಿಕ ಅಂತಸ್ತುಗಳನ್ನು ಅಂದ ರೀತಿಯಲ್ಲಿ ಅನುಭವಿಸಿ ಹತ್ತರಲ್ಲಿ ಹನ್ನೊಂದು ಆಗಬಹುದಿತ್ತೇನೋ ಆದರೆ ಬಸವೇಶ್ವರರು ಸಮಾಜದ ಓರೆಕೋರೆಗಳನ್ನು ತಿದ್ದಲು ತಮ್ಮ ಜೀವನವನ್ನೆ ಮುಡುಪಾಗಿಟ್ಟರು ಬಿಜ್ಜಳನ ಆಸ್ಥಾನದಲ್ಲಿ ಕರಣಿಕರಾಗಿ ಸೇವೆಗೆ ಸೇರಿ ತಮ್ಮ ಸ್ವಸಾಮರ್ಥ್ಯದಿಂದ ಸಿದ್ಧರಸರ ನಂತರ ಬಿಜ್ಜಳನ ಆಸ್ಥಾನದಲ್ಲಿ ಪ್ರಧಾನಿ ಹುದ್ದೆಗೆ ಏರಿದರು, ಆದರೆ ಅವರಲ್ಲಿರುವ ಮಾನವತ್ವವು ಅಧಿಕಾರಿದ ಪ್ರಕರತೆಯಲ್ಲಿ ಮೂಲೆಗೆ ಸೇರದೆ ಕೆಸರಿನಲ್ಲೆ ಅರಳುವ ಹೂವಿನಂತೆ ಅರಳಿ ಸಮಾಜಕ್ಕೆ ಪ್ರಭಾವಳಿ ಬೀರಿದ್ದು ಇತಿಹಾಸ. ಅಂದಿನ ಸಮಾಜದಲ್ಲಿ ರೂಢಿಯಲ್ಲಿದ್ದ ಮೂಢನಂಬಿಕೆ, ಮೂರ್ತಿಪೂಜೆ, ಪ್ರಾಣಿಬಲಿಗೆ ಆಧಾರವಿಲ್ಲಿವೆಂದು ಅದರ ವಿರುದ್ಧ ಜಾಗ್ರತಿಯನ್ನು ಮೂಡಿಸಿದರು ಅಲ್ಲದೆ ಜಾತಿ ಪದ್ಧತಿಗೆ ಧರ್ಮಶಾಸ್ತ್ರಗಳ ಆಧಾರವಿಲ್ಲವೆಂಬದನ್ನು ಸ್ಪಷ್ಟಪಡಿಸದರು.ಬಸವೇಶ್ವರರು ಶಕ್ತಿವಿಶಿಷ್ಟಾದ್ವೈತ ಸಿದ್ಧಾಂತ ಪ್ರತಿಪಾದಿಸಿದರು.ಲಿಂಗಪೂಜೆಗೆ ಆದ್ಯತೆ ನೀಡಿದರು ಮತ್ತು ಜಾತಿ,ಲಿಂಗ ಭೇಧವಿಲ್ಲದೆ ಎಲ್ಲರೂ ಲಿಂಗಧಾರಣೆ ಮಾಡಲು ಅವಕಾಶ ನೀಡಿ ಸಕಲರಿಗೂ ಸನ್ಮಾರ್ಗ ದ ದಾರಿ ತೋರಿದರು . ಲಿಂಗಾಯಿತ ಧರ್ಮದಲ್ಲಿ ಶಿವಪೂಜೆಗೆ ಆದ್ಯತೆ , ಇಲ್ಲಿ ಲಿಂಗ ಮತ್ತು ಅಂಗ ಎಂಬ ಎರಡು ಭಾಗಗಳಿವೆ ಅಂಗವು ಲಿಂಗೈಕ್ಯವಾಗುವದೆ ಮೋಕ್ಷ, ಶಿವ ಮತ್ತು ಶಕ್ತಿ ವಿಲೀನ ಬಸವ ತತ್ವಕ್ಕೆ ಆಧಾರ, ಇದನ್ನೆ ಶಕ್ತಿ ವಿಶಿಷ್ಟಾದ್ವೈತ ಎಂದು ಕರೆಯಲಾಗಿದೆ. ಲಿಂಗಾಯತರು ಅಷ್ಟಾವರಣ ಪಾಲಿಸಬೇಕು. ಗುರು ಲಿಂಗ ಜಂಗಮಕ್ಕೆ ಗೌರವತೋರುವುದು,ಹಣೆಗೆ ವಿಭೂತಿ ಧರಿಸುದು ಪಂಚಾಕ್ಷರಿ ಮಂತ್ರ ಪಠಣ ಇತ್ಯಾದಿ . ಬಸವೇಶ್ವರರು ಮೋಕ್ಷಕ್ಕೆ ಭಕ್ತಿ ಮಾರ್ಗ ಪ್ರತಿಪಾದಿಸಿರು. ಇಂದು ನಾವೆಲ್ಲಾ ಬಯಸುವ ಸಮ ಸಮಾಜ ರಚನೆಗೆ ಅವರು ಮಾಡಿದ ಸಮಾಜ ಸುಧಾರಣೆಗಳು ದಾರಿ ದೀಪ, ಬಸವೇಶ್ವರು ಜಾತಿ ಪದ್ಧತಿಯನ್ನು ಅಂದೆ ಕಟುವಾಗಿ ಟೀಕಿಸಿದರು ಮಾನವನ ಅಂತಸ್ತು ಅವನ ಯೋಗ್ಯತೆಯಿಂದ ನಿರ್ದಾರವಾಗುವದೆ ಹೊರತು ಜಾತಿಯಿಂದಲ್ಲ ಎಂದು ಸಾರಿದರು, ಅದನ್ನು ಹೋಗಲಾಡಿಸಲು ಸಹಬೋಜನ, ಅಂತರ್ಜಾತಿ ವಿವಾಹದಂತ ಕಾರ್ಯ ಕ್ರಮಕ್ಕೆ ಪ್ರೋತ್ಸಾಹಿಸಿದರು.ಬ್ರಾಹ್ಮಣ ಮಧುವಯ್ಯನ ಮಗಳಿಗೂ ಹರಿಜನ ಹರಳಯ್ಯ ನ ಮಗನಿಗೂ ವಿವಾಹ ಮಾಡಿಸದರು. ಅವರಿಬ್ಬರೂ ಶಿವಭಕ್ತರಾದರು ಅಲ್ಲವೆ ? ಪ್ರಾಣಿ ಬಲಿ ತಡೆದು ದಯವೇ ಧರ್ಮದ ಮೂಲವಯ್ಯ ಎಂದರು. " ಕಲ್ಲು ನಾಗರ ಕಂಡರೆ ಹಾಲನೆರೆ ಎಂಬುವರು ದಿಟ ನಾಗರ ಕಂಡರೆ ಕೊಲ್ಲೆಂಬರಯ್ಯ" ಎನ್ನುವ ಮೂಲಕ ಕಲ್ಲು ಮರಗಳ ಪೂಜೆ ಯನ್ನು ಖಂಡಿಸಿದರು.ಉಳ್ಳವರು ಶಿವಾಲಯ ಮಾಡುವರಯ್ಯ ನಾನೇನು ಮಾಡವೆ ಬಡವನಯ್ಯ…..ಎಂಬ ವಚನಗಳ ಮೂಲಕ ಡಂಬಾಚಾರ ಬಯಲಿಗೆಳೆದರು.  ಕಾಯಕ ಮುಕ್ತಿಗೆ ದಾರಿ ತೋರಬಲ್ಲದು ಮತ್ತು ಕಾಯಕವು ಭಕ್ತಿಯ ಇನ್ನೊಂದು ರೂಪವಾದ್ದರಿಂದ ಕಾಯಕವೆ ಕೈಲಾಸ ವೆಂದರು. ಸರಳತೆ ಸಚ್ಚಾರಿತ್ರ್ಯ ಅನುಕಂಪ ರೂಡಿಸಿಕೊಳ್ಳಲು ಆಚಾರವೆ ಸ್ವರ್ಗ ಅನಾಚರವೆ ನರಕವೆಂದರು. ಕಳಬೇಡ,ಕೊಲಬೇಡ,ಹುಸಿಯ ನುಡಿಯಲುಬೇಡ, ಇದೆ ಅಂತರಂಗ ಶುದ್ಧಿ, ಇದೆ ಬಹಿರಂಗ ಶುದ್ಧಿ ಎಂದು ಅಂತರಂಗದ ಶುದ್ಧಿಗೆ ಆದ್ಯತೆ ನೀಡಿದರು ,ಅಲ್ಲದೆ ವ್ಯಕ್ತಿಯು ಸಂಗ್ರಹಣೆಯಲ್ಲಿ ತೋಡಗದೆ ದಾಸೋಹದಲ್ಲಿ ತೊಡಗಬೇಕೆಂದರು.ತಮ್ಮ ಈ ತತ್ವಗಳ ಪ್ರಚಾರಕ್ಕೆ ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪಸಿದರು .ಜನರಲ್ಲಿ ಜಾಗೃತಿ ಮತ್ತು ಸಮಾಜ ಸುಧಾರಣೆ ಮಾಡಲು 5000 ಕ್ಕೂ ಹೆಚ್ಚು ವಚನಗಳನ್ನು ರಚಿಸಿದರು ಅವರ ಸಾಮಾಜಿಕ ಮತ್ತು ಧಾರ್ಮಿಕ ವಿಚಾರಧಾರೆಗಳು ವಿಶ್ವ ಮಾನ್ಯ, ಹೀಗಾಗಿ ಅವರು ಜಗದ ಜ್ಯೋತಿ .ಅವರ ವಿಚಾರಧಾರೆಗಳನ್ನು ಒಂದು ದಿನದ ಆಚರಣೆಗೆ ಸೀಮಿತ  ಮಾಡದೆ ಅನುದಿನವೂ ಪಾಲಿಸಬೇಕಾಗಿದೆ ಅದಕ್ಕಾಗಿ ಇಂಗ್ಲೆಂಡಿನ ಥೇಮ್ಸ್ ನದಿಯ ದಂಡೆಯ ಮೇಲೆ ಮಾನವತಾವಾದಿಯ ಮೂರ್ತಿ ವಿರಾಜಮಾನವಗಿ ಜಗತ್ತಿಗೆ ಬೆಳಕು ನೀಡುತ್ತಿದೆ .

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...