Friday, May 1, 2020

* ನನ್ನೂರು *

* ನನ್ನೂರು *
ನನ್ನೂರ ಜನ ,ನನ್ನೂರಿನ ಜನ
ತೀರಿಸುವುದು ಹೇಗೆ ಇವರ ಋಣ
ಪ್ರೀತಿತುಂಬಿದ ಬೊಗಸೆಗಣ್ಣಿನ
ಶ್ರಮಕ್ಕೆ ಹೆಸರೆ ಈ ನನ್ನ ಜನ //ಪ//

ಗುಡ್ಡದ ಮಣ್ಣಿಗೆ ಅಡ್ಡಡ್ಡ ಬಿತ್ತಿ
ದವಸ, ತೃಣ ದಾನ್ಯ ಬೆಳೆಯುವ ಜನ
ಮುಂಗಾರೊಂದೆ ನಂಬಿ ಬಿತ್ತಿದವರು
ಕಪ್ಪುಮಣ್ಣಿಲ್ಲದೆ ಹಿಂಗಾರು ಬೆಳೆವ ಜನ

ಬಿದ್ದ ಮಳೆಗೆ ಸವಾಲು ಹಾಕಿ
ರಾತ್ರಿಹಗಲೆನ್ನದೆ ಮೈಮುರಿದ ಜನ
ತೇವಾಂಶವುಳಿಸಲು ಹರಸಾಹಸ
ಸುತ್ತಲೂ ಬರ, ಇವರಿಗೆಲ್ಲಿದೆ ಬರ?//

ಮನೆಗೊಂದು ಕುರಿಯ ಹಿಂಡು
ಪ್ರತಿ ಮನೆಯು ಸೈನಿಕರ ದಂಡು
ಉಸುಗು  ಭೂಮಿಯ ತುಂಡು
ಬೆಳೆ ಬೆಳೆಯುವದರಲ್ಲಿವರು ಗಂಡು //

ಸ್ವಾಭಿಮಾನದ ಬದುಕು ತುಳಿದವರು
ಮನಸ್ಸು ಮಲ್ಲಿಗೆ, ಮಾತು ಕಠೋರ
ಕಲ್ಲಿನಲ್ಲಿಯೆ ಮಠ ಕಟ್ಟಿ ಕಾವಿಗೆ
ಶರಣೆಂದ ಕರ್ಮಯೋಗಿಗಳಿವರು//

ಜಾತಿಭೇದಗಳಿಲ್ಲ ಧರ್ಮಗಳ
ಬಂಧನವಿಲ್ಲ ಮುಸ್ಲಿಂ ಹಬ್ಬಕ್ಕೂ
ದೋಲಿ ಹೊತ್ತು ತಿರುಗುವರೆಲ್ಲ
ಸಾಮರಸ್ಯ ಕಲಿಯಬೇಕು ಜಗವೆಲ್ಲ//

              ಬಸನಗೌಡ ಗೌಡರ

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...