Sunday, May 31, 2020

* ಸೈನಿಕ ಸಮರ್ಪಣೆ *

ಮರೆಯಲಾಗದು ಭರತ ಭೂಮಿ
ವೀರಪುತ್ರ ಸೈನಿಕನ ತ್ಯಾಗ ಜೀವನ
ಮಡದಿ ಮಕ್ಕಳಮೋಹವ ತೊರೆದು
ಹಿಮತುದಿಗೆ ನಡೆದ ವೈರಿ ಕಾವುಲದು/

ಹಿಮದ ರಭಸಕ್ಕೆ ರಕ್ತ ಹೆಪ್ಪುಗಟ್ಟಿತು
ದೇಶಾಭಿಮಾನದಲಿ ಅವಡುಗಚ್ಚಿದ
ವೈರಿಯ ಬಿಸಿ ರಕ್ತವ ತರ್ಪಣಗೈದನು
ಭಾರತ ಪುತ್ರ ಗೌರವ ನಿನಗರ್ಪಣೆ//

ಹಳ್ಳಿಯ ಬವಣೆ ಬದುಕು ಬಿಟ್ಟು
ತಂದೆ ತಾಯಿಗೆ ವಚನ ಕೊಟ್ಟು
ಹಿಮದ ಗಿರಿ ಮುಖುಟ ಮೀಟಿ
ಹಾರಿಸಿದಲ್ಲಿ ಗೌರವದ ಬಾವುಟ //

ವೈರಿಯ ಶೇಷವೆ ಸಾಗಿ ಬಂದು
ಸಾವಾಗಿ ಕಾದ ಜವರಾಯ ಅಂದು
ದೇಶ ಸೇವೆಗೆ ಹುತಾತ್ಮನಾದ ಬಂಧು
ಶೋಕಸಾಗರ ದೇಶ ಮರುಗಿತಿಂದು//

ಮಡದಿ ಮಕ್ಕಳ ಮೂಕ ರೋದನ
ಮಾತು ಮೌನದಲಿ ಆಯಿತು ಲೀನ
ಮತ್ತೆ ಶಪತ ಕಳಿಸುವೆ ಸೇವೆಗೆ ಮಗನ
ಕಾಡಿದ ಕಣ್ಣೀರು ದೇಶಕೆ ಸಮರ್ಪಣೆ//

             ಬಸನಗೌಡ ಗೌಡರ

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...