Saturday, May 30, 2020

* ಚಿಪ್ಪಿನ ಮುತ್ತು *

* ಚಿಪ್ಪಿನ ಮುತ್ತು *


ನನ್ನನ್ನು ಪ್ರೀತಿಸು ಅಗಲುವ ಮುನ್ನ
ಎನ್ನ ಮುಖ ನೋಡಬಾರದೆ ಚಿನ್ನ
ನಿನ್ನ ಕವಾಟಿನಲ್ಲಿ ಬಂಧಿಸಿಟ್ಟ ಹೊನ್ನು
ಇನ್ನೊಂದು ಬಯಸಿ ಹಾಕುವೆ ಏಕೆ ಕನ್ನ//

ಹಗಲಿರುಳೆನ್ನದೆ ಹಪಹಪಿಸುವೆ ನಿನ್ನ.
ಗಡಿಯಾರ ಮುಳ್ಳಿಗಿಂತ ನಿಕರತನ
ಹಾಡುವೆ ನಿತ್ಯ ಗಾನ ಲಬ್ ಡಬ್
ನಿನ್ನ ತುಡಿತ ಬೆರೆಯುವ ಭಾವಯಾನ//

ಬಯಕೆ ಬೆದರಿ ಬಾಡುವ ಮುನ್ನ
ಕಂಗಳು ರೋದಿಸಿ ಕರಗುವ ಮುನ್ನ
ಕರಗಿದ ನೀರು ಹೋಳೆಯಾಗಿ ಹರಿದು
ಉಪ್ಪಲ್ಲದೆ ಚಿಪ್ಪಿನ ಮುತ್ತು ಮಾಡೆನ್ನ//

ಮರೆತೆ, ಯಮ ಅಡ್ಡಡ್ಡ ಸೀಳುವರು
ಅಗಲಿಸಿ ಕತ್ತರಿ, ತಪ್ಪಿದರೆ ಚಟ್ಟದ ದಾರಿ
ಹಾಳು ಕರಕಲು ತಿನಿಸು, ಕೊಬ್ಬು ಮರೆ
ಹಿತದಿ ಮೈಮುರಿ ಇದೆ ಪ್ರೀತಿಯ ದಾರಿ //

                  ಬಸನಗೌಡ ಗೌಡರ


No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...