Saturday, March 6, 2021

* ಚಿಗುರಿನ ಚಿತ್ತಾರ*

ಮುಂಗಾರು ಮಳೆಯ ತಂಗಾಳಿ 
ಸೂಸಿ, ಸಂಗಾತಿ ಬಯಸಿ ಹೊಂಗನಸ ಕಂಡೆ, 
ಬಂಗಾರ ಬದುಕು ಬೆಂಡಾಗಿದೆ 
ಬಾಳೆಲ್ಲ ಬಯಲಾಗಿದೆ ಇಂದು //

ಹಸಿರು ಶಾಲನ್ನು ಹೊದ್ದು ಉಸಿರು 
ಬಿಟ್ಟಾಗ ಹಸಿವೆಯೆ ಆರಿತ್ತು ಅಂದು
ಚಳಿಗಾಲ ಕಳೆದು ಮಳೆಗಾಲವಿಲ್ಲ
ಸುಳಿಗಾಳಿಗುರುಳಿದೆ ನೆರಳಿಂದು//

ಕೆಸರುಂಡ ದಿನಗಳಲಿ, ಮೊಸರಂತೆ 
ಕಸುವು ಕಂಡೆ, ಹೊಸದೊಂದು ಸಂತೆ
ಮೈಯಲ್ಲ ಬೋಳು, ಬರಿ ಬಿಸಿಗಾಳಿ
ಹೊಸ ಗಾಳಿಗೆ ಹಂಬಲಿಸುವೆ ಇಂದು//

ಮತ್ತೆ ಮನ ಮಿಡಿಯುವ ತೋರಣ, 
ಮರಿ ಕೋಗಿಲೆಗಳ ಮಾಮರದ ಗಾನ
ಝೇಂಕರಿಸಿದೆ ಹೊಸ ದುಂಬಿಗಳ ವನ
ವಸಂತ ಚಿಗುರಿನ ಚಿತ್ತಾರವಿಂದು //

                ಬಸನಗೌಡ ಗೌಡರ 


No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...