Saturday, May 2, 2020

* ಮಹತ್ವಾಕಾಂಕ್ಕ್ಷಿ *

ಜಗದಗಲ ಮೇರೆ ಮೀರಿ
ಅಶ್ವಗಳನೇರಿ ವಿಶ್ವ ಸುತ್ತಲು
ಬಯಸುವೆವು ನಾವು //

ಆಸೆಗಳಿಗಿಲ್ಲ ಮಿತಿ ,ಇಂದಲ್ಲ ನಾಳೆ
ವಸಾಹತು ಕಟ್ಟುವೆವು ಜಗದಾಟಿ
ಬ್ರಹ್ಮಾಂಡ,ನೀಹಾರಿಕೆ ದಾಟಿ  //

ನೋವುಂಡು  ನಲುಗಿದ ನರ
ಮಾನವನ ನೆಲೆ ಕಾಣಲು ದೊರ
ಸಾಗುವೆವು ಅನಂತ ಭಾನು ಸೀಳಿ  //

ಅಶ್ವಗಳ ಹೊಟ್ಟೆಗಿಲ್ಲ ಹಿಟ್ಟು
ತಡಿ ಹಿಡಿದು ನಿಲ್ಲಿಸುವ ಮನಸಿಲ್ಲ.
ಪಟ್ಟು ಸಡಲಿಸಲೊಲ್ಲೆವು ನಾವು //

ನೆರೆಮನೆಯು ಹೊಸ ವಸಹಾತು
ಕಟ್ಟುವ ಮುನ್ನ. ದ್ವಜ ಹಾರಿಸಿ
ಕೆಕೆ ಹಾಕಲು ಬಯಸುವೆವು ನಾವು //

ಸಂತರೆಳಿದ ದೇಹನಶ್ವರ ಮಾತು
ನಿಂತು ಕೇಳುವ ವ್ಯವದಾನ ನಮಗಿಲ್ಲ
ವಿಶ್ವವಿಶಾಲ ಪರಿದಿ ತಿಳಿಯದವರು ನಾವು //

                    ಬಸನಗೌಡ ಗೌಡರ

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...