Monday, December 30, 2024

ರಾಷ್ಟ್ರೀಯತೆ ಬೆಳವಣಿಗೆಗೆ ಕಾರಣವಾದ ಪ್ರಮುಖ ಅಂಶಗಳು

1) ಬ್ರಿಟಿಷರ ಆರ್ಥಿಕ ನೀತಿಯು ಅಸ್ತಿತ್ವದಲ್ಲಿದ್ದ ಆರ್ಥಿಕ ವ್ಯವಸ್ಥೆಯನ್ನು ನಾಶ ಮಾಡಿತು.
ಭಾರತದ ಆರ್ಥಿಕ ಹಿನ್ನಡೆಗೆ ಬ್ರಿಟಿಷರ ಆಳ್ವಿಕೆಯೇ ಕಾರಣವೆಂದು ಪರಗಣಿಸಲಾಯಿತು
2) ಬ್ರಿಟಿಷರು ಭಾರತದಲ್ಲಿ ರಾಜಕೀಯ ಐಕ್ಯತೆ ತಂದರು ಮತ್ತು ಏಕರೂಪದ ಆಡಳಿತ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ನೀಡಿದ್ದು.
3) ಭಾರತೀಯರ ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯ ಏಕಸ್ವಾಮ್ಯತೆಯನ್ನು  ಪಾಶ್ಚಿಮಾತ್ಯ ಇಂಗ್ಲಿಷ ಶಿಕ್ಷಣ ಮುರಿಯಿತು.
ತಿಳುವಳಿಕೆ ಪಡೆದ ಭಾರತೀಯರು ಯೂರೋಪಿನ ಪರಿಸ್ಥಿತಿಗೆ ತಮ್ಮ ಪರಿಸ್ಥಿತಿಯನ್ನು ಹೋಲಿಸಲಾರಂಭಿಸಿದರು
4) ಬ್ರಿಟಿಷರು ತಮ್ಮನ್ನು ಶ್ರೇಷ್ಠ ಜನಾಂಗದವರು ಎಂದು ಭಾವಿಸಿದ್ದು.
-1858 ರ ರಾಣಿಯ ಘೋಷಣೆಯ ಆಶ್ವಾಸನೆಯನ್ನು ಬ್ರಿಟಿಷರು ಈಡೇರಸಲಿಲ್ಲ .
_ಭಾರತೀಯರ ಸಂಸ್ಕೃತಿಯನ್ನು ನಿಷ್ಕೃಷ್ಟವಾಗಿ ಕಂಡದ್ದು.
_ಅವರು ತಮ್ಮ ನ್ನು ಹಿಂದುಳಿದ ಭಾರತೀಯರ ಸುಧಾರಕರೆಂದು ತಿಳಿದದ್ದು.
5) ಭಾರತದ ಮೇಲೆ ಪ್ರಭುತ್ವ ಸಾಧಿಸಲು ಮಾಡಿದ ಸರಣಿ ಯುದ್ಧಗಳು.
ಸಹಾಯಕ ಸೈನ್ಯ ಪದ್ದತಿ,ಮತ್ತು ದತ್ತು ಮಕ್ಕಳಿಗೆ ಹಕ್ಕಿಯಲ್ಲ ಎಂಬಂತಹ ಪ್ರತಿಗಾಮಿ ದೋರಣೆಗಳು.
 6 ) ಭಾರತದ ಪತ್ರಿಕೋದ್ಯಮ ಹಾಗೂ 19,20, ನೇ ಶತಮಾನದ ಭಾರತೀಯರ ಸಾಹಿತ್ಯ ರಾಷ್ಟ್ರೀಯತೆಯನ್ನು ಪ್ರಚೋಧಿಸಿತು 
ಆರ್ ಜಿ ಭಂಡಾರ್ಕರ್, ಮ್ಯಾಕ್ಸ್ ಮುಲ್ಲರಂತಹ ಪಂಡಿತರು ಭಾರತದ ಭವ್ಯ ಇತಿಹಾಸದ ಮೇಲೆ ಬೆಳಕು ಚೆಲ್ಲಿದರು.

ಸೋಲುತ್ತಿದ್ದೇನೆ.


ಈಗೀಗ ನಾನು ಸೋಲುತ್ತಿದ್ದೇನೆ
ಪ್ರಭಲನಾಗಿರವೆ ಎನ್ನುವ ಸತ್ಯದ ಅರಿವಿದ್ದರೂ,
ಎತ್ತಿ ಕಟ್ಟಿ ಸುತ್ತುವರಿಯುವರೆಂಬ ಅರಿವಾದಾಗ.

ಈಗೀಗ ನಾನು ಸೋಲುತ್ತಿದ್ದೇನೆ.
ಅಧಿಕಾರ ಕೇಂದ್ರೀಕರಿಸುವವರ ಅರಿವಿದ್ದರೂ ,
ಜಗತ್ತು ನಡುಗಿಸಿದ ಹಿಟ್ಲರನ ಆತ್ಮಹತ್ಯೆಯ ಅರಿವಾಗಿ.

ಈಗೀಗ ನಾನು ಸೋಲುತ್ತಿದ್ದೇನೆ
ಚಿಕ್ಕವರೂ ಶೆಟೆದು ನಿಲ್ಲುವ ಸತ್ಯದ ಅರಿವಿದ್ದರೂ,
ನಿಸರ್ಗವೆ ನಿರ್ಣಾಯಕವೆಂದು ತಿಳಿದಾಗ

ಈಗೀಗ ನಾನು ಸೋಲುತ್ತಿದ್ದೇನೆ 
ದೂರದನುಭವದ ಹಿರಿತನವಿದ್ದರೂ, 
ಉಳಿದಿರುವ ದಾರಿ ಚಿಕ್ಕದೆಂದರಿವಾದಾಗ 

ಈಗೀಗ ನಾನು ಸೋಲುತ್ತಿದ್ದೇನೆ
ವಾದದ ಸೋಲಿನ ಅವಮಾನ ಅರಿವಿದ್ದರೂ,
ಗೆದ್ದವರಾರು ಉದ್ದಾರವಾಗಿಲ್ಲವೆಂದು ತಿಳಿದಾಗ 

ಈಗೀಗ ನಾನು ಸೋಲುತ್ತಿದ್ದೇನೆ
ಅನ್ಯಾಯ ಎನ್ನುವ ಸತ್ಯದ ಅರಿವಿದ್ದರೂ,
ನ್ಯಾಯದ ಜಯ ನಿಧಾನವೆಂಬುದರಿವಾಗಿ

ಈಗೀಗ  ನಾನು ಸೋಲುತ್ತಿದ್ದೇನೆ
ದ್ವೇಷದ ಸಂತೆಯಲ್ಲಿ ಪ್ರೀತಿ ದುಭಾರಿಯಾದರೂ,
ಪ್ರೀತಿಗೆ ತಲೆಬಾಗದ ಕ್ರೂರಿಯಾರಿಲ್ಲದಿರುವಾಗ



Saturday, December 28, 2024

ನಾ ಕಂಡ ಕವಿ , ಯಾ..ಕೊಳ್ಳಿ


ಬೂದಿಯೋಳ್ ಉದಯಿಸಿದ 
ಬೆಂಕಿಯ ಕೊಳ್ಳಿ ಯಾರಿಟ್ಟರೊ 
ಇದನು ಯಾರಿಟ್ಟರೊ ಗುಳೆ ಬಂದ 
ಗುಡ್ಡದಲ್ಲಿ ತಂದು ಯಾರಿಟ್ಟರೊ॥

ಭಂಡಾರಿ ದೇಗುಲದ ಜ್ಞಾನವನುಂಡು
ಮಹದೇವನೆಂಬ ಗುಡ್ಡದ ಕಣವಿಯಲ್ಲಿ
ಹೂವಾಗಿ ಬೆಳೆದು ಹದವಾಗಿ ಅರಳಿ
ಹೂಗಾರ ಗುರುವಿನ ಹೂಮಾಲಿ ಇವನು॥

ಹರಿದ ಚಪ್ಪಲಿ ಮುದಡಿದಂಗಿಯ ಪೋರ
ಬರಿ ಬರಹ ಸಾಹಿತ್ಯದಕ್ಕರದ ಚೋರ 
ತುಳಿದ ಸಂಗನ ಬಸವನ ಕನ್ನಡದ ನೆರಳು
ಬೆಳೆದ ಪದವಿ ಪೂರ್ವ ಶಿಕ್ಷಣದ ಗುರು ಇವನು॥

ನೀರುಬೂದಿಹಾಳದಾರದ ಯಾ...ಕೊಳ್ಳಿ 
ನೂರು ಗುರುಗಳ ಮಾರ್ಗದ ದೀಪದ ಬಳ್ಳಿ
ಸಾವಿರ ವಿದ್ಯಾರ್ಥಿಗಳ ಮನ ಕರಗಿಸಿ
ಜೀವನ ಪಾಠ ಕಲಿಸಿದ ಗಾರುಡಿಗ ಇವನು॥

ಪ್ರಧಾನ ಆಚಾರ್ಯ ಎಷ್ಟು ವ್ಯವಧಾನ 
ಕರ್ತವ್ಯ ದಾಚೆಗೂ ಕಾವ್ಯ ಕಟ್ಟುವ 
ಹೊಸ ತಲೆಮಾರಿನ ಕವಿವರ್ಯ 
ಸಾಹಿತ್ಯದ ಕವಲುಗಳ ಎಲೆಗಳಿವನು॥

ಯಲ್ಲವನು ಬಲ್ಲ ಸಾಹಿತಿ ಈ ಯಲ್ಲಪ್ಪ 
ನೂರು ಕವಿಗಳ ಸಾವಿರ ಬರಹಗಳ ವಿಮರ್ಶೆ
ಪೋನ್ ನಲ್ಲಿ ಬೆರಳಾಡಿಸಿ ತಿರುವಬಲ್ಲ 
ಬಗಿದಷ್ಟು ಸಾಹಿತ್ಯದ ಬಂಗಾರ ಇವನು ॥





Thursday, December 26, 2024

ನುಡಿ ನಮನ



ಅನುದಿನವೂ ಮಾತಾಡಿ ಹೊಣೆಯರಿಯದ 
ನಮ್ಮೊಳಗೆ 
ಮೌನದೊಳು ಮುಕುಟವಾಗುವ ಕಲೆ
ಕಲೆ ಕಲಿಸದ ಕಲೆಗಾರ
ಇವರೆ ನಮ್ಮ ಮನಮೋಹನ॥

ಹುಟ್ಟಿದ್ದು ಪಾಕಿಸ್ತಾನ ಬೆಳೆದದ್ದು ಭಾರತ 
ಅರಳಿದ್ಡು ಜಗದಗಲ ಮುಗಿಲಗಲ
ಪಶ್ಚಿಮದ ಆಕ್ಸ್ಫರ್ಡ್ ಕ್ಯಾಂಬ್ರಿಡ್ಜ್  
ಮೇರು ವಿಶ್ವ ವಿದ್ಯಾಲಯದಲ್ಲರಳಿದ
ಪ್ರತಿಭೆ ನೀವು,॥

ಹರಡಿದಿರಿ ಭಾರತದ ತುಂಬಾ ಪ್ರಭಾವಲಯ 
ಒಂದೆ ಎರಡೆ, ಆರ್ಥಶಾಸ್ತ ದ ಪ್ರಾಧ್ಯಾಪಕ 
ರಿಜರ್ವಬ್ಯಾಂಕ ಗೌರ್ನರ ,ಯುಜಿಸಿ ಅಧ್ಯಕ್ಷ 
ಎಲ್ಲ ದರಲ್ಲಿಯೂ ಆದೇ ದಕ್ಷತೆಯ ಹೆಗಲು ನೀವು ॥

ಪ್ರಧಾನ ಮಂತ್ರಿಯ ಆರ್ಥಿಕ ಸಲಹೆಗಾರ ,
ಒಂದಲ್ಲ ಎರಡು ಅವಧಿಯ ಪ್ರಧಾನಿ
ಆರಿಸಿದವರು ನಾವಲ್ಲ ಹೊರೆಸಿದೆವು 
ಸವಾಲಿನ ಸಾಲಿನ ಆರ್ಥಿಕ ಮಾಂತ್ರಿಕ ಪ್ರಧಾನಿ
ಬಂಗಾರ ಅಡವಿಟ್ಟು ಬುಡ ಸೇರಿದ ಅರ್ಥವ್ಯವಸ್ಥೆಯ
ಜಡಬಿಡಿಸಿದ ಗಾರುಡಿಗ ನೀವು॥

ಬಡತನದ ಬುಡ ಕೀಳಲು 
ನರೇಗಾ,ಮಾಹಿತಿ ಹಕ್ಕು ಕಾಯ್ದೆ,
ಆಹಾರ ಭದ್ರತಾ ಕಾಯ್ದೆ, ಉಚಿತ ಹಾಗೂ ಕಡ್ಡಾಯ 
ಶಿಕ್ಷಣ ಕಾಯ್ದೆ ಗಳಿಗೆ ಜೀವ ನೀಡಿದವರು ನೀವು॥

ಆರ್ಥಿಕ ಮಾಂತ್ರಿಕನ ಕಳೆದುಕೊಂಡು 
ಬಡವಾದ ಭಾರತದ ಪ್ರೀತಿಯ ನುಡಿ ನಮನ.🙏🙏

ಇತಿಹಾಸ ಬೋಧನೆ

ಇತಿಹಾಸ ಬೋಧನೆ .
  ಹದಿಮೂರು ವರ್ಷಗಳ ಪ್ರೌಢಶಾಲೆಯ ಹಾಗೂ 18 ವರ್ಷಗಳ ಕಾಲೇಜಿನ ಉಪನ್ಯಾಸಕ ವೃತ್ತಿಯ ಬೋಧನೆಯ ಅನುಭವದ ಆಧಾರದ ಮೇಲೆ ಅಭಿವ್ಯಕ್ತಪಡಿಸಬಹುದಾದ ಕೆಲವು ಸಂಗತಿಗಳ ಕಿರು ನೋಟವಿದು.ಅದು ಇನ್ನೊಬ್ಬರ ಮೇಲೆ ಹೇರಬಹುದಾದ ಒತ್ತಾಯವು ಅಲ್ಲ, ಉಪದೇಶವೂ ಅಲ್ಲ. ಆದರೆ ಅದು ನಿರಂತರ 31ವರ್ಷಗಳ ಬೋಧನೆಯ ಅನುಭವದ ಸಾರ. 
       ಇತಿಹಾಸ ಬೋಧನೆಯು ಒಂದು ಸವಾಲಿನ ಕೆಲಸವು ಹೌದು ಮಕ್ಕಳಿಗೆ ನೀಡುವ ಜ್ಞಾನದ ರಸದೌತಣವೂ ಹೌದು, ಹೇಗೆಂದರೆ ಅಮೂರ್ತ ವಿಚಾರಧಾರೆಗಳನ್ನು ವ್ಯಕ್ತಿಯೊಬ್ಬನ (ಮಕ್ಕಳ) ಮಸ್ತಕಕ್ಕೇರಿಸಿ ಆತನ ವ್ಯಕ್ತಿತ್ವ ವಿಕಸನ ಮಾಡಬೇಕಾಗಿರುವ ಔತಣ.ಅದು ಅಷ್ಟು ಸುಲಭದ ವಿಷಯವೇನಲ್ಲ ! ಯಾಕೆಂದರೆ ಇತಿಹಾಸ ವಿಷಯ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಪೂರ್ವ ಜ್ಞಾನದ  ಗುಣಮಟ್ಟ ಅಷ್ಟು ಎತ್ತರದ ಮಟ್ಟದಲ್ಲಿ ಇರಲಾರದು ಎನ್ನುವುದು ಎಲ್ಲರಿಗೂ ತಿಳಿಯದ ವಿಷಯವೇನಲ್ಲ ಹಾಗೆಂದು ಹಿಂದೆ ಸರಿಯುವ ಹಾಗೆಯೂ ಇಲ್ಲ. ಹಾಗಾದರೆ ಮಾಡಬೇಕಾದದ್ದು ಏನು?
       ಎಲ್ಲ ವಿಷಯ ಉಪನ್ಯಾಸಕರು ಮಾಡುವಂತೆ ಅವರ ಪೂರ್ವ ಜ್ಞಾನದ ಪರೀಕ್ಷೆ ನಂತರ ಅವರ ಸಾಮರ್ಥ್ಯದ ಆಧಾರದಲ್ಲಿ ವರ್ಗೀಕರಣ ಮಾಡಬೇಕು ಅದು ವಿದ್ಯಾರ್ಥಿಗಳಿಗೆ ತಿಳಿಯದ ಹಾಗೆ ಇರಲಿ. ಪ್ರತಿ ಪಾಠದ ಅವಧಿಯಲ್ಲಿ ನಮ್ಮ ಪಾಠ ಪ್ರವಚನ ಒಂದನೆಯ ವರ್ಗದ ವಿದ್ಯಾರ್ಥಿಗಳಿಂದ ನಾಲ್ಕನೆಯ ವರ್ಗದ ವಿದ್ಯಾರ್ಥಿಗಳು ಕಲಿಯುವಂತೆ ಸಾಗುತ್ತಿರಬೇಕು ಅಂದರೆ ಆ ಪಾಠವನ್ನು ಅವರು ಹೇಳಿಕೊಡಬೇಕೆ ? ಖಂಡಿತವಾಗಿಯೂ ಇಲ್ಲ, ಉಪನ್ಯಾಸಕರು ಇಲ್ಲಿ ಮೂಲ ಪರಿಕಲ್ಪನೆಯನ್ನು ಚರ್ಚಿಸುತ್ತಾ ನಡೆಯಬೇಕು ಮಹತ್ವದ ಸಂಗತಿಗಳನ್ನು ಬೋರ್ಡಿನಲ್ಲಿ ಬರೆಯುತ್ತಿರಬೇಕು ಸ್ಮಾರ್ಟ ಬೋರ್ಡ ಇದ್ದರೆ ಬರೆಯಬೇಕಾದದ್ದನ್ನು ಮೊದಲೆ ನಮ್ಮ ಲ್ಯಾಪ್‌ಟಾಪಿನಲ್ಲಿ ಬರೆದು ಅದನ್ನು ನಮ್ಮ ಪೆನ್ ಡ್ರೈವನಲ್ಲಿ. ಹಾಕಿಕೊಂಡಿರಬೇಕು (ನನ್ನ ದ್ವಿತೀಯ ಪಿ ಯು ಸಿ ವಿದ್ಯಾರ್ಥಿಗಳಿಗೆ ನಾನು ಹಾಗೆ ಮಾಡುತ್ತಿದ್ದೆ ಹೋದ ವರ್ಷದಿಂದ ಅದು ನನಗೆ ಲಭ್ಯವಿಲ್ಲ) ಕ್ಲಾಸಿಗೆ ಹೋದ ತಕ್ಷಣ ಅದನ್ನು ಹಾಕುವುದಲ್ಲ ಬದಲಾಗಿ ಐದು ನಿಮಿಷ ಹಿಂದಿನ ಪಾಠದ ವಿವರಣೆ ಮಾಡಿದ ಮೇಲೆ ಇಂದಿನ ಪಾಠದೊಳಗೆ ಐದು ನಿಮಿಷ ವಿದ್ಯಾರ್ಥಿಗಳ ಮನಸ್ಸು ತೊಡಗಿದ ಮೇಲೆ ವಿದ್ಯಾರ್ಥಿಗಳು ನಾವು ಹಾಕುವ ಮುಖ್ಯಾಂಶಗಳಿಗೆ ಹಾತೊರಿಯುವಾಗ ಅವು ನಮ್ಮ ಬತ್ತಳಿಕೆಗೆ  ಬಾಣವಾಗಿರಬೇಕು. ಬರಿ ಬೋರ್ಡಿನ  ವಿವರಣೆ ನಮ್ಮ ಪಾಠದ ಉದ್ದೇಶ ವಾಗಿರದೆ ತುಲನಾತ್ಮಕ ಅಧ್ಯಾಪನ ನಡೆಯಬೇಕು ಅಂದರೆ ಸಿಂಧೂ ನಾಗರಿಕತೆ ಕಲಿಸುವಾಗ ವೈದಿಕ ಸಂಸ್ಕೃತಿಯ, ಜೈನಧರ್ಮ ಕಲಿಸುವಾಗ ಬೌದ್ಧ ಧರ್ಮ, ಮೌರ್ಯರ ಬಗ್ಗೆ ಕಲಿಸುವಾಗ ಶಾತವಾಹನರ, ಗುಪ್ತರ ಬಗ್ಗೆ ಕಲಿಸುವಾಗ ಚಾಲುಕ್ಯರ ಇತಿಹಾಸ, ರಾಷ್ಟ್ರಕೂಟರ ಬಗ್ಗೆ ಕಲಿಸುವಾಗ ಮುಂದಿನ ಕಲ್ಯಾಣಿ ಚಾಲುಕ್ಯರ ಇತಿಹಾಸ, ಹೊಯ್ಸಳರ ಬಗ್ಗೆ ಕಲಿಸುವಾಗ ಉತ್ತರ ಭಾರತದ ಮುಸ್ಲಿಮರ ಆಡಳಿತದ ಆಗಮನದ ವಿವರಣೆ,ವಿಜಯನಗರದ ಬಗ್ಗೆ ತಿಳಿಸುವಾಗ ಮೊಗಲರ ಬಗ್ಗೆ ಚುಟುಕಾಗಿ ಚುರುಕಾಗಿ ತಿಳಿಸುತ್ತಾ  ಕ್ಷಣ ಮಾತ್ರದಲ್ಲಿ ಮೂಲ ಪಾಠದಲ್ಲಿರಬೇಕು ಹೀಗೆ ಮಾಡುವಾಗ ಉಪನ್ಯಾಸಕರಗೆ ವಿಷಯದ ಬಗ್ಗೆ ಆಳವಾದ ಜ್ಞಾನ  ಮತ್ತು ಹಿಡಿತವಿರುವುದು ತುಂಬಾ ಅವಶ್ಯ. ಈ ಅವಧಿಯಲ್ಲಿ ಉಪನ್ಯಾಸಕನ ಬತ್ತಳಿಕೆಯಲ್ಲಿ ನೇರವಾದ ಪಾಠದ ಮೂಲ ಪರಿಕಲ್ಪನೆಯನ್ನು ಹೆಕ್ಕಿ ತರುವ ಪ್ರಶ್ನೆ ಗಳಿರಲೆಬೇಕು ಆವಾಗ ನಾವು ಒಂದನೆಯ ವರ್ಗದ ವಿದ್ಯಾರ್ಥಿಗಳಿಗೆ ಕೇಳಿ ಅವುಗಳ ಮೂಲಕ ಉಳಿದ ಮೂರೂ ವರ್ಗದ ವಿದ್ಯಾರ್ಥಿಗಳು ಮನದಟ್ಟು ಮಾಡುವಂತೆ ಮಾಡಬೇಕು ಆಮೇಲೆ ಎರಡನೆಯ ಮತ್ತು ಮೂರನೆಯ ವರ್ಗದ ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕೇಳಿ ಅವರು ಪರಿಕಲ್ಪನೆಯ  ಹೇಳುವಲ್ಲಿನ ತಪ್ಪುಗಳನ್ನು ತಿದ್ದುತ್ತಾ ವಿಷಯವನ್ನು ಮನದಟ್ಟು ಮಾಡಬೇಕು ಇನ್ನೂಂದು ಪ್ರಾಮುಖ್ಯ ವಾದ ವಿಷಯ ಮರೆತರೆ ನಮ್ಮ ಪಾಠ ಪರಿಪೂರ್ಣ ವಾಗಲಾರದು ಅದುವೆ ಪಾಠದಲ್ಲಿ ಬರುವ ಸ್ಥಳಗಳನ್ನು ನಕಾಶೆಯನ್ನು ಬರೆದು ಅದನ್ನು ತೋರಿಸಿಯೇ ಮುಂದೆ ಸಾಗಬೇಕು ಅದು ಭಾರತದ್ದೇ ಆಗಿರಲಿ ಇಲ್ಲವೆ ಜಗತ್ತಿನದೆ ಆಗಿರಲಿ ನಕ್ಷೆಯನ್ನು ತೆಗೆಯಲೇ ಬೇಕು ಇಲ್ಲವೆ ರೆಡಿಮೇಡಾದರೂ ಪರವಾ ಇಲ್ಲಾ ಬೋರ್ಡ ಮೇಲೆ ಹಾಕಬೇಕು. ಪುಸ್ತಕ ಹಿಡಿದು ಇಲ್ಲವೇ ಬರೆಸುತ್ತಾ ಪಾಠ ಮಾಡುವುದು ನನ್ನ ರ್ಥದಲ್ಲಿ ಪರಿಣಾಮ ಕಾರಿ ಪಾಠ ವಾಗಲಾರದು.ಇಲ್ಲವೆ ಅತಿಯಾದ ಅನಿಮೇಷನ್ ಮಾಡಿದ ಇತಿಹಾಸ ಪಾಠಗಳು ಕೂಡಾ ಪಾಠದ ವಿಷಯಕ್ಕೆ ಮಕ್ಕಳನ್ನು ಎಷ್ಟರ ಮಟ್ಟಿಗೆ ತೆಗೆದುಕೊಂಡು ಹೋಗಬಹುದು ಎನ್ನುವುದಕ್ಕೆ ನನ್ನ ಲ್ಲಿ ಉತ್ತರಕ್ಕಾಗಿ ತಡಕಾಡಿದ್ದೇನೆ ಅದು ಯಶಸ್ವಿಯಾಗಿದ್ದರೆ ಅದನ್ನು ಮಾಡಬಹುದು ಒಟ್ಟಾರ ಹೀಗೆ ಕಲಿಸಬೇಕೆನ್ನುವುದು ಒತ್ತಾಯವಲ್ಲ, ಸರಿಯಾಗಿದ್ದು ಮಗುವಿಗೆ ತಿಳಯಬೇಕಷ್ಟೆ,ಅದಕ್ಕೆ ನಾನು ಆರಂಭದಲ್ಲಿಯೇ ಹೇಳಿದ್ದು.ಕಲಿಕೆಯನ್ನುವುದು ಮತ್ತು ಕಲಿಸುವುದು ಒತ್ತಾಯದ ಪರಿಕ್ರಮವಲ್ಲ. ಮಕ್ಕಳು ಕಲಿಯಲು ಸಿದ್ದರಾದರೆ ಮಾತ್ರ ಅಲ್ಲಿ ಕಲಿಕೆ ಸಾಧ್ಯ. ಮಗುವನ್ನೆ ಪ್ರಶ್ನಿಸುವಂತೆ ಮಾಡುವ ಕಲಿಸುವಿಕೆಗಿಂತ ಹಿರಿದಾದ ಕಲಿಕೆ ನಾನು ಕಂಡಿಲ್ಲ ಕಾಣುವುದು ಇಲ್ಲ.ಸ್ವಾಮಿ ವಿವೇಕಾನಂದರು ಒಂದು ಮಾತನ್ನು ಹೇಳುತ್ತಾರೆ " ನನ್ನನ್ನು ನೀವು ಶಿಕ್ಷಕನನ್ನಾಗಿ ಮಾಡಿದರೆ ನಾನು ಅವರಿಗೆ ಏನನ್ನು ಕಲಿಸುವುದಿಲ್ಲ ಬದಲಾಗಿ ಅವರಿಗೆ ಏಕಾಗ್ರತೆಯನ್ನು ಕಲಿಸಿಕೊಡುತ್ತೇನೆ ಅದರಿಂದ ಅವರು ತಾವೇ ಕಲಿತುಕೊಳ್ಳುತ್ತಾರೆ ಎಂದರಂತೆ The difference between man and man is the power of concentration ಅಂದದ್ದು ಇದೇ ಕಾರಣಕ್ಕೆ. ನಮ್ಮ ಇತಿಹಾಸದ ಕಲಿಕೆ, ಕಲಿಸುವಿಕೆ ಅದು ಜ್ಞಾನದ ಕಲಿಕೆ ಅದು ವ್ಯಕ್ತಿತ್ವ  ನಿರ್ಮಾಣದ ಕಲಿಕೆ ಎನ್ನುವದು  ನಮ್ಮ ಮನಪಟಲದ ಮೇಲೆ ಇರಬೇಕು. ಅದು ನಾಲ್ಕು ಘಟನೆ, ಸ್ಥಳ,ಇಲ್ಲವೆ ವ್ಯಕ್ತಿಗಳನ್ನು ನೆನಪಿನಲ್ಲಿಡಲು ಇತಿಹಾಸ ಬೋಧಿಸುವದಷ್ಟೆ ಶಿಕ್ಷಕನ ಕೆಲಸವಲ್ಲ ಆ ಮೂಲಕ ಪ್ರಚಲಿತ ಜ್ಞಾನದೊಂದಿಗೆ ಭವಿಷ್ಯ ವನ್ನು ಕಟ್ಟಿ ಕೊಡುವ ಭರವಸೆಯ ಮನುಷ್ಯ ರನ್ನು ಸೃಷ್ಟಿಸುವುದು ಇತಿಹಾಸ ಉಪನ್ಯಾಸಕರ ಜವಾಬ್ದಾರಿಯಾಗಿದೆ.ಅದನ್ನು ನಾನು ಮಾಡುತ್ತಿದ್ದೇನೆ ಎನ್ನುವ ನಂಬಿಕೆ ನನಗಿದೆ.

Tuesday, December 17, 2024

(ಸಂಗ್ರಹ: ವಾಟ್ಸ್ ಆ್ಯಪ್)



*ಜಪಾನ್‌ನಲ್ಲಿ ಶಿಕ್ಷಕರ ದಿನಾಚರಣೆ ಇಲ್ಲ*

 ಜಪಾನ್‌ನಲ್ಲಿ ಶಿಕ್ಷಕರ ದಿನಾಚರಣೆ ಇಲ್ಲ.

  ಒಂದು ದಿನ, ನಾನು ನನ್ನ ಜಪಾನಿನ ಸಹೋದ್ಯೋಗಿ, ಶಿಕ್ಷಕ ಯಮಮೋಟಾ ಅವರನ್ನು ಕೇಳಿದೆ:  "ಜಪಾನ್‌ನಲ್ಲಿ ನೀವು ಶಿಕ್ಷಕರ ದಿನವನ್ನು ಹೇಗೆ ಆಚರಿಸುತ್ತೀರಾ?" ಎಂದು.

ನನ್ನ ಪ್ರಶ್ನೆಯಿಂದ ಆಶ್ಚರ್ಯಗೊಂಡ ಅವರು ಉತ್ತರಿಸಿದರು: "ನಮಗೆ ಶಿಕ್ಷಕರ ದಿನವಿಲ್ಲ" ಎಂದರು.

 ಅವರ ಉತ್ತರವನ್ನು ಕೇಳಿದಾಗ, ನನಗೆ ಅವರನ್ನು ನಂಬಬೇಕೋ ಬೇಡವೋ ಎಂದು ಗೊತ್ತಾಗಲಿಲ್ಲ.

  ನನ್ನ ಮನಸ್ಸಿನಲ್ಲಿ ಒಂದು ಆಲೋಚನೆ ಹಾದುಹೋಯಿತು: "ಆರ್ಥಿಕತೆ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಇಷ್ಟು ಮುಂದುವರಿದ ದೇಶವು, ಶಿಕ್ಷಕರು ಮತ್ತು ಅವರ ಕೆಲಸದ ಬಗ್ಗೆ ಏಕೆ ಅಗೌರವ ತೋರುತ್ತಿದೆ?" ಎಂದು.

 ಒಮ್ಮೆ, ಕೆಲಸದ ಮುಗಿದ ಅನಂತರ ಸಂಜೆ, ಯಮಮೋಟಾ ನನ್ನನ್ನು ಅವರ ಮನೆಗೆ ಆಹ್ವಾನಿಸಿದರು.  

ಅವರ ಮನೆ ದೂರ ಇದ್ದುದರಿಂದ ಮೆಟ್ರೋ ಹತ್ತಿದೆವು .  ಅದು ಸಂಜೆಯ ಪೀಕ್ ಅವರ್ ಆಗಿತ್ತು.  ಮೆಟ್ರೋ ರೈಲಿನಲ್ಲಿನ ವ್ಯಾಗನ್‌ಗಳು ತುಂಬಿ ತುಳುಕುತ್ತಿದ್ದವು.  ನಾನು ಓವರ್ಹೆಡ್ ರೈಲನ್ನು ಬಿಗಿಯಾಗಿ ಹಿಡಿದುಕೊಂಡು ನಿಲ್ಲಲು, ಜಾಗವನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದೆ. 

 ಇದ್ದಕ್ಕಿದ್ದಂತೆ, ನನ್ನ ಪಕ್ಕದಲ್ಲಿ ಕುಳಿತಿದ್ದ ವಯಸ್ಸಾದ ಹಿರಿಯ ವ್ಯಕ್ತಿ,  ನನಗೆ ತನ್ನ ಸ್ಥಾನವನ್ನು ನೀಡಿದರು.  

ವಯಸ್ಸಾದ ವ್ಯಕ್ತಿಯ ಈ ಗೌರವಾನ್ವಿತ ನಡವಳಿಕೆಯನ್ನು ಅರ್ಥಮಾಡಿಕೊಳ್ಳದೆ, ನಾನು ನಿರಾಕರಿಸಿದೆ.

 ಆದರೆ ಅವರು ನನ್ನನ್ನು ಕುಳಿತುಕೊಳ್ಳಲು ಒತ್ತಾಯಿಸಿದರು.  

ಅನಂತರ ನಾನು ಮೆಟ್ರೋದಿಂದ ಇಳಿದು ಹೊರಬಂದಾಗ, ಬಿಳಿಗಡ್ಡದ ಆ ಹಿರಿಯ ವ್ಯಕ್ತಿಯ ವರ್ತನೆಯ ಬಗ್ಗೆ ಯಮಮೋಟಾರನ್ನು ವಿವರಿಸಲು ಕೇಳಿದೆ. 

  ಯಮಮೋಟಾ ಮುಗುಳ್ನಗುತ್ತಾ ನಾನು ಧರಿಸಿದ್ದ ಟೀಚರ್‌ನ ಟ್ಯಾಗ್‌ನ ಕಡೆಗೆ ತೋರಿಸಿ ಹೇಳಿದರು :
 "ಆ ಹಿರಿಯ ವ್ಯಕ್ತಿ ನಿಮ್ಮ  ಬಳಿಯಲ್ಲಿರುವ,  ಶಿಕ್ಷಕರ ಟ್ಯಾಗ್ ಅನ್ನು ನೋಡಿದ್ದಾರೆ.  ನಿಮ್ಮ ಸ್ಥಾನಮಾನವನ್ನು ಅರಿತು ಗೌರವದ ಸಂಕೇತವಾಗಿ ತಾವು ಕುಳಿತಿರುವ ಸ್ಥಾನವನ್ನು ನಿಮಗೆ ನೀಡಿದ್ದಾರೆ' ಎಂದರು.

    ನಾನು ಮೊದಲ ಬಾರಿಗೆ ಜಪಾನಿಗೆ ಭೇಟಿ ನೀಡಿದ್ದರಿಂದ, ಖಾಲಿ ಕೈಗಳಿಂದ ಯಮಮೋಟಾರ ಮನೆಗೆ ಹೋಗುವುದು ನನಗೆ ಸರಿಯಲ್ಲವೆನಿಸಿತು.  ಆದ್ದರಿಂದ ಉಡುಗೊರೆಯನ್ನು ಖರೀದಿಸಲು ನಿರ್ಧರಿಸಿದೆ. 

 ನಾನು ಯಮಮೋಟಾ ಅವರೊಂದಿಗೆ ನನ್ನ ಉಡುಗೊರೆಯ ಆಲೋಚನೆಯನ್ನು ಹಂಚಿಕೊಂಡೆ. ಅವರು ನನ್ನ ಕಲ್ಪನೆಯನ್ನು ಬೆಂಬಲಿಸಿದರು. ಮತ್ತು "ಸ್ವಲ್ಪ ಮುಂದೆ ಶಿಕ್ಷಕರಿಗಾಗಿಯೇ ಒಂದು ಅಂಗಡಿ ಇದೆ.  ಅಲ್ಲಿ ಶಿಕ್ಷಕರು ಮಾತ್ರ ಕಡಿಮೆ ಬೆಲೆಯಲ್ಲಿ ಸರಕುಗಳನ್ನು ಖರೀದಿಸಬಹುದು" ಎಂದು ಹೇಳಿದರು.  

'ಶಿಕ್ಷಕರಿಗಾಗಿಯೇ ಕಡಿಮೆ ಬೆಲೆಯಲ್ಲಿ ಸರಕುಗಳನ್ನು ಮಾರಾಟ ಮಾಡುವ ಅಂಗಡಿಗಳಿವೆ' ಎಂದು ಯಮಮೋಟಾ ಹೇಳಿದಾಗ, ನನಗೆ ನನ್ನ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ನಾನು ಕೇಳಿದೆ
 "ಶಿಕ್ಷಕರಿಗಾಗಿಯೇ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವ ಅಂಗಡಿಗಳಿವೆಯೇ?" ಎಂದೆ.

 ನನ್ನ ಮಾತುಗಳನ್ನು ದೃಢೀಕರಿಸುತ್ತಾ, ಯಮಮೋಟಾ ಹೇಳಿದರು: "ಜಪಾನ್‌ನಲ್ಲಿ ಬೋಧನೆಯು, ಅತ್ಯಂತ ಗೌರವಾನ್ವಿತ ವೃತ್ತಿಯಾಗಿದೆ. ಇಲ್ಲಿ ಶಿಕ್ಷಕ ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿರುತ್ತಾನೆ.  ಶಿಕ್ಷಕರು ತಮ್ಮ ಅಂಗಡಿಗಳಿಗೆ ಬಂದಾಗ ಜಪಾನಿನ ವಾಣಿಜ್ಯೋದ್ಯಮಿಗಳು ತುಂಬಾ ಸಂತೋಷಪಡುತ್ತಾರೆ. ಅವರು ಅದನ್ನು ತಮ್ಮ ಗೌರವವೆಂದು ಪರಿಗಣಿಸುತ್ತಾರೆ" ಎಂದರು.

 ನಾನು ಜಪಾನ್‌ನಲ್ಲಿದ್ದಾಗ, ಶಿಕ್ಷಕರ ಬಗ್ಗೆ ಜಪಾನೀಯರಿಗೆ ಇರುವ, ಅಪಾರ  ಗೌರವವನ್ನು ನಾನು ಗಮನಿಸಿದ್ದೇನೆ.  

*ಮೆಟ್ರೋದಲ್ಲಿ ಅವರಿಗೆ ವಿಶೇಷ ಆಸನಗಳನ್ನು ನಿಗದಿಪಡಿಸಲಾಗಿದೆ.*

 *ಅವರಿಗಾಗಿ ವಿಶೇಷ ಅಂಗಡಿಗಳಿವೆ.*

ಅಲ್ಲಿ *ಶಿಕ್ಷಕರು ಯಾವುದೇ ರೀತಿಯ ಸಾರಿಗೆಗೆ, ಟಿಕೆಟ್‌ಗಾಗಿ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ.*

 ಅದಕ್ಕಾಗಿಯೇ ಜಪಾನಿನಲ್ಲಿ ಶಿಕ್ಷಕರಿಗೆ ವಿಶೇಷ ದಿನದ ಅಗತ್ಯವಿಲ್ಲ.

*ಜಪಾನೀಯರ ಜೀವನದಲ್ಲಿ ಪ್ರತಿ ದಿನವೂ ಶಿಕ್ಷಕರ ದಿನ.* 

  ಈ ಕಥೆಯನ್ನು ಎಲ್ಲರಿಗೂ ಹರಡಿ.  ಈ ಮಟ್ಟಕ್ಕೆ ಶಿಕ್ಷಕರನ್ನು ಮೆಚ್ಚುವ ಸಮಾಜ ಬೆಳೆಯಲಿ.  ನಿಮ್ಮ ಸಹೋದ್ಯೋಗಿಗಳಿಗೆ ಈ ಕಥೆಯನ್ನು ಮತ್ತೆ ಮತ್ತೆ ಹೇಳಿ.

 ಇದರಿಂದ ಬೋಧಕರ  ಎದೆಯು ಹೆಮ್ಮೆಯಿಂದ ಉಬ್ಬುತ್ತದೆ.

ತುಂಬಾ ಇಷ್ಟ ಆಯ್ತು ... ಅದಕ್ಕೇ ಹಂಚಿಕೊಂಡೆ.

Monday, December 16, 2024

ರೈತನ ಕಥೆ ವ್ಯಥೆ

ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ (ರಿ) ಮೈಸೂರು ಇದರ ಸಾಹಿತಿ ಶಿಕ್ಷಕರ ಸಮಿತಿಯವರು ಪ್ರಾಯೋಚಿಸಿದ "ರೈತ ದಿನ"ದ ಪ್ರಯುಕ್ತ ರಾಜ್ಯಮಟ್ಟದ ಸ್ವರಚಿತ ಕಥಾ ಕವನ ಸ್ಪರ್ಧೆ 
ದಿನಾಂಕ ೧೬/೧೨/೨೦೨೪

ಶೀರ್ಷಿಕೆ- ರೈತನ ಕಥೆ ವ್ಯಥೆ 

ಮಣ್ಣನ್ನು ನಂಬಿ ನಡೆಯುವ ಯೋಗಿಯ 
ಕಥನವ ಹೇಳುವೆ ಕೇಳಿರೊ ಅಣ್ಣ 
ಅನ್ನವ ಹಾಕುವ ಚಿನ್ನದ ಮನುಷ್ಯರ 
ವ್ಯಥೆಯನು ಕೇಳಲು ಯಾರಿಲ್ಲ ॥

ಬೀಜದ ಹೆಸರಿನ ಸೂಜಿಗ ಒಂದೆ
ಮತ್ತೆ ಬಿತ್ತಲು ಕಾಯಬೇಕು ಪಂದ್ಯ 
ಭೂತಾಯಿಯ ಒಡಲು ತುಂಬಲು
ನೈಜ ಕಾಳುಗಳ ಗುರುತಿಸಲಾರಿಲ್ಲ॥

ರಾಗಿಯ ಬೆಳೆಯನು ಬಾಗಿ ಒಕ್ಕಲು
ಸಿಕ್ಕುವುದಿಲ್ಲ ಜನ, ಇವರು ಹೇಳುವ 
ಮಂತ್ರ ಒಂದೇ ಗಣಕ ಯಂತ್ರದಿಂದ
ಬಾಳು ಚಂದ, ರೈತನ ಕೇಳಲಾರಿಲ್ಲ॥
 
ಮೋಡ ನಂಬಿ ಹೊಡೆದ ಗಳೆ
ಮಾನಸೂನ ಬರಲಿಲ್ಲ ಈ ಕಡೆ
ಸಾಕಿದ ಹಸುಗಳು ನಡೆ ಸಾವಿನ ಕಡೆ
ಜೀಕಬೇಕು ದೇಶದ ಬೆನ್ನೆಲುಬು ಯಾವ ಕಡೆ॥

ಹೆಂಡತಿ ಮಕ್ಕಳು ಉಂಡರೇನಿವನ ಸುಖ
ಕೆಂಡದಂಥ ಬದುಕಿನ ರಥ ಎಳೆದರೆ ಸಖ
ಇಲ್ಲದಿದ್ದರೆ ಉಳಿಯುವುದೆ ಕೊನೆಯತನಕ
ಆದರೂ ಬೆನ್ನೆಲುಬು ದೇಶದ ಈ ರೈತ॥

ಉನ್ನಲು ಇವನೆ ಬೇಕು, ಉಡಲು ಇವನೆ ಬೇಕು
ತನ್ನವರಿಂದಲೂ ಬಂತು ಬಹುಪಾರಕ 
ಆದರೆ ಏನು ? ದುಡಿದು ಧನಿದವನಿವನು 
ಹರಿದು ತಿನ್ನುವ ಹದ್ದುಗಳಿಗೆ ಜಾಕಪಾಟ॥


ಶ್ರೀ ಬಸನಗೌಡ ಗೌಡರ 
         ಉಪನ್ಯಾಸಕರು
ಬಾಲಕರ ಸರ್ಕಾರಿ ಪದವಿ ಪೂರ್ವ 
ಕಾಲೇಜು ಗುಳೇಗುಡ್ಡ 
ತಾಲ್ಲೂಕು ಗುಳೇಗುಡ್ಡ 
ಜಿಲ್ಲಾ:ಬಾಗಲಕೋಟೆ
ಡೈಸ್ ಕೋಡ್

DIESE CODE GPUC
29020117107

Friday, December 6, 2024

ಕಾಲಚಕ್ರ


ಕಾಲ ಚಕ್ರ ತಿರುಗುತ್ತಿದೆ ಮೇಲೆ ಕೆಳಗೆ
ಸೋಲುಂಡರೂ ಈಗ ಮೇಲಿನ ಸರದಾರ 
ನಿಲ್ಲದದು ನಾನು,ನೀನಂದುಕೊಂಡತೆ
ಬಲ್ಲವರಿಗದು ಬೆಲ್ಲದ ಕರಣಿಯಂತೆ ॥

ಬೆಲ್ಲ ತಿಂದವ ಬಡವನೆಂದದ್ದು ಕಂಡೆ
ಸಕ್ಕರೆ ಸವಿದವ ಶ್ರೀಮಂತನೆಂದದ್ದು ಕಂಡೆ
ಬಂತು ನೋಡಿ ಬೆಲ್ಲದಂಗಡಿಯ ಚಹಾ
ತಂತು ಉಳ್ಳವನಿಗೆ ಚಿಕ್ಕ ಸೋಕಿಯ ಗುಡಿ॥

ಅಕ್ಕಿ ತಿಂದು ಸೊಕ್ಕಿ ನಡೆದವರ ಕಂಡೆ
ರಾಗಿ ತಿಂದು ಬಾಗಿ ನಡೆದವರ ಕಂಡೆ
ಬಂತು ನೋಡಿ ತೃಣದಾನ್ಯದಂಗಡಿ
ತಂತು ಉಳ್ಳವನಗೆ ಪಾಲಿಥಿನ ಚೀಲದಡಿ॥

ನಗರ ಜೀವನ ಪೊಗರಿಲೇಳುವದು ಕಂಡೆ
ಗ್ರಾಮ ಜೀವನ ದೀನಬಾಳೆಂದವನ ಕಂಡೆ
ಬಂತು ನೋಡಿ ಹುಲ್ಲು ಚಪ್ಪಡಿಯ ಪೋಡಿ 
ತಂತು ಉಳ್ಳವನಿಗೆ ಬೆಟ್ಟದ ಬೊಂಬಿನಡಿ ॥

ಬಟ್ಟೆಯನುಟ್ಟು ಬಲ್ಲಿದವನೆಂದದ್ದು ಕಂಡೆ 
ಬಟ್ಟೆ ಇಲ್ಲದವನು ಬಡವನೆಂದದ್ದು ಕಂಡೆ
ಬಂತು ನೋಡಿ ಬಯಲಾದಷ್ಟು ಮೋಡಿ
ತಂತು ಉಳ್ಳವನಿಗೆ ಬೆತ್ತಲೆ ಸೋಕಿಯ ತಡಿ॥


Thursday, December 5, 2024

ಭಾರತದಲ್ಲಿ ಬ್ರಿಟಿಷರ ಅಧಿಪತ್ಯ ಸ್ಥಾಪನೆ.

ಪಾರಂಪರಿಕ ವೈರಿಗಳಾದ ಇಂಗ್ಲಿಷರು ಮತ್ತು ಪ್ರೆಂಚರ ನಡುವೆ ಇಪ್ಪತ್ತು ವರ್ಷಗಳವರೆಗೆ ಭಾರತದಲ್ಲಿ ಅಧಿಪತ್ಯ ಸ್ಥಾಪಿಸಲು ಯುದ್ಧಗಳಾದವು ಅವುಗಳೆ ಕಾರ್ನಾಟಿಕ್ ಯುದ್ಧಗಳು
ಮೊದಲನೆಯ ಕಾರ್ನಾಟಿಕ ಯುದ್ಧ. 1746_48.
ಕಾರಣಗಳು
1) 1740 ರಲ್ಲಿ ಇಂಗ್ಲೆಂಡ ಮತ್ತು ಪ್ರಾನ್ಸ್ ಗಳ ನಡುವೆ ಆಸ್ಟೀಯಾದ ಉತ್ತರಾಧಿಕಾರದ ಯುದ್ಧ 
2) ಬರ್ನೆಟ್ ಫ್ರೆಂಚರ ಕೆಲವು ಹಡಗುಗಳನ್ನು ವಶಪಡಿಸಿಕೊಂಡ 
3) ಫ್ರೆಂಚ ಗೌರ್ನರ ಡೂಪ್ಲೆ ಮದ್ರಾಸ ಆಕ್ರಮಿಸ ಬಯಸಿ ಮಾರೀಸಸ್ ಗವರ್ನರ್ ಲಾಬೋರ್ಡನಾಯಿಸನನ್ನು ಕರೆಯಿಸಿ ಕೊಂಡದ್ದು
4) ಲಾಬೋರ್ಡಿನಾಯಿಸ್ ಮದ್ರಾಸ ವಶಪಡಿಸಿಕೊಂಡು ನಂತರ 40 ಸಾವಿರ ರೂಪಾಯಿಗೆ ಮಾರಿ ಹೊದದ್ದು.
ಗತಿ:
ಸ್ವತ: ಡೂಪ್ಲೆ ಮದ್ರಾಸ ವಶಪಡಿಸಿಕೊಂಡಾಗ ಬ್ರಿಟಿಷರು ಅನ್ವರುದ್ದೀನನ ಸಹಾಯ ಕೇಳಿದರು ಆತ ಮದ್ರಾಸ ಬಿಡಲು ಆದೇಶ ಮಾಡಿದ, ಬಿಡದಿದ್ದಾಗ ಅನ್ವರುದ್ದೀನನ 10 ಸಾವಿರ ಸೈನಿಕರ ಮತ್ತು ಡೊಪ್ಲೆ 1100 ಸೈನಿಕರ ನಡುವೆ ಅಡಿಯಾರಲ್ಲಿ ಕಾಳಗವಾಯಿತು ಅನ್ವರುದ್ದೀನನ ಸೈನ್ಯ ಸೋತು ಹೋಯಿತು.
ಪರಿಣಾಮಗಳು.
1) ಯೂರೋಪಿನ ಸೈನಿಕರು ಭಾರತದ ಪಾರಂಪರಿಕ ಸೈನ್ಯಕ್ಕಿಂತ ಪ್ರಭಲರು ಎಂದು ಸಾಬಿತಾಯಿತು 
2) ಎಕ್ಸ್ ಲಾ ಛಾಫೆಲ್ ಒಪ್ಪಂದಿಂದ ಯುದ್ದ ಮುಕ್ತಾಯ ವಾಯಿತು
3) ಮದ್ರಾಸ ಅನ್ನು ಬ್ರಿಟಿಷರಿಗೆ ಹಿಂದುರಿಗಿಸಲಾಯಿತು 
4) ಯುದ್ಧ ಖೈದಿಗಳನ್ನು ಬಿಡುಗಡೆ ಮಾಡಲಾಯಿತು.

ಎರಡನೆಯ ಕರ್ನಾಟಕ್ ಯುದ್ಧ 1748-54
ಕಾರಣಗಳು
1)  ಆರ್ಕಾಟನಲ್ಲಿ ಚಂದಾಸಾಹೇಬ್ ಮತ್ತು ಅನ್ವರುದ್ದೀನನ ನಡುವೆ ಉತ್ತರಾಧಿಕಾರಿ ಪೈಪೋಟಿ.
2) ಹೈದರಾಬಾದಿನಲ್ಲಿ ಮುಜಾಫರಜಂಗ ಮತ್ತು ನಾರಂಗ್ ನಡುವೆ ಉತ್ತರಾಧಿಕಾರಕ್ಕೆ ಪೈಪೋಟಿ.
3) ಫ್ರೆಂಚರು ಚಂದಾಸಾಹೇಬ ಮತ್ತು ಮುಜಾಫರಜಂಗನನ್ನು ಬೆಂಬಲಿಸದರು.
4) ಬ್ರಿಟಿಷರು ಅನ್ವರುದ್ದೀನನ ಮತ್ತು ನಾಜರಜಂಗನನ್ನು ಬೆಂಬಲಿಸಿದರು.
ಗತಿ:
ಫ್ರೆಂಚ ಬಣ ಅಂಬರ ಕಾಳಗದಲ್ಲಿ ಅನ್ವರುದ್ದೀನನ್ನು ಸೋಲಿಸಿ ಕೊಂದಿತು ಮತ್ತು ಚಂದಾಸಾಹೇಬ ಆರ್ಕಾಟ ನವಾಬನಾದ.
ಚಂದಾಸಾಹೇಬ ತಿರುಚನಾಪಳ್ಳಿಗೆ ಮುತ್ತಿಗೆ ಹಾಕಿದಾಗ ನಾಜರಜಂಗ ಬ್ರಿಟಿಷರ ಸಹಾಯದೊಂದಿಗೆ ಮುಜಾಫರಜಂಗನ ಮೇಲೆ ಯುದ್ಧ ಸಾರಿದ ನಂತರ ಕೊಲೆಯಾದ ಆಗ ಮಜಾಫರಜಂಗ ಹೈದರಾಬಾದಿನ ನವಾಬನಾದ ಅವನೂ ಅಂತಃಕಲಹದಲ್ಲಿ ಕೊಲೆಯಾದ ಡೂಪ್ಲೆ ಸಲಾಬತ್ ಜಂಗನನ್ನು ನವಾಬನನ್ನಾಗಿ ಮಾಡಿದ.
     ಚಂದಾಸಾಹೇಬ ತಿರುಚನಾಪಳ್ಳಿಗೆ ಮುತ್ತಿಗೆ ಹಾಕಿದಾಗ ರಾಬರ್ಟ್  ಕ್ಲೈವ ಆರ್ಕಾಟಿಗೆ ಮುತ್ತಿಗೆ ಹಾಕಿದ ಇದೆ ಅವಧಿಯಲ್ಲಿ ಮಾರ್ಗ ಮಧ್ಯ ದಲ್ಲಿ ಚಂದಾಸಾಹೇಬನ ಕೊಲೆಯಾಯಿತು ಮಹಮದ  ಅಲಿಯನ್ನು ಆರ್ಕಾಟನ ನವಾಬನನ್ನಾಗಿ ಮಾಡಲಾಯಿತು ಯುದ್ಧ ದಲ್ಲಿ ಡೊಪ್ಲೆ ಸೋತು ಹೋದ.
ಪರಿಣಾಮಗಳು
1) ಫ್ರೆಂಚ  ಸರ್ಕಾರ ಡೂಪ್ಲೆಯನ್ನು ಹಿಂದೆ ಕರೆಯಿಸಿಕೊಂಡಿತು.
2) 1754 ರ ಪಾಂಡಿಚೇರಿ ಒಪ್ಪಂದೊಂದಿಗೆ ಯುದ್ಧ ಮುಕ್ತಾಯವಾಯಿತು.
3) ಭಾರತೀಯರ ರಾಜಕೀಯ ಆಂತರಿಕ ವ್ಯವಹಾರದಲ್ಲಿ ಎರಡು ಪಕ್ಷಗಳು ಹಸ್ತಕ್ಷೇಪ ಮಾಡದಿರಲು ಒಪ್ಪಿದವು. 

ಮೂರನೆಯ ಕರ್ನಾಟಕ್ ಯುದ್ಧ 1756-63
ಕಾರಣಗಳು
1) ಇಂಗ್ಲೆಂಡ ಮತ್ತು ಫ್ರಾನ್ಸ್‌ನ ನಡುವೆ ಯೂರೋಪಿನಲ್ಲಿ ಸಪ್ತವಾರ್ಷಿಕ ಯುದ್ಧ ಇದು ಭಾರತದಲ್ಲಿಯೂ ಯುದ್ಧಕ್ಕೆ ಕಾರಣವಾಯಿತು.
2) ಫ್ರೆಂಚರ ವಸಾಹತುವಾಗಿದ್ದ ಚಂದ್ರನಾಗೂರನ್ನು ಇಂಗ್ಲಿಷ ಗೌರ್ನರ ರಾಬರ್ಟ್ ಕ್ಲೈವ ವಶಪಡಿಸಿಕೊಂಡದ್ದು.
3) ಭಾರತದಿಂದ ಬ್ರಿಟಿಷರನ್ನು ಹೊರಹಾಕಲು ಫ್ರೆಂಚ ಸರ್ಕಾರ ಕೌಂಟ ಡಿ ಲಾಲಿಯನ್ನು ಗೌರ್ನರ ನಾಗಿ ಕಳುಹಿಸಿದ್ದು.
4) ಕೌಂಟ ಡಿ ಲಾಲಿ ಸೇಂಟ್ ಡೇವಿಡ್  ಕೋಟೆಯನ್ನು ಮುತ್ತಿಗೆ ಹಾಕಿ ಮದ್ರಾಸ ವಸಪಡಿಸಿಕೊಳ್ಳಲು ಹೈದರಾಬಾದಿನಿಂದ ಬುಸ್ಸಿಯನ್ನು ಹಿಂದೆ ಕರೆಯಿಸಿಕೊಂಡದ್ದು
ಗತಿ:
ಹೈದರಾಬಾದಿನಿಂದ ಬುಸ್ಸಿ ಹೊರಬರುತ್ತಲೆ ಇಂಗ್ಲಿಷರು ಹೈದರಾಬಾದ ವಶಪಡಿಸಿಕೊಂಡರು.ಆಗ ಸಲಾಬತ್ 
ಇಂಗ್ಲಿಷರ ಮಿತ್ರ ನಾದ .1760 ರ ವಾಂಡಿವಾಸ ಕಾಳಗದಲ್ಲಿ ಫ್ರೆಂಚರು ಸಂಪೂರ್ಣ ವಾಗಿ ಸೋತು ಹೋದರು
ಪರಿಣಾಮ ಗಳು
1) 1763 ರ ಪ್ಯಾರಿಸ್ ಒಪ್ಪಂದದೊಂದಿಗೆ ಭಾರತದಲ್ಲಿನ ಯುದ್ಧ ಮುಕ್ತಾಯ ವಾಯಿತು.
2) ಫ್ರೆಂಚರು ಕೇವಲ ವ್ಯಾಪರಕ್ಕೆ ಸೀಮೀತವಾಗುವ ಕರಾರಿನೊಂದಿಗೆ ಅವರ ವಸಾಹತಾಗಳನ್ನು ಅವರಿಗೆ ನೀಡಲಾಯಿತು.

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...