Saturday, October 29, 2022

* ಕನ್ನಡದ ಮಾಣಿಕ್ಯ*

ಕನ್ನಡಿಗರಪ್ಪಿದ ಕಣ್ಮಣಿ ದೊಡ್ಮನೆಯ ಪೋರ 
ತನ್ನೊಲವ ತೋರಿ ತಾನಿರುವ 
ನೆಲಮೀರಿ ತೆರಳಿದನು ಅಂದು.  
ತ್ವರೆ ಮಾಡುವದೇನಿತ್ತು ದೊರೆಯೆ ?
ಉರಿ ತುಂಬಿದೆ ನಿನ್ನವರ ಎದೆಯಲ್ಲಿ... 
ತರವಲ್ಲವಿದು ಮರೆಯಾಗಿ ಮಣ
ಬಾರದ ಕಣ್ಮೀರು ಹೇರಿ ಸರಿದಿದ್ದು ಸರಿಯೇ ? .
ನೀ ನೀಡಿದ ಚಿತ್ರಗಳು ಅವು ಸಂಸ್ಕಾರದ ಪತ್ರಗಳು 
ಓದುತ್ತಾ ಮರೆಯಲೆ ?ಪುಟ ತೆರೆಯುತ್ತಾ ಇರಲೆ..
ಅಪ್ಪ ರಾಜನ.... ಮುತ್ತಿನ ವದನ 
ಅಪ್ಪುವಿನಲ್ಲಿ ಕಂಡು ಪುಣಿತನಾಗುವ ಮುನ್ನ 
ತಪ್ಪಿ ಹೋಯ್ತು ತಬರರ ಪುಣ್ಯ,
ಕನ್ನಡದ ಮಾಸ ಅರಳುವ ಮುನ್ನ
ನಿನ್ನಯ ಅಗಲಿಕೆ ತಂದಿತ್ತು ಗುನ್ನ
ಎನ್ನಯ ಹರಕೆಯು ನಿನ್ನ ಆತ್ಮಕ್ಕೆ ತಲುಪೀತೆ ಚಿನ್ನ!
ಸಣ್ಣವನು ನಾನು ಇನ್ನೇನು ಹೇಳಲಿ,
ಕನ್ನಡದ ಕರೋಡಪತಿ .ಅಲ್ಲಲ್ಲ..
ಕನ್ನಡಿಗರ ಪ್ರೀತಿಯ ಅಧಿಪತಿ.
ಬನ್ನಿ ಬಾಂದವರೆ ಕನ್ನಡದ 
ಅಪ್ಪುವಿನ ಸಿರಿಗನ್ನಡದ ಸಂಸ್ಕಾರವಪ್ಪಿ 
ಉಪ್ಪರಿಗೆಗೇರಿಸೋಣ ಪ್ರೀತಿ.

Tuesday, October 25, 2022

* ಹಿಂಗ್ಯಾಕ ಕುಳತಿ *

* ಹಿಂಗ್ಯಾಕ ಕುಳತಿ *

ತಡಯಾಕ ನೀ ಮಾಡತಿ 
ಹಿಡದೈತಿ ನಿನಗ ಸಾಡೆಸಾತಿ.|
ತಡ ಮಾಡಿ ವಯಸ್ಸು ಕಳಕೋತಿ
ಹಿಡಿ ಶಿವನ ಪಾದ ಉಳಕೋತಿ॥

ಮುಗಜೋಳ ಬರಿ ಬೀಸತಿ
ಹಗೆದಾಗ ನಿನ್ನ ಕಾಳ ಕೊಳಸತಿ|
ನಗುವಾಗ ಮೂಗ ತೂರಸತಿ
ಸಿಗುವಾಗ ಪಡೆಯದೆ ಆಳತಿ॥

ಶಿಸ್ತಿನಲ್ಲೆ ಸದಾ ಇರಬೇಕಂತಿ 
ಸುಸ್ತಾಗಿ ನಿಯಮ ಸಡಿಲಿಸುತ್ತಿ|
ಕುಸ್ತಿ ಬಿದ್ದಾಂಗ ನೀ ನಟಿಸುತಿ
ಕುಸಿದು ಬಿದ್ದಾಗ ಎಚ್ಚರಾಗುತಿ॥

ಬಿಳಿ ಕೂದಲಿಗೆ ಕರಿ ಬಣ್ಣಹಚ್ಚತಿ
ಕರಿ ಚರ್ಮಕ ಬಿಳಿ ಬಣ್ಣ ಬಳೀತಿ|
ತಿರಗಮುರಗಾ ಮಾಡುದರಾಗೇನೈತಿ
ಹರೆಯ ಏನ ನಿನಗ ಚಿಗತ ಬರತೈತಿ॥

ಅರಳ ಹುರದಂಗ ಮಾತಾಡತಿ
ಹೊರಳಿ ನೊಡಿದರ ಕಾಲಿ ಮಾಡತಿ|
ಇರುಳಿನ ದೀಪ ಕುಂದಿಸಿ ಗುಟಗರಸತಿ
ಮಳ್ಳ ಹಿಡದ ಬೀದ್ಯಾಗ ಓಲಾಡತಿ॥





Tuesday, October 18, 2022

*ಚರಿತೆಯನೊಮ್ಮೆ ಹಾಡುವಾ*

*ಚರಿತೆಯನೊಮ್ಮೆ ಹಾಡುವಾ*

ನುಡಿಗಾಗಿ ನಾಡು ಕಟ್ಠಿದ 
ಕನ್ನಡ ವೀರರ ಚರಿತೆಯನೊಮ್ಮೆ
ನೋಡುವಾ... ಹಾಡುವಾ...।। ಪ।।

ಗಂಗ ,ಕದಂಬ, ರಾಷ್ಟ್ರಕೂಟ 
ಚಾಲುಕ್ಯ ಅರಸರ ಕರ್ನಾಟಕ ಬಲ । 
ಹೊಯ್ಸಳರಸರು ಅರಳಿಸಿದಾ ಶಿಲ್ಪಕಲಾ।
ವೀರ ಅರಸರ ಕ್ಷಾತ್ರಬಲ ಕಾವೇರಿಯಿಂದ 
ಗೋದಾವರಿಯಗೆ ಹಿಗ್ಗಿತ್ತು ಪವಿತ್ರ ನೆಲ॥

ಹೈದರಾಲಿಯ ಮಗ ಟಿಪ್ಪುವಿನ ಮರಣ। 
ನಿಜಾಮ,ಮರಾಠ, ಮೈಸೂರಿನೊಳಗೆ 
ಹಂಚಿ ಹೋದರು ಕನ್ನಡದ ಈ ಜನ।॥
ಅತ್ತ ತೆಲಗು ಇತ್ತ ಮರಾಠಿ, ಸುತ್ತ ಪಸರಿಪ 
ಒಡಯರ ರಕ್ಷಣೆ। ಎತ್ತರಕ್ಕೇರಿತು ಮಲ್ಲಿಗೆ ಜನ॥

ಅಂಗ್ಲರ ಗುಂಡಿಗೆ ಎದೆಯನೊಡ್ಡಿದ
ರಾಯನ ಶೌರ್ಯ। ಚನ್ನಮ್ಮನ ಕೆಚ್ಚು
ಹಲಗಲಿ ಬೇಡರ ಶಕ್ತಿಗೆ। ಮೋಸದ ದಾರಿ 
ಹಿಡಿಯಿತು ಬ್ರಿಟಿಷ್ ಸಾಮ್ರಾಜ್ಯ ಹುಚ್ಚು।
ತತ್ತರಿಸಿತು ಪ್ರಥಮ ಸ್ವಾತಂತ್ರ್ಯದ ಕಹಳೆ॥

ಗಂಡು ಮೆಟ್ಟಿದ ಕನ್ನಡ ನೆಲದಲಿ 
ಹುಟ್ಟಿದ ಡೆಪ್ಯುಟಿ ಚನ್ನಬಸಪ್ಪ.।ಕನ್ನಡ
ತರಬೇತಿ ಶಾಲೆಗಳಿಗೆ ನೀಡಿದ ಜೀವಾ॥
ಕರ್ನಾಟಕ ಗತವೈಭವ ಬಿತ್ತಿತು ಆಲೂರು
ವೆಂಕಟರಾಯರ ಸ್ವಾಭಿಮಾನದ ಹವಾ|

ಕವಿ ಪುಂಗವ ಕಬ್ಬಿಗರು ದಮನಿ ದಮನಿಗಳಲ್ಲಿ 
ಹರಿಸಿದರು ಕನ್ನಡ ನೆಲ ಜಲದ ಮಹಿಮಾ॥
ಸಂಘ ಸಂಸ್ಥೆಗಳು ಪತ್ರಿಕೆ ಮಾಧ್ಯಮ           
ಕನ್ನಡಿಗರೆದೆಯಲಿ  ಬೆಳಗಿಸಿದವು
ಚೆನ್ನುಡಿಯ ಜಾಗೃತಿಯ ಆಭರಣ.॥

ರಾ ಹ ದೇಶಪಾಂಡೆ,ಗೆರೂರ ರಾಮಸ್ವಮಿ, 
ನಿಜವಾಯಿತು ಏಕೀಕರಣದ ಕನಸು। 
ನವೆಂಬರ್ ಒಂದು | ನವ ಕರ್ನಾಟಕ ॥
ಸಿದ್ಧಪ್ಪ ಕಂಬಳಿ .ಎಸ್ ನಿಜಲಿಂಗಪ್ಪ ।
ಕೆಂಗಲ್ ಹನಮಂತಯ್ಯರ ದಿವ್ಯಗುಣ॥

                     ಬಸನಗೌಡ ಗೌಡರ
          ಉಪನ್ಯಾಸಕರು ಗುಳೇದಗುಡ್ಡ

Saturday, October 15, 2022

ಒಬ್ಬಂಟಿ

ಈಗ ನಾನೊಬ್ಬ ಒಂಟಿ 
ಯಾಕೆಂದರೆ ಹೊಡೆಯುತ್ತಿರವೆ ಗಂಟೆ. 
ಚೆ.ಚೆ. ಪ್ರಾಯಶಃ ನೀವು ತಿಳಿದಂಗಲ್ಲ ...
ಅದು ಇನ್ನೂ ದೂರವಿದೆ ಸಂತೆ.
ಅಜ್ಜಿ ಕೇಳಿದ್ರು ..ಪಿಂಟು 
ಜಗವೆಲ್ಲ ಮಲಿಗಿದೆ ನೀನೇಕೆ ಎದ್ದೆ ?
ಎಷ್ಟಂತ ಮಲಗುವುದು ಅಂಟಿ, 
ಎಚ್ಚರಗೊಳ್ಳಲು ಹೊಡದೆ ಗಂಟೆ . 
ಮಗ್ಗಲು ಚರ್ಮ ಕೊಳೆಯಿತು
ಹಾಳಾದ ಮೂಳೆ ಸೆಳೆಯಿತು
ಎಷ್ಟೂಂತಾ ಮಲುಗಲಿ ?
ಅಜ್ಜಿ ಹೇಳಿತು ..
ಜಗವೆಲ್ಲ ಮಲಗಿರಲು ಎದ್ದವರೆಲ್ಲ ಗೆದ್ದವರೆ.
ಬುದ್ಧನೂ ಎದ್ದನಲ್ಲವೆ  ?
ಹೆಂಡತಿ ಮಗ ,ಅಷ್ಟೇ ಏಕೆ ರಾಜ್ಯವೆ !
ಕಂಥಕವೊಂದೆ ನಿಂತಿತ್ತು. 
ಬಹು ದೂರ ನಡೆದ 
ಚರ್ಮ ಬೋನಿಗಂಟಿತ್ತು
ಇಲ್ಲ ಜ್ಞಾನ ಪ್ರಾಪ್ತಿ .
ಅರಳಿ ಮರವೆ ಬರಬೇಕಾಯಿತು 
ಆಶೆಯೇ ದುಃಖಕ್ಕೆ ಮೂಲವೆಂದರಿಯಲು.
ತಿಳಿಯಲಿನ್ನೂ ಎಚ್ಚರಗೊಂಡಿಲ್ಲಾ....
ಎಚ್ಚರಗೊಳ್ಳಲು ಮಲಗಿರುವರೇನು ?  
ಮಲಗಿದಂತೆ ನಟಿಸಿದವರು ಅವರೆಲ್ಲಾ 
ಜೊತೆಗೆ ಇರಬೇಕಲ್ಲ... !
ಇಲ್ಲದಿದ್ದರೆ ವಿಷ ನೀಡುವರು 
ನಿನ್ನವರೆ ಬೇರಾರಲ್ಲ..!ಒಬ್ಬಂಟಿಯಾಗಿ ನಡೆದ
ಬುದ್ಧನಿಗೇನಾಯಿತು ?
ಬದ್ದ ವೈರಿಗಳೇನಲ್ಲ ಶಿಷ್ಯ ಆನಂದನೆ 
ವಿಷವಿಟ್ಟನಲ್ಲಾ.

Tuesday, October 4, 2022

ಅಂತರಾಷ್ಟ್ರೀಯ ಶಿಕ್ಷಕರ ದಿನಾಚರಣೆ

ಇಂದು ಅಕ್ಟೋಬರ್ ಐದು, ಜಾಗತಿಕ (ಅಂತಾರಾಷ್ಟ್ರೀಯ) ಶಿಕ್ಷಕರ ದಿನಾಚರಣೆ, ಶಿಕ್ಷಕರ ಸಮುದಾಯದ ಪ್ರತಿಯೊಬ್ಬ ಶಿಕ್ಷಕನಿಗೂ ಹೃದಯಪೂರ್ವಕ ಹಾರ್ದಿಕ ಸುಭಾಶಯಗಳು, ಸೆಪ್ಟೆಂಬರ 5 ,ಭಾರತದದಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ರ ಜಯಂತಿಯನ್ನು  ಶಿಕ್ಷಕರ ದಿನಾಚರಣೆ ಎಂದು ಆಚರಿಸಿದ್ದೇವೆ . ಹಾಗೆಯೇ ವಿಶ್ವಸಂಸ್ಥೆಯ UNESCO ಸಂಸ್ಥೆಯು ಶಿಕ್ಷಕರನ್ನು ಸ್ಮರಿಸುವ ಸಲುವಾಗಿ ಅಕ್ಟೋಬರ್ 5,  ಈ ದಿನವನ್ನು ಶಿಕ್ಷಕರ ದಿನವನ್ನಾಗಿ ಘೋಷಣೆ ಮಾಡಿದೆ. 1994 ಅಕ್ಟೋಬರ್ 5 ರಿಂದ ಇದು ಪ್ರತಿವರ್ಷ ಆಚರಿಲ್ಪಡುತ್ತಿದೆ.ಅದು ಪ್ರತಿ ವರ್ಷವೂ ಒಂದೊಂದು ಧ್ಯೇಯ ದೊಂದಿಗೆ ಶಿಕ್ಷಕರನ್ನು ಗೌರವಿಸುವ ಕಾರ್ಯ ಮಾಡುತ್ತಿದೆ. 2017 ನೇ ವರ್ಷ ಶಿಕ್ಷಕರನ್ನು ಸಶಕ್ತೀಕರಣ ಮಾಡುವ ಧ್ಯೇಯ ವಿಟ್ಟುಕೊಂಡಿದ್ದರೆ 2018 ರ ಘೋಷಣೆ , "ಶಿಕ್ಷಣದ ಹಕ್ಕುಎಂದರೆ ಅರ್ಹ ಶಿಕ್ಷಕರನ್ನು ಹೊಂದುವ ಹಕ್ಕು" ಎಂದು ಘೋಷಿಸಿದೆ ಇದಕ್ಕೆ ಕಾರಣ 1948 ಮಾನವನ ಹಕ್ಕುಗಳ ಘೋಷಣೆಯ 70 ನೇ ವರ್ಷದ ಆಚರಣೆಯ ನಡೆಯಿತು  ಅದರ ಫಲವೆ ಅರ್ಹ ಶಿಕ್ಷಕರನ್ನು ಹೊಂದುವ ಧ್ಯೇಯ. ಅಂದರೆ ಅರ್ಹತೆ ಹೊಂದಿದ ಶಿಕ್ಷಕರ ಲಭ್ಯತೆ ಇಲ್ಲದೆ ಶಿಕ್ಷಣದ ಹಕ್ಕು  ಪರಿಪೂರ್ಣ ವಾಗಲು ಸಾಧ್ಯವಿಲ್ಲ ಎನ್ನುವ ಉದ್ದೇಶದಿಂದ ಎನ್ನುವುದು ಸ್ಪಷ್ಟ. ಹಾಗಾಗಿ ಸರಕಾರಗಳು ಅರ್ಹತೆ ಹೊಂದಿದ ಶಿಕ್ಷಕರ ನೇಮಕಾತಿಗೆ ಹೋರಾಡುತ್ತಿರುವದು ಮತ್ತು ಅವರ ತರಬೇತಿಗೆ ಲಕ್ಷಾಂತರ ಹಣ ವ್ಯಯ ಮಾಡಿ ಶಿಕ್ಷಕರನ್ನು ಸಂಪನ್ಮೂಲ ವ್ಯಕ್ತಿಯಾಗಿ ತಯಾರು ಮಾಡುತ್ತಿರುವುದು. ಅಲ್ಲದೆ ಅವರ ಸಮಸ್ಯೆಗಳನ್ನು ಅರಿತು ಅವುಗಳನ್ನು ಬಗೆಹರೆಸಲು ಪ್ರಯತ್ನ ನಡೆಯುತ್ತಿದೆ ಕೂಡಾ .ಶಿಕ್ಷಕನ ಬಗ್ಗೆ ಇರುವ ಕಾಳಜಿ ಪೂರ್ವ ನಿಲುವುಗಳು ಕೂಡಾ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ,ಅದಕ್ಕಾಗಿ 2017 ಥೇಮ ಶಿಕ್ಷಕರನ್ನು ಸಶಕ್ತರಾಗುವಂತೆ ಮಾಡುವುದು "Empowering Teachers " ಎಂಬುದು.ಸರ್ವ ಸಮಸ್ಯೆಗಳಿಗೆ ಶಿಕ್ಷಣ ಪಥ್ಯವಾಗಲೂ ಬಹುದು. ಈ ಶಿಕ್ಷಣ ವ್ಯವಸ್ಥೆಯಲ್ಲಿ ಅಂದು ಶಿಕ್ಷಕ ಕೇಂದ್ರ ಬಿಂದವಾಗಿದ್ದರೆ ಇಂದು ಮಗು ಕೇಂದ್ರಿತ ಶಿಕ್ಷಣವಿದೆ, ಇರಲಿ. ಶಿಕ್ಷಕನ ಸಶಕ್ತೀಕರಣವಿಲ್ಲದೆ ಶಿಕ್ಷಣದ ಮೂಲ ಉದ್ದೇಶ ಪೂರ್ಣಗೊಳ್ಳದು.ಇಂದು ಬಹಳಷ್ಟು ಬೋಧನೋಪಕರಣಗಳು ಚಾಲ್ತಿಯಲ್ಲಿವೆ ಅವುಗಳಾವವು ಉತ್ತಮ ಬೋಧಕನ ಮಟ್ಟಕ್ಕೆ ಏರಲಾರವು. ಅವು ಬೋಧನೆಯನ್ನು ಪರಿಣಾಮಕಾರಿ ಮಾಡಲು ಸಾಧನಗಳೇ ವಿನಹ ಶಿಕ್ಷಕನ ಮಟ್ಟಕ್ಕೇರಲಾರವು ಹಾಗಾಗಿ ಉತ್ತಮ ಶಿಕ್ಷಕರ ಆಯ್ಕೆ ಅವರಿಗೆ ತರಬೇತಿ ಮತ್ತು ಅವರುಗಳ ಸಮಸ್ಯೆಯ ನಿವಾರಣೆ, ಸಮಾಜ ಅವರನ್ನು ಗೌರವದಿಂದ ನಡೆಸಿಕೊಳ್ಳುವ ವಿಧಾನದಿಂದ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ .ಶಿಕ್ಷಕರನ್ನು ಗೌರವಿಸೋಣ ಶಿಕ್ಷಣವನ್ನು ಪ್ರೀತಿಸೋಣ, ಸಂತೋಷದ ಸಮಾಜ ನಿರ್ಮಾಣ ಮಾಡೋಣ. 
ಅಂತರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಶುಭಾಶಯಗಳು

Monday, October 3, 2022

ನುಡಿನಮನ



*ಚಾಲುಕ್ಯರ ಕಲಾ ಕಾಂತಿ
ಈ ಶೀಲಾಕಾಂತ *

ಚಾಲುಕ್ಯರ ಕಲೆಗಳ ಭಾವಕೆ
ಜೀವ ತುಂಬಲು ಸಿಂದಗಿಯಿಂದ
ಬದಾಮಿಗೆ ಬಂದ ॥

ಭಾಷೆಯ ಬೋಧನೆ ವೇಷದಿ
ಆಶೆಯ ತುಂಬಿದ ಶಿಷ್ಯರಲಿ
ವಿಶ್ವಕರ್ಮನ ಕೃಪೆಯಿಂದ॥

ಶಿಲೆಗಳಲರಳಿದ  ಕಲೆಗಳಗೆ 
ಅಕ್ಷರ ಮಾಲೆಯ ಬರೆದ ಈ ಕಂದ 
ಸರಸ್ವತಿಯ ಕೃಪೆಯಿಂದ ॥

ದೇಶ ವಿದೇಶಗಳ ಪ್ರವಾಸಿಗರ 
ಮನತನಣಿದ ಆಂಗ್ಲ ಭಾಷೆಯ 
ಗುರು ಚಾಲುಕ್ಯ ಪ್ರೀತಿಯಿಂದ॥

ಇತಿಹಾಸದ ಗತ ಅರಳಿಸಿ 
ಭೂತಕೂ ಚಾತಿಯ ನೀಡಲು 
ಕತೆಯಾದನು ಕಲೆಯಿಂದ॥

ಗುಡ್ಡದ ಪಡೆಗಳನಡ್ಡೆಯ ಮಾಡಿ 
ಅಡಿ ಅಡಿ ಕಲೆಗಳ ಅಮೃತ 
ಹೊರತೆಗೆದಾ ಗುರು ಗುರಿಯಿಂದ॥

ಗಾಂಧಿ ಜಯಂತಿಯ ದಿನವೇ 
ನಂದಿತು ವಾತಾಪಿಯ ಗತ 
ಸಾಹಿತ್ಯದ  ಕತೆಯೊಂದು॥

ಮಹಾತ್ಮಾನ ದಾರಿಯಲ್ಲಿ 
ಮತ್ಸರ ಮೀರಿದ ಕಲೆಗಾರನ ಕಲೆ ಮಾಯವಾಯಿತಿಂದು॥


       ಬಸನಗೌಡ ಗೌಡರ ಉಪನ್ಯಾಸಕರ ಗುಳೇದಗುಡ್ಡ

Saturday, October 1, 2022

* ಬಟ್ಟೆ ಇದ್ದೂ ಬೆತ್ತಲು.*.

ತಾತ ಸತ್ಯಕ್ಕಾಗಿ ನೀ ಮಾಡಿದೆ
ಆಗ್ರಹ.
ಅದರೆ ಹಿಡಿದಿದೆಯಲ್ಲ ಈಗ
ಗ್ರಹಣ.
ತಾತ ನೀನು ಹೇಳಿದೆ ಮಾಡಬೇಡರಿ 
ನನ್ನ ಮೂರ್ತಿ  
ನನಗಲ್ಲ ಅದು ಕೀರ್ತಿ, 
ಮರತೆವಲ್ಲ ಪೂರ್ತಿ. 
ಆದರೆ ನಿನ್ನ ತತ್ವಗಳಿಗೆ 
ಇನ್ನೂ 
ಬಂದಿಲ್ಲ ಸರತಿ.
ಭಾಷಣದಲ್ಲಿ ಅವುಗಳಿಗೇನಿಲ್ಲ 
ಕೊರತೆ.
ಈಗ ಸುಳ್ಳಿನೊಂದಿಗೆ ನಡೆದಿದೆ 
ಸರಸ .
ಸತ್ಯದೊಂದಿಗೆ ಸದಾ 
ವಿರಸ.  
ತತ್ವ ಪಾಲಿಸಲು ಎಲ್ಲರಿಗೂ 
ಬಹು ಆಯಾಸ !
ತಾತ ಅಪ್ಪಿ ತಪ್ಪಿ ನೀ ಮಾಡಬೇಡ 
ಬರುವ ಸಾಹಸ .
ಬಂದರೆ ನೀ ನೋಡತಿ ಆಂಗ್ಲರ 
ವಂಶ 
ಆಪೋಷಣಿ ಮಾಡಿದ್ದಾರೆ 
ನಿನ್ನ ಸತ್ಯ ಅಹಿಂಸಾ. 
ಭಾರತೀಯರ ಬಟ್ಟೆಗಿರುವ 
ಬಡತನ  ನೀನರಿತೆ 
ನೀನಾದೆ ಅರಬೆತ್ತಲೆ
ಈಗ ನಮಗಾಗಿದೆ 
ಕತ್ತಲೆ ...
ಹೀಗಾಗಿ ನಾವು
ಬಟ್ಟೆ ಇದ್ದು ಬೆತ್ತಲೆ.

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...