Sunday, July 31, 2022

* ಕಾಯಬೇಕು ಕಲೆಗಾರನಿಗೆ *



ಕೆರಳಿಸುವ ಕಾರ್ಯಗಳಿಗೆ 
ಮರುಕಳಿಸುವದು ಇರುಳೊಮ್ಮೆ 
ಬರಿ ಅದು ನಟನೆಯ ಉರುಳು 
ಸರದಿಯಲ್ಲಿರು ಇಡಬೇಡ ಕೊರಳು!!

ನೆರಳಲ್ಲಿ ಛತ್ರಿ ಹಿಡಿಯುವರು
ಬಿರು ಗಾಳಿಗೆ ಚಾಮರ ಬೀಸುವರು
ಬಿರುಬಿಸಿಲನಲ್ಲಿ ಬೆಂಕಿ ಹೊತ್ತಿಸುವರು
ಬರಗಾಲದಲ್ಲೂ ಆಗಬೇಡ ಮರಳು

ಮೂಗಿಗೆ ಸವರುವರು ತುಪ್ಪ
ಕೆರಳಿಸಲು ಹಚ್ಚುವರು ಉಪ್ಪು
ಕಾಯಬೇಕು ತಮ್ಮ ಕಪ್ಪಾಗುವವರಿಗೆ
ಕಾಯದೆ ಸಿಗದು ನಿಮಗೆ ಉಪ್ಪರಿಗೆ!!

ಅಲ್ಲಲ್ಲಿ ಸಿಗಬಹುದು ಅರಳಿಸುವ
ಕಲೆಗಾರರು ಇಟ್ಟಿರುವರು ಇರುಳಲ್ಲಿ
ತಗೆಯಬೇಕು ತಮ್ಮ  ಪರದೆಯೊಮ್ಮೆ
ಸರದಿ ಬಂದಾಗ ಮರೆಯದೆ ಬರುವರು!!

ಬಾಜಾ ಬಜಂತ್ರಿ ಕೇಳುವವರಲ್ಲ
ಗಾಜಿನ ಮನೆ ಬಯಸಿದವರಲ್ಲ 
ಕೋಜಾಗಳ ಜಾತಕ ಬಲ್ಲವರಿವರೆಲ್ಲ
ಕಲ್ಲು ಅರಳಿಸುವ ಕಲೆಗಾರರಿವರೆಲ್ಲ!!

Friday, July 29, 2022

ಸೇವಾ ನಿವೃತ್ತಿಗೆ ಪ್ರೀತಿಯ ಸನ್ಮಾನ ಹಾಗೂ ಶುಭ ಕೋರುವ ಸಮಾರಂಭ

ಸೇವಾ ನಿವೃತ್ತಿಗೆ ಪ್ರೀತಿಯ ಸನ್ಮಾನ
                 ಹಾಗೂ 
 ಶುಭ ಕೋರುವ ಸಮಾರಂಭ 

ಸರಕಾರಿ ಸೇವೆಗೆ ಸೇರಿದ ಮೇಲೆ ಸರ್ವ ನೌಕರರಿಗೆ ಸೇವೆಯಿಂದ  ನಿವೃತ್ತಿ  ಇದ್ದದ್ದೆ, ಆದರೆ ಪ್ರವೃತ್ತಿಗೆಲ್ಲಿದೆ ನಿವೃತ್ತಿ. ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡ ಒಳ್ಳೆಯ  ಪ್ರವೃತ್ತಿಗಳು ಅವು ಬಾಕಿ ಉಳಿದ ಬದುಕಿನ ಬುತ್ತಿಗಳು ಸಂತೋಷದ ಬದುಕಿನ ಸೋಪಾನಗಳು  ನಾವು ಗಳಿಸಿದ ಹಣ, ಆಸ್ತಿ  ಸಂಪತ್ತು ನಮ್ಮನ್ನು ಸಂತಸದಿಂದ ಇಡಲಾರವು. ಬಹುಶಃ ಈ ಮಾತನ್ನು ಬಹುತೇಕರು ನಂಬಲಾರರು ಏಕೆಂದರೆ ಹಣವಿದ್ದರೆ ಮಾತ್ರ ಸಂಬಂಧಿಕರ ಪ್ರೀತಿ,  ಆಸ್ಪತ್ರೆಗಳ ಆರೈಕೆ ಸಿಗಬಹುದು ಎನ್ನುವುದು ಅವರ ತರ್ಕ ?  ಅದು ಅರ್ಧ ಸತ್ಯ ವಾಗಿರಲು ಸಾಕು ! ಅದರಾಚೆ ಇರುವ ಸತ್ಯವೆ ಬೇರೆ ಇದೆ.ನಾವು ಅಳವಡಿಸಿಚೊಂಡಿರವ ಪ್ರವೃತ್ತಿ ಗಳು ನಮ್ಮ ಬದುಕಿನ ದಿಕ್ಕುನ್ನು  ಬದಲಿಸಿ ಸಂತೃಪ್ತಿ ಜೀವನದ ಮೆಟ್ಟಲುಗಳಾಗುವದರಲ್ಲಿ ಯಾವುದೆ ಸಂಶಯವಿಲ್ಲ  ....ಪ್ರವೃತ್ತಿ ಗಳು ಎಂದರೇನು? ಯಾವಾಗಲೂ ಧನಾತ್ಮಕ ಚಿಂತನೆಗಳು ಅಳವಡಿಸಿಕೊಂಡಿರುವುದು ಪ್ರವೃತ್ತಿ ಯಲ್ಲದೆ ಇನ್ನೇನನ್ನಲು ಸಾಧ್ಯ  ?  ಇಲ್ಲಿಯವರೆಗೆ ಪೀಠಿಕೆ ಹಾಕಿದ ಉದ್ದೇಶವೇನೆಂದರೆ ನಮ್ಮದೆ  ಸಂಸ್ಥೆಯಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ, ಸರಕಾರಿ ಸೇವೆಯಿಂದ ನಿವೃತ್ತಿ ಯಾಗಲಿರುವ ಶ್ರೀ ಸದಾಶಿವ ಸೂಳಿಭಾವಿಯವರ ಕುರಿತು ಎರಡು ಮಾತು ಬರೆಯಬೇಕೆನಿಸಿತು ಹಾಗಾಗಿ ಮೊಬೈಲ್ ಕೈಯಲ್ಲಿ ಹಿಡಿದೆ. ಅವರು  ನಮ್ಮ ಸಂಸ್ಥೆಯಲ್ಲಿ ಏಳೇ ತಿಂಗಳು ಸೇವೆ ಸಲ್ಲಿಸಿ ನಿವೃತ್ತಿ ಯಾಗುತ್ತಿದ್ದರೂ ಭಾವಿ ನೌಕರರ ಭವಿಷ್ಯದ ಬದುಕಿನ ಸಂತೃಪ್ತಿಯ ಕರ್ತವ್ಯದ ಮಾರ್ಗ ಸೂಚಿ. ಅವರ ಬದುಕು, ಕರ್ತವ್ಯ ನಿಷ್ಠೆ,  ತಾಳ್ಮೆ, ಸಹಕಾರ ಗುಣ ಎಲ್ಲರನ್ನೂ ಜೊತೆಯಾಗಿ ಕರೆದುಕೊಂಡು ಹೋಗುವ ಗುಣ ನಮ್ಮ ನ್ನೆಲ್ಲ ಒಂದು  ಕ್ಷಣ ವಿಚಲಿತರನ್ನಾಗಿ ಮಾಡಿತು . ಇನ್ನೊಂದಿಷ್ಟು ದಿನ ನಮ್ಮ ಜೊತೆ ಇದ್ದರೆ ? ಹಿರಿಯಣ್ಣನಂತೆ ಮಾರ್ಗ ದರ್ಶನ ಪಡೆಯುತ್ತಿದ್ದೆವು ಅಂತಲ್ಲವೆ ? ಸರಕಾರದ ನಿಯಮಗಳು ಪಾಲಿಸಲೇಬೇಕು.ಇರಲಿ ತಾವು ಕಲಿತ ಸಂಸ್ಥೆಯಲ್ಲಿ ಸಂಸ್ಥೆಯ ಮುಖ್ಯಸ್ಥರಾಗಿ ಸೇವೆಯಿಂದ ನಿವೃತ್ತಿಯಾಗುತ್ತಿರುವುದು ಕೆಲವೆ ಕೆಲವು ಪುಣ್ಯ ವಂತರಿಗೆ ಸಿಗುವ ಸೌಭಾಗ್ಯ ಗಳಲ್ಲಿ ಒಂದು. ಅದು  ಶ್ರೀ ಸದಾಶಿವ ಸೂಳಿಭಾವಿಯವರಿಗೆ ಸಿಕ್ಕಿದೆ. ಬಹುಶಹ ಇದು ಒಂದು ಅಪರೂಪದ ಘಟನೆ,ಅದನ್ನು  ಕಣ್ಣು ತುಂಬಿ ಕೊಳ್ಳುವ ಸೌಭಾಗ್ಯ ನಮ್ಮದು.  ನಾವು ಇವತ್ತಿನ ದಿವಸ ಸೇವೆಯನ್ನು ಪೂರ್ತಿಯಾಗಿ ಮುಗಿಸುವದೆ ಒಂದು ಸಾಧನೆಯಾಗಿದೆ ಅಲ್ಲವೆ? , 60 ವರ್ಷಗಳ ವರೆಗೆ ಸೇವೆ ಸಲ್ಲಿಸಲು ಆರೋಗ್ಯ  ಚನ್ನಾಗಿ ಇರಬೇಕು,!ಅಂತಹ  ಆರೋಗ್ಯ ಅವರಿಗಿದೆ . ಚನ್ನಾಗಿದ್ದರೆ ಸಾಲದು, ಉದ್ಯೋಗ ಮಾಡಲು ಅವಾಕಾಶ ಚೆನ್ನಾಗಿ ಇರಬೇಕು, ಅಂತಹ ಅವಕಾಶವೂ ಅವರಿಗೆ ಸಿಕ್ಕಿದೆ. ಇದೆ ಸಂಸ್ಥೆಯಲ್ಲಿ ಓದಿದ, ಬದ್ದತೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ , ಕಾಯಕ ಯೋಗಿಗಳಿರುವ, ಸಹೋದ್ಯೋಗಿಗಳು ನಮ್ಮ ಸಂಸ್ಥೆಯಲ್ಲಿ ಅವರಿಗೆ ಸಿಕ್ಕಿದ್ದಾರೆ. ಹಾಗೆಯೇ ಒಂದು ಮಾತಿದೆ ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ  ಅಂತಾ,ಸುಖ ದುಃಖ ಗಳಲ್ಲಿ ಭಾಗಿಯಾಗಿ ಪ್ರಗತಿಗೆ ಊರುಗೋಲಾಗಿರುವಂತಹ ಸಹ ಧರ್ಮಿನಿಯೂ ಅವರಿಗೆ ಸಿಕ್ಕಿದ್ದಾಳೆ.ಹೀಗಾಗಿಯೇ ಅವರಿಗೆ ಸಾಧನೆ ಮಾಡಲು ಸಾಧ್ಯ ವಾಗಿದೆ. ಪ್ರೌಢಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ ಪ್ರಾಚಾರ್ಯರಾಗಿ ನಿವೃತ್ತಿಯಾಗುವುದು ಸಣ್ಣ ವಿಷಯವೇನಲ್ಲ ಪ್ರಾಚಾರ್ಯರ ಹುದ್ದೆ, ಅಂದರೆ ಪ್ರಧಾನ ಆಚಾರ್ಯ ,ಅಲ್ಲವೆ  ! ಆಡಳಿತದಲ್ಲಿ  ನ್ಯಾಯಾಧೀಶನ, ಅಸಿಸ್ಟೆಂಟ್ ಕಮೀಷನರ್ ಹುದ್ದೆಗೆ ಸಮಾನ ಹುದ್ದೆ, ಆ ಹಂತದ ವರಿಗೆ ಬಂದು ತಲುಪಲು ಅವರು ತುಳಿದ ದಾರಿ ಅದು ಹೂವಿನ ಹಾಸಿಗೆಯೇನಲ್ಲ .ಏಕೆಂದರೆ ಅವರೆ ಹೇಳಿದ ಹಾಗೆ ಗುಳೇದಗುಡ್ಡದ ಪಕ್ಕದ ಊರಾದ ಶಿರೂರಿನಿಂದ ಕಾಲುದಾರಿಯಲ್ಲಿ ಗುಡ್ಡ ಏರಿ, ಗುಡ್ಡ ಇಳಿದು ಮಠದಲ್ಲೂ ,ಯಾವುದೇ ಸಣ್ಣ ಮನೆಗಳಲ್ಲೊ, ಕಟಗ ರೊಟ್ಟಿ  ಚಟ್ನಿ, ತಂಗಳ ಊಟ ಮಾಡಿ ಕಲಿಸಿದ ಗುರುಗಳಗೆ ,,ಹಡೆದ ತಂದೆ ತಾಯಿಗೆ ಊರಿಗೆ ಹೆಸರು ತಂದ ಸಾಧಕನ ಸಾಧನೆ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗೆ ಒಂದು ಮಾದರಿಯೇ ಸರಿ.ಆ ಕಾರಣ ಈ ವರ್ಷ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ  ಸಮಾರಂಭಕ್ಕೆ ಬಡತನದಲ್ಲಿ ನೊಂದು ಬೆಂದು ಕನ್ನಡ ಆಸ್ತಿ ಯೆ ಆಗಿ ಬೆಳೆಯುತ್ತಿರುವ ಗುಳೇದಗುಡ್ಡದ ಬಂಡಾರಿ ಕಾಲೇಜಿನ ಹೆಮ್ಮೆಯ ವಿದ್ಯಾರ್ಥಿ...ಸದ್ಯ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿರುವ  ಡಾ!! ವಾಯ್ ಎಮ್  ಯಾಕೊಳ್ಳಿಯವರನ್ನು ಅತಿಥಿಗಳಾಗಿ ಕರೆಯಿಸಿ ಸಾಧಕರನ್ನು ಮಾತುಗಳಲ್ಲಿ ಹೇಳದೆ ಕೃತಿಯಾಗಿ ಪರಿಚಯಿಸಿದ ಅವರ ಹೃದಯವಂತಿಕೆಯನ್ನು  ಶಬ್ದಗಳಿಂದ ಸೆರೆಹಿಡಿಯಲು ಸಾಧ್ಯವಿಲ್ಲ. ಅವರಿಗೆ ಶುಭಕೋರುವ ಸಮಾರಂಭಕ್ಕೆ ತಮ್ಮೆಲ್ಲರ ಹಾರೈಕೆ ಇರಲಿ ಶುಭ ರಾತ್ರಿ 🙏🙏

Tuesday, July 26, 2022

ಚುಟಕು

ಚುಟುಕು 

ಸ್ವಾರ್ಥ ತುಂಬಿದ ಸಮಾಜದಲ್ಲಿ 
ಸನ್ಮಾರ್ಗ ತೋರುವವನೆ ಕಮಂಗಿ. 
ಅರ್ಥ ಕಳೆದು ಕೊಂಡು   
ಹರಿದುಕೊಂಡಿದ್ದಾನೆ ಅಂಗಿ.
ಏನು ಮಾಡುವುದು 
ಈಗ ದಿನಾ ಸೇದುತ್ತಿದ್ದಾನೆ ಭಂಗಿ.

Thursday, July 21, 2022

ಕಾಲ ಲೀಲೆ



ಮುಂಗಾರು ಮಳೆ  ಮುತ್ತಿಟ್ಟ ಬನ 
ಮದರಂಗಿ ಮೆತ್ತಿದ ಮಧುವನಗಿತ್ತಿ
ಹದವಾಗಿ ಅರಳಿತು ಮೌನ ಮನ
ಭ್ರಮರದಂತೆ ತಿರುಗಿತು ವನ ಸುತ್ತಿ//

ಕಾಯ್ದ ಕಬ್ಬಿಣ ತೊಯ್ದಾರುವ ಮುನ್ನ  
ಬಾಯ್ದೆರೆದಿದೆ ಚಮಟಿ ಪೆಟ್ಟಿಗೆ ಬಯಸಿ
ಹದವು ಬೇಕು ಹರಗಿ ಬಿತ್ತಲು ಬೀಜ
ಬೆದೆ ಬಂದ ಮನ ತಹ ತಹಿಸಿ ಕೆಂಡ ನಿಗಿನಿಗಿ //

ಕಾಪಿಟ್ಟ ಕಾವು ಹೆಬ್ಬಾವಿನಂತೆ ಹಿರಿದು
ಕಾಮನೆಗಳ ನುಂಗಿ ಏರುವುದು ಮರ
ಸುತ್ತುವುದು ಎಡಬಲ, ಏರುವುದೊಂದೆ 
ಮತ್ತೇರಿ ಮುರಿಯುವುದು ಒಣ ಕೊರಡು//

ಕಾಲದ ಕತ್ತಲೆಯು ಬಲೆ ಬೀಸಿದಾಗ
ಜಾಲವು ಕಾಣದೆ ಕುಸಿಯಿತು ಕುರುಡಾಗಿ 
ಬಿಲಕಾಗಿ ಹಗಲು ಹುಡುಕಾಡಿತು ಮನ
ನೆಲವಿದೆ ಬರಿ ಕಲ್ಲು ಮುಳ್ಳಿನ  ಬರಡು//

ತವಕ ತನ್ನರಿವಿನ ಹರಿವು ಮೀರಿ 
ವಿವೇಕದ ವಿವೇಚನೆ ಮರೆಯಾಗಿ 
ತಾವಿರುವ ತವರಿನ ಬೇರು ಹರಿದು
ಸವಕಳಿಯಾಗಿತ್ತು ಸತ್ಯದ ಕರಡು //

ಜವರಾಯ ನಿಲ್ಲಲು ಜಡೆಮಳೆಯಲ್ಲ
ಅವನಿ ಕಾಯ್ದಿರುವಳು ತಡೆಯುವವರಿಲ್ಲ
ಭುವಿಯ ಬಯಸುವ  ಮನಗಳಿಗೆ ಬರವಿಲ್ಲ
ಯಮರಾಯನಿಗೂ ನೀ ಬೇಕು ಇಲ್ಲ ಕೊಡೆ//

Friday, July 15, 2022

" ದೇಗುಲಕೆ ಸ್ವಾಗತ "


ಸ್ವಾಗತವು ತಮಗೆ ಹರುಷವು ನಮಗೆ  
ಸುಜನರು ಕಟ್ಟಿದ ಶಾರದೆಯ ಮಂದಿರಕೆ
ಜ್ಞಾನದ ಹಸಿವೊಂದೆ ಸಾಕು ಇತಿಹಾಸ ನಿಮಗೆ/ 

ಗುಡ್ಡದ ಬಯಲಲ್ಲಿ ದೊಡ್ಡವರು ಕಟ್ಟಿದ
ದೊಡ್ಡ ಮಂದಿರವಿದು, ದುಡ್ಡು ದುಗ್ಗಾನಿ ಇಲ್ಲ.
ದಡ್ಡತನವಳಿಯಲು ಬಗ್ಗಿ ಬನ್ನಿ ಸ್ವಾಗತವು ತಮಗೆ/ 

ಪುರಸಭೆಯ ಅಡಿಯ ಪುರಜನರ ಹರಕೆ 
ವರವಾಗಿ ಬೆಳದಿದೆ ಗುಳೇಬಂದವರಿಂದ  
ಹೆಮ್ಮರ ನೋಡುವುದೆ ನಮಗೆಲ್ಲ ಚಂದ/

ಹತ್ತು ಹಳ್ಳಿಯ ಜ್ಞಾನದ ಹಸಿವು 
ಒಪ್ಪತ್ತೇಶ್ವರನ ಮಠದ ಬಾಗಿಲಿಗೆ ತಾಕಿ
ಬಿತ್ತು ದಾನ ಜೋಳಿಗೆಯ ಬುತ್ತಿಯಾಗಿ 

ನೇಕಾರ, ಕೂಲಿ ಚಾಕರಿಯ ಮಗನಿಗೂ
ಆಕಾರ ಮಾಡಿದ ಗುರಕುಲವೆ ಇಲ್ಲಿದೆ
ಸಾಕಾರ ತೋರುವುದು ಜಗಕೆ ಬೆಳಕಾಗಿ/

ಶತಮಾನ ಕಂಡು ಗತವೈಭವ ಸಾರುವ
ಹಿತವಾದ ಶಾಲೆಯ ಕಥೆ ಕೇಳುವ ಬನ್ನಿ
ಪ್ರೌಢಶಾಲೆಯುಂಟು ಪದವಿಯೂ ಉಂಟು/

ನಡೆದಷ್ಟು ದಾರಿಯಲ್ಲಿ ಪಡೆದಷ್ಟು ಭಾಗ್ಯ.          ಪಡೆಯದವನೆ ಇಲ್ಲಿ ಮಹಾ ಕೋಡಿ  
ಪಡೆಯ ಬಾರೊ ಗುರುಗಳು ಮಾಡವರು ಮೋಡಿ/

ನಿತ್ಯ ಸಾವಿರ ಮಕ್ಕಳೋದುವ ಮಂದಿರ
ಎತ್ತರೆತ್ತರೆಕೆ  ಬೆಳದು ಸತ್ಯವರುಹಲು ನಿಂತಿದೆ 
ಕತ್ತು ಬಾಗಿಸಿ ಕರಮುಗಿದು ಬಾ ಸ್ವಾಗತವು ನಿಮಗೆ !

ಇಂದು ದಿನಾಂಕ 16.07.2022 ರಂದು ನಮ್ಮ ಹೆಮ್ಮೆಯ ಬಾಲಕರ ಸರಕಾರಿ  ಪದವಿ ಪೂರ್ವ ಕಾಲೇಜು ಗುಳೇದಗುಡ್ಡದ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಹಾಗೂ ಪ್ರಥಮ ಪಿಯಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಸಮಾರಂಭ ಸರ್ವ ಶಿಕ್ಷಣಾಭಿಮಾನಿಗಳಿಗೆ ಹಾರ್ದಿಕ ಸುಸ್ವಾಗತ 🙏🙏

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...