Tuesday, January 30, 2024

ಆರಾಧನೆ

ಆರಾಧನೆ

ಪ್ರಭು ರಾಮದೇವ, ಆರಾಧ್ಯದೈವ
ಪ್ರಭೆಯೊಂದೆ ನೈತಿಕತೆಯು
ಪ್ರಭುವೆ ನೀ ಆಸ್ತಿಕರ ಜೀವಾಳ |

ನೀ ಬಿತ್ತಿದ ಬೀಜಗಳು ಹುಟ್ಟಿದವೆಷ್ಟೊ 
ಅದರಲ್ಲಿ ಬೆಳೆದವೆಷ್ಟೊ
ಅಲ್ಲಲ್ಲಿ ಚಿಗುರೊಡೆದ ಮೊಗ್ಗುಗಳು 
ಮುತ್ತಿನ ಹನಿಗಾಗಿ ತತ್ತರ
ಕಾಯ್ದವರ ಚಿಂತೆ ನಾನರಿಯೇ|

ಬೆಳೆವ ಪುಷ್ಪಗಳ ಮಧ್ಯೆ ಕಳೆಗಳೆ 
ತುಂಬಿವೆ ಹೊಳೆಯುವ ಕೀಟಗಳು 
ಸ್ನೇಹಿತರಂತೆ ನಟಿಸಿಮಿಡಿಗಾಯಿ ತಿಂದರೆ 
ಬೆಳೆ ಬೆಳೆಯುವುದೆ ಚಿಂತೆ
ಮಾಲಿಗಳ ಕಷ್ಟ ನಾನರಿಯೇ |

ವೇದನೆಯು ಮರೆಯಲು 
ಮೌನದ ಮೊರೆ ಹೋದ
ಸಾದುವಿಗೂ ಗದ್ದಲದ ಚಿಂತೆ
ಸದ್ಗುರುವಿನ ಸಂಕಟ ನಾನರಿಯೇ|

ಮಾನವನಾ, ದೇವರಾ ನಮಗೇಕೆ 
ಬೇಕದರ ಸಂತೆ 
ನಡೆದು ಕೈವಲ್ಯ ಪಡೆದವನೆ ದೇವ 
ದೈವತ್ವಕ್ಕೇರಿದ ಭಾವ ಶಾಂತಿ ನೀಡಿದರೆ 
ಭುವಿಯ ಸಂಕಟ ನಾನರಿಯೇ |

ನಮಗಿಲ್ಲ ನೀ ಬಿತ್ತಿದಾ ಮೌಲ್ಯಗಳ ಚಿಂತೆ
ನೆತ್ತಿಯ ಮೇಲಿನ ಹುಸಿ ಛಾಯೆ 
ಹೊತ್ತು ತಂದವರ ಜರಿದರೆ 
ಪಿತ್ತ ನೆತ್ತಿಗೇರುವುದು ನಾನರಿಯೇ|

Wednesday, January 24, 2024

ಅರಿತರೆ ಸ್ವರ್ಗ ಮರೆತರೆ ನರಕ

ಅರಿತರೆ ಸ್ವರ್ಗ ಮರೆತರೆ ನರಕ

ಮಾನವ ಪೀಳಿಗೆಗಳು 
ಸ್ಮರಿಸಬಹುದಾದ 
ಮಹತ್ವಪೂರ್ಣ ಘಟನೆಗಳೆ ಇತಿಹಾಸ, 
ಎಂದ ಗ್ರೀಸ್ ನ ಹೆರೋಡೋಟಸ್.
ಸ್ಮರಿಸಲು ಯೋಗ್ಯವಲ್ಲದ 
ಸಂಗತಿಗಳಿಗೆ ಯಾಕಾಗಿ ಇಷ್ಟು ಸಂಕಷ್ಟ?
ಇತಿಹಾಸದ ಸಂಗತಿಗಳು 
ಹಿಯಾಳಿಸಲು ಅಲ್ಲ, 
ಸ್ವಾರ್ಥಕ್ಕಾಗಿ ಸಮರ್ಥಿಸಲೂ ಅಲ್ಲ. 
ಅವು ತಮ್ಮಷ್ಟಕ್ಕೆ ತಾವು 
ನಡೆದ ಘಟನೆಗಳು ಅಷ್ಟೆ.
ಅವು ನಮ್ಮ ಪೂರ್ವಜರ 
ಹೆಜ್ಜೆಗುರುತುಗಳು .
ಅವು ನಮಗೆಲ್ಲ ದಾರಿಗಳು 
ನಡೆದು ಹೋಗಬೇಕಷ್ಟೆ 
ಮಾರ್ಗದರ್ಶಿ ಬೋರ್ಡ, ತಿದ್ದಲಲ್ಲ. 
ತಿರುಚುವುದಲ್ಲ, ಅರಚುವುದೂ ಅಲ್ಲ. 
ಇತಿಹಾಸ ಓದಿದವನ ಮಾತನೊಮ್ಮೆ 
ಕೇಳಿ.... ಇತಿಹಾಸ ಓದದೆ ಅದನ್ನು ವ್ಯಾಖ್ಯಾನಿಸುವುದು ಅಪಾಯಕಾರಿ.
ಕ್ರೂರಿಯಾದವನ ವಂಶಜರೆಲ್ಲ 
ಶತೃಗಳೂ ಅಲ್ಲ 
ಸಾಧಕರ ಸಂತತಿಗಳೆಲ್ಲ 
ಶಾಂತಿಯ ಸೌಧ ಕಟ್ಟುವ ಮಹಾಮಹಿಮರಾಗಬೇಕೆಂದಿಲ್ಲ.
ಸಾಧಕರ ದಾರಿಯಲ್ಲಿ 
ಇರಬೇಕು ನಾವೆಲ್ಲ.
ನಡೆದುದೆಲ್ಲವೂ ಇತಿಹಾಸವಲ್ಲ
ಬದುಕು ಹಸನು ಮಾಡಲು ಹೊಸೆಯಬಹುದಾದ ಸಂಗತಿಗಳೆ 
ಇತಿಹಾಸ.ತಿಳಿದರೆ ಮಂದಹಾಸ
ಇಲ್ಲದಿದ್ದರೆ ಸರ್ವನಾಶ.
ಜಾಗತಿಕ ಯುದ್ಧಗಳ ಪಾಠ 
ಓದಿಯೂ ಮಾಡಬಾರದು 
ಸಬಲರು ಬಗ್ಗಿಸುವ ಹಠ
ಮಾಡಿದರೆ ಮಣ್ಣಾಗುವುದು ದಿಟ
ಜಗತ್ತೆ ನಡುಗಿಸಿದ ಮುಸೋಲಿನ್
ತನ್ನವರಿಂದಲೆ ಆದ ಹತ್ಯೆ
ತನ್ನ ಜನಾಂಗವೆ ಶ್ರೇಷ್ಠವೆಂದ
ಹಿಟ್ಲರ್ ಮಾಡಿಕಂಡ ಆತ್ಮಹತ್ಯೆ.

ಕಣವಿಯವರಿಗೆ ನುಡಿನಮನ

 ಕನ್ನಡದ ಮೇರು ಕವಿ ಶ್ರೀ ಚನ್ನವೀರ ಕಣವಿ ಅವರಿಗೆ ಶ್ರದ್ಧಾಂಜಲಿ ನುಡಿನಮನ 
ಸ್ಫರ್ಧೆಗಾಗಿ ಕವನದ  ಧ್ವನಿ ಮುದ್ರಣ 

* ಕನ್ನಡದ ಕನಸುಗಾರ *

ಸಾಹಿತ್ಯ ಕಣವಿಯಲಿ ಸಾವಿರ 
ಮರ ಬೆಳದ ಕಾವಲುಗಾರ.
ಚಿನ್ನದಂತ ಚನ್ನವೀರ ನೀವೆಮ್ಮ
ಕನ್ನಡ ಕಣಜ ಕಟ್ಟಿದ
ಕನಸುಗಾರ.//

ಭಾವಗಳಿಗೆ ಜೀವ ನೀಡುವ 
ಭವದ ಭಾಗ್ಯದ ಬಳೆಗಾರ 
ಹೊಂಬಳದಿ ನಂಬಿ ಬೆಳೆದ 
ಹೊಂಬೆಳಕಿನ ತುಂಬಾ ಸವಿಗಾರ//

ಬೆಂಬೆಳಕು ನೀಡಿ ಬೆಳೆದ 
ಸುನೀತಗಳ  ಸಾಮ್ರಾಟ್ .
ರಟ್ಟಿಗೂ ಗಟ್ಟಿ ಕಳೆ ನೀಡಿದ  
ಪಟ್ಟಿ ಕಿರಿಟದ ಪೇಟಗಾರ//

ನೀವಿಟ್ಟ ಹೆಜ್ಜೆಯ ಗುರುತು 
ಜ್ಞಾನ ಕಾಶಿಯಲಿ  ಸಂಚಾರ 
ನಾಡೆಲ್ಲ ಹಾಲು ಜೇನಾಗಿಸಿದ
ನವ್ಯಕಾವ್ಯ ಮನ್ವಂತರಗಾರ.//

ಮಾನವೀಯ ಮೌಲ್ಯಗಳ 
ವಿನಯದ ವಿಶಾಲ ಗುಣವಂತ .
ಕಾಣದಂತೆ ಮರೆಯಾದ  
ಸಂಸ್ಕಾರದ ಹೃದಯವಂತ.//

ಕನ್ನಡದ ತೇರು ಮುನ್ನಡೆಸಲು 
ಇನ್ನರಬೇಕಿತ್ತು ಅಕ್ಷರದ ಗಾರುಡಿಗಾರ. 
ಕಾಣದ ಕರವೊಂದು ಕರೆದು  
ಅನಂತ ಕವನವಾದ ಕಲೆಗಾರ.//


Saturday, January 20, 2024

* ರಾಮನಾಮ ಭಾರತ *

ಭರತ ಭೂಮಿ ನಿನ್ನ ಮಹಿಮೆ 
ನಮಗೆ ವರ್ಣಿಸಲಸದಳ ।
ಭವ್ಯಪರಂಪರೆ ರಾಮನಾಮ
ನಮ್ಮೆಲ್ಲರ ಹಿರಿಮೆಯು ಅನುದಿನ॥

ಭರತ ಲಕ್ಷ್ಮಣ  ಸಹೋದರ ಗುಣ
ಸತಿ,ಸೀತೆಯ ಪಾವಿತ್ರ್ಯದ ಪಣ।
ಸಾಗುತಿಹುದು ರಾಮನ ರಾಜ್ಯ 
ಭಾರತ ಮಾತೆಯ ಆಶಾಭಾವ ಕ್ಷಣ ಕ್ಷಣ॥

ರಾಮನಸ್ಮಿತೆ ಪಡೆದ ಭರತಭೂಮಿ 
ನಿನಗಿದೋ ನರರ ಶಿರಬಾಗಿದ ನಮನ।
ಪಿತೃ ವಾಕ್ಯ ಪರಿಪಾಲನೆ ಮಂತ್ರ ಒಂದೇ 
ಅಖಂಡ ಜಂಭೂ ದ್ವೀಪದ ಕಣ ಕಣ॥

ಪಾದರಾಕ್ಷೆ ತಲೆಯ ಮಾಲೆ 
ಪ್ರಜಾಸೇವೆ ತೂಗುವ ಉಯ್ಯಾಲೆ।
ಎದೆಬಗೆದು ಭಕ್ತಿಯ ಮಂದಿರ ತೋರಿದ 
ಹನುಮ ಕೊಂಡಿಯೇ ಭಾರತೀಯ॥

ಸತಿ ಸುತರು ಗತಿಯಲಿರಲು
ಪತಿ ಆದರ್ಶ ಗುಣವೆ ಗಗಣ।
ಸರಯೂ ನದಿಯೀಗ ಕಾದಿದೆ
ಇಕ್ಷು ಕುಲ ರಾಮ ಪ್ರಾಣ ಪ್ರತಿಷ್ಠಾಣ।

ಭರತ ಭೂಮಿಯೇ ಶ್ರೀ ರಾಮ
ಪೂರ್ವದ ಸಪ್ತ ಸಹೋದರಿಯೇ
ಹೂಡಿದ ರಾಮನ ಬಿಲ್ಲು ಬಾಣ ।
ಕಚ್ಚ್ ಕಾರಿಯೇ ವೈರಿಗೆ ಅಗ್ನಿ ಬಾಣ॥

ತೆಂಕಣದೆದೆಯ ಬಿಂಕದ ಶರಧಿ 
ಲಂಕೆಯ ರಾವಣನ ಗರ್ವದ ಉರಿ।  
ಚುಂಬಿಸಿತು ರಾಮನ ಪಾದದ ಧನ
ನಂಬಿದ ಜನರಿಗದು ದಸರೆಯ ದಿನ ॥

Sunday, January 14, 2024

* ಸಂಕ್ರಾಂತಿ *


ಭೂತಾಯಿ ಮನೆ ಮುಂದೆ
ನೇಗಿಲನ ರಂಗೋಲಿ 
ಬಾಗಿದರೆ ಹೆತ್ತಮ್ಮ, ಭತ್ತದ ಚಿತ್ತಾರ 
ಮಡಿಲೊಳಗ।

ಹುತ್ತರಿ ಹಬ್ಬಕ್ಕೆ ಉತ್ತರಕೆ ಪಯಣ
ನೆತ್ತರ ಬಸಿಯುವನು ಬಸವಣ್ಣ।
ಎತ್ತ ನೋಡಿದರು ಹಸಿರನ ತೋರಣ 
ಎತ್ತಿನ ಕಷ್ಟ ನೆನೆಯೋಣ॥

ಮಕರನ ಮನೆ ಮುಂದೆ 
ಬಾಳಿನ ಬಾಸ್ಕರ ಬಂದಾನ  
ಬದಲಾವಣೆಯ ಸಂಕ್ರಾಂತಿ ತಂದಾನ.
ಜಗಕೆಲ್ಲ ಎಳ್ಳು ಬೆಲ್ಲದ ಸ್ನಾನ
 
ಸುಗ್ಗಿಯ ಬೆಳೆ ತಂದು ಎಗ್ಗಿಲ್ಲದೆ 
ಹಂಚಿದರ ಬದುಕೆಲ್ಲ ಸಗ್ಗದ ಸಿರಿ ಕಾಣೋ
ರೈತನ ಬೆವರಿಗೆ ನಾಡೆಲ್ಲ ಸಿಂಗಾರ। 
ಭತ್ತದ ರಾಶಿ ಬಂಗಾರ॥

Saturday, January 13, 2024

* ಇರಬೇಕು ನಿರಾಳ *

* ಇರಬೇಕು ನಿರಾಳ *

ಮಾಡದ ತಪ್ಪಿಗೆ ಮೂಡಿದರೆ 
ಆರೋಪ, ಅದು ನೀ ಬೆಳೆದ ತಪ್ಪಿಗೆ
ಆಗದಿರು ಸಪ್ಪಗೆ ಅವರು ಬೀಳುವರು ತಿಪ್ಪಿಗೆ
ನಕ್ಕು ಬಿಡೋಣ ಒಮ್ಮೆ 
ಅತ್ತು ಬಿಡೋಣ ಒಮ್ಮೆ ॥

ಕಲ್ಲು ಮುಳ್ಳುಗಳ ಈ ದಾರಿ 
ಯಾರಿಲ್ಲ ಈ ಬಾರಿ,ನಾವು ನಡೆದರೆ ಹೆದ್ದಾರಿ
ತಿಳಿಯದ ಕೋಡಿ, ಹಾಕುತಾರ ಚಿಮಾರಿ
ನಕ್ಕು ಬಿಡೋಣ ಒಮ್ಮೆ
ಅತ್ತು ಬಿಡೋಣ ಒಮ್ಮೆ॥

ಮಾಡಿಸಿದವರು ನಗತಾರ, ಕಾಡಿಸಿದವರ
ಕರಗತಾರ, ನಡೆದವರು ತಲಪುತಾರ.
ನಕ್ಕವರ ಪಾಪದ ಕೊಡ ಬಾರ
ನಕ್ಕು ಬಿಡೋಣ ಒಮ್ಮೆ
ಅತ್ತು ಬಿಡೋಣ ಒಮ್ಮೆ॥

ಕಾಗಕ್ಕ ಕರಿತಾಳ ಗುಬ್ಬಕ್ಕಮರಿತಾಳ
ಓತಿಕ್ಯಾತ ಲೆಕ್ಕ ಬರೆಯತಾಳ
ಕೋತಿಯ ಮೋತಿ ಮುಸರಿನೇ ಎಲ್ಲಾ
ನಕ್ಕು ಬಿಡೋಣ ಒಮ್ಮೆ
ಅತ್ತು ಬಿಡೋಣ ಒಮ್ಮೆ॥

ಯುದ್ಧ ಅಂದ ಮೇಲ ಗೆದ್ದರೂ ಸೋಲು
ಬಿದ್ದರೂ ಇರಬೇಕು ನಿರಾಳ
ಒದ್ದವನ ಸೊಂಟಕ್ಕೂ ಬಿತ್ತು ಬಾರ
ನಕ್ಕು ಬಿಡೋಣ ಒಮ್ಮೆ
ಅತ್ತು ಬಿಡೋಣ ಒಮ್ಮೆ॥

Sunday, January 7, 2024

ಚಿತ್ರಕವನ

ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾವೇದಿಕೆ ಜಿಲ್ಲಾ ಘಟಕ ಬೆಳಗಾವಿ .

ಸ್ಫರ್ಧೆಗಾಗಿ 
ಪ್ರಕಾರ : ಚಿತ್ರ .ಹನಿಗವನ.


* ರೈತ ಸಂಕ್ರಾಂತಿ *

ನೇಗಿಲನ ರಂಗೋಲಿ ಬಾಗಿದಳು
ಹೆತ್ತಮ್ಮ। ಭತ್ತದ ಚಿತ್ತಾರ ಮಡಿಲೊಳಗ।
ಎತ್ತ ನೋಡಿದರು ಹಸಿರ ತೋರಣ ಎತ್ತಿನ ಕಷ್ಟ ನೆನೆಯೋಣ॥

ರೈತನ ಬೆವರಿಗೆ ನಾಡೆಲ್ಲ ಸಿಂಗಾರ। ಭೂತಾಯಿಯ ಭತ್ತದ ರಾಶಿ ಬಂಗಾರ। 
ಜೋಡೆತ್ತಿಗೆ ಕೈ ಮುಗಿಯೋಣ॥

 ಶ್ರೀ ಬಸನಗೌಡ ಯ ಗೌಡರ
             ಉಪನ್ಯಾಸಕರು
ಬಾಲಕರ ಸರಕಾರಿ ಪ.ಪೂ.ಕಾಲೇಜು ಗುಳೇದಗುಡ್ಡ
               9480385494

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...