ಆರಾಧನೆ
ಪ್ರಭು ರಾಮದೇವ, ಆರಾಧ್ಯದೈವ
ಪ್ರಭೆಯೊಂದೆ ನೈತಿಕತೆಯು
ಪ್ರಭುವೆ ನೀ ಆಸ್ತಿಕರ ಜೀವಾಳ |
ನೀ ಬಿತ್ತಿದ ಬೀಜಗಳು ಹುಟ್ಟಿದವೆಷ್ಟೊ
ಅದರಲ್ಲಿ ಬೆಳೆದವೆಷ್ಟೊ
ಅಲ್ಲಲ್ಲಿ ಚಿಗುರೊಡೆದ ಮೊಗ್ಗುಗಳು
ಮುತ್ತಿನ ಹನಿಗಾಗಿ ತತ್ತರ
ಕಾಯ್ದವರ ಚಿಂತೆ ನಾನರಿಯೇ|
ಬೆಳೆವ ಪುಷ್ಪಗಳ ಮಧ್ಯೆ ಕಳೆಗಳೆ
ತುಂಬಿವೆ ಹೊಳೆಯುವ ಕೀಟಗಳು
ಸ್ನೇಹಿತರಂತೆ ನಟಿಸಿಮಿಡಿಗಾಯಿ ತಿಂದರೆ
ಬೆಳೆ ಬೆಳೆಯುವುದೆ ಚಿಂತೆ
ಮಾಲಿಗಳ ಕಷ್ಟ ನಾನರಿಯೇ |
ವೇದನೆಯು ಮರೆಯಲು
ಮೌನದ ಮೊರೆ ಹೋದ
ಸಾದುವಿಗೂ ಗದ್ದಲದ ಚಿಂತೆ
ಸದ್ಗುರುವಿನ ಸಂಕಟ ನಾನರಿಯೇ|
ಮಾನವನಾ, ದೇವರಾ ನಮಗೇಕೆ
ಬೇಕದರ ಸಂತೆ
ನಡೆದು ಕೈವಲ್ಯ ಪಡೆದವನೆ ದೇವ
ದೈವತ್ವಕ್ಕೇರಿದ ಭಾವ ಶಾಂತಿ ನೀಡಿದರೆ
ಭುವಿಯ ಸಂಕಟ ನಾನರಿಯೇ |
ನಮಗಿಲ್ಲ ನೀ ಬಿತ್ತಿದಾ ಮೌಲ್ಯಗಳ ಚಿಂತೆ
ನೆತ್ತಿಯ ಮೇಲಿನ ಹುಸಿ ಛಾಯೆ
ಹೊತ್ತು ತಂದವರ ಜರಿದರೆ
ಪಿತ್ತ ನೆತ್ತಿಗೇರುವುದು ನಾನರಿಯೇ|