Sunday, May 24, 2020

* ಕವಿಕುಡಿಗಳು *

ಕನ್ನಡ ಮಾಮರದ ಹೆಮ್ಮೆಯ 
ಕವಿ ಕುಡಿಗಳು ನಾವು  //

ಭಾವ ಲೋಕಕ್ಕೆ ಜಾರಿ
ಕಾವ್ಯ ಲೋಕದಲ್ಲಿ ಮಿಂದು
ಸುಂದರ ಲೋಕದಲ್ಲಿ ತೇಲುವ
ಕನ್ನಡದ ಕಂದಮ್ಮಗಳು ನಾವು //

ಬರಹ ಬಯಕೆಯನೇರಿ
ಸಾರುವೆವು ಸಾಹಿತ್ಯ ಸತ್ವವನ್ನು
ಬದುಕು ನೀಡಿದಷ್ಟು ಸವಿದು
ಸಾಕ್ಸತ್ಕಾರ ಪಡುವೆವು ನಾವು//

ನಿಸರ್ಗವ ಸೇರಿ ಕೃತಕತೆ ಮೀರಿ
ಸ್ವರ್ಗ ಸಮಾನತೆ ಸವಿ ತಿರಳುನ್ನು
ಸತತ ಸವಿದು ಸರಿದಾರಿ ನಡೆದು
ಭಾವಗಳ ಬೆಸೆಯುವೆವು ನಾವು//


             ಬಸನಗೌಡ ಗೌಡರ

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...