Sunday, May 10, 2020

* ಬದುಕು ಭ್ರಮೆ *

ನಾನು ನನ್ನದೆಂಬ ಮಮಕಾರವೇಕೆ
ಬಯಕೆಯ, ಭ್ರಮೆಬದುಕು ನೂಕು
ಜೆಡ ಬಲೆ ನೇಯ್ದು ಕೊನೆ ಹಾಡಿದಂತೆ
ಬಾಳೆಲ್ಲ ಬವಣೆ ಬದುಕುವುದು ಸಾಕು //

ಗೊರಲಿ ಕಟ್ಟಿತು ಹುತ್ತ, ತಾವೊಂದು
ವಾಸಕ್ಕೆ ಬಂದು ಸೇರಿತು ಹಾವೊಂದು
ತಾನೆ ಕಟ್ಟಿದ ಮನೆ ತನಗೆ ಎರವಾಗಿತ್ತಿಂದು
ನನ್ನದೆನ್ನುವುದು ಬರಿ ಭ್ರಮೆ ಲೋಕದಲ್ಲಿಂದು

ಪಡೆದ ಜ್ಞಾನ ಅನುದಿನವು ನೆರಳಿನಂತೆ
ಎಲ್ಲೆ ಹೋದರು ವೈಭವದ ತೇರಿನಂತೆ
ಜನ ತಾವೇ ನಿಂತು ನಗುತ ಎಳೆಯತಾರ
ಹೂವು ನೀಡುತಾರ ಜೈಕಾರ ಹಾಕುತಾರ /

ಕಷ್ಟ ಸುಖಗಳು ನಾಣ್ಯದ ಎರಡು ಮುಖ
ಸಮನಾಗಿ ನಗುನಗುತ್ತ ಸ್ವೀಕರಿಸಬೇಕು
ಗೀಜಗನ ಗೂಡಿನ ಹೊದಾಣಿಕೆ ಬೇಕು
ಗಳಿಸಬೇಕು ಕಾಗೆಯಂತೆ ಹಂಚಿ ತಿನ್ನಬೇಕು //

ದೇವರು ನೀಡಿದ ಅವದಿ ಮೂರೆ ದಿನ
ಬಯಸಿ ಗಳಸಿದ ಹಚಡ ಆರು ದಿನ
ಮೀನನ್ನು ತಿಂದು ಮೀನು ಬದುಕಿದಾಂಗ
ಗೋರಿ ತೊಡುತಾರ ನನ್ನವರೆ ಜಾಣರಂಗ //


                      ಬಸನಗೌಡ ಗೌಡರ









No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...