Monday, October 5, 2020

* ಪರಶಿವ *

ಗಣೇಶಪಿತ ಗೌರಿಪತಿ ಗಂಗಾಧರ 

ಭಂಗ ಬಂದರೆ ನೀ ಉಗ್ರ ತಾಂಡವ 

ಬಡವ ನೀ ಶಿವ ಬಂಗಾರ, ಬೆಳ್ಳಿಯಿಲ್ಲ

ಬಟ್ಟೆಯಿಲ್ಲ ಬೂದಿಯೆ ಮೈಯಲ್ಲಾ //


ದೇಶಿವಾಸಿಗಳ ದೇವ ನೀ ಪರಶಿವ 

ಸಿಂಧೂಬಯಲಿನಿಂದ ಮಹಾದೇವ

ಪಶುಪತಿಯಾಗಿ ಬೆಳೆದೆ ಆಗಿನಿಂದ

ನಾಮ ನೂರಾರು, ಹೇಳಲವು ಚಂದ//


ಕೈಯಲ್ಲಿ ತ್ರಿಶೂಲ ಅದರಲ್ಲಿ ಡಮರುಗ

ಕೈಲಾಸವಾಸಿ ಕವನಕೂ ನಿಲುಕದವನು

ಗಂಗೆಗೌರಿಯ ಅಂಗದಿ ಧರಿಸಿದವನು 

ತ್ರಿನೇತ್ರಿ ತ್ರಿವೇಣಿ,ತ್ರಿಲೋಕ ಸಂಚಾರಿ// 

 

ಮಸಣದ ವಾಸ ಹೊಸದೇನಲ್ಲ 

ನಾಗರಿಕತೆ ಮೆಟ್ಟಲು ಮೂಲದೇವ

ನಿನ್ನ ರೂಪಕೆ ಮರುಳಾದವನು ನರ

ನೀನೊಲಿಯದಿರೆ ಎಲ್ಲಾ ಹರೊಹರ//


        🖋️ಬಸನಗೌಡ ಗೌಡರ 

1 comment:

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...