Saturday, August 15, 2020

* ತರುಣ *

ಪ್ರೀತಿ ಜ್ವರ ತರಣರಲ್ಲೇರುವುದು ಸಹಜ
ಯುವ ಬೆವರಿನಲ್ಲೆ ನಿಂತಿದೆ ಸಮಾಜ/

ಚಾಕರಿ ಬದುಕಿಗೂ ಕ್ಯೂಗಳ ಸಾಲು

ಬಿಕಾರಿಯಾಗದೆ ಸ್ವೀಕರಿಸು ಸವಾಲು//

ಜಗಕೆ ಪಾಠ ಹೇಳಿದ ದೇಶ ನಮ್ಮದು
ಭವ್ಯ ಇತಿಹಾಸ ಪರಂಪರೆ ತವರಿದು /
ಬಿಸಿರಕ್ತದುಸಿರಿಲ್ಲದೆ ಜಡ ಕರಗದು
ಯುವ ಪಡೆ ನಡೆಯದೆ ತಲುಪದು //

ಯುವಕಂಗಳಲ್ಲಿ ಬೆಟ್ಟದಷ್ಚು ಆಸೆ
ದಡ ಸೇರಲು ಬೇಕು ಗಟ್ಟಿ ಸಾಹಸ
ಭಟ್ಟಿ ಇಳಿಸದೆ ಪರಶುದ್ಧತೆ ಬರಿ ಕನಸು
ಬಯಲಿಗೆ ಬಿದ್ದು ಗೆದ್ದರದು ನನಸು//

ತರುಣರ ಕಿರಣ ಬೀಳದೆ ಇಲ್ಲ ಬೆಳಕು
ಗುರಾಣಿ ಹಿಡಿದು ಮುನ್ನುಗ್ಗಬೇಕು /
ದೇಶ ಕಟ್ಟಲು ನಾಳೆ ಎನ್ನುವುದು ಸಾಕು
ಹಗಲುಗಾಣಲು ಭಾಸ್ಕರ ಬರಬೇಕು//

            ಬಸನಗೌಡ  ಗೌಡರ

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...