Saturday, April 24, 2021

*ಮಾಡರ್ನ್ ಕವನ, ಮನಾಗ ಕುಳಿತು*

ಮನೆಯಲಿ ಮಕ್ಕಳ ಕಲರವ ಸಪ್ಪಳ
ಮನೆ ಒಡತೆಯೆ ಎನಗಾಗಿಹಳು ಇಕ್ಕಳ
ಮೌನವಿದ್ದರೆ ಶಿಸ್ತಿನ ಪಾಠ ಹೇಳ್ತಾಳು//

ಗಾಳಿಯ ಗೂಳಿ ನುಗ್ಗದೆ ಕುಗ್ಗಿರುವೆ
ಕೃತ್ರಿಮಗಾಳಿ ದಾಳಿಗೆ ಬಸವಳಿದಿರುವೆ
ಮಳೆರಾಯ ಎಷ್ಟುದೂರ ಉಳಿದಿರುವೆ//

ಅಜ್ಜ ಕಟ್ಟಿದ ಕಲ್ಲು ಕಟ್ಟಿಗೆ ಶೇಷ್ಠ ಮನೆ
ಕೂಲರ ಬೇಡ ಕುಂತಾಗಿಲ್ಲ ಹನಾಹನಿ
ಕಾಂಕ್ರೀಟ್ ಹಾಕಿ ಸಂಕಟ ಪಡತೀನಿ//

ಬಿಸಿಲಿನ ಜಳಕೆ ಹಸಿವೆಯೆ ಹಾರಿದೆ
ಮೈ ಜುಳ ಜುಳ ನೀರು ಬಯಸಿದೆ
ಮಜ್ಜಿಗೆ ಮಡಿಕೆಯ ಮನ ಕೇಳುತಿದೆ//

ಪ್ರಿಜ್ಜು ಪಿಜ್ಜಾ ಬ್ಯಾಡ ಬೊಜ್ಜು ಬರತೈತಿ 
ಅಜ್ಜಿಯ ಜೀರಗಿಯ ಮಜ್ಜಿಗಿನ ಸಾಕು 
ಮಾಜಾಕಿಂತ ಮಸ್ತ್ ಮಜಾ ಬರತೈತಿ//

ತೆಂಗಿನ ಎಳೆನೀರು ಓರಿಜನಲ್ ಬಾಳಿ 
ಬಟ್ಟಿ ಇಳಿಸಿದ ಮಾವು ಸಿಗಾತಾವೆಲ್ಲಿ
ಬಾಟಲಿ ಗೀಳು ಎಲ್ಲರಿಗೂ ಹಿಡದೈತಲ್ಲ//

              ಬಸನಗೌಡ ಗೌಡರ

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...